<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-34886019</id><updated>2012-02-16T19:14:04.103+05:30</updated><category term='ashwath'/><category term='ba maleye ba'/><category term='ricky kej'/><category term='lakshmana rao'/><category term='accident'/><category term='mysore ananthaswamy'/><category term='baa maleye baa'/><category term='sonu nigam'/><title type='text'>ಮನಸಿನ ಪುಟಗಳ ನಡುವೆ</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://manasinaputagalanaduve.blogspot.com/feeds/posts/default'/><link rel='self' type='application/atom+xml' href='http://www.blogger.com/feeds/34886019/posts/default?max-results=100'/><link rel='alternate' type='text/html' href='http://manasinaputagalanaduve.blogspot.com/'/><link rel='hub' href='http://pubsubhubbub.appspot.com/'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><generator version='7.00' uri='http://www.blogger.com'>Blogger</generator><openSearch:totalResults>85</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-34886019.post-3478882577683303907</id><published>2010-12-11T11:02:00.003+05:30</published><updated>2010-12-11T11:07:12.474+05:30</updated><title type='text'>ಪ್ರಣತಿಯಿಂದ ಪ್ರಬಂಧ ಸ್ಪರ್ಧೆ</title><content type='html'>&lt;div&gt;’ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ’ ಎಂಬ ವಿಷಯವನ್ನು ಕುರಿತು ಕಾಲೇಜು ವಿದ್ಯಾರ್ಥಿಗಳಿಂದ ಪ್ರಬಂಧಗಳನ್ನು ಪ್ರಣತಿ ಸಂಸ್ಥೆ ಆಹ್ವಾನಿಸುತ್ತಿದೆ. ೨೦೦೦ ಪದಗಳಿಗೆ ಸೀಮಿತವಾದಂತೆ ಸ್ಫುಟವಾದ ಲಿಪಿಯಲ್ಲಿ ಬರೆದು ಅಥವಾ ಕಂಪ್ಯೂಟರಿನಲ್ಲಿ ಟೈಪ್ ಮಾಡಿ, ಡಿಸೆಂಬರ್ ೩೦, ೨೦೧೦ ರೊಳಗೆ ನಿಮ್ಮ ಪ್ರಬಂಧ ಪ್ರಣತಿಗೆ ತಲುಪುವಂತೆ ಕಳುಹಿಸಬಹುದು. ಜೊತೆಗೆ ಕಾಲೇಜಿನ ಐಡೆಂಟಿಟಿ ಕಾರ್ಡಿನ ಪ್ರತಿ ಕಳುಹಿಸುವುದು ಅವಶ್ಯಕ. ಸಂಪಾದಕ ಮಂಡಲಿ ಮತ್ತು ವಿಷಯ ತಜ್ಞರು ಆರಿಸಿದ ಅತ್ಯುತ್ತಮ ಪ್ರಬಂಧಕ್ಕೆ ಸೂಕ್ತ ಬಹುಮಾನವಿದೆ.  &lt;/div&gt;&lt;div&gt;&lt;br /&gt;&lt;/div&gt;&lt;div&gt;ನಿಮಗೆ ಪರಿಚಿತರಾದ ಕಾಲೇಜು ವಿದ್ಯಾರ್ಥಿಗಳನ್ನು ಪಾಲ್ಗೊಳ್ಳಲ್ಲು ಪ್ರೋತ್ಸಾಹಿಸಿ. ನೀವು ಕಾಲೇಜು ವಿದ್ಯಾರ್ಥಿಯಾಗಿದ್ದರೆ ನೀವೂ ಪ್ರಬಂಧ ಬರೆದು ಕಳುಹಿಸಿ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;div&gt;ಕಂಪ್ಯೂಟರಿನಲ್ಲಿ ಟೈಪ್ ಮಾಡಿದ ಪ್ರಬಂಧಗಳನ್ನು prabandha@pranati.in ಗೆ ಕಳುಹಿಸಿ. ಲಿಖಿತ ಪ್ರಬಂಧವಾದರೆ ಈ ವಿಳಾಸಕ್ಕೆ ಕಳುಹಿಸಿ: &lt;/div&gt;&lt;div&gt;&lt;br /&gt;&lt;/div&gt;&lt;div style="text-align: center;"&gt;'ಪ್ರಣತಿ', ನಂ ೪೪೮/ಎ, ೮ನೇ ಮುಖ್ಯರಸ್ತೆ, ೭ನೇ ಅಡ್ಡರಸ್ತೆ, ತ.ರಾ.ಸು. ರಸ್ತೆ, ಹನುಮಂತನಗರ, ಬೆಂಗಳೂರು ೫೬೦೦೧೯. &lt;/div&gt;&lt;div&gt;&lt;br /&gt;&lt;/div&gt;&lt;div&gt;ಹೆಚ್ಚಿನ ಮಾಹಿತಿಗಳಿಗೆ ಕರೆ ಮಾಡಿ - ೯೯೮೦೦೨೨೫೪೮ / ೯೬೧೧೪೫೮೬೯೮.&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-3478882577683303907?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/3478882577683303907/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=3478882577683303907' title='0 Comments'/><link rel='edit' type='application/atom+xml' href='http://www.blogger.com/feeds/34886019/posts/default/3478882577683303907'/><link rel='self' type='application/atom+xml' href='http://www.blogger.com/feeds/34886019/posts/default/3478882577683303907'/><link rel='alternate' type='text/html' href='http://manasinaputagalanaduve.blogspot.com/2010/12/blog-post_11.html' title='ಪ್ರಣತಿಯಿಂದ ಪ್ರಬಂಧ ಸ್ಪರ್ಧೆ'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>0</thr:total></entry><entry><id>tag:blogger.com,1999:blog-34886019.post-5661616939508102380</id><published>2010-12-04T15:14:00.003+05:30</published><updated>2010-12-04T18:15:45.749+05:30</updated><title type='text'>ಬ್ರಹ್ಮತರಂಗಗಳ ನಡುವೆ</title><content type='html'>&lt;div&gt;ಒಂದು ಕಾದಂಬರಿ ಓದಬೇಕೆಂದು "ಮಹಾಬ್ರಾಹ್ಮಣ" ಪುಸ್ತಕವನ್ನು ಹಿಡಿದೆ. ಕೆಲವು ಪುಟಗಳು ಓದುವಷ್ಟರಲ್ಲೇ ದೇವುಡು ನನ್ನನ್ನು ಬ್ರಹ್ಮತರಂಗಗಳ ನಡುವೆ ಸಿಕ್ಕಿಸಿದ್ದರು! ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ - ಈ ಆರೂ ದೋಷಗಳೂ ಕಂಡಲ್ಲಿ ವಿಜೃಂಭಿಸುವ ವ್ಯಕ್ತಿತ್ವದ ಕಥಾನಾಯಕನೊಬ್ಬನನ್ನು ತೋರಿಸಿ ಅವನ ಕುಚರಿತೆಯನ್ನು ಅದೆಷ್ಟು ಸೊಗಸಾಗಿ ನಿರೂಪಿಸುತ್ತಾ ಹೋಗುತ್ತಾರೆ! ಎರಡು ಮೂರು ತರಂಗಗಳ ಅವಧಿಯಲ್ಲೇ ಕತೆಯನ್ನು ಕೊಂಚ ಚಿವುಟುತ್ತಾರೆ! ಷಡ್ದೋಷಗಳನ್ನು ಮೆಲ್ಲಗೆ ಅಳಿಸಿ ನಾಯಕನನ್ನು ಗುಣಗಳ ಖನಿಯನ್ನಾಗಿ ಮಾಡುತ್ತಾರೆ. ಕತೆ ಹೇಳುತ್ತಾ ಹೇಳುತ್ತಾ ವೇದೋಪನಿಷತ್ತುಗಳನ್ನು ಅಗೆದಗೆದು ಹೊರತೆಗೆದ ಹತ್ತು ಹಲವು ಅನರ್ಘ್ಯ ವಿಚಾರಗಳ ದರ್ಶನವನ್ನು ಮಾಡಿಸುತ್ತಾರೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಅರ್ಧ ಪುಸ್ತಕ ಓದುವಷ್ಟರಲ್ಲೇ ಅದೇಕೋ ನನ್ನಲ್ಲಿ "ಮಹಾಬ್ರಾಹ್ಮಣನಲ್ಲದಿದ್ದರೂ, ನಾನೂ ಬ್ರಾಹ್ಮಣನಾದರೂ ಆಗಬೇಕು" ಎಂಬ ಆಸೆ ಹುಟ್ಟಿತು! ಇಂದಿನ ವಿಜ್ಞಾನಿಗಳು ಇನ್ನೂ ಭೇದಿಸದ ಪಿಂಡಾಂಡದ ಅನೇಕ ಭಾಗಗಳು ಈ ಪುಸ್ತಕದಲ್ಲಿ ಪ್ರತ್ಯಕ್ಷವಾಗುತ್ತವೆ, ಒಂದೊಂದು ನಾಡಿಯೂ ನುಡಿಯುತ್ತಿರುತ್ತದೆ. ವಾಸ್ತವ ಮರೆತು ಎಲ್ಲೋ ಯಾವುದೋ ಲೋಕಕ್ಕೆ ಹೋದ ಹಾಗೆ ಅನ್ನಿಸಿಬಿಡುತ್ತದೆ!&lt;/div&gt;&lt;div&gt;&lt;br /&gt;&lt;/div&gt;&lt;div&gt;"ಒಬ್ಬೊಬ್ಬ ವ್ಯಕ್ತಿಗೂ ಸ್ವಭಾವ ಎಂಬ ಅವನದೇ ಆದ ಪ್ರತ್ಯೇಕ ಗುರುತಿರುತ್ತದೆ. ಆ ಸ್ವಭಾವ ಅಥವಾ ವ್ಯಕ್ತಿತ್ವದ ಪ್ರಕಾರವೇ ಅವರವರ ವಿಕಾಸ" ಎಂದು ವೇದಾಂತ ಹೇಳುತ್ತದೆಂದು ಕೇಳಿದ್ದೇನೆ. "ಮಹಾಬ್ರಾಹ್ಮಣ"ನ ಕತೆ ಅದಕ್ಕೊಂದು ಸ್ಪಷ್ಟ ನಿದರ್ಶನ. ಈ ಪುಸ್ತಕದಲ್ಲಿರುವುದು ಹೊಸ ಕತೆಯೇನೂ ಅಲ್ಲ. ಪುರಾಣಪ್ರಸಿದ್ಧವಾದ ಕತೆಯೊಂದನ್ನೇ ಆಯ್ದುಕೊಂಡು ಹತ್ತು ಹಲವು ಕಡೆ ಚೂರು ಚೂರಾಗಿ ಸಿಗುವ ವಿಚಾರಗಳನ್ನು ಸೊಗಸಾಗಿ ಜೋಡಿಸಿ "ಮಹಾಬ್ರಾಹ್ಮಣ" ಪುಸ್ತಕವನ್ನು ಬರೆದಿದ್ದಾರೆ ದೇವುಡು. ಓದಲು ಬಹಳ ಚೆನ್ನಾಗಿದೆ, ಓದಿ!&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-5661616939508102380?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/5661616939508102380/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=5661616939508102380' title='2 Comments'/><link rel='edit' type='application/atom+xml' href='http://www.blogger.com/feeds/34886019/posts/default/5661616939508102380'/><link rel='self' type='application/atom+xml' href='http://www.blogger.com/feeds/34886019/posts/default/5661616939508102380'/><link rel='alternate' type='text/html' href='http://manasinaputagalanaduve.blogspot.com/2010/12/blog-post.html' title='ಬ್ರಹ್ಮತರಂಗಗಳ ನಡುವೆ'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>2</thr:total></entry><entry><id>tag:blogger.com,1999:blog-34886019.post-1578366595584688638</id><published>2010-11-29T16:23:00.003+05:30</published><updated>2010-11-29T17:00:33.221+05:30</updated><title type='text'>ಬ್ಯಾಡ್ ಲಕ್ ಬೆಟ್ಟ - ಹತ್ತಿ ಹತ್ತಿ ಸುಸ್ತಾಯ್ತು!</title><content type='html'>&lt;div style="text-align: justify;"&gt;ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಮೂರು ಸರ್ತಿ ಅಮ್ಮೇದಿಕ್ಕೆಲ್ ಬೆಟ್ಟಕ್ಕೆ ಚಾರಣ ಮಾಡಲು ಯೋಜನೆ ಹಾಕಿದರೂ ಫಲಿಸಿರಲಿಲ್ಲ. ಒಂದು ಸರ್ತಿ ತೀರ ಹತ್ತಿರ ಹೋಗಿ ಕಾರಣಾಂತರದಿಂದ ಬೇರೊಂದು ಕಡೆ ಚಾರಣಕ್ಕೆ ಹೋಗಬೇಕಾಗಿತು. ಇನ್ನೊಂದು ಸರ್ತಿ ಬಹಳ ಮಳೆ, ಮತ್ತೊಂದು ಸರ್ತಿ ಕೆಲಸ. ಬೇಜಾರಾಗಿ "ಬ್ಯಾಡ್ ಲಕ್ ಬೆಟ್ಟ" ಅಂತ ಅಮ್ಮೇದಿಕ್ಕೆಲ್ಗೆ ಹೆಸರೂ ಇಟ್ಟುಬಿಟ್ಟೆ. ಮೊನ್ನೆ ಗೆಳೆಯನೊಬ್ಬ ಅಮ್ಮೇದಿಕ್ಕಲ್ ಹತ್ತಲು ಕರೆದಾಗ ಮೀನ ಮೇಷ ಎಣಿಸಿ ಅವನ ಬಲವಂತದಿಂದ ಒಪ್ಪಿ ಹೊರಟೆ. ದಾರಿಯಲ್ಲಿ ಎರಡು ಸರ್ತಿ ಬಸ್ ಕೆಟ್ಟುಹೋಯಿತು, ಚಾರಣ ಶುರು ಮಾಡುವುದು ಮೂರ್ನಾಲ್ಕು ಗಂಟೆ ತಡವಾಯಿತು. ಇದು ಬ್ಯಾಡ್ ಲಕ್ ಬೆಟ್ಟವೇ ದಿಟ ಎಂದು ನಿರ್ಧರಿಸಿಬಿಟ್ಟೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div&gt;&lt;div&gt;&lt;img src="http://3.bp.blogspot.com/_JaSAEbMHNYk/TPOM0oTXFRI/AAAAAAAAJQ8/E9BNT09Pu34/s400/IMG_1170.JPG" style="display:block; margin:0px auto 10px; text-align:center;cursor:pointer; cursor:hand;width: 400px; height: 300px;" border="0" alt="" id="BLOGGER_PHOTO_ID_5544930402022921490" /&gt;&lt;/div&gt;&lt;div&gt;&lt;div style="text-align: center;"&gt;&lt;span class="Apple-style-span" style="font-size: small;"&gt;ಮೊದಲ ನೋಟ&lt;/span&gt;&lt;/div&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಅಂತೂ ಹೋದ ಕರ್ಮಕ್ಕೆ ಹತ್ತಲು ಶುರು ಮಾಡಿದೆ. ಶುರುವಿನಲ್ಲೇ ಏರುಹಾದಿ. ಜೊತೆಗೆ ಸೂಜಿ ಚುಚ್ಚಿದಂತೆ, ಚುರ್ರ್ ಎನ್ನುವಂತೆ ಕಚ್ಚುವ ನಯ-ನಾಜೂಕಿಲ್ಲದ ಜಿಗಣೆಗಳು, ದಟ್ಟವಾದ ಕಾಡಿನಲ್ಲೂ ಕಾಡುವ ಸೆಕೆ, ಬಾಯಾರಿ ತಲೆ ತಿರುಗಿ ಬೀಳುವಂತಾದರೂ ಕಾಣದ ನೀರು, ಚೆನ್ನಾಗಿರುವ ದೃಶ್ಯಗಳಂತೂ ಇಲ್ಲವೇ ಇಲ್ಲ. ಮೊದಲ ಒಂದುವರೆ ಗಂಟೆ ಚಾರಣವಂತೂ ಬೈಕೊಂಡೇ ಹತ್ತಿದೆ. ಥೂ, ಇದೇನು ಬೆಟ್ಟಾನಾ? ಪಶ್ಚಿಮ ಘಟ್ಟಾನಾ?&lt;/div&gt;&lt;div&gt;&lt;br /&gt;&lt;/div&gt;&lt;div&gt;ಅಷ್ಟು ಹೊತ್ತಿಗೆ ಸಿಕ್ಕಿತು ಒಂದು ಸಣ್ಣ ತೊರೆ. ಜೀವ ಬಂತು. ಆದಾದಮೇಲೆ ಇನ್ನೊಂದು ಸ್ವಲ್ಪ ಹತ್ತಿದಮೇಲೆ ಸ್ವಲ್ಪ, ಅಲ್ಲ ಸ್ವಲ್ಪವೇ ಇಳಿಜಾರು. ಒಂದು ಸಣ್ಣ ಗುಡ್ಡ ಇಳಿಯುವ ತನಕ. ಅದಾದಮೇಲೆ, ಭೀಮಾಕಾರವಾಗಿ ಕಾಣುವ ಬೆಟ್ಟ. ಸ್ವಲ್ಪ ಸುತ್ತಿ ಬಳಸಿ ಬರೋಬ್ಬರಿ ಎಂಭತ್ತು ಡಿಗ್ರೀಗೆ ಗೀಟೆಳೆದರೆ ಅದೇ ಹತ್ತುವ ದಾರಿ. "ಅಲ್ಲೆರಡು ಜೋಡಿ ಕಲ್ಲು ಕಾಣ್ತಾ ಉಂಟಲ್ಲ, ಅಲ್ಲಿ ನೀರು ಸಿಗುತ್ತೆ" ಅನ್ನುತಾರೆ ನಮ್ಮ ಮಾರ್ಗದರ್ಶಕರು. ಅರ್ಧ ಕಿಲೋಮೀಟರ್ ಇದ್ದಂಗೆ ಕಾಣುತ್ತದೆ, ಆದರೆ ಆ ಏರುದಾರಿಯನ್ನು ಹತ್ತುವದು? ಉಹೂ! ಈಗ ಕಾಡೂ ಮಾಯ, ಸೂರ್ಯನ ಬಿಸಿಲೊಂದೇ! ಅರ್ಧ ಕಿಲೋಮೀಟರ್ ಹತ್ತಲು ಅರ್ಧ-ಮುಕ್ಕಾಲು ಗಂಟೆ. ನೀರು ಸಿಕ್ಕಲ್ಲೇ ಸ್ವರ್ಗ, ಅಲ್ಲೇ ಊಟ. ಮತ್ತೆ ಹತ್ತಬೇಕು ಎಂಭತ್ತು ಡಿಗ್ರೀ ಕೋನದಲ್ಲಿ, ಆದರೆ ಸ್ವಲ್ಪ ಕಷ್ಟಪಟ್ಟು ಹತ್ತಿದರೆ ಒಂದು ಗುಹೆಯ ಮಾದರಿಯ ಜಾಗ ಸಿಗುತ್ತದೆ. ಅಲ್ಲಿ ಬ್ಯಾಗುಗಳನ್ನಿಟ್ಟು ನೀರಿನ ಬಾಟಲಿ ಮಾತ್ರ ಕೈಲಿ ಹಿಡಿದು ತುದಿಯ ಕಡೆ ನಡೆದೆವು.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;a href="http://2.bp.blogspot.com/_JaSAEbMHNYk/TPOM09PhITI/AAAAAAAAJRE/pKNIuxcWdZA/s1600/IMG_1227.JPG"&gt;&lt;img src="http://2.bp.blogspot.com/_JaSAEbMHNYk/TPOM09PhITI/AAAAAAAAJRE/pKNIuxcWdZA/s400/IMG_1227.JPG" border="0" alt="" id="BLOGGER_PHOTO_ID_5544930407643947314" style="display: block; margin-top: 0px; margin-right: auto; margin-bottom: 10px; margin-left: auto; text-align: center; cursor: pointer; width: 400px; height: 300px; " /&gt;&lt;/a&gt;&lt;/div&gt;&lt;div&gt;&lt;div style="text-align: center;"&gt;&lt;span class="Apple-style-span" style="font-size: small;"&gt;ಹತ್ತಿರದಿಂದ&lt;/span&gt;&lt;/div&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಆ ದಾರಿಯಲ್ಲಿ ಹೆಚ್ಚಿನ ಭಾಗ ಕಲ್ಲುಗಳೇ, ಒಂದೊಂದು ಹೆಜ್ಜೆಯೂ ಎರಡೆರಡು ಅಡಿಯಷ್ಟು ಎತ್ತರ, ಜೊತೆಗೆ ಪಾಚಿ ಬೇರೆ! ಒಂದೊಂದು ಕಡೆಯಂತೂ ಹೆಜ್ಜೆ ಇಡಲು ಅರ್ಧ ಅಡಿ ಜಾಗ, ಪಕ್ಕದಲ್ಲಿ ಕಡಿಮೆ ಎಂದರೂ ಸಾವಿರ ಅಡಿ ಪ್ರಪಾತ. ಬೇಕಾದಾಗ ನೀರಂತೂ ಸಿಗುವುದೇ ಇಲ್ಲ. ಹಾಗೂ ಹೀಗೂ ತಳ್ಳಿಕೊಂಡು ತುದಿ ಮುಟ್ಟಿದೆ. ಒಂಭತ್ತು ಗುಡ್ಡ, ಎತ್ತಿನ ಭುಜ, ಮಿಂಚುಕಲ್ಲು, ಜೇನುಕಲ್ಲು - ಹತ್ತಾರು ಬೆಟ್ಟಗಳ ತುದಿಗಳು ಮಂಜುಮಂಜಾಗಿ ಕಾಣುತ್ತಿದ್ದವು. ಯಾಕೋ ಆ ದೃಶ್ಯ ನನಗೆ ತೃಪ್ತಿಯಾಗುವಷ್ಟು ಹಿಡಿಸಲಿಲ್ಲ. ಇಷ್ಟೆಲ್ಲಾ ಹತ್ತಿದ್ದಕ್ಕೆ ಇದು ಏನೂ ಪ್ರಯೋಜನವಿಲ್ಲ ಅನ್ನಿಸಿಬಿಟ್ಟಿತು. ಮಳೆ ಇನ್ನೂ ಪೂರ್ತಿ ನಿಲ್ಲದಿರುವಾಗಲೇ ಹಸಿರಿಗೆ ಒಣಗಿ ಹಳದಿಯಾಗುವಷ್ಟು ವಯಸ್ಸಾಗಿತ್ತು, ಕಳೆ ಕಳೆದುಹೋಗಿತ್ತು. ಇರುವುದರಲ್ಲಿ ಒಂದಷ್ಟು ಸೌಂದರ್ಯ ಹುಡುಕಿ ನೋಡಿದೆ. ದೂರದಲ್ಲಿದ್ದ ಹೊಳೆಗಳು, ಕೆರೆಗಳು ಸಂಜೆಯ ಹೊಂಬೆಳಕಿಗೆ ಕರಗಿದ ಚಿನ್ನದಂತೆ ಕಂಡ ಅದ್ಭುತವೊಂದೇ ನನ್ನ ಕಣ್ಮನ ಸೆಳೆದ ದೃಶ್ಯ. ಉಳಿದವೆಲ್ಲ ಅಷ್ಟೊಂದು ಸ್ವಾರಸ್ಯವಿಲ್ಲ.&lt;/div&gt;&lt;div&gt;&lt;div style="text-align: left;"&gt;&lt;br /&gt;&lt;/div&gt;&lt;a href="http://2.bp.blogspot.com/_JaSAEbMHNYk/TPOM1mNupFI/AAAAAAAAJRc/vu14HUebFzo/s1600/IMG_1267.JPG"&gt;&lt;/a&gt;&lt;a href="http://3.bp.blogspot.com/_JaSAEbMHNYk/TPOM1DTRcPI/AAAAAAAAJRM/_x4qZZb1o2A/s1600/IMG_1205.JPG"&gt;&lt;img src="http://3.bp.blogspot.com/_JaSAEbMHNYk/TPOM1DTRcPI/AAAAAAAAJRM/_x4qZZb1o2A/s400/IMG_1205.JPG" border="0" alt="" id="BLOGGER_PHOTO_ID_5544930409270309106" style="display: block; margin-top: 0px; margin-right: auto; margin-bottom: 10px; margin-left: auto; text-align: center; cursor: pointer; width: 400px; height: 300px; " /&gt;&lt;/a&gt;&lt;/div&gt;&lt;div&gt;&lt;div style="text-align: center;"&gt;&lt;span class="Apple-style-span" style="font-size: small; "&gt;ಕ್ಯಾಮರಾ ಕೈಚಳಕ&lt;/span&gt;&lt;/div&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ರಾತ್ರಿಯ ವೇಳೆಗೆ ಮತ್ತೆ ನಮ್ಮ ಬ್ಯಾಗ್ ಇಟ್ಟಿದ್ದ ಗುಹೆಗೆ ಬಂದು ಟೆಂಟ್ ಹಾಕಿ ಮಲಗಿದೆವು. ರಾತ್ರಿ ಗಾಳಿ ಜೋರಾಗಿತ್ತು, ಚಳಿಯೂ ಸುಮಾರಾಗಿತ್ತು. ಬೆಳಗ್ಗೆ ಸೂರ್ಯೋದಯದ ಸಮಯದಲ್ಲೂ ಮೋಡ ಮುಚ್ಚಿಕೊಂಡು ಮೋಸವಾಯಿತು. ಎಷ್ಟೇ ಆದರೂ "ಬ್ಯಾಡ್ ಲಕ್ ಬೆಟ್ಟ" ಅಲ್ಲವೇ? ಎಂಭತ್ತು ಡಿಗ್ರೀ ಇಳಿಜಾರನ್ನು ಇಳಿಯಲೂ ಪ್ರಯಾಸವೇ ಆಯಿತು. ನಂತರದ ಕೊನೆಯ ಕಾಡುದಾರಿ ಸ್ವಲ್ಪ ಹಿತವಾಗಿತ್ತಷ್ಟೇ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;a href="http://1.bp.blogspot.com/_JaSAEbMHNYk/TPOM1XYGFKI/AAAAAAAAJRU/Mcf9IxmjHiY/s1600/IMG_1233.JPG"&gt;&lt;img src="http://1.bp.blogspot.com/_JaSAEbMHNYk/TPOM1XYGFKI/AAAAAAAAJRU/Mcf9IxmjHiY/s400/IMG_1233.JPG" border="0" alt="" id="BLOGGER_PHOTO_ID_5544930414659245218" style="display: block; margin-top: 0px; margin-right: auto; margin-bottom: 10px; margin-left: auto; text-align: center; cursor: pointer; width: 400px; height: 300px; " /&gt;&lt;/a&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;a href="http://2.bp.blogspot.com/_JaSAEbMHNYk/TPOM1mNupFI/AAAAAAAAJRc/vu14HUebFzo/s1600/IMG_1267.JPG"&gt;&lt;img src="http://2.bp.blogspot.com/_JaSAEbMHNYk/TPOM1mNupFI/AAAAAAAAJRc/vu14HUebFzo/s400/IMG_1267.JPG" border="0" alt="" id="BLOGGER_PHOTO_ID_5544930418642297938" style="display: block; margin-top: 0px; margin-right: auto; margin-bottom: 10px; margin-left: auto; text-align: center; cursor: pointer; width: 400px; height: 300px; " /&gt;&lt;/a&gt;&lt;/div&gt;&lt;div style="text-align: center;"&gt;&lt;span class="Apple-style-span" style="font-size: small; "&gt;ಬಿದ್ದೀರ ಹುಷಾರ್!!&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ನನಗೆ ಇದು ಅಷ್ಟೇನೂ ಸ್ವಾರಸ್ಯಕರ ಚಾರಣವಲ್ಲ. ಇಷ್ಟೆಲ್ಲ ಹತ್ತಿದರೂ ಕಾಲು ಹೆಚ್ಚು ನೋಯಲಿಲ್ಲ ಎಂಬುದು ಬೇಸರದ, ಅರ್ಥವಾಗದ ಸಂಗತಿ. ಹತ್ತುವ ಹುಚ್ಚಿದ್ದವರು ಹೋಗಬಹುದು. ನನಗಂತೂ ಇದು "ಬ್ಯಾಡ್ ಲಕ್ ಬೆಟ್ಟ". ಮತ್ತೆ ಹೋಗುವ ಇರಾದೆಯಂತೂ ನನಗೆ ಸಧ್ಯಕ್ಕಿಲ್ಲ. ಬೆಂಗಳೂರಿಗಿಂತ ವಾಸಿ ಎಂದು ಎಂದಾದರೂ ಹೋದೇನು ಅಷ್ಟೇ.&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-1578366595584688638?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/1578366595584688638/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=1578366595584688638' title='3 Comments'/><link rel='edit' type='application/atom+xml' href='http://www.blogger.com/feeds/34886019/posts/default/1578366595584688638'/><link rel='self' type='application/atom+xml' href='http://www.blogger.com/feeds/34886019/posts/default/1578366595584688638'/><link rel='alternate' type='text/html' href='http://manasinaputagalanaduve.blogspot.com/2010/11/blog-post.html' title='ಬ್ಯಾಡ್ ಲಕ್ ಬೆಟ್ಟ - ಹತ್ತಿ ಹತ್ತಿ ಸುಸ್ತಾಯ್ತು!'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_JaSAEbMHNYk/TPOM0oTXFRI/AAAAAAAAJQ8/E9BNT09Pu34/s72-c/IMG_1170.JPG' height='72' width='72'/><thr:total>3</thr:total></entry><entry><id>tag:blogger.com,1999:blog-34886019.post-5223661723631655866</id><published>2010-05-02T12:18:00.001+05:30</published><updated>2010-05-02T12:20:59.769+05:30</updated><title type='text'>ಪರಿಸರಪ್ರಿಯರಿಗೆ ಸಿಹಿ ಸುದ್ದಿ...</title><content type='html'>&lt;div&gt;&lt;div&gt;ಸಹ್ಯಾದ್ರಿ ಬೆಟ್ಟಗಳಲ್ಲಿರುವ ಕರ್ನಾಟಕದ ಎಷ್ಟೋ ಚೆಂದದ ಜಾಗಗಳು ಚಾರಣಕ್ಕೆ ಹೋಗಿ ಪ್ಲಾಸ್ಟಿಕ್ ಚೀಲಗಳನ್ನು, ಕಳ್ಳಿನ ಬಾಟಲಿಗಳನ್ನು ಅಲ್ಲಿಯೇ ಬಿಸಾಡಿ ಬರುವ ಕೊಳಕು ಮಂದಿಯಿಂದ ಕೆಟ್ಟು ಹೋಗಿವೆ, ಇನ್ನೂ ಕೆಟ್ಟು ಹೋಗುತ್ತಿವೆ. ಈ ಹಾವಳಿಯನ್ನು ನೋಡಿದರೆ ನಮ್ಮಲ್ಲೇ ಎಷ್ಟೋ ಮಂದಿಗೆ ಬೇಜಾರು ಬರುತ್ತದೆ ಎಂದರೆ ಇನ್ನು ಅಲ್ಲಿಯೇ ಬದುಕಬೇಕಾದ ಪ್ರಾಣಿಗಳ ಪಾಡೇನು?&lt;/div&gt;&lt;div&gt;&lt;br /&gt;&lt;/div&gt;&lt;div&gt;ಇಷ್ಟರ ನಡುವೆಯೂ ಕೊಡಗಿನ ತಡಿಯಂಡಮೋಳ್ ಬೆಟ್ಟದ ಆಸುಪಾಸಿನಲ್ಲಿ ಎರಡು ಹುಲಿಗಳು ಆಗಾಗ ಕಾಣಿಸಿಕೊಳ್ಳುತ್ತಿವೆಯಂತೆ. ಬ್ರಹ್ಮಗಿರಿ ಪರ್ವತಶ್ರೇಣಿಯಲ್ಲೂ ಹುಲಿಗಳು ಆಗಾಗ ಕಾಣಿಸಿಕೊಳ್ಳುತ್ತಿವೆಯಂತೆ. ಸ್ಥಳೀಯರ ಹಸು ಮೊದಲಾದ ಸಾಕುಪ್ರಾಣಿಗಳನ್ನು ಆಗಾಗ ಬೇಟೆಯಾಡುತ್ತಿರುವ ವರದಿಗಳೂ ಇವೆ. ಈ ಸುದ್ದಿಯನ್ನೆಲ್ಲ ಕೇಳಿ ನಮ್ಮ ಅರಣ್ಯ ಇಲಾಖೆಯವರು ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ಹೋಗದಿರುವಂತೆ, ಅಲ್ಲೆಲ್ಲೂ ಡೇರಿ ಹಾಕಿ ತಂಗದಿರುವಂತೆ ಪ್ರವಾಸಿಗಳಿಗೆ ಎಚ್ಚರ ನೀಡುತ್ತಿದ್ದಾರೆ. &lt;a href="http://coorg.com/blog/2-tigers-on-prowl-near-tadiyandalmol-tourist-and-trekkers-beware/"&gt;ಕೂರ್ಗ್.ಕಾಮ್ ವೆಬ್ಸೈಟಿನಲ್ಲಿ ಈ ಸುದ್ದಿ&lt;/a&gt; ಪ್ರಕಟವಾಗಿದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಇನ್ನೊಂದು ಸಿಹಿ ಸುದ್ದಿ ಎಂದರೆ ಕೊಡಚಾದ್ರಿಯ ’ಬಿಯರ್ ಬಂಗಲೆ’ಯಾಗಿರುವ ಅರಣ್ಯ ಇಲಾಖೆಯ ಬಂಗಲೆಗೆ ಈಗ ಜೀಪು ದಾರಿ ನಡಿವಿನಲ್ಲೆಲ್ಲೋ ಕಡಿದುಹೋಗಿದೆಯಂತೆ. ಹಾಗಾಗಿ ಅಲ್ಲೂ ಕೊಳಕರ ಹಾವಳಿ ಕಡಿಮೆಯಾಗಿರಬೇಕು. ಅಲ್ಲಿಯೂ ಕೊಳಕರ ಹಾವಳಿ ಕಡಿಮೆಯಾಗಿರಬೇಕು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಇತ್ತೀಚೆಗೆ ಪರಿಸರವನ್ನು ಶುಚಿಯಾಗಿಡಬೇಕು ಎಂಬ ನನ್ನಂಥ ಆದರ್ಶವಂತರಿಗೆ ಬೆಟ್ಟಗಳಲ್ಲಿ ತುಂಬಿರುವ ಕೊಳಕೇ ಚಾರಣಕ್ಕೆ ಹೋಗದಿರುವಂತೆ ಮಾಡುತ್ತಿದೆ. ನಿಜ ಹೇಳಬೇಕೆಂದರೆ, ಈ ಮಳೆಗಾಲದ ಮೊದಲಲ್ಲೇ ತಡಿಯಂಡಮೋಳ್ ಬೆಟ್ಟ ಹತ್ತಬೇಕು ಎಂದು ಲೆಕ್ಕ ಹಾಕುತ್ತಿದ್ದೆ. ನನಗೂ ಹುಲಿ ನೋಡುವ ಹುಚ್ಚು ಕೆಲವು ವರ್ಷಗಳಿಂದಲೇ ಇದೆ. ಈಗ ಹೋಗುವುದಕ್ಕಾಗುತ್ತದೋ ಇಲ್ಲವೋ ನೋಡಬೇಕು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಈಗ ಹೋಗಲು ಆಗದಿದ್ದರೂ, ಈ ಹುಲಿಗಳ ಕಾರಣದಿಂದಲಾದರೂ ಕೊಳಕು ಜನರ ಹಾವಳಿ ಅಲ್ಲಿ ಕಡಿಮೆಯಾಗಲಿ. ಕಾಡು ಮತ್ತೆ ಪ್ರಾಣಿಗಳದ್ದಾಗಲಿ.&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-5223661723631655866?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/5223661723631655866/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=5223661723631655866' title='7 Comments'/><link rel='edit' type='application/atom+xml' href='http://www.blogger.com/feeds/34886019/posts/default/5223661723631655866'/><link rel='self' type='application/atom+xml' href='http://www.blogger.com/feeds/34886019/posts/default/5223661723631655866'/><link rel='alternate' type='text/html' href='http://manasinaputagalanaduve.blogspot.com/2010/05/blog-post.html' title='ಪರಿಸರಪ್ರಿಯರಿಗೆ ಸಿಹಿ ಸುದ್ದಿ...'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>7</thr:total></entry><entry><id>tag:blogger.com,1999:blog-34886019.post-3062541819610198721</id><published>2010-04-17T05:15:00.005+05:30</published><updated>2010-04-17T05:21:21.454+05:30</updated><title type='text'>ನರಸಿಂಹ ಯುದ್ಧಂ - ಒಂದು ವಿಭಿನ್ನ ನಾಟಕ</title><content type='html'>"ನಮ್ಮ ರಾಜ್ಯದ ಪ್ರಜೆಗಳೆಲ್ಲರೂ ಸುಖವಾಗಿರುವರಷ್ಟೇ? ನಮ್ಮ ನಾಡಿನಲ್ಲಿ ಎಲ್ಲೆಡೆಯೂ ಸುಖ ಸಮೃದ್ಧಿ ಇರುವುದಷ್ಟೇ?" ಎನ್ನುವ ಪಕ್ಕಾ ತಾತರಾಯನ ಕಾಲದ ಪೌರಾಣಿಕ ನಾಟಕದ ಮಂತ್ರಿಗಳನ್ನೂ ಬಹುಶಃ ನೋಡಿರುತ್ತೀರಿ, ಆದರೆ ನಾಟಕದಲ್ಲಿ ಮಾತ್ರ. ಕಲಿಯುಗದ ಕಾಲು ಭಾಗವೂ ಮುಗಿದಿಲ್ಲವಂತೆ. ಅದಕ್ಕೇ ಇರಬೇಕು, ಇಂದಿನ ಮಂತ್ರಿಗಳು ಇನ್ನೂ ಕದ್ದು ಮುಚ್ಚಿ ಲಂಚ ತಿನ್ನುತ್ತಾರೆ! ಭ್ರಷ್ಟಾಚಾರವನ್ನು ಸಕ್ರಮಗೊಳಿಸುವೆವೆಂದು ಆಶ್ವಾಸನೆ ಕೊಟ್ಟು ಅದನ್ನೇ ಚುನಾವಣೆಯ ಬಂಡವಾಳವನ್ನಾಗಿ ಮಾಡಿಕೊಳ್ಳುವ ಮಂತ್ರಿಗಳೂ ಇಷ್ಟರಲ್ಲೇ ಹುಟ್ಟಿ ಬರುತ್ತಾರೆ; ನೀವೂ ನೋಡುವಿರಿ. ಇನ್ನು, ಸುಮಾರಾಗಿ ಪ್ರಾಮಾಣಿಕರು ಎನ್ನುವಂಥ ಮಂತ್ರಿಗಳೂ ಇರುತ್ತಾರೆ; ನಾವೂ ಒಬ್ಬಿಬ್ಬರನ್ನು ನೋಡಿರುತ್ತೀವಿ.&lt;br /&gt;&lt;br /&gt;ಆದರೆ ಈ ಎಲ್ಲಾ ರೀತಿಗಳನ್ನೂ ಒಂದೇ ಕಡೆ ನೋಡಿದ್ದುಂಟೇ? ’ನರಸಿಂಹ ಯುದ್ಧಂ’ ಎನ್ನುವ ನಾಟಕ ನೋಡಿದ ಜನರಿಗೆ &lt;a href="http://mindry.in"&gt;ಮೈಂಡ್ರೈ.ಇನ್&lt;/a&gt; ತಂಡದವರು ರಂಗಮಂಚದ ಮೇಲಂತೂ ಹೆಚ್ಚು-ಕಮ್ಮಿ ಇಷ್ಟೂ ರೀತಿಗಳನ್ನೂ ಒಂದೇ ನಾಟಕದಲ್ಲಿ ಪ್ರದರ್ಶಿಸಿದರು. ಹವ್ಯಾಸಕ್ಕೆ ವಿನೋದದ ವಿಡಿಯೋಗಳನ್ನು ಮಾಡುತ್ತಿದ್ದ ಮೈಂಡ್ರೈ.ಇನ್ ತಂಡದವರು ಅದನ್ನು ಅಂತರ್ಜಾಲದ ಮೂಲಕ ಜನಕ್ಕೆ ತಲುಪಿಸಿ ಜನರ ಮೆಚ್ಚುಗೆ ಸಂಪಾದಿಸಿದ್ದು ಈಗ ಒಂದೆರಡು ವರ್ಷದ ಇತಿಹಾಸ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಆಸಕ್ತಿಯಿಂದ ಇದೇ ’ನರಸಿಂಹ ಯುದ್ಧಂ’ ನಾಟಕದ ಮೊದಲ ಪ್ರದರ್ಶನ ಸುಮಾರು ಒಂದು ವರ್ಷದ ಹಿಂದೆ ನಡೆದಿತ್ತು. ಈಗ ಕಥೆಯನ್ನು ಸ್ವಲ್ಪ ತಿರುಚಿ ಅದೇ ನಾಟಕವನ್ನು ಇನ್ನಷ್ಟು ಚೆನ್ನಾಗಿ ಮಾಡಿದ್ದಾರೆ.&lt;br /&gt;&lt;br /&gt;ನಾಟಕದ ವಿಷಯ ಏನೆಂದು ನಾನು ಹೇಳುವುದಿಲ್ಲ. ಅವರೇ ನಾಟಕಕ್ಕೆ ಹೋದವರಿಗೆ ಹಂಚಿದ ಚೀಟಿಯಲ್ಲಿ ಚಿಕ್ಕದಾಗಿ ನಾಟಕದ ವಿಷಯ ತಿಳಿಸುತ್ತಾರೆ. ಅದನ್ನೇ ಕೊನೆಯಲ್ಲಿ ಯಥಾವತ್ತಾಗಿ ಬರೆಯುತ್ತೇನೆ. ಆದರೆ ಅವರು ಹೇಳಿಕೊಳ್ಳದ ಕೆಲವು ವಿಷಗಳನ್ನು ಮಾತ್ರ ತಿಳಿಸಲು ಬಯಸುತ್ತೇನೆ.&lt;br /&gt;&lt;br /&gt;ಈ ತಂಡದ ಹಿರಿವಂತಿಕೆ ಎಂದರೆ ಸಂಪ್ರದಾಯಕ್ಕೆ ಅಂಟುಕೊಳ್ಳದಿರುವುದು! ಇವರ ನಾಟಕಕ್ಕೆ ಸೂತ್ರವಿದೆ, ಸೂತ್ರಧಾರನಿಲ್ಲ! ಮೋಜಿನ ಕಲಬೆರಕೆ ಹಾಡುಗಳಿವೆ, ಆದರೆ ನಾಟಕದ ವಸ್ತುವಿಗೆ ಸಂಬಂಧವಿಲ್ಲದ ಹಾಡುಗಳು! ತಮ್ಮ ಪ್ರತಿಭೆಯನ್ನು ರಂಗಮಂಚದ ಮೇಲೆ ತೋರಿಸುತ್ತಿದ್ದಾರೆ ಎನ್ನುವುದು ಬಿಟ್ಟರೆ ನಾಟಕದ ಪಾತ್ರಧಾರಿಗಳೆಲ್ಲಾ ಹವ್ಯಾಸಿ ಕಲಾವಿದರು. ಇವರಿಗೊಬ್ಬ ಹವ್ಯಾಸಿ ನಿರ್ದೇಶಕ ಕೂಡ! ’ಇನ್ನು ಐವತ್ತೆರಡೇ ಸೆಕೆಂಡುಗಳಲ್ಲಿ ನಾಟಕ ಶುರುವಾಗುತ್ತದೆ’ ಎಂಬ ಮೊದಲನೆಯ ವಾಕ್ಯದಿಂದ ಕೊನೆಯ ತನಕವೂ ಶುದ್ಧ ತರಲೆ ತುಂಬಿದ ವಾಕ್ಯಗಳು! ಆದರೆ ನಾಟಕದ ವಸ್ತು ಅಷ್ಟೇ ಅರ್ಥಪೂರ್ಣ, ಸ್ವಸ್ಥ ಸಮಾಜಕ್ಕೆ ಅವಶ್ಯಕ ಕೂಡ. ಈ ಮಂದಿ ಜುಬ್ಬ-ಪ್ಯಾಂಟ್ ಹಾಕಿ ರಾಜನ ಪಾತ್ರ ಮಾಡುತ್ತಾರೆ, ಕ್ರಿಕೆಟಿಗನನ್ನು ರಾಜಕಾರಣಿ ಮಾಡುವುದಲ್ಲದೇ ಕ್ರಿಕೆಟ್ ಆಡಲು ಉಪಯೋಗಿಸುವ ಬಿಳಿಯ ಉಡುಗೆಯನ್ನೇ ರಾಜಕಾರಣಿಗೂ ಹಾಕುತ್ತಾರೆ! ಸಂಪ್ರದಾಯಕ್ಕೆ ಹೋಲಿಸಿದರೆ ಎಲ್ಲೆಲ್ಲೂ ವಿಭಿನ್ನತೆ, ವಿಶಿಷ್ಟತೆ!&lt;br /&gt;&lt;br /&gt;ನೀವು ನಾಟಕದ ವಿಷಯದಲ್ಲಿ ಸಂಪ್ರದಾಯಸ್ಥರಾದರೂ ಸಂಪ್ರದಾಯ ಮುರಿವ, ಮರೆಸುವ ಈ ತಂಡದವನ್ನು ನೋಡಬೇಕು. ಯಾವುದೇ ಪ್ರಸಿದ್ಧ ನಾಟಕದ ಕಂಪನಿಗೂ ಸೇರದೇ ಹವ್ಯಾಸಿಗಳು ಏನನ್ನು ಸಾಧಿಸಿದ್ದಾರೆ ಎಂದು ಒಮ್ಮೆಯಾದರೂ ನೋಡಿ. ನೀವು ವಿನೋದಪ್ರಿಯರೋ ಅಲ್ಲವೋ, ಮೊದಲ ನಿಮಿಷದಿಂದ ಕೊನೆಯ ನಿಮಿಷದ ತನಕವೂ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಿ, ನಡುವೆ ಹತ್ತು ನಿಮಿಷದ ವಿರಾಮ ಬಿಟ್ಟು!&lt;br /&gt;&lt;br /&gt;ಹಾಸ್ಯ ಇವರ ನಾಟಕದ ಜೀವಾಳ. ಆದರೆ ನಾಟಕದ ಸಂದೇಶ ತಿಳಿಯಲು ಹಾಸ್ಯವೇ ಬಾಧಕವೂ ಕೂಡ. ನಾಟಕ ನೋಡುತ್ತಾ ನೋಡುತ್ತಾ ನಗುವಿನಲ್ಲೇ ನೀವು ಕಳೆದುಹೋಗಬಹುದು. ನಗುತ್ತಲೇ ನಾಟಕದ ಸಂದೇಶವನ್ನೂ ತಿಳಿಯುವುದು ಸ್ವಲ್ಪ ಕಷ್ಟವೇ. ಒಂದೊಂದು ನಗೆಹನಿಯ ಹಿಂದೆಯೂ ಒಂದೊಂದು ಸಂದೇಶದ ಮಣಿ ಇರುತ್ತದೆ. ಕೊನೆಯಲ್ಲಿ ಮಣಿಗಳನ್ನೆಲ್ಲಾ ಪೋಣಿಸಿದರೆ ಮಾತ್ರ ನಾಟಕದ ಸಂದೇಶ ನಿಮಗೆ ತಿಳಿಯುತ್ತದೆ. ಇದರ ಬಗ್ಗೆ ಎಚ್ಚರವಿಲ್ಲದಿದ್ದರೆ ಒಂದುವರೆ ತಾಸು ಚೆನ್ನಾಗಿ ನಕ್ಕು ಬರುತ್ತೀರಿ ಅಷ್ಟೇ!&lt;br /&gt;&lt;br /&gt;ಸಂಪ್ರದಾಯದ ಪ್ರಕಾರ ನಾಟಕ ಮಾಡುವ ಮಂದಿ ಇದ್ದಾರೆ. ಆದರೆ ಕಲಾವಿದನೊಬ್ಬ ಸಂಪ್ರದಾಯಕ್ಕೆ ಅಂಟಿಕೊಂಡರೆ ನಾಟಕನ್ನು ತನ್ನ ವೃತ್ತಿ ಅಥವಾ ಕಿರುವೃತ್ತಿಯನ್ನಾದರೂ ಮಾಡಿಕೊಳ್ಳಬೇಕು. ಹಾಗೆ ಮಾಡದೆಯೂ ಯಶಸ್ಸು ಸಾಧಿಸಿರುವ, ಸಾಧಿಸುತ್ತಿರುವ ಕೆಲವೇ ಮಂದಿಯಲ್ಲಿ ಮೈಂಡ್ರೈ.ಇನ್ ತಂಡದವರೂ ಸೇರುತ್ತಾರೆ.&lt;br /&gt;&lt;br /&gt;&lt;span style="font-weight:bold;"&gt;&lt;i&gt;ನಾಟಕದ ಬಗ್ಗೆ - ಅವರೇ ಹೇಳಿಕೊಳ್ಳುವಂತೆ:&lt;/i&gt;&lt;/span&gt;&lt;i&gt;&lt;br /&gt;&lt;br /&gt;"ನರಸಿಂಹ ಯುದ್ಧಂ - ಒಂದು ಪ್ರೇಮದ ಕಥೆ" - ಮೈಂಡ್ರೈ.ಇನ್ ತಂಡದ ಎರಡನೆಯ ಪ್ರಸ್ತುತಿ. ಪ್ರಚಲಿತ ರಾಜಕೀಯ ವಿದ್ಯಮಾನಗಳ ಒಂದು ವಿಡಂಬನೆಯಾಗಿದ್ದು, ಈ ನಾಟಕದ ಮಧ್ಯೆ ನವಿರಾದ ಪ್ರೇಮಕಥೆಯು ಹಾಸುಹೊಕ್ಕಾಗಿದೆ. ರಾಜಕೀಯ ಚದುರಂಗ, ಮಾಧ್ಯಮಗಳು ವೀಕ್ಷಕರನ್ನು ಸೆಳೆಯಲು ಮಾಡುವ ತಂತ್ರಗಳು, ರಾಜಕಾರಣಿಗಳ ಬಂಡವಾಳವಿಲ್ಲದ ಬಡಾಯಿ, ಈ ವಿಷಯಗಳನ್ನೊಳಗೊಂಡು ನಮ್ಮ ನಾಟಕವು ಏಪ್ರಿಲ್ ೯-ನೇ ತಾರೀಕು ಸಂಜೆ ೬:೩೦-ಕ್ಕೆ ಮತ್ತು ೧೧-ನೇ ತಾರೀಕು ಸಂಜೆ ೭:೩೦-ಕ್ಕೆ ಹನುಮಂತನಗರದ ಕೆಂಗಲ್ ಹನುಮಂತಯ್ಯ ಕಲಾ ಸೌಧದಲ್ಲಿ ಪ್ರದರ್ಶನಗಳು ಕಾಣಲಿದೆ.&lt;br /&gt;&lt;br /&gt;ನಾಟಕದಲ್ಲಿ ಪ್ರಮುಖ ಪಾತ್ರವಾದ ಪ್ರಧಾನ ಮಂತ್ರಿಯ ಊಂದು ಕೃತ್ಯದಿಂದ ಆಡಳಿತ ಪಕ್ಷವು ಮತ್ತೊಮ್ಮೆ ಚುನಾವಣೆಯನ್ನು ಎದುರಿಸಬೇಕಾಗುತ್ತದೆ. ಆ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯ ಎದುರಾಳಿಯಾಗಿ ಬರುವ ಹಮ್ಮೀರನೆಂದರೆ, ಹೆಸರಾಂತ ಮಾಜಿ ರಣಜಿ ಕ್ರಿಕೆಟ್ ಪಟು ಸಿಂಹ. ಜನರೆಲ್ಲರೂ ಅಲ್ಪರು, ತಾನೂ ಅಲ್ಪ, ಆ ಭಗವಂತನ ಮುಂದೆ ಎಲ್ಲರೂ ಅಲ್ಪರೇ ಎಂದು ಭಾವಿಸುರ ಈ ವಿನಯವಂತ ಕ್ರೀಡಾಪಟು ದೇಶದ ಪರಿಸ್ಥಿತಿಯನ್ನು ಕಾಣಲಾಗದೇ ರಾಜಕೀಯದ ರೌದ್ರ ರಣರಂಗಕ್ಕೆ ಇಳಿಯಲು ನಿರ್ಧರಿಸುತ್ತಾನೆ. ಇವರೀರ್ವರ ಹಣಾನಣಿ ನಡೆಯುವ ಹಿನ್ನೆಲೆಯಲ್ಲಿ, ಮಾಧ್ಯಮ ಪ್ರತಿನಿಧಿ ಮೇಘಾಳ ಜೊತೆ ಪ್ರೇಮ ಪ್ರಸಂಗ ನಡೆಸುತ್ತಾರೆ ಚಾಣಕ್ಯರಾದಂತಹ ಗೃಹ ಮಂತ್ರಿಗಳು. ಪ್ರಧಾನ ಮಂತ್ರಗಳು ತಮ್ಮ ಪದವಿಯನ್ನು ಉಳಿಸಿಕೊಳ್ಳುತಾರೆಯೇ? ಸಿಂಹ ಜಯಭೇರಿ ಹಾಡುತ್ತಾರೆಯೇ? ಗೃಹ ಮಂತ್ರಿ ಮತ್ತು ಮೇಘ-ರ ಪ್ರೇಮದ ಕಥೆಗೆ ಕೊನೆಯೇನು? ಈ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ ನಾಟಕ. ಹಾಗೆ ನೀಡುತ್ತಾ, ಈಗಿನ ರಾಜಕೀಯ ವ್ಯವಸ್ಥೆಯ ಟೀಕೆ, ಹಲವು ವಿವಾದಗಳ ಬಗ್ಗೆ ವಿಮರ್ಶೆ/ವಿಡಂಬನೆಗಳನ್ನು ಸಹ ಮಾಡುತ್ತದೆ.&lt;br /&gt;&lt;/i&gt;&lt;br /&gt;(ಈ ಲೇಖನ ಬರೆದ ನಂತರ ಈ ನಾಟಕದ ನಿರ್ದೇಶಕರು ಹವ್ಯಾಸಿ ನಿರ್ದೇಶಕರಲ್ಲ, ವೃತ್ತಿಪರರೇ ಎಂಬುದು ತಿಳಿಯಿತು. ಅವರು ಈ ಹಿಂದೆ ಸಂಪ್ರದಾಯಬದ್ಧ ನಾಟಕಗಳನ್ನು ನಿರ್ದೇಶಿಸಿರುವರೋ ಅಥವಾ ಇದೇ ರೀತಿಯ ವಿಭಿನ್ನ ಶೈಲಿಯ ನಾಟಕಗಳನ್ನೇ ನಿರ್ದೇಶಿಸಿರುವರೋ ನನಗೆ ತಿಳಿಯದು. ಏನೇ ಆಗಲಿ, ತಾನು ವೃತ್ತಿಪರನಾದರೂ ಹವ್ಯಾಸಿ ಪಾತ್ರಧಾರಿಗಳ ಕೈಲಿ ಚೆನ್ನಾಗಿ ನಾಟಕ ಮಾಡಿಸುವುದು ಸುಲಭದ ಮಾತಲ್ಲ; ಆದರೂ ಮಾಡಿಸಿದ್ದಾರೆ.)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-3062541819610198721?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/3062541819610198721/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=3062541819610198721' title='4 Comments'/><link rel='edit' type='application/atom+xml' href='http://www.blogger.com/feeds/34886019/posts/default/3062541819610198721'/><link rel='self' type='application/atom+xml' href='http://www.blogger.com/feeds/34886019/posts/default/3062541819610198721'/><link rel='alternate' type='text/html' href='http://manasinaputagalanaduve.blogspot.com/2010/04/blog-post.html' title='ನರಸಿಂಹ ಯುದ್ಧಂ - ಒಂದು ವಿಭಿನ್ನ ನಾಟಕ'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>4</thr:total></entry><entry><id>tag:blogger.com,1999:blog-34886019.post-9071906702531876389</id><published>2009-11-08T00:57:00.000+05:30</published><updated>2009-11-08T01:00:45.310+05:30</updated><title type='text'>ತಲೆಯಾಗೆ ಏನದೋ? ಮೇಲಂತು ಟೋಪಿ!</title><content type='html'>&lt;div&gt;&lt;div&gt;ಜ್ಞಾನ ಸಾಸಿವೆಯಷ್ಟು, ಅಜ್ಞಾನ ಬಹಳಷ್ಟು;&lt;/div&gt;&lt;div&gt;ವಿಜ್ಞಾನ ಪದವೀಗೆ ಇರುವ ಬೆಲೆಯಿಷ್ಟು!&lt;/div&gt;&lt;div&gt;ವಿಜ್ಞಾನ ಪದವಿಯೋ? ಅಜ್ಞಾನ ಪದವಿಯೋ?&lt;/div&gt;&lt;div&gt;ತಲೆಯಾಗೆ ಏನದೋ? ಮೇಲಂತು ಟೋಪಿ!&lt;/div&gt;&lt;div&gt;&lt;br /&gt;&lt;/div&gt;&lt;div&gt;ಬಳಿಯ ತಿಳಿವೂ ತಿಳಿಯೆ; ಉಳಿದ ತಿಳಿವೂ ತಿಳಿಯೆ;&lt;/div&gt;&lt;div&gt;ನಾಳಿನಂಗಳ ತಿಳಿಯೆ ಇಂದಿನಂಗಳವಳಿಯೆ;&lt;/div&gt;&lt;div&gt;ಬಾಳಿನಾಳವ ತಿಳಿಯೆ; ಬೀಳದಿರುವುದ ತಿಳಿಯೆ;&lt;/div&gt;&lt;div&gt;ಬಿಳಿಯ ಹಾಳೆಯ ತಲೆಯ ಮೇಲಂತು ಕರಿ ಟೋಪಿ!&lt;/div&gt;&lt;div&gt;&lt;br /&gt;&lt;/div&gt;&lt;div&gt;ಬಳಿ ಬಂದ ಭಾಗ್ಯವನು ದೂರ ನೂಕುವುದುಂಟೆ?&lt;/div&gt;&lt;div&gt;ಸುಪ್ತಾತ್ಮಸಾಕ್ಷಿಯನು ಎಬ್ಬಿಸದೆ ಮಲೆತೆನೋ!&lt;/div&gt;&lt;div&gt;ಬಿಳಿಹಾಳೆ ತುಂಬಿಸಲು ಪದವಿ ಹೆಸರೇ ಬೇಕೆ?&lt;/div&gt;&lt;div&gt;ತಲೆಯಾಗೆ ಏನಿಲ್ಲ! ಅದಕೆ ಹಾಕಿದೆ ಟೋಪಿ!&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-9071906702531876389?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/9071906702531876389/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=9071906702531876389' title='9 Comments'/><link rel='edit' type='application/atom+xml' href='http://www.blogger.com/feeds/34886019/posts/default/9071906702531876389'/><link rel='self' type='application/atom+xml' href='http://www.blogger.com/feeds/34886019/posts/default/9071906702531876389'/><link rel='alternate' type='text/html' href='http://manasinaputagalanaduve.blogspot.com/2009/11/blog-post.html' title='ತಲೆಯಾಗೆ ಏನದೋ? ಮೇಲಂತು ಟೋಪಿ!'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>9</thr:total></entry><entry><id>tag:blogger.com,1999:blog-34886019.post-1238114241361497494</id><published>2009-07-24T23:05:00.001+05:30</published><updated>2009-07-24T23:05:58.903+05:30</updated><title type='text'>ಬಿಸಿಲು-ಮಳೆಗೆ ಬಿರುಗಾಳಿ-ಚಳಿಗೆ ನೀನ್...</title><content type='html'>&lt;div&gt;ಈಗೊಂದು ತಿಂಗಳಿಂದ ಮಳೆಯ ಬಗೆಗಿನ ಮಾತುಗಳು ಸ್ವಲ್ಪ ಹೆಚ್ಚಾಗಿಯೇ ಕೇಳಿ ಬರುತ್ತಿವೆ. ತಿಂಗಳ ಹಿಂದೆ ಮಳೆ ಇನ್ನೂ ಕರ್ನಾಟಕದಲ್ಲಿ ಬರದಿದ್ದಾಗ ದಿನಕ್ಕೆ ಎರಡು ಘಂಟೆ ವಿದ್ಯುಚ್ಛಕ್ತಿಯಿಲ್ಲದೇ ಅಂಗವಿಕರಲಂತೆ ವ್ಯಥೆಪಟ್ಟು ಕುಡಿಯುವ ನೀರಿಗೆ ಈ ವರ್ಷ ಏನು ಗತಿಯೋ ಎಂದು ಆಗೊಮ್ಮೆ ಈಗೂಮ್ಮೆ ಅಂತ ಬಿಸಿಲನ್ನು ಬೈದು ತೃಪ್ತಿ ಪಡುತ್ತಿದ್ದ ಜನರು ಈಗ ಒಂದಷ್ಟು ದಿನದಿಂದ ಸ್ವಲ್ಪ ಜಾಸ್ತಿ ಮಳೆ ಸುರಿದಿರುವುದನ್ನು ಕೇಳಿ "ಮಳೆ ಬೇಕು; ಆದರೆ, ಇಷ್ಟೊಂದು ಬೇಡ" ಎಂದು, "ಬೆಂಗಳೂರಿನಲ್ಲಿ ಮಳೆ ಸಾಲದು" ಎಂದು ಮತ್ತು "ಮಲೆನಾಡಿನ ಹತ್ತಿರವೇ ಸುಳಿಯಬಾರದು ಈ ಮಳೆಗಾಲದಲ್ಲಿ" ಎಂದು ಹೇಳುತ್ತಿದ್ದಾರೆ. ಆದರೆ ಮಳೆ ಬಂದೊಡನೆಯೇ ಮಳೆ ಸಾಕಾಗಿ ಬಿಸಿಲನ್ನು ನೋಡುವ ಆಸೆಯಾಗುತ್ತದೆ! ಆಗ ಮಳೆಯನ್ನು ಬೈಯ್ಯುವ ಸರದಿ. ಯಾಕೋ ನಮ್ಮ ಈ ಮನೋಭಾವ ಸರಿಯಿಲ್ಲ ಎಂದು ಒಮ್ಮೊಮ್ಮೆ ಅನ್ನಿಸುತ್ತಿರುತ್ತದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಬೇಸರವಾಗುತ್ತದೆ, ವಿಸ್ಮಯವಾಗುತ್ತದೆ, ದಾರಿ ಕಾಣದೇ ಹೋಗುತ್ತದೆ... ಜನರಿಗೆಲ್ಲಾ ಚಿರಕಾಲ ತೃಪ್ತಿ ಕೊಡುವಂಥದೊಂದನ್ನು ಈ ಪ್ರಪಂಚದಲ್ಲಿ ಹುಡುಕಲು ಪ್ರಯತ್ನಿಸಿದಾಗ. ಇವತ್ತು ಇಷ್ಟು ಮಳೆ ಬೇಡ ಅಂದವರು ಮಳೆಯೇನಾದರೂ ಕಡಿಮೆ ಆಗಿದ್ದರೆ ಆಗ ಮಳೆ ಕಡಿಮೆ ಎಂದೋ ಅಥವಾ ಅದೂ ಹೆಚ್ಚಾಯಿತು ಎಂದೋ ಹೇಳುವುದು ಖಚಿತವಷ್ಟೇ. ಮಳೆಯೊಂದನ್ನೇ ಅಲ್ಲ, ಬಿಸಿಲನ್ನು ಮತ್ತು ಚಳಿಯನ್ನು ಕೂಡ ಹೀಗೇ. ಬಳ್ಳಾರಿಯಿಂದ ಬೆಂಗಳೂರಿಗೆ ಬಂದು ಬಳ್ಳಾರಿಯಂತೆಯೇ ಬಿಸಿಲನ್ನು ಅಪೇಕ್ಷಿಸಿ ಚಳಿ ಚಳಿ ಎಂದು ನಡುಗುವವರಿದ್ದಾರೆ. ಮಡಿಕೇರಿಯಿಂದ ಬಂದು ಬೆಂಗಳೂರಿನಲ್ಲಿ ಬಿಸಿಲು ಜಾಸ್ತಿ ಎನ್ನುವವರೂ ಇದ್ದಾರೆ. ಎಲ್ಲರೂ ತಮ್ಮ ಮೂಗಿನ ನೇರಕ್ಕಲ್ಲದಿದ್ದರೂ ತಾವು ಒಗ್ಗಿಕೊಂಡ ಹವಾಮಾನದ ನೇರಕ್ಕೇ ಮಾತನಾಡುತ್ತಾರೆ. ಪಾಪ, ಆ ದೇವರ ಪರಿಸ್ಥಿತಿ ಶೋಚನೀಯ! ಬಳ್ಳಾರಿಯವನಿಗೆ ಬಿಸಿಲನ್ನು ಕರುಣಿಸಬೇಕೋ, ಮಡಿಕೇರಿಯವನಿಗೆ ಚಳಿಯನ್ನು ಕರುಣಿಸಬೇಕೋ ಅಥವಾ ಬೆಂಗಳೂರಿನವನಿಗೆ ಬಿಸಿಲೂ ಇಲ್ಲ ಚಳಿಯೂ ಇಲ್ಲ ಎನ್ನುವಂಥ ಹವೆಯನ್ನು ಕರುಣಿಸಬೇಕೋ!&lt;/div&gt;&lt;div&gt;&lt;br /&gt;&lt;/div&gt;&lt;div&gt;ಸುಮಾರು ಆರು ತಿಂಗಳ ಹಿಂದೆ ಒಂದು ಮಧ್ಯಾಹ್ನ ಮಣಿಪಾಲದಲ್ಲಿ ಗೆಳೆಯರೊಡನೆ ನಡೆದು ಹೋಗುತ್ತಿದ್ದೆ. ಸುಡುವಂಥ ಬಿಸಿಲು. ಒಬ್ಬ ಗೆಳೆಯ, ಬೆಂಗಳೂರಿನವ, ಮನಸ್ಸಿಗೆ ಬಂದಷ್ಟೂ ಸೂರ್ಯನನ್ನು ಬೈದುಕೊಂಡ. "ಬೆಂಗಳೂರಲ್ಲಿ ಇದ್ದಷ್ಟು ಬಿಸಿಲಿರಬೇಕು.. ಇಷ್ಟೊಂದು ಬಿಸಿಲು! ಸಾಯೋ ಅಂಥ ಸೆಕೆ! ಥೂ" ಎಂದು ಬೈದುಕೊಳ್ಳುತ್ತಿದ್ದ. ಅಂದು ಯಾಕೋ ಈ ಬೈಗುಳದ ಬಿಸಿ ನನ್ನನ್ನು ಸುಡುತ್ತಿತ್ತು. "ಅಲ್ಲೋ, ಮಣಿಪಾಲದಲ್ಲಿ ಬಿಸಿಲು ಅಂತ ಗೊತ್ತು. ಸೆಕೆ ಅಂತನೂ ಗೊತ್ತು. ಎಲ್ಲಾ ಗೊತ್ತಿದ್ದೂ ಇಲ್ಲಿಗೆ ಬಂದು ಬೈಕೊಂಡ್ರೆ ಯಾರ ತಪ್ಪೋ? ಬೆಂಗಳೂರಿನ ಬಿಸಿಲು ಚೆನ್ನಾಗಿದೆ ಅನ್ನೋದಾದರೆ ಅಲ್ಲೇ ಇರಬೇಕಾಗಿತ್ತು. ಇಲ್ಲಿಗೆ ಯಾಕೆ ಬಂದಿ?" ಎಂದು ಕೇಳಿದೆ. "ಆದ್ರೂ ಇಷ್ಟೊಂದು ಬಿಸಿಲಿರಬಾರದೋ..." ಎಂದು ವಾದಕ್ಕೆ ಪ್ರತಿವಾದ ಜೋಡಿಸಲು ಹೊರಟ. "ಈಗ ನಿಂಗೆ ಬಿಸಿಲು ಜಾಸ್ತಿ. ಇವನಿಗೆ ನೋಡು. ಎಷ್ಟಾದರೂ ಇದೇ ಪ್ರದೇಶದಲ್ಲಿ ಹುಟ್ಟಿ ಬೆಳೆದವನು. ಚೂರು ಬಿಸಿಲು ಕಮ್ಮಿ ಆದರೂ ಚಳಿ ಆಗ್ತದೆ ಮಾರಾಯ ಅಂತ ಮೈ ಕಿವುಚಿಕೋತಾನೆ. ಸೂರ್ಯ ಪಾಪ ಯಾರ ಮಾತೋ ಕೇಳ್ಬೇಕು?" ಎಂದು ಕೇಳಿದೆ. ಅಲ್ಲಿಂದ ಬೆಂಗಳೂರಿಗೆ ಹೊರಡುವ ಒಂದೆರಡು ದಿನಗಳ ಮುಂಚೆ ಮತ್ತಿನ್ಯಾರೋ ಹೀಗೇ ಬಿಸಿಲನ್ನು ಶಪಿಸುತ್ತಿದ್ದಾಗಲಂತೂ ಕೋಪ ಬಂದು "ಬಿಸಿಲನ್ನು ಬೈಬೇಡ. ಇನ್ನೇನು ಬೆಂಗಳೂರಿಗೆ ಹೋಗ್ತೀಯಲ್ಲ. ಹೇಳೀ ಕೇಳೀ ಜನವರಿ ತಿಂಗಳು. ಈ ಬಿಸಿಲಿನ ಬೆಲೆ ಅಲ್ಲಿ ಗೊತ್ತಾಗತ್ತೆ. ಆಗ ಬೇಕು ಅಂದ್ರೂ ಸಿಗಲ್ಲ ಬಿಡು" ಎಂದು ಬೇಸರದಿಂದ ಹೇಳಿಬಿಟ್ಟೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಇಂಥ ವಿಷಯಗಳಿಗೆಲ್ಲಾ ಗೆಳೆಯರ ಬಗ್ಗೆ ಬೇಸರ ಪಟ್ಟುಕೊಳ್ಳುವುದು ಅದೆಂಥ ಅಸ್ವಾಭಾವಿಕ ಎಂದು ಅಪಹಾಸ್ಯ ಮಾಡಿದವರುಂಟು. ಆದರೆ ನಾನು ನನಗೆ ತಿಳಿದವರ ಬಳಿಯಲ್ಲದೇ ಇನ್ಯಾರ ಬಳಿ ನನಗನ್ನಿಸಿದ್ದನ್ನು ಹೇಳಲಿ? ಇಂದು ಈ ಜಗತ್ತು ನಡಿಯುತ್ತಿದೆ ಎಂದರೆ ಅದು ಸೂರ್ಯನಿಲ್ಲದೆಯೇ ಸಾಧ್ಯವಿಲ್ಲ. ವಿದ್ಯುದ್ದೀಪಗಳನ್ನು ಹಚ್ಚುತ್ತೇವೆ, ನಮಗೆ ಬೆಳಕಿಗಾಗಿ ಸೂರ್ಯನ ಹಂಗು ಬೇಕಿಲ್ಲ ಎಂದರೆ ಅದೂ ಸರಿಯಿಲ್ಲ. ಸೂರ್ಯನ ಶಾಕದಿಂದಲೇ ಭೂಮಿಯ ಮೇಲಿರುವ ನೀರು ಆವಿಯಾಗಬೇಕು. ಆಮೇಲೆ ಮೋಡವಾಗಿ ನಂತರ ಮಳೆ ಸುರಿದರೆ ಮಾತ್ರ ನಮಗೆ ಕುಡಿಯಲು ನೀರು ಸಿಗುವುದು, ತಿನ್ನಲು ಆಹಾರ ಬೆಳೆಯುವುದು, ಜಲಪಾತಗಳಿಂದ ವಿದ್ಯುತ್ ತಯಾರಿಸಿ ವಿದ್ಯುದ್ದೀಪಗಳನ್ನುರಿಸಬಹುದು. ನೀರಿಲ್ಲದಿದ್ದರೆ ಆಮ್ಲ ಜನಕವನ್ನು ಜಗತ್ತಿಗೆ ಕೊಡುವ ಗಿಡ-ಮರಗಳೇ ಇರುವುದಿಲ್ಲ! ಅಂಥ ಸೂರ್ಯನಲ್ಲಿ ದೇವರನ್ನು ಕಂಡರು ನಮ್ಮ ಪೂರ್ವಜರು. ನಾವು ಈ ದೇವರು-ದಿಂಡರು ಇತ್ಯಾದಿಗಳನ್ನೆಲ್ಲಾ ಮರೆತು ಬದುಕಿದರೂ ಇಷ್ಟೊಂದು ಉಪಕಾರ ಮಾಡುತ್ತಿರುವ ಸೂರ್ಯನನ್ನು ಕೊನೆಯ ಪಕ್ಷ ತೆಗಳದೆ ಇರಬೇಕಲ್ಲವೇ?&lt;/div&gt;&lt;div&gt;&lt;br /&gt;&lt;/div&gt;&lt;div&gt;ಮಳೆಯ ವಿಷಯವೂ ಹಾಗೇ. ಬೆಂಗಳೂರಿನವರಾದ ನಮಗಂತೂ ಮಳೆ ಕಂಡರಾಗದು. ತುಂತುರು ಮಳೆ ಶುರುವಾದರೆ ಸಾಕು, ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಿರುವವರೆಲ್ಲಾ ಸಿಕ್ಕ-ಸಿಕ್ಕ ಕಡೆ ಮಳೆಯಿಂದ ರಕ್ಷಣೆ ಹುಡುಕಿ ನಿಂತುಬಿಡುತ್ತೇವೆ. ರಸ್ತೆಗಳು ಬಿಕೋ ಎಂದು ಇಪ್ಪತ್ತೈದು ವರ್ಷಗಳ ಹಿಂದಿನ ಬೆಂಗಳೂರಿನ ರಾಜಮಾರ್ಗಗಳಾಗಿ ಪರಿವರ್ತನೆಯಾಗುತ್ತವೆ! ಆದರೆ ಇದನ್ನು ಹೆಚ್ಚಿನ ಜನ ಗಮನಿಸದೇ ಮಳೆ ನಿಂತಿತೋ ಇಲ್ಲವೋ ಎಂದು ಮಾತ್ರ ನೋಡುತ್ತಿರುತ್ತಾರೆ! ಇಂಥ ನಮಗೆ ಇನ್ನು ಮಲೆನಾಡಿನ ಮಳೆಯಲ್ಲಿ ನೆಂದು ತೊಪ್ಪೆಯಾಗುವ ಪರಿಸ್ಥಿತಿ ಬಂದರಂತೂ ಎಲ್ಲಿಲ್ಲದ ಕೋಪ ಬಂದುಬಿಡುತ್ತದೆ! ಮಳೆರಾಯನಿಗೆ ಶಾಪಗಳ ಮಳೆ ಸುರಿಸುತ್ತಾರೆ! ಬಿಸಿಲಿಗೆ ಕಾರಣವಾದ ಸೂರ್ಯನಾದರೂ ಬರಿಗಣ್ಣ ನೋಟವನ್ನು ಕುರುಡು ಮಾಡುವ ತೇಜದ ವರ್ತುಲದಂತೆ ಗೋಚರಿಸುತ್ತಾನೆ; ಅವನಿಗೆ ಶಾಪ ಹಾಕುತ್ತಾರೆ ಎಂದರಾದರೂ ಸುಮ್ಮನಿರಬಹುದೇನೋ! ಆದರೆ ಮಳೆಯನ್ನು ಸುರುಸುವಾತ, ಅಂದರೆ ಮಳೆರಾಯ ಅಥವಾ ವರುಣ ಎಂದು ಕರೆಸಿಕೊಳ್ಳುವವನು ಕಾಣುವುದಿಲ್ಲವಲ್ಲ! ಸೂರ್ಯ ಕಂಡಾಗಲೆಲ್ಲಾ ಬಿಸಿಲು ಬರುವಂತೆ ಮೋಡ ಕಂಡಾಗಲೆಲ್ಲಾ ಮಳೆ ಬರುವುದಿಲ್ಲ. ಆದ್ದರಿಂದ ಸೂರ್ಯ ಬಿಸಿಲುರಾಯನಾದರೂ ಮೋಡವಂತೂ ಮಳೆರಾಯನಲ್ಲ. ಮಳೆ ಬರುವಾಗ ನಮಗೆ ಆಕಾಶದಲ್ಲಿನ್ನೇನೂ ಕಾಣುವುದಿಲ್ಲ. ಹಾಗಾಗಿ, ನಾವು ಮಳೆ ಸುರಿಯುವಾಗ ಬಾಯಿ ತುಂಬಾ ಬೈದುಕೊಂಡರೂ ಯಾರನ್ನು ಬೈಯ್ಯುತ್ತಿದ್ದೇವೆ ಎಂದು ನಮಗೇ ಗೊತ್ತಿಲ್ಲ! ನಾವು ಬೈದದ್ದರಿಂದ ಯಾರಿಗೇನಾಯಿತು? ಇದೆಂಥ ದುರಂತ!&lt;/div&gt;&lt;div&gt;&lt;br /&gt;&lt;/div&gt;&lt;div&gt;ಹೆಚ್ಚಿನ ಜನರಿಗೆ ಮಳೆಯಲ್ಲಿ ನೆಂದು ತೊಪ್ಪೆಯಾಗುವ ಮಜವೇ ಗೊತ್ತಿಲ್ಲ ಎನ್ನಿಸುತ್ತದೆ ನನಗೆ. "Only a few people feel the rain. Others just get wet" ಎಂದು ಗೆಳೆಯ ಅರುಣ್ ನೆನ್ನೆ ಒಂದು ಎಸ್ಸೆಮ್ಮೆಸ್ ಕಳುಹಿಸಿದ್ದ. ಈ ಸಂದೇಶವನ್ನು ಮೊದಲು ಕಳುಹಿಸಿದವರ್ಯಾರು ಎಂದು ಅವನಿಗೂ ಗೊತ್ತಿಲ್ಲ. ಆದರೆ ಅವರು ಯಾರದರೂ ಅವರಿಂದ ನಾವು ಕಲಿಯುವುದು ಬೇಕಾದಷ್ಟಿವೆ. ಆಕಾಶದಿಂದ ಇಳಿದು ಬಂದು ಭೂಮಿಯನ್ನು ಇನ್ನೂ ಮುಟ್ಟದ ನೀರಿನ ಸ್ಪರ್ಶವೇ ಒಂದು ಆನಂದ. ಮಳೆಯ ರಭಸದಲ್ಲಿ ಹೆಚ್ಚು-ಕಡಿಮೆಯಾಗುವಾಗ ಉಂಟಾಗುವ ನಾದದ ಏರುಪೇರುಗಳಿಂದ ಅದ್ಭುತವಾದ ಸಂಗೀತ ಸೃಷ್ಟಿಯಾಗುತ್ತದೆ. ಮೆಲ್ಲನೆಯ ಗಾಳಿ ಮತ್ತು ಮನುಷ್ಯರನ್ನೇ ಹಾರಿಸಿಕೊಂಡು ಹೋಗುವ ಗಾಳಿಯ ನಡುವಿನ ಏರುಪೇರುಗಳಿಂದಾಗುವ ನಾದದಿಂದ ಕೂಡಿದ ಮಳೆಯ ನಾದ ಕೇಳಲು ಮತ್ತಷ್ಟು ಹಿತ! ಪ್ರಕೃತಿಯ ಮಧ್ಯೆ ಇದ್ದಾಗಲಂತೂ ಮಳೆಯೊಂದಿಗಿನ ಪ್ರಕೃತಿಯ ಚಿತ್ರವೇ ಅವಿಸ್ಮರಣೀಯ. ಬೆಟ್ಟಗಳ ಮೇಲೆ ಹೋದಾಗ ಗಾಳಿಯ ರಭಸಕ್ಕೆ ಸೊತು ಅಡ್ಡಡ್ಡ ಓಡಾಡುವ ಮಳೆಹನಿಗಳು ಬಾಣಗಳಂತೆ ನಮ್ಮನ್ನು ಚುಚ್ಚುವ ಪರಿಯೂ ವರ್ಣನಾತೀತ. ಕೊಡೆಯನ್ನು ಒಮ್ಮೆಯಾದರೂ ಮಡಚಿಟ್ಟು ಮಳೆಯನ್ನನುಭವಿಸದ ಜನರಿಗೆ ನನ್ನಿಂದ ಮಳೆಯ ಸುಖವನ್ನು ಅರ್ಥ ಮಾಡಿಸಲಾಗುವುದಿಲ್ಲ. ಅನುಭವಿಸಿದವರಿಗೆ ಅರ್ಥ ಮಾಡಿಸುವುದು ಬೇಕಿಲ್ಲ!&lt;/div&gt;&lt;div&gt;&lt;br /&gt;&lt;/div&gt;&lt;div&gt;ಈಗಿನ ನಮ್ಮ ಜೀವನವಿಧಾನ ಮಳೆಯಲ್ಲಿ ಸದಾ ನೆನೆಯಲು ಬಿಡುವುದಿಲ್ಲ ಎಂಬ ಮಾತು ಒಪ್ಪಬೇಕಾದ್ದು. ಆದರೆ ಜೀವನಪರ್ಯಂತವೂ ಬಿಡುವಿಲ್ಲ ಎಂಬ ಕಾರಣವೊಡ್ಡಿ ನಾಲ್ಕು ಗೋಡೆಗಳ ಮಧ್ಯೆ ಬೆಚ್ಚಗೆ ಕುಳಿತರೆ ಪ್ರಕೃತಿಯ ಸೊಬಗನ್ನನುಭವಿಸುವ ಅವಕಾಶ ಹಾಳಾದಂತಷ್ಟೇ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಚಳಿಯ ವಿಷಯ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಚಳಿಗಾಲದಲ್ಲಿ ಬೆಂಗಳೂರನ್ನು ಬೈದುಕೊಂಡು ಬಿಸಿಲು ಬಂದಾಗ ಚಳಿಯನ್ನು ಹುಡುಕಿಕೊಂಡು ಉದಕಮಂಡಲಕ್ಕೆ ಹೋಗಿ ಸಾವಿರಾರು ರೂಪಾಯಿ ಸುರಿಯುವವರಿಗೆ ಪ್ರತ್ಯೇಕವಾಗಿ ಹೇಳಿದರೂ ಅರ್ಥವಾಗುವುದಿಲ್ಲ. ಚಳಿಯನ್ನು, ಮಳೆಯನ್ನು, ಬಿಸಿಲನ್ನು ಹುಡುಕಿಕೊಂಡು ಹೋಗುವುದು ತಪ್ಪಲ್ಲ. ತಪ್ಪು ಎಂದರೆ ನಾನು ಮಾಡುವುದನ್ನು ನಾನೇ ಖಂಡಿಸಿದಂತೆ. ಆದರೆ, ಚಳಿಗಾಲವನ್ನು ಚಳಿಯನ್ನು ಬೈಯ್ಯುವ ಕಾಲ ಮಾಡುವುದು ಸರಿಯಲ್ಲ ಎಂದೆ ಅಷ್ಟೇ. ಹಾಗೇ ಮಳೆಗಾಲ ಮತ್ತು ಬಿಸಿಲುಗಾಲಗಳು ಕೂಡ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಮಳೆಗೆ ಸಿಕ್ಕಿ ಕೊಚ್ಚಿಕೊಂಡು ಹೋದವರಿದ್ದಾರೆ, ಬಿಸಿಲು-ಚಳಿಗಳನ್ನು ತಡಿಯಲಾಗದೇ ಸತ್ತವರೂ ಇದ್ದಾರೆ. "ಸಾವು ಬದುಕಿಗಿಂತ ಸುಂದರ" ಎಂದು ವಾದಿಸುವವರಿದ್ದರೆ, ಅವರನ್ನು ಬಿಟ್ಟು ಬೇರೆ ಎಲ್ಲರಿಗೂ ಇವು ಬೇಸರದ ಸಂಗತಿಗಳೇ. ಆದರೆ ಬೈಯ್ಯುವುದಕ್ಕೆ ಕಾರಣವಿಲ್ಲ. ಏಕೆಂದರೆ ಬಿಸಿಲು-ಮಳೆ-ಚಳಿ-ಗಾಳಿಗಳಿಂದ ಎಷ್ಟು ಜನ ಸತ್ತಿರುವರೋ ಅದಕ್ಕೆ ಲಕ್ಷ-ಪಟ್ಟು ಜನ ಅವನ್ನೇ ಅವಲಂಬಿಸಿ ಬದುಕಿದ್ದೀವಿ. ಕೋಟ್ಯಂತರ ವರ್ಷಗಳ ಕಾಲ ಜೀವರಾಶಿಗೆ ಆಧಾರವಾಗಿರುವ ಸೃಷ್ಟಿಯ ವ್ಯವಸ್ಥೆಯನ್ನು ಕೆಲವೇ ದಶಕಗಳ ಕಾಲ ಬೆಳಕನ್ನು ಕಂಡ ನಾವು ತೆಗಳಿದರೆ ಅದು ನಮ್ಮ ಅಜ್ಞಾನದ ಪರಮಾವಧಿಯಷ್ಟೇ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-1238114241361497494?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/1238114241361497494/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=1238114241361497494' title='3 Comments'/><link rel='edit' type='application/atom+xml' href='http://www.blogger.com/feeds/34886019/posts/default/1238114241361497494'/><link rel='self' type='application/atom+xml' href='http://www.blogger.com/feeds/34886019/posts/default/1238114241361497494'/><link rel='alternate' type='text/html' href='http://manasinaputagalanaduve.blogspot.com/2009/07/blog-post_24.html' title='ಬಿಸಿಲು-ಮಳೆಗೆ ಬಿರುಗಾಳಿ-ಚಳಿಗೆ ನೀನ್...'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>3</thr:total></entry><entry><id>tag:blogger.com,1999:blog-34886019.post-4939740604478878687</id><published>2009-07-14T15:43:00.003+05:30</published><updated>2009-07-14T15:47:44.736+05:30</updated><title type='text'>ಗಮಕ ಸುಧಾ ಧಾರೆ</title><content type='html'>&lt;div&gt;ಹೊಸ ಸಂಸ್ಕೃತಿ-ಪದ್ಧತಿಗಳೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ವಿರಳವಾಗುತ್ತಿರುವ "ಗಮಕ" ಎಂಬ ಒಂದು ಸುಂದರವಾದ ಗಾಯನಪದ್ಧತಿಯನ್ನು ಮರುಪರಿಚಯಿಸಹೊರಟಿದೆ ಪ್ರಣತಿ. ಈ ಕಾರ್ಯಕ್ರಮಕ್ಕೆ ನಾನು ಪ್ರಣತಿ ತಂಡದ ಪರವಾಗಿ ಎಲ್ಲರನ್ನೂ ಆಹ್ವಾನಿಸುತ್ತೇನೆ. ಕಾರ್ಯಕ್ರಮದ ವಿವರಗಳು ಕೆಳಗಿನ ಆಹ್ವಾನ ಪತ್ರಿಕೆಯಲ್ಲಿದೆ. ಖಂಡಿತವಾಗಿ ಬನ್ನಿ.&lt;/div&gt;&lt;div&gt;&lt;br /&gt;&lt;/div&gt;&lt;a onblur="try {parent.deselectBloggerImageGracefully();} catch(e) {}" href="http://www.pranati.in/images/gamaka_sudhaa_dhaare.jpg" style="text-decoration: none;"&gt;&lt;img style="display:block; margin:0px auto 10px; text-align:center;cursor:pointer; cursor:hand;width: 600px; height: 634px;" src="http://www.pranati.in/images/gamaka_sudhaa_dhaare.jpg" border="0" alt="" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-4939740604478878687?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/4939740604478878687/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=4939740604478878687' title='0 Comments'/><link rel='edit' type='application/atom+xml' href='http://www.blogger.com/feeds/34886019/posts/default/4939740604478878687'/><link rel='self' type='application/atom+xml' href='http://www.blogger.com/feeds/34886019/posts/default/4939740604478878687'/><link rel='alternate' type='text/html' href='http://manasinaputagalanaduve.blogspot.com/2009/07/blog-post.html' title='ಗಮಕ ಸುಧಾ ಧಾರೆ'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>0</thr:total></entry><entry><id>tag:blogger.com,1999:blog-34886019.post-2226757528626000713</id><published>2009-06-02T10:36:00.001+05:30</published><updated>2009-06-02T10:39:07.363+05:30</updated><title type='text'>ಇಪ್ಪತ್ತೈದು ವರ್ಷ</title><content type='html'>ಪ್ರತಿ ವರ್ಷದಂತೆ ಮತ್ತೆ ಹುಟ್ಟುಹಬ್ಬ ಬಂದಿತ್ತು ನೆನ್ನೆ; ಇಪ್ಪತ್ತೈದನೆಯ ಬಾರಿಗೆ. ಕಳೆದ ಕಾಲದಲ್ಲಿ ಗಳಿಸಿದ್ದು ಏನೆಂದು ಗೊತ್ತಿರುವುದಿರಲಿ, ಕಳೆದ ಕ್ಷಣಗಳು ಎಷ್ಟು ಎಂದೂ ಅರಿಯದೇ ಬದುಕಿದ್ದೇನೆ - ಇಪ್ಪತ್ತೈದು ವರ್ಷ.&lt;br /&gt;&lt;br /&gt;ಆದರೂ, ಬಹಳಷ್ಟು ಜನರು ಪ್ರೀತಿಯಿಂದ ನನಗೆ ಶುಭ ಹಾರೈಸಿದ್ದೀರಿ. ದೂರದಿಂದ ಬಂದು ಶುಭಾಶಯಗಳನ್ನು ಹೇಳಿದವರಿದ್ದಾರೆ. ಫೋನಿನಲ್ಲಿ, ಎಸ್.ಎಮ್.ಎಸ್ ಮೂಲಕ, ಆರ್ಕುಟ್ ಮೂಲಕ ಹತ್ತಿರದಿಂದ ಶುಭಾಶಯ ಹೇಳಿದವರಿದ್ದಾರೆ. ಎಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ಸದಾ ಹೀಗೇ ಇರಲಿ :-)&lt;br /&gt;&lt;br /&gt;ಯಾರ್ಯಾರನ್ನು ಯಾವಾಗ ಎಷ್ಟೆಷ್ಟು ನೋಯಿಸಿದೆನೋ ನಲಿಸಿದೆನೋ ಗೊತ್ತಿಲ್ಲ. ನೋಯಿಸಿದ್ದರೆ ಅದಕ್ಕೆ ಕ್ಷಮೆ ಇರಲಿ. ನಮ್ಮ ಸ್ನೇಹ ಸದಾ ಹಸಿರಾಗಿರಲಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-2226757528626000713?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/2226757528626000713/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=2226757528626000713' title='4 Comments'/><link rel='edit' type='application/atom+xml' href='http://www.blogger.com/feeds/34886019/posts/default/2226757528626000713'/><link rel='self' type='application/atom+xml' href='http://www.blogger.com/feeds/34886019/posts/default/2226757528626000713'/><link rel='alternate' type='text/html' href='http://manasinaputagalanaduve.blogspot.com/2009/06/blog-post.html' title='ಇಪ್ಪತ್ತೈದು ವರ್ಷ'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>4</thr:total></entry><entry><id>tag:blogger.com,1999:blog-34886019.post-8079998080767133835</id><published>2009-05-20T20:16:00.004+05:30</published><updated>2009-05-20T22:27:07.937+05:30</updated><title type='text'>ಮಾನಸ ಸಂಚರ ರೇ... ಹರಿತೇ... ಮಾನಸ ಸಂಚರ ರೇ!</title><content type='html'>&lt;div&gt;ಅರ್ಕರಶ್ಮಿಯು ದಾರಿದೀಪವು; ಹಸುರು ಎಲೆಗಳ ಚಾಮರ;&lt;/div&gt;&lt;div&gt;ಪಕ್ಷಿಕುಕ್ಷಿಯೊಳಿಂದ ಹೊಮ್ಮಿದ ಇಂಪಿನಾದರ ಸ್ವಾಗತ |&lt;/div&gt;&lt;div&gt;ಏರುದಾರಿಯ ಮೆಲ್ಲಮೆಲ್ಲನೆ ಹೆಜ್ಜೆಹೆಜ್ಜೆಯೆ ಮೆಟ್ಟಲು&lt;/div&gt;&lt;div&gt;ದಟ್ಟದಡವಿಯ ಹೊದಿಗೆ ಹೊದ್ದ ಮಲೆಯೊಡೆಯನನ್ನೇರಲು ||&lt;/div&gt;&lt;div&gt;&lt;br /&gt;&lt;/div&gt;&lt;div&gt;ಅವನಿಯಾಳದಿ ಹುಟ್ಟಿ ಬಂದಿಹ, ಗಗನದಿಂದಲಿ ಇಳಿದಿಹ,&lt;/div&gt;&lt;div&gt;ಪ್ರಾಣಶಕ್ತಿಯ ಹಸಿರನುಳಿಸುವ ಹಸಿರ ಚುಂಬಿಸಿ ಬಂದಿಹ, |&lt;/div&gt;&lt;div&gt;ಬಿಂಬ ಹಸಿರಿನದೆಲ್ಲವನ್ನೂ ದರ್ಶದಂತೆಯೆ ತೋರುವ,&lt;/div&gt;&lt;div&gt;ಅಂಬುಧಾರೆಯ ಚುಂಬಿಸಿದ ನಾಲಗೆಯು ಧನ್ಯವು ಎಮ್ಮದು ||&lt;/div&gt;&lt;div&gt;&lt;br /&gt;&lt;/div&gt;&lt;div&gt;ಬತ್ತಲಾಗುವುದಿಲ್ಲವೀ ಮಲೆಮಾಲೆಯಾಗರವೆಂದಿಗೂ&lt;/div&gt;&lt;div&gt;ಬತ್ತಲಾರದು ಮಲೆಯ ಮೈಯ್ಯನು ಮುಚ್ಚಿರುವ ಹಸಿರೆಂದಿಗೂ |&lt;/div&gt;&lt;div&gt;ಏರುದೇಶದ ಮೇಲೆ ನಿಂತೀ ದೇಶದೀಕ್ಷಣೆ ಮಾಡು ನೀ&lt;/div&gt;&lt;div&gt;ಸೇರಿಸಕ್ಷಿಯ ದಾರಿಯಿಂದಲಿ ಮನಸ ನಾಕಕೆ ಬೇಗ ನೀ ||&lt;/div&gt;&lt;div&gt;&lt;br /&gt;&lt;/div&gt;&lt;div&gt;ಒಮ್ಮೆಲೆಯೆ ಎಲ್ಲಿಂದಲೋ ಆವರಿಸಿಬಿಟ್ಟಿತು ಗಗನವ&lt;/div&gt;&lt;div&gt;ಅರ್ಕರಶ್ಮಿಯ ಭುವಿಯ ದಾರಿಯ ಮುಚ್ಚಿತೊಡನೆಯೆ ಮೇಘವು |&lt;/div&gt;&lt;div&gt;ವಾರಿಧಾರಿಯ ಸೀಳಿ ಮಿಂಚಿತು; ಜಗದಲೆಲ್ಲೆಡೆ ಗುಡುಗಿತು&lt;/div&gt;&lt;div&gt;ವಾರಿಶರಗಳು ಇಳಿದು ಬಂದವು ಬಿಡುವು ನೀಡದೆ ಭೂಮಿಗೆ ||&lt;/div&gt;&lt;div&gt;&lt;br /&gt;&lt;/div&gt;&lt;div&gt;ಜೀವಸಂಕುಲಕಂಬುಸುಧೆಯನ್ನುಣಿಸಿ ವರ್ಷವು ನಿಲ್ಲಲು&lt;/div&gt;&lt;div&gt;ನಗುವ ಹೂಗಳು, ಹೊಳೆವ ಜಲಮಣಿರಾಶಿಯೇ ಎಲ್ಲೆಲ್ಲಿಯೂ |&lt;/div&gt;&lt;div&gt;ನೋಡಲಕ್ಷಿಯು ಸಾಲದಾಗಲು ಅಂಥ ಅನುಭವವನ್ನು ನಾ&lt;/div&gt;&lt;div&gt;ಶಬ್ದಗಳಲದೆಂತಾದರೂ ವರ್ಣಿಸಲಿ? ತಿಳಿಯದುಪಾಯವು! ||&lt;/div&gt;&lt;div&gt;&lt;br /&gt;&lt;/div&gt;&lt;div&gt;ಹಸಿರುಗಿರಿವರ್ತುಲದ ಮಧ್ಯದಿ ಸಂಜೆಯಾಗಲು ನಿಲ್ಲಲು&lt;/div&gt;&lt;div&gt;ಹೆಸರಿಸಲಿ ನಾನಾವ ಸೊಬಗನು ಆಗ ನೋಡಿದ ಜಗದಲಿ! |&lt;/div&gt;&lt;div&gt;ತೈಲದೀಪದ ಬೆಳಕಿನಲಿ ಭೋಜನವ ಸವಿದೆವು ಸುಖದಲಿ&lt;/div&gt;&lt;div&gt;ಸುಖದ ನಿದ್ರೆಯು ಕಾಯುತಿತ್ತು ನಮಗೆ ಜೋಗುಳದೊಂದಿಗೆ ||&lt;/div&gt;&lt;div&gt;&lt;br /&gt;&lt;/div&gt;&lt;div&gt;ಬೆಳಕ ಬಾಗಿಲ ತೆರೆದ ಮರುದಿನ ಸೂರ್ಯ ತಾ ಮುಂಜಾವಲಿ&lt;/div&gt;&lt;div&gt;ಹೊದಿಗೆಯೊಳಗೆ ಬೆಚ್ಚಗಿಟ್ಟು ನಿದ್ರೆಯನು ನಾವೆದ್ದೆವು |&lt;/div&gt;&lt;div&gt;ಇರುಳಲೆಲ್ಲಾ ಎಲೆಯಮೇಲೆ ನಗುತ ಮಲಗಿದ ಹಿಮಮಣಿ&lt;/div&gt;&lt;div&gt;ಸೂರ್ಯರಶ್ಮಿಗೆ ಹೆದರಿಕೊಂಡು ಮಾಯವಾದುದ ಕಂಡೆವು ||&lt;/div&gt;&lt;div&gt;&lt;br /&gt;&lt;/div&gt;&lt;div&gt;ಹಸಿರುಗಿರಿರಾಜಾಲಯದ ಕಡೆ ಹೆಜ್ಜೆ ಹಾಕುತ ಹೊರಟೆವು&lt;/div&gt;&lt;div&gt;ಉಸಿರಿನಲಿ ಅಮಲತೆಯ ಅನುಭವಿಸುತಲಿ ತೃಪ್ತಿಯ ಕಂಡೆವು |&lt;/div&gt;&lt;div&gt;ಹೆಸರ ಹೇಳಲು ಬಾರದಷ್ಟು ಜೀವವಿವಿಧತೆ ಕಂಡೆವು&lt;/div&gt;&lt;div&gt;ಎತ್ತರೆತ್ತರಕೇರುತೇರುತ ಕೆಳಗೆ ನೋಡುತ ನಲಿದೆವು ||&lt;/div&gt;&lt;div&gt;&lt;br /&gt;&lt;/div&gt;&lt;div&gt;ಸಾಕು ಸಾಕು ಎಂದು ಸೋತು ಬೀಳುತಿದ್ದ ಕಾಲ್ಗಳ&lt;/div&gt;&lt;div&gt;ಬೇಕು ಬೇಕು ಎಂದು ಸೋಲನು ಒಪ್ಪಲೊಲಿಯದ ಮಾನಸ |&lt;/div&gt;&lt;div&gt;ನೂಕಿ ನೂಕಿ ಬೆನ್ನು ತಟ್ಟಿ ಏರಿಸಿತು ಮಲೆ ಮೇಲ್ಗಡೆ&lt;/div&gt;&lt;div&gt;ನಾಕ! ನಾಕ! ಎಲ್ಲಿ ನೋಡಲಿ? ಎಲ್ಲ ಮೇಘದ ತೇರ್ಗಳೇ! ||&lt;/div&gt;&lt;div&gt;&lt;br /&gt;&lt;/div&gt;&lt;div&gt;ಸತತ ಬೀಸುತ ಗಾಳಿ ತಳ್ಳಿತು ಮೇಘರಾಶಿಯ ಪಕ್ಕಕೆ&lt;/div&gt;&lt;div&gt;ಅನತಿದೂರಕೆ, ಆ ದಿಗಂತಕೆ, ಹಸಿರ ಎಲ್ಲೆಡೆ ಕಂಡೊಡೆ |&lt;/div&gt;&lt;div&gt;ಮುಷ್ಟಿಯನು ಹಿಡಿದಾಗಸದ ಕಡೆ ಗುದ್ದುತಲಿ ಮನ ಕುಣಿಯಿತು&lt;/div&gt;&lt;div&gt;ಸೃಷ್ಟಿಕರ್ತನ ಕೊಡುಗೆಯನ್ನು ಮರೆಯಲಾಗದೆ ಸೋತಿತು ||&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-8079998080767133835?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/8079998080767133835/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=8079998080767133835' title='4 Comments'/><link rel='edit' type='application/atom+xml' href='http://www.blogger.com/feeds/34886019/posts/default/8079998080767133835'/><link rel='self' type='application/atom+xml' href='http://www.blogger.com/feeds/34886019/posts/default/8079998080767133835'/><link rel='alternate' type='text/html' href='http://manasinaputagalanaduve.blogspot.com/2009/05/blog-post_20.html' title='ಮಾನಸ ಸಂಚರ ರೇ... ಹರಿತೇ... ಮಾನಸ ಸಂಚರ ರೇ!'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>4</thr:total></entry><entry><id>tag:blogger.com,1999:blog-34886019.post-7440531989820120292</id><published>2009-05-01T08:39:00.002+05:30</published><updated>2009-05-01T08:41:51.105+05:30</updated><title type='text'>ಮತದಾನ ಒಂದು ಗುಂಡಿ ಒತ್ತುವಷ್ಟು ಸುಲಭವಲ್ಲ!</title><content type='html'>&lt;div style="text-align: justify;"&gt;ಸ್ವಲ್ಪ ತಡವಾಗಿ ಬರೆಯುತ್ತಿದ್ದೇನೆ. ಚುನಾವಣೆ ಬಂತು. ಹೋಯಿತು ಕೂಡ. ನಾನು ಮತ ಹಾಕಿದ್ದೂ ಆಯಿತು. ಆದರೆ ಮತ ಹಾಕುವುದಕ್ಕೆ ಹೋಗುವ ಮುಂಚೆ ನಾನು ಯೋಚಿಸಿದ ಕೆಲವು ವಿಷಯಗಳನ್ನು ಇಲ್ಲಿ ಬರೆಯುತ್ತಿದ್ದೀನಷ್ಟೇ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಸಾಯಂಕಾಲ ನನ್ನ ಎಡಗೈ ತೋರುಬೆರಳಿನ ಮೇಲೆ ಮತದಾನ ಮಾಡಿದ ಗುರುತನ್ನು ನೋಡಿ "ಯಾವ ಗುರುತಿಗೆ ಮತ ಹಾಕಿದ್ಯೋ? ಕೈಗೋ, ಕಮಲಕ್ಕೋ ಅಥವಾ ಇನ್ಯಾವುದಕ್ಕಾದರೂ ಹಾಕಿದ್ಯೋ?" ಎಂದು ಒಬ್ಬರು ಕೇಳಿದರು. ಒಂದು ಕ್ಷಣ ಸುಮ್ಮನಿದ್ದೆ. "ಕೈಗಾ?" ಎಂದು ಪ್ರಶ್ನಿಸಿದರು. ಇಲ್ಲ ಎಂದೆ. "ಮತ್ತೆ ಕಮಲಕ್ಕಾ?" ಎಂದರು. ಅದಕ್ಕೂ ಅಡ್ಡಕ್ಕೆ ತಲೆಯಲ್ಲಾಡಿಸಿದೆ. "ಮತ್ತೆ ಯಾವುದಕ್ಕೋ?" ಎಂದಾಗ ಏನಾದರೂ ಉತ್ತರ ಕೊಡಬೇಕಲ್ಲ ಎಂದು "ತಳಮೇಲಾದ ಕಮಲಕ್ಕೆ ಹಾಕ್ದೆ" ಎಂದುಬಿಟ್ಟೆ. "ಅದೇನದು... ತಳಮೇಲಾದ ಕಮಲ ಬೇರೆ ಇದ್ಯಾ? ಅದ್ಯಾವ ಪಕ್ಷದ್ದು? ಈಚೆಗೆಲ್ಲಾ ವೋಟ್ಸ್ ಡಿವೈಡ್ ಮಾಡಕ್ಕೆ ಸಿಕ್ಕಾಪಟ್ಟೆ ಇಂಡಿಪೆಂಡೆಂಟ್ ಕ್ಯಾಂಡಿಡೇಟ್ಸ್‍ನ ನಿಲ್ಲಿಸ್ತಾರಲ್ಲ... ಯಾವನು ಯಾವ ಗುರುತು ಇಟ್ಟುಕೊಂಡಿರುತ್ತಾರೋ..." ಎಂದರು. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ತಳಮೇಲಾದ ಕಮಲದ ಕಥೆ ಪಕ್ಕಕ್ಕಿಡಿ. ನಿಮಗೆ ಇಷ್ಟರಲ್ಲೇ ಏನಾದರೂ ಅರ್ಥವಾಗಿದ್ದರೆ ಸಂತೋಷ. ಇಲ್ಲದಿದ್ದರೂ ನಾನು ಯಾರಿಗೆ ಮತ ನೀಡಿದೆ ಎಂದು ಇಲ್ಲಿ ಬರೆಯುವುದಂತೂ ಇಲ್ಲ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಮತದಾನ ಮಾಡಿದ್ದು ನಾನು ಇದೇ ಮೊದಲು. "ಪ್ರತಿ ಬಾರಿ ಇದೇ ಪಕ್ಷಕ್ಕೆ ಹಾಕಿದ್ದೀನಿ... ಈಗಲೂ ಇದೇ ಪಕ್ಷಕ್ಕೆ ಹಾಕಬೇಕು" ಎನ್ನುವ ಜನರನ್ನು ನೋಡಿದ್ದೇನೆ. ಆದರೆ ಒಬ್ಬ 'ನೂತನ' ಮತದಾರನಾಗಿ ನನಗೆ ಯಾವ ಪಕ್ಷದ ಜೊತೆಗೂ ಇಂಥ ಭಾವನಾತ್ಮನ ಸಂಬಂಧಗಳಂತೂ ಇರಲಿಲ್ಲ! ನನಗೆ ಹೆಚ್ಚು ರಾಜಕೀಯದ ಪರಿಚಯವಿಲ್ಲ. ಆದರೆ ಇಂದಿರಾ ಗಾಂಧಿ ಇನ್ನೂ ಬದುಕಿದ್ದಾರೆ ಎಂದುಕೊಂಡೇ ಬದುಕಿರುವ ಕೆಲವು ಹಳ್ಳಿಯ ಜನರಿಗಿಂತ ನಾನು ವಾಸಿ ಅಷ್ಟೇ. ರಾಜಕೀಯ ಈಗ ತಸ್ಕರೀಯ ಆಗಿದೆ ಎನ್ನುವುದಂತೂ ಗೊತ್ತು. ಮುಂಚಿನಂತೆ ಕಣ್ಣು ಮುಚ್ಚಿಕೊಂಡು ಕೈಗೆ ಕೈ ಸೇರಿಸುವಂತಿಲ್ಲ ಎನ್ನುವುದೂ ಗೊತ್ತು. ಅಭ್ಯರ್ಥಿಗಳೆಲ್ಲಾ ಕಳ್ಳರು... ಯಾವ ಕಳ್ಳನನ್ನು ಆರಿಸೋದು? ವೋಟ್ ಮಾಡೊಲ್ಲ ಎಂದು ಸ್ವಲ್ಪ ಹೊತ್ತು ಕುಳಿತೆ. ಅಷ್ಟು ಹೊತ್ತಿಗೆ ಗೆಳೆಯನೊಬ್ಬ ಒಂದು ಸಂದೇಶ ಕಳುಹಿಸಿದ. "Ten terrorists came by boat. 545 terrorists will come by vote... if not chosen wisely" ಎಂದು ಓದಿ ಸ್ವಲ್ಪ ಯೋಚಿಸತೊಡಗಿದೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಸಿಕ್ಕ ಮತದಾನದ ಅವಕಾಶವನ್ನು ಬಿಡುವುದೇಕೆ ಎನ್ನಿಸಿತು. ಬಿಟ್ಟರೆ ರಾಜಕೀಯ ವ್ಯವಸ್ಥೆಯನ್ನು ದೂರುವ ಹಕ್ಕೂ ಬಿಟ್ಟಂತೆ ಅಲ್ಲವೇ? ಸರಿ... ಇರೋರೆಲ್ಲಾ ಕಳ್ಳರೇ... ಇರೋದರಲ್ಲಿ ಕಡಿಮೆ ಕಳ್ಳತನ ಮಾಡುವರನ್ನು ಆರಿಸೋಣ ಎನ್ನಿಸಿತು. ಕಳ್ಳರಲ್ಲೂ ಸಾಚಾ ವ್ಯಕ್ತಿಯೊಬ್ಬನನನ್ನು ಹುಡುಕಲು ಪ್ರಯತ್ನಿಸಿದೆ. ಆದರೆ ಮತ್ತೊಂದು ಸಮಸ್ಯೆ ಕಂಡಿತು. ಅಭ್ಯರ್ಥಿ ಸಾಚಾ ಆದರೆ ಅವನ ಪಕ್ಷ ಸಾಚಾ ಆಗಿರಬೇಕಲ್ಲ. ಚುನಾಯಿತ ಸರ್ಕಾರವೊಂದು ಬಂದುಬಿಟ್ಟರೆ ಭಾರತವನ್ನು ಕಾಡುತ್ತಿರುವ ಹಲವಾರು ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂದು ನಿರ್ಧರಿಸುವುದು ಪ್ರಧಾನಿಯೇ ಮೊದಲಾದ ಏಳೆಂಟು ಪ್ರಮುಖ ಕುರ್ಚಿಗಳಲ್ಲಿ ಕುಳಿತವರು ಮಾತ್ರ. ನಾವು ಆರಿಸಿದ ಅಭ್ಯರ್ಥಿ ಆ ದೊಡ್ಡ ತಲೆಗಳಲ್ಲಿ ಒಬ್ಬರಾಗುವ ಸಾಧ್ಯತೆಯೆಷ್ಟು? ಇದನ್ನೆಲ್ಲಾ ಯೋಚಿಸಿದರೆ ಇನ್ನಷ್ಟು ಗೊಂದಲ! ಅಭ್ಯರ್ಥಿ ಎಂಥವನು ಎಂದು ನೋಡಿ ಮತ ಹಾಕಬೇಕೋ? ಅಥವಾ ಅವನ ಪಕ್ಷ ಎಂಥದ್ದು ಎಂದು ನೋಡಿ ಹಾಕಬೇಕೋ? ಅಥವಾ ಯಾರನ್ನು ಆರಿಸಿದರೆ ಯಾರು ಪ್ರಧಾನಿಯಾಗುತ್ತಾರೆ ಎಂದು ನೋಡುವುದೋ? ಹೇಗೆ ನೋಡಿದರೂ ಒಬ್ಬ ಅಭ್ಯರ್ಥಿಯೂ ಸರಿಯಿಲ್ಲ. ಮತ ಯಾಚಿಸುತ್ತಿರುವವರ ಪಟ್ಟಿಯಲ್ಲಿ ಅನೇಕ ಹೆಸರುಗಳಿವೆ. ಅದರಲ್ಲಿ ಎಷ್ಟೋ ಜನರ ಹೆಸರು ಕೇಳುತ್ತಿರುವುದು ಇದೇ ಮೊದಲು. ಮತದಾನ ಒಂದು ಗುಂಡಿ ಒತ್ತುವಷ್ಟು ಸುಲಭವಲ್ಲ!!!&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಯಾರಿಗೆ ಮತ ಹಾಕಬೇಕು ಎಂಬುದು ಪ್ರತಿಯೊಬ್ಬ ಪ್ರಜೆಗೆ ಬಿಟ್ಟ ವಿಷಯ. ಆದರೆ ಎಲ್ಲರೂ ಮತ ಹಾಕುತ್ತಿರುವುದು ದೇಶದ ಆಡಳಿತದ ರಚನೆಗಾಗಿ. ಹೀಗಿರುವಾಗ ಈಗ ಬರುವ ಚುನಾಯಿತ ದೇಶದ ಆಡಳಿತ ಮಾಡಬೇಕಾದ ಕೆಲಸಗಳೇನು ಎಂದು ಯೋಚಿಸಿದೆ. ದಿನನಿತ್ಯದ ಆಡಳಿತದ ಬಗ್ಗೆ ಹೇಳಲು ಹೆಚ್ಚು ಇಲ್ಲ. ಆದರೆ ಪರಿಹಾರವಾಗಬೇಕಾದವುಗಳೆಂದು ನನಗನ್ನಿಸಿದ ಕೆಲವು ಪ್ರಮುಖ ಸಮಸ್ಯೆಗಳನ್ನು ಮಾತ್ರ ಇಲ್ಲಿ ಹೇಳುತ್ತೇನಷ್ಟೇ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಇಷ್ಟು ದಿನ "ಯಾವನಾದರೂ ಅಧಿಕಾರಕ್ಕೆ ಬರಲಿ? ನನಗೇನು? ನಾನು ಇದ್ದಂಗೇ ಇರ್ತೀನಿ" ಎನ್ನುವವರೂ ಇದ್ದರು. ಈಗ ಹಾಗೆ ಹೇಳುವವರಿಲ್ಲ ಎಂದಲ್ಲ; ಹೇಳುವುದು ಕಷ್ಟ ಅಷ್ಟೇ. ನಿರ್ಭೀತರಾಗಿ ಪ್ರಜೆಗಳು ಓಡಾಡುವುದೂ ಕಷ್ಟವಾಗುತ್ತಿರುವ ಇಂದಿನ ಭಾರತದಲ್ಲಿ ಯಾರೂ "ನಾನು ಇದ್ದಂಗೇ ಇರ್ತೀನಿ" ಎನ್ನುವ ಧೈರ್ಯ ಮಾಡಲಾರರೇನೋ. ಪ್ರಜೆಗಳೆಲ್ಲಾ ಪ್ರಾಣಪ್ರಿಯರು. ಯಾರಿಗೂ ತಮ್ಮ ಪ್ರಾಣದ ಬಗ್ಗೆ ಅಲಕ್ಷ್ಯವಿಲ್ಲ. ಹೀಗಿರುವಾಗ ಭಯೋತ್ಪಾದನೆ ಪ್ರಜಾಚುನಾಯಿತ ಆಡಳಿತದ ಮುಂದಿರುವ ಪ್ರಮುಖ ಪ್ರಶ್ನೆ ಎನ್ನುವುದರಲ್ಲಿ ಗೊಂದಲವಿಲ್ಲ, ಎರಡನೆಯ ಅಭಿಪ್ರಾಯವಿಲ್ಲ. ಅದರ ಬಗ್ಗೆ ಸ್ವಲ್ಪ ನೋಡೋಣ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;"ಭಯೋತ್ಪಾದನೆ ಬಗ್ಗೆ ಹೆಚ್ಚು-ಕಮ್ಮಿ ಒಂದು ದಶಕದಿಂದಲೂ ಜನ ನೋಡುತ್ತಿದ್ದಾರಲ್ಲ... ಅದರ ಬಗ್ಗೆ ಹೇಳುವುದೇನಿದೆ?" ಎಂದು ಕೇಳುವವರಿದ್ದಾರೆ. ಆದರೆ ಅವರ ಪ್ರಶ್ನೆಯೇ ತಪ್ಪು!&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಭಾರತದ ಇತಿಹಾಸ ನೋಡಿದರೆ ಭಯೋತ್ಪಾದನೆ ಕೇವಲ ಒಂದು ದಶಕದ ಅಥವಾ ಕೆಲವು ದಶಕಗಳ ಸಮಸ್ಯೆಯಲ್ಲ. ಇದು ಚಿರಂತನ ಸಮಸ್ಯೆ. ಯಾವುದೋ ಒಂದು ಹಳ್ಳಿಯಲ್ಲಿ ಅಹಿತಕರ ಘಟನೆ ನಡೆದು ನಿಷೇಧಾಜ್ಞೆ ಇದ್ದರೂ ಜನಕ್ಕೆ ಭಯವಾಗಿಲ್ಲವೇ? ತುರ್ತು ಪರಿಸ್ಥಿತಿ ಘೋಷಿಸಿದ ಸಮಯದಲ್ಲಿ ನಡೆಯಬಾರದಾದರೂ ನಡೆದ ಘಟನೆಗಳಿಂದ ಜನಕ್ಕೆ ಭಯವಾಗಿಲ್ಲವೇ? ನೂರು ವರ್ಷಗಳ ಹಿಂದೆ ಹೇಗಿರಬಹುದು ಎಂದು ನೆನಪಿಸಿಕೊಳ್ಳಿ. ಅಮಾನುಷೀಯವಾಗಿ ವರ್ತಿಸುತ್ತಿದ್ದ ಬ್ರಿಟೀಷರಿಂದ ಜನಕ್ಕೆ ಭಯವಾಗಿದ್ದಿಲ್ಲವೇ? ಬ್ರಿಟೀಷರ ಆಳ್ವಿಕೆಯ ಸಮಯದಲ್ಲಿ ಭಾರತದಲ್ಲಾದ ಹಲವಾರು ಪ್ರಾದೇಶಿಕ ಕಚ್ಚಾಟಗಳ ಮಧ್ಯೆ ಪ್ರತಿಯೊಬ್ಬ ಪ್ರಜೆಯೂ ಮತ್ತೊಬ್ಬ ದೇಶದ ರಾಜ ಹುಟ್ಟಿಸಿದ ಭಯದಿಂದ ತತ್ತರಿಸಿರಲಿಲ್ಲವೇ? ಘಜ್ನಿ, ಘೋರಿ ಮತ್ತು ತುಘಲಕ್ ಸಾಮ್ರ್ಯಾಜ್ಯದ ರಾಜರುಗಳ ಆಳ್ವಿಕೆ ಹೇಗಿತ್ತು ಎಂದು ನಾವೆಲ್ಲರೂ ಶಾಲೆಯಲ್ಲಿ ಓದಿದ್ದೇವೆ. ಒಂದು ಕ್ಷಣ ಅವನ್ನೆಲ್ಲಾ ಯೋಚಿಸಿ. ಭಯವಾಗುವುದಿಲ್ಲವೇ? ಅದಕ್ಕಿಂತ ಭಯಂಕರ ಭಯೋತ್ಪಾದನೆ ಇದೆ ಎನ್ನುತ್ತೀರೇನು?&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಇನ್ನೂ ಹಳೆಯ ಪೌರಾಣಿಕ ಇತಿಹಾಸಕ್ಕೆ ಹೋದರೆ ಜರಾಸಂಧ, ಬಕಾಸುರ ಮುಂತಾದ ಅಸುರರನ್ನೂ ಮೀರಿ ಭಯ ಹುಟ್ಟಿಸುವರು ಯಾರಿದ್ದಾರೆ ಈಗ? ಹತ್ತಾರು ಮಾರಣ ಹೋಮಗಳಾಗಿರಬಹುದು ಈಚಿನ ದಿನಗಳಲ್ಲಿ. ಆದರೆ ಕುರುಕ್ಷೇತ್ರದ ಯುದ್ಧವನ್ನು ಮೀರಿಸುವ ಮಾರಣ ಹೋಮಗಳೇ ಅವು? ಅಂದಿನಂತೆ ಲಕ್ಷಾಂತರ ಜನರ ರಕ್ತದಿಂದ ತೊಯ್ದ ಭೂಮಿಯನ್ನು ನಾವೆಲ್ಲೂ ನೋಡಿಲ್ಲವಲ್ಲ? ಕೇವಲ ಸ್ವಾಮಿಪ್ರೀತಿಗಾಗಿ ಅಥವಾ ದೇವಪ್ರೀತಿಗಾಗಿ ಪ್ರಾಣ ಕೊಟ್ಟಾದರೂ ಜನಕ್ಕೆ ತೊಂದರೆ ಕೊಡಬೇಕೆನ್ನುವ ಜಿಹಾದಿಗಳು ಇಂದು ಇದ್ದಾರೆ. ಆದರೆ ರಾಮಾಯಣದಲ್ಲಿ ಮಾರೀಚ ಮಾಡಿದ್ದೂ ಹೆಚ್ಚು-ಕಡಿಮೆ ಅದನ್ನೇ. ತಾನು ಸಾಯುತ್ತೀನಿ ಎಂದು ಗೊತ್ತಿದ್ದರೂ ರಾವಣನ ದುರ್ಯೋಜನೆಯಲ್ಲಿ ಪಾಲ್ಗೊಂಡಿದ್ದು.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಈಗ ತಪ್ಪು ತಿಳಿಯಬೇಡಿ. ಪ್ರಪಂಚದಲ್ಲಾಗುತ್ತಿರುವ ಭಯೋತ್ಪಾದನೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಾರದು ಎಂದು ನಾನು ವಾದ ಮಾಡುತ್ತಿಲ್ಲ. ಪ್ರತಿಯೊಬ್ಬ ಪ್ರಜೆಯ ಹಿತವೂ ಮುಖ್ಯವೇ. ಆದರೆ ಇಂದು ನಾವು ಎದರಿಸುತ್ತಿರುವ ಭಯೋತ್ಪಾದನೆಯ ಸಮಸ್ಯೆ ಭಾರತದ ಇತಿಹಾಸದಲ್ಲಿ ಯಾವ ರಾಜನೂ ಎದುರಿಸದ ಸಮಸ್ಯೆಯೇನಲ್ಲ ಎಂದು ಹೇಳುತ್ತಿದ್ದೀನಿ ಅಷ್ಟೇ. ಉಚ್ಚ ಕುರ್ಚಿಗಳ ಮೇಲೆ ಕುಳಿತುಕೊಳ್ಳುವ ಮಹಾನುಭಾವರು ಇತಿಹಾಸದ ಪುಟಗಳನ್ನು ಒಂದು ಬಾರಿ ತಿರುಗಿಸಿ ನೋಡುವಷ್ಟು ಪುರುಸೊತ್ತು ಮಾಡಿಕೊಂಡರೆ ಇಂದಿನ ಸಮಸ್ಯೆಗಳಿಗೆಲ್ಲಾ ಹಿಂದಿನ ಆಡಳಿತಗಳೂ ಎದುರಿಸಿದ್ದವು ಎಂದೂ, ಅವುಗಳನ್ನು ಅವರು ಹೇಗೆ ಪರಿಹರಿಸಿದರು ಎಂದೂ ಗೊತ್ತಾಗದೇ ಇರುವಷ್ಟು ಗುಹ್ಯಭಾಷೆಯಲ್ಲಂತೂ ನಮ್ಮ ಇತಿಹಾಸವನ್ನು ಯಾರೂ ಬರೆದಿಲ್ಲ ಅಲ್ಲವೇ? ನನಗಂತೂ ಪ್ರತಿದಿನ ಬೆಳೆಯುತ್ತಿರುವ ಈ ಸಮಸ್ಯೆಯನ್ನು ಪರಿಹರಿಸಲಾಗದೇ ಕುಳಿತಿರುವ ನವದೆಹಲಿಯ ಉಚ್ಚಾಸನಾಸೀನರ ಬಗೆಗೆ ಅಂಥ ಒಳ್ಳೆಯ ಅಭಿಪ್ರಾಯವೇನೂ ಇಲ್ಲ. ಕಡೆಯ ಪಕ್ಷ ಇತಿಹಾಸದಿಂದ ಕಲಿಯುವಷ್ಟು ಬುದ್ಧಿ ಬೇಡವೇ?&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಮತ್ತೊಂದು ಮುಖ್ಯವಾದ ಪ್ರಶ್ನೆ ಇಂದಿನ ಆರ್ಥಿಕ ಪರಿಸ್ಥಿತಿ. ಮಾಧ್ಯಮಗಳು ಮತ್ತು ರಾಜಕಾರಣಿಗಳು ಹೇಳುವುದನ್ನು ನೋಡಿದರೆ ಜನಕ್ಕೆ ಇಂದಿನಷ್ಟು ಬಡತನ ಎಂದೂ ಬಂದಿರಲಿಲ್ಲವೇನೋ ಎನ್ನಿಸಬೇಕು. ಆದರೆ ನಿಜ ಹಾಗಿಲ್ಲ. ಐವತ್ತು ವರ್ಷಕ್ಕೆ ಮುಂಚೆ ವಾರಾನ್ನ ಮಾಡುತ್ತಿದ್ದವರು ಇಂದು ಶ್ರೀಮಂತರಾಗಿದ್ದಾರೆ. ಸಾಲ ಮಾಡಿ ಉದ್ಯಮ ಆರಂಭಿಸಿದವರು ಕೋಟ್ಯಧಿಪತಿಗಳಾಗಿದ್ದಾರೆ. ಆದರೆ ಕೇವಲ ಅಮೆರಿಕಾದಂಥ 'ಮುಂದುವರೆದ' ದೇಶಗಳನ್ನು ನಂಬಿ ವ್ಯಾಪಾರ ಮಾಡಿದರೆ ಆ ದೇಶಗಳ ಆರ್ಥಿಕ ಸಮಸ್ಯೆಗಳು ನಮಗೂ ತಟ್ಟುತ್ತದೆ. ಭಾರತದಲ್ಲಿ ಪ್ರತಿಭೆಗೆ ಸರಿಯಾದ ಉತ್ತೇಜನವಿಲ್ಲ ಎನ್ನಿಸುತ್ತದೆ ನನಗೆ. ಇದ್ದಿದ್ದರೆ ಕಲ್ಪನಾ ಚಾಲ್ವಾ, ಸುನಿತಾ ವಿಲಿಯಮ್ಸ್ ಅಮೆರಿಕಾಕ್ಕೆ ಹೋಗುತ್ತಿರಲಿಲ್ಲವೇನೋ. ಸಹಸ್ರಾರು ಜನ ಭಾರತೀಯರಂತೂ ಅಮೆರಿಕಾ, ಇಂಗ್ಲೆಂಡುಗಳ ದಾರಿ ಹಿಡಿಯುತ್ತಿರಲಿಲ್ಲ. ಗೂಗಲ್, ಮೈಕ್ರೊಸಾಫ್ಟ್ ಮುಂತಾದ ಹಿರಿಯ ಮಾಹಿತಿ-ತಂತ್ರಜ್ಞಾನ ಸಂಸ್ಥೆಗಳಲ್ಲೂ ಹಲವಾರು ಭಾರತೀಯರು ಪ್ರಮುಖ ಪಾತ್ರಗಳನ್ನು ನೆರವೇರಿಸುತ್ತಿದ್ದಾರೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಹಿಂದಿನಿಂದಲೂ ಜ್ಞಾನವೇ ಸಂಪತ್ತು ಎಂದು ನಂಬಿದ ದೇಶ ನಮ್ಮದು. ನಮ್ಮ ದೇಶದ ಪ್ರತಿಭೆ ನಮ್ಮ ದೇಶದಲ್ಲೇ ಚಿಗುರುವಂತೆ ಮಾಡುವುದು ಆಡಳಿತದ ಜವಾಬ್ದಾರಿ. ಚಿಗುರುವುದು ನಮ್ಮಲ್ಲೇ ಚಿಗುರಲಿ. ಆ ಪ್ರತಿಭೆಯ ಉಪಯೋಗ ನಾವೂ ಪಡೆದು ಪ್ರಪಂಚಕ್ಕೂ ಹಂಚೋಣ. ಅದನ್ನು ಬಿಟ್ಟು ನಮ್ಮಲ್ಲಿರುವ ಪ್ರತಿಭೆಗಳಿಗೆ ನಾವೇ ಉತ್ತೇಜನ ನೀಡದೇ ಆ ಪ್ರತಿಭೆಗಳನ್ನೂ, ಅವುಗಳ ಉಪಯೋಗಗಳನ್ನು ನಾವೇ ಪಡೆದುಕೊಳ್ಳದೆ ಉಳಿದ ಜಗತ್ತಿಗೆ ಬಿಟ್ಟುಬಿಡುವ ಉದಾರತನ ಬೇಕಿಲ್ಲ. ಈ ಅರ್ಥವಿಲ್ಲದ ಉದಾರತನದಿಂದಲೇ ಇತ್ತೀಚೆಗೆ ವಿದೇಶಗಳಿಂದ ಹಲವು ಮಂದಿ ಭಾರತೀಯರು ಕೆಲಸ ಕಳೆದುಕೊಂಡು ಹಿಂದಿರುಗುತ್ತಿರುವುದು. ಇದು ಮತ್ತೊಂದು ಸಮಸ್ಯೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಏರುತ್ತಿರುವ ದರಗಳ ಬಗ್ಗೆ ತಕರಾರೆತ್ತುತ್ತಿವೆ ಕೆಲವು ರಾಜಕೀಯ ಪಕ್ಷಗಳು. ಅವರಿಂದ ಪ್ರಚೋದಿತರಾಗಿಯೋ ಆಗದೆಯೋ ಜನರೂ ಮುಷ್ಕರಗಳಲ್ಲಿ ಪಾಲ್ಗೊಳ್ಳುತಿದ್ದಾರೆ. ಆಕ್ಕಿ ಏಕೆ ಕಿಲೋಗೆ ಮೂವತ್ತು ರೂಪಾಯಿ ಆಯಿತು ಎಂದು ತಕರಾರೆತ್ತುತ್ತಾರೆ. ಇದಕ್ಕೆ ಮೆಚ್ಚಬೇಕು. ಸಾಮನ್ಯ ಸಮಸ್ಯೆಯೇನಲ್ಲವಲ್ಲ ಇದು! ಆದರೆ ಜನರು ಒಂದು ಲೋಟ ಕಾಫಿಗೆ ಐವತ್ತು ರೂಪಾಯಿ ಕೀಳುವ ಮಳಿಗೆಗಳನ್ನು, ಒಂದು ಸಿನಿಮಾ ನೋಡಲು ಸಾವಿರ ರೂಪಾಯಿ ಕೀಳುವವರನ್ನು, ಎರಡು ರಾತ್ರಿಯ ವಸತಿಗೆ ಹತ್ತು ಸಾವಿರ ರೂಪಾಯಿ ಅಷ್ಟೇ ಎಂದು ಜಾಹೀರಾತು ಕೊಡುವ ಸಂಸ್ಥೆಗಳನ್ನು ಯಾಕೆ ಗಮನಿಸುತ್ತಿಲ್ಲವೋ ಗೊತ್ತಿಲ್ಲ. ಸರ್ಕಾರಿ ಬಸ್ಸಿನಲ್ಲಿ ಎರಡು ಕಿಲೋಮೀಟರ್ ಪ್ರಯಾಣಿಸಿದರೆ ಐದು ರೂಪಾಯಿ ಕೊಟ್ಟರೆ ಅದು ದುಬಾರಿಯಲ್ಲ. ಕಾರಿನಲ್ಲಿ, ಹೆಲಿಕಾಪ್ಟರಿನಲ್ಲಿ ಓಡಾಡುವ ಜನಕ್ಕೆ ಬಸ್ ಪ್ರಯಾಣದ ದರ ಗೊತ್ತಿರುವುದಾದರೂ ಹೇಗೆ?&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಆಕ್ಕಿಯೊಂದನ್ನು ಬಿಟ್ಟು ಮೇಲೆ ಹೇಳಿದ್ದೆಲ್ಲಾ ಅತ್ಯವಶ್ಯಕ ಸಾಮಗ್ರಿಗಳಲ್ಲ ಎಂದು ಕೆಲವರು ಹೇಳಬಹುದು. ಆದರೆ ಒಂದು ಕಾಲದಲ್ಲಿ ಅನಗತ್ಯವಾದ್ದು ಸ್ವಲ್ಪೇ ವರ್ಷದೊಳಗೆ ಅಗತ್ಯವಾಗಿಯೋ, ಬಿಡಲಾರದ ಚಟವಾಗಿಯೋ ಮಾರ್ಪಾಟು ಆಗಿಬಿಡುತ್ತದೆ. ಅನಗತ್ಯವಾಗಿದ್ದು ಅಗತ್ಯವಾಗಿರುವುದಕ್ಕೆ ಮೊಬೈಲ್ ಫೋನ್ ಸೂಕ್ತ ಉದಾಹರಣೆ. ಕೆಲವು ದಶಕಗಳ ಹಿಂದೆ ಬಹುತೇಕ ಶೋಕಿಯಾಗಿದ್ದ ಕ್ಲಬ್ಬಿಗೆ ಹೋಗುವ ಹವ್ಯಾಸ ಇಂದು ಅನೇಕ ಜನರಿಗೆ ಬಹಳ ದೊಡ್ಡ ಚಟವಾಗಿಬಿಟ್ಟಿದೆ; ಎಷ್ಟು ಮಟ್ಟಿಗೆಂದರೆ ರಾತ್ರಿ ಕ್ಲಬ್ಬನ್ನು ಬೇಗ ಮುಚ್ಚಿದರೆ ಅಷ್ಟಕ್ಕೇ ಗಲಾಟೆ ಮಾಡುವಷ್ಟು!&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಇಂಧನದ ಬೆಲೆ ಹೆಚ್ಚಾದಾಗ ಮಾತ್ರ ಬೊಬ್ಬೆ ಎಬ್ಬಿಸುವವರು ತಾವು ಅಧಿಕಾರಕ್ಕೆ ಬಂದಾಗ ಕಡಿಮೆ ವೆಚ್ಚವಾಗುವ ಪರ್ಯಾಯ ಇಂಧನದ ಸಂಶೋಧನೆಯ ಬಗ್ಗೆ ತಲೆಯೇ ಕೆಡಿಸಿಕೊಳ್ಳುವುದಿಲ್ಲ. ಲಂಚದ ಸಾಮ್ರ್ಯಾಜ್ಯವನ್ನು ಮಟ್ಟ ಹಾಕುವ ಗಂಡು ಪಕ್ಷವಂತೂ ಈ ದೇಶದಲ್ಲಿ ಇನ್ನೂ ಕಂಡುಬಂದಿಲ್ಲ. ಬೇಕಾದರೆ "ನಿನಗಿಂತ ನನ್ನ ರೇಟ್ ಜಾಸ್ತಿ" ಎನ್ನುತ್ತಾರಷ್ಟೇ. ಪರಿಸರದ ಬಗ್ಗೆಯಂತೂ ಯಾರಿಗೂ ಕಾಳಜಿಯೇ ಇಲ್ಲ. ಒಂದು ಸಾವಿರ ಮರ ಕಡಿದು ರೈಲು ಮಾರ್ಗ ನಿರ್ಮಿಸುವುದು ಹೆಚ್ಚು ಸೂಕ್ತವಾದರೂ ಹತ್ತು ಸಾವಿರ ಮರ ಕಡಿದು ರಸ್ತೆಯನ್ನೇ ನಿರ್ಮಿಸುತ್ತಾರೆ. ಅದಕ್ಕೂ ಸರಿಯಾಗಿ ಡಾಂಬರು ಹಾಕದೇ ದುಡ್ಡು ನುಂಗುತ್ತಾರೆ! ಮನೆಗಳ ನಿರ್ಮಾಣದ ಹೆಸರಲ್ಲಿ ಎಷ್ಟೋ ವನಪ್ರದೇಶ ನಾಶವಾಗುತ್ತಿದೆ. ಮತ್ತೊಂದು ಕಡೆ ಐಶಾರಾಮೀ ಬಂಗಲೆಗಳನ್ನು ಕಟ್ಟುವವರೂ ಹೆಚ್ಚಾಗುತ್ತಿರುವುದನ್ನು ಮಾತ್ರ ಗಮನಿಸುವವರಿಲ್ಲ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಯಾವ ಪಕ್ಷ ಅಥವಾ ರಾಜಕಾರಣಿ ಈ ಎಲ್ಲ ವಿಷಯಗಳಲ್ಲಿ ಸರಿಯಾಗಿದ್ದಾರೆ ತೋರಿಸಿಬಿಡಿ. ಹೋಗಲಿ, ಎಲ್ಲಾ ವಿಷಯಗಳು ಬೇಡ. ಕೆಲವು ವಿಷಯಗಳಲ್ಲಾದರೂ ಇದ್ದಾರೆಯೇ? ಅದೂ ಇಲ್ಲ. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಒಮ್ಮೆ ಈ ಅವ್ಯವಸ್ಥೆಯ ಬಗ್ಗೆ ಬೇಸೆತ್ತು ಒಬ್ಬರು ಹೇಳಿದ್ದರು "ಈ ಡೆಮಾಕ್ರಸಿ ಅನ್ನೋ ಪದ್ಧತಿಯೇ ಸರಿಯಾಗಿಲ್ಲ. ಜನ ಎಂದರೆ ಬುದ್ಧಿವಂತರೂ ಇರುತ್ತಾರೆ, ಪೆದ್ದರೂ ಇರುತ್ತಾರೆ. ಈ ಡೆಮಾಕ್ರಸಿಯಲ್ಲಿ ಇಬ್ಬರಿಗೂ ಸಮಾನ ಹಕ್ಕುಗಳು. ಬುದ್ಧಿವಂತನ ಮಾತಿಗೆ ಎಷ್ಟು ಬೆಲೆಯೋ ಪೆದ್ದನ ಮಾತಿಗೂ ಅಷ್ಟೇ ಬೆಲೆ! ಪೆದ್ದರೇ ಹೆಚ್ಚಾಗುತ್ತಿರುವ ಇಂದಿನ ಕಾಲದಲ್ಲಿ ಬರೀ ಪೆದ್ದರ ಮಾತೇ ಕೇಳುವ ಸಿಸ್ಟಮ್ ಆಗುತ್ತಿದೆ ಈ ಡೆಮಾಕ್ರಸಿ" ಎಂದು. ನಿಜ ಎನ್ನಿಸುತ್ತದೆ ಒಮ್ಮೊಮ್ಮೆ. ಅಜ್ಜಿ-ತಾತ ವರ್ಣಿಸುವ ಎರಡು ತಲೆಮಾರುಗಳ ಹಿಂದಿನ ಭಾರತವನ್ನು ಮನಸ್ಸಿನಲ್ಲಿ ಚಿತ್ರಿಸಿಕೊಂಡು ಇಂದಿನ ಭಾರತವನ್ನು ಅದರೊಂದಿಗೆ ತೂಕ ಮಾಡಿದರೆ ಹಿಂದಿನ ಕಾಲದ ರಾಜನ ಆಳ್ವಿಕೆಯ ಪದ್ಧತಿಯೇ ಚೆನ್ನಾಗಿತ್ತೇನೋ ಎನ್ನಿಸುತ್ತದೆ. ಅಲ್ಲವೇ?&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಹತ್ತನೇ ತರಗತಿಯಲ್ಲಿ ಸಂಸ್ಕೃತ ಓದುವಾಗ "ರಾಜ್ಞಃ ಕರ್ತವ್ಯಮ್" ಎಂಬ ಒಂದು ಪಾಠವಿತ್ತು ನಮಗೆ. ರಾಜನು ಹೇಗಿರಬೇಕು, ಅವನಲ್ಲಿರಬೇಕಾದ ಗುಣಗಳೇನು ಎಂದು ಹೇಳುವ ಮಹಾಭಾರತದ ಕೆಲವು ಶ್ಲೋಕಗಳಿವೆ. ಇವನ್ನು ಯುದ್ಧವಾದಮೇಲೆ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರು ಧರ್ಮರಾಜನಿಗೆ ಉಪದೇಶ ಮಾಡಿದರು ಎಂದು ಓದಿದ ನೆನಪು. ಅವುಗಳಲ್ಲಿ ಆಯ್ದ ಹತ್ತು ಪದ್ಯಗಳು ಮಾತ್ರ ನಾವು ಓದಿದ್ದು. ಅದರಲ್ಲಿ ಕೊನೆಯ ಎರಡು ಪದ್ಯಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸುತ್ತೇನೆ, ನನಗೆ ನೆನಪಿದ್ದಂತೆ. ನನಗೆ ಗೊತ್ತಾದಂತೆ ಕನ್ನಡಕ್ಕೂ ಅನುವಾದ ಮಾಡಲು ಪ್ರಯತ್ನಿಸಿದ್ದೇನೆ. ತಪ್ಪುಗಳಿದ್ದರೆ ಕ್ಷಮೆ ಇರಲಿ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: center;"&gt;ಪುತ್ರಾ ಇವ ಪಿತುರ್ಗೇಹೇ ವಿಷಯೇ ಯಸ್ಯ ಮಾನವಾಃ |&lt;/div&gt;&lt;div style="text-align: center;"&gt;ನಿರ್ಭಯಾ ವಿಚರಿಷ್ಯಂತಿ ಸ ರಾಜಾ ರಾಜಸತ್ತಮಃ ||&lt;/div&gt;&lt;div style="text-align: center;"&gt;[ತಂದೆಯ ಮನೆಯಲ್ಲಿ ಮಕ್ಕಳಿದ್ದಂತೆ ಯಾರ ರಾಜ್ಯದಲ್ಲಿ ಮಾನವರು ನಿರ್ಭಯವಾಗಿ ಓಡಾಡುತ್ತಾರೋ ಆ ರಾಜನು ರಾಜರಲ್ಲಿ ಉತ್ತಮನಾದವನು]&lt;/div&gt;&lt;div style="text-align: center;"&gt;&lt;br /&gt;&lt;/div&gt;&lt;div style="text-align: center;"&gt;ನ ಯಸ್ಯ ಕೂಟಂ ಕಪಟಂ ನ ಮಾಯಾ ನ ಚ ಮತ್ಸರಃ |&lt;/div&gt;&lt;div style="text-align: center;"&gt;ವಿಷಯೇ ಭೂಮಿಪಾಲಸ್ಯ ತಸ್ಯ ಧರ್ಮಃ ಸನಾತನಃ ||&lt;/div&gt;&lt;div style="text-align: center;"&gt;[ಯಾವ ರಾಜನ ರಾಜ್ಯದಲ್ಲಿ ನಿಕೃಷ್ಟವಾದ ವ್ಯವಹಾರ, ಕಾಪಟ, ಮಾಯೆ, ಮಾತ್ಸರ್ಯಗಳಿಲ್ಲವೋ ಅವನ ಧರ್ಮವೇ ಸಾರ್ವಕಾಲಿಕ]&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಮುಂದೆಯೂ ಈ ಪ್ರಪಂಚ ಇಂಥ ರಾಜರುಗಳನ್ನು ನೋಡಲಿ ಎಂಬುದು ನನ್ನ ಬಯಕೆಯಷ್ಟೇ. ನೋಡುತ್ತೇವೋ ಇಲ್ಲವೋ ಆ ದೇವರೇ ಬಲ್ಲ. ನಾವೀಗ ಯಾರನ್ನೇ ಚುನಾಯಿಸಿದರೂ ಅವರಿಗೆ ಇದರ ಎಷ್ಟನೆಯ ಒಂದು ಭಾಗದ ಗುಣಗಳೂ ಇಲ್ಲವೆಂಬುದಂತೂ ಸತ್ಯ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-7440531989820120292?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/7440531989820120292/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=7440531989820120292' title='1 Comments'/><link rel='edit' type='application/atom+xml' href='http://www.blogger.com/feeds/34886019/posts/default/7440531989820120292'/><link rel='self' type='application/atom+xml' href='http://www.blogger.com/feeds/34886019/posts/default/7440531989820120292'/><link rel='alternate' type='text/html' href='http://manasinaputagalanaduve.blogspot.com/2009/05/blog-post.html' title='ಮತದಾನ ಒಂದು ಗುಂಡಿ ಒತ್ತುವಷ್ಟು ಸುಲಭವಲ್ಲ!'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>1</thr:total></entry><entry><id>tag:blogger.com,1999:blog-34886019.post-4301440654664657868</id><published>2009-04-24T15:12:00.001+05:30</published><updated>2009-04-24T15:15:18.035+05:30</updated><title type='text'>ಒಂದು ಶಬ್ದಾತೀತ ಮೌನಾಚರಣೆ</title><content type='html'>&lt;div&gt;ಬ್ರಹ್ಮಗಿರಿಯ ತುದಿಗೆ ಹತ್ತಿದಾಗ ಬ್ರಹ್ಮಲೋಕಕ್ಕೇ ಬಂದಿದ್ದೀನೇನೋ ಅನ್ನಿಸಿತ್ತು. ನೂರಾರು ಜಿಗಣೆಗಳಿಗೆ ನನ್ನ ಪಾಪದ ರಕ್ತವನ್ನೆಲ್ಲಾ ಕೊಟ್ಟು ಪಾವನನಾಗಿಬಿಟ್ಟಿದ್ದೆ! ತುಸು ದೂರದಲ್ಲೇ ಇದ್ದ ಏಳೆಂಟು ಆನೆಗಳೆಲ್ಲಿ ಅಟ್ಟಿಸಿಕೊಂಡು ಬರುತ್ತಿವೆಯೋ ಎಂದು ಯೋಚಿಸುತ್ತಲೇ ಬಹಳ ಕಷ್ಟದ ಏರುದಾರಿಯಲ್ಲಿ ಶಿಖರ ತಲುಪಿದಾಗ ಫೋಟೋಗಾಗಿ ಚೆಂದದ ನಗುವೊಂದನ್ನು ಮೋರೆಯ ಮೇಲೆ ಇರಿಸಿಕೊಳ್ಳಲಾಗದಷ್ಟು ತ್ರಾಣರಹಿತನಾಗಿದ್ದರೂ ಮನಸ್ಸಿನಲ್ಲಿ ಅದೇನೋ ಸಂತೋಷ. ಮತ್ತೊಮ್ಮೆ ಬರಬೇಕೆಂದು ಅರುಣನಿಗೆ ಇಳಿಯುವ ಮೊದಲೇ ಹೇಳಿದ್ದೆ. ಅವನೂ ಹೌದೆಂದಿದ್ದ. ನಂತರ ಹೋಗಲು ಅನುಕೂಲವಾಗಿಲ್ಲ ಎನ್ನುವುದು ಒಂದು ವಿಷಯವಾಗಿದ್ದರೆ ಮತ್ತೊಂದು ವಿಷಯ ನನಗೆ ಅಲ್ಲಿಗೆ ಈಗ ಹೋಗುವುದಕ್ಕೇ ಹಿಂಜರಿಕೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಯಾವುದಾದರೂ ಒಳ್ಳೆಯ ಜಾಗ ನೋಡಿದಾಗ ಅದನ್ನು ಯಾರಿಗೂ ಪರಿಚಯವೇ ಮಾಡಿಸಬಾರದು ಎನ್ನಿಸಿಬಿಡುತ್ತದೆ. ಈ ಜಾಗವನ್ನು ನೋಡಿ ನಮ್ಮನ್ನು ಬಿಟ್ಟು ಯಾರೂ ಸಂತೋಷ ಪಡಬಾರದೆಂಬ ದುರುದ್ದೇಶದಿಂದ ಹೀಗನ್ನಿಸುವುದಿಲ್ಲ. ಆದರೆ ನೋಡಲು ಜನ ಬಂದಷ್ಟೂ ಜಾಗ ಹಾಳಾಗುತ್ತಾ ಹೋಗುತ್ತದೆ ಎಂಬ ಹೆದರಿಕೆ. ಕೊಡಚಾದ್ರಿ ಮತ್ತು ಕುಮಾರಪರ್ವತಗಳಲ್ಲಿ ಸೌಂದರ್ಯದ ಮಾರಣ ಹೋಮ ನಮ್ಮ ಕಣ್ಣುಗಳ ಮುಂದೆಯೇ ನಡೆಯುತ್ತಿದೆ. ಅಲ್ಲಿಗೆ ಚಾರಣಕ್ಕೆ ಹೋಗುವ ಅರ್ಧ ಜನರು ಸುರಾಸುಧೆಯ ಬಾಟಲಿಯೊಂದನ್ನು ಜೊತೆಗಿರಿಸಿಕೊಳ್ಳದೇ ಹೋಗುವುದಿಲ್ಲ. ಕಾಡಿಗೆ ಕಾಡೇ ಹತ್ತಿದರೂ ತೊಂದರೆಯಿಲ್ಲ, ಇಷ್ಟು ಸುಂದರ ಜಾಗಕ್ಕೆ ಬಂದು ಸಿಗರೇಟು ಹತ್ತಿಸದೇ ಹೋಗಬಾರದು ಎನ್ನುವ ಜನಕ್ಕೂ ಕಡಿಮೆಯೇನಿಲ್ಲ. ಹೊಳೆಯೊಂದರ ಪವಿತ್ರ ಜಲವನ್ನು ಕುಡಿದು ಸಮೃದ್ಧವಾಗಿ ಬೆಳೆದ ಸ್ವಚ್ಛ ಹಸಿರಿನ ನಡುವೆ ದೃಷ್ಟಿಬೊಟ್ಟಿಗಳಂತೆ ದರಿದ್ರ ಬಣ್ಣಗಳ ಬಿಸ್ಕತ್ತು, ಚಾಕಲೇಟುಗಳ ಪ್ಲಾಸ್ಟಿಕ್ ಹೊರಪದರಗಳು. ಇಂಥ ಲಕ್ಷಾಂತರ ಸಂವತ್ಸರಗಳು ಕಳೆದರೂ ಅಳಿಯದ ಕೊಳಿಯದ ಲಕ್ಷಾಂತರ ದೃಷ್ಟಿಬೊಟ್ಟುಗಳು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಪರಿಸರದ ಬಗ್ಗೆ ಕಾಳಜಿಯೇ ಇಲ್ಲದೆ ಪರಾಮಾನಂದದಿಂದ ಕೊಳಕೆಸೆದು ಹೋಗುವ ಜನರು ಕೆಲವರು. ಕಿಸೆಯಲ್ಲಿ ಬೀಳುತ್ತಿರುವ ಹಣದ ಕಂತೆಯ ಕಾರಣಕ್ಕಾಗಿ ತಮ್ಮ ನೈಜ ಕಾಳಜಿಯುಕ್ತ ಮನೋಧರ್ಮವನ್ನು ಬದಿಗಿಟ್ಟ ವಿತ್ತಾರಾಧಕ ಅಧಿಕಾರಿಗಳು ಕೆಲವರು. ಇದನ್ನೆಲ್ಲಾ ನೋಡಿಕೊಂಡಿರಲಾರದೆಯೋ ತಮ್ಮ ಕರ್ಮ ಎಂದುಕೊಂಡು ನೋಡುತ್ತಾ ಕುಳಿತಿರುವವರು ಕೆಲವರು. ಇಂಥ ಜನಾಂಗಗಳಿಗೆ ಸೇರಿದ ಜನರಿಂದ ಎಲ್ಲಿ ಈಗ ಬ್ರಹ್ಮಗಿರಿ, ಚೆಂಬ್ರ, ಕೋಟೆಬೆಟ್ಟ ಮುಂತಾದ ಜಾಗಗಳನ್ನೂ ಹಾಳಾಗಿಬಿಟ್ಟಿರುತ್ತವೋ ಎಂಬ ಹಿಂಸೆ ಶುರುವಾಗಿಬಿಟ್ಟಿದೆ. ನಾವಲ್ಲಿಗೆ ಹೋಗಿ ಬಂದಾಗ "ಬ್ರಹ್ಮಗಿರಿ ಅಂತ ಒಂದು ಬೆಟ್ಟ ಇದ್ಯಾ?" ಎಂದು ಎಷ್ಟೋ ಜನ ಕೇಳಿದ್ದರು. ಈಗ ಬ್ರಹ್ಮಗಿರಿ, ಚೆಂಬ್ರ, ಕೋಟೆಬೆಟ್ಟ ಇತ್ಯಾದಿ ಹೆಸರುಗಳು ಎಷ್ಟೋ ಜನ ಕಾಲೇಜು ಹುಡುಗರ ಬಾಯಲ್ಲಿ ಕೇಳುತ್ತಿದ್ದೇನೆ. ಊರೆಲ್ಲಾ ಬಾರುಗಳಿದ್ದರೂ ತಮ್ಮ ಎಣ್ಣೆ ಪಾರ್ಟಿಗಳಿಗೆ, ದಮ್ಮು ಪಾರ್ಟಿಗಳಿಗೆ ಇಂಥ ಜಾಗಗಳೇ ಕರ್ಮಭೂಮಿಗಳಾಗುತ್ತಿರುವುದು ನಮ್ಮೆಲ್ಲರ ಕರ್ಮ!&lt;/div&gt;&lt;div&gt;&lt;br /&gt;&lt;/div&gt;&lt;div&gt;ಗೂಗಲ್ಲಿನಲ್ಲಿ ಒಂದು ಜಾಗದ ಬಗ್ಗೆ ಹುಡುಕಿದರೆ ಸಾಕು. ಅದರ ಬಗ್ಗೆ ಬರೆದಿರುವ ಹತ್ತಾರು ವೆಬ್‍ಸೈಟ್‍ಗಳು. ಅಷ್ಟರಲ್ಲಿ ಒಂದಿಬ್ಬರಾದರೂ ಚೂರೂ ವಿವರ ಬಿಡದೇ ಎಲ್ಲಿಂದ ಹೊರಡಬೇಕು, ಎಲ್ಲೆಲ್ಲಿ ಎಡಕ್ಕೆ, ಎಲ್ಲೆಲ್ಲಿ ಬಲಕ್ಕೆ, ಎಲ್ಲೆಲ್ಲಿ ಸೀದ ಹೋಗಬೇಕೆಂದು ನಕ್ಷೆಯೊಂದಿಗೂ ಹಾಕಿಬಿಟ್ಟಿರುತ್ತಾರೆ. ಜಿಗಣೆಗಳನ್ನು ದೂರವಿಡಲು ಆಕ್ಸ್ ಡಿಯೋಡರೆಂಟ್ ಸ್ಪ್ರೇ ಮಾಡಿಕೊಳ್ಳುವುದೋ, ಇನ್ನೊಂದೋ, ಮತ್ತೊಂದೋ. ಅಂತೂ ಒಂದು ಭಯಂಕರವಾದ ಮಾರ್ಗವನ್ನೇ ಸೂಚಿಸಿಯೂ ಇರುತ್ತಾರೆ ಈ ಲೇಖನಗಳಲ್ಲಿ. ಆ ಡಿಯೋಡರೆಂಟನ್ನು ತಯಾರಿಸಲು ಏನೇನನ್ನು ಬಳಸಿದ್ದಾರೆ ಎಂದು ತಿಳಿದುಕೊಳ್ಳದೇ ಮನಸೋ ಇಚ್ಛೆ ಕಾಡಿನಲ್ಲಿ ಬಳಸುತ್ತಾರೆ. ಪ್ರಾಕೃತಿಕವಾಗಿಯೇ ಪ್ರಕೃತಿಯೊಡನೆ ಐಕ್ಯವಾಗದ ಪದಾರ್ಥಗಳನ್ನು ಪ್ರಕೃತಿಯೊಡನೆ ಬೆರೆಸುವ ಈ ಹೆಡ್ಡತನವು ನಮಗೆ ಕಚ್ಚಿದ ಜಿಗಣೆ ಮಾತ್ರವಲ್ಲ, ಮನುಷ್ಯನನ್ನೊಬ್ಬನನ್ನು ಬಿಟ್ಟು ಕಾಡಿಲ್ಲಿಯ ಎಲ್ಲಾ ಪ್ರಾಣಿ-ಪಕ್ಷಿಗಳ, ಗಿಡ-ಮರಗಳ ತಿಥಿಯ ಸಂಕಲ್ಪ ಎಂದು ಗೊತ್ತಿಲ್ಲದ "ಅಜ್ಞಾನವೇ ಆನಂದ" ಎಂಬ ಸೂತ್ರವನ್ನು ನಂಬಿ ಬದುಕುವ ಜನಕ್ಕೆ ಏನು ಹೇಳಬೇಕೋ ಗೊತ್ತಾಗುವುದಿಲ್ಲ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಜವಾಬ್ದಾರಿ ಎಂದರೇನು ಎಂದೇ ಗೊತ್ತಿಲ್ಲದೇ ಮನಸ್ಸಿಗೆ ಬಂದಂತೆ ವರ್ತಿಸಿ ತಮ್ಮದೇ ಸರ್ವನಾಶಕ್ಕೆ ನಾಂದಿಯಿದು ಎಂದೂ ಗೊತ್ತಿಲ್ಲದೇ ಕುಣಿದು ಕುಪ್ಪಳಿಸಿ ನಗುತ್ತಿದ್ದೇವೆ. ನಮ್ಮೀ ಪೆದ್ದತನವನ್ನು ನೋಡಿ ನಗುವ ಎಲ್ಲಾ ಪ್ರಾಣಿಗಳೂ ಅವಸಾನದ ಹಾದಿ ಹಿಡಿದಿವೆ, ಮಾನವನ ಕೈಗೆ ಸುಲಭವಾಗಿ ಸಿಗದ ಸೊಳ್ಳೆಯಂಥವನ್ನು ಬಿಟ್ಟರೆ. ಪ್ರಾಣಿ-ಪಕ್ಷಿಗಳು ಮತ್ತು ಗಿಡ-ಮರಗಳೇ ಇರದಿದ್ದರೆ ನಮಗೆ ತಿನ್ನುವ ಆಹಾರವೆಲ್ಲಿ? ನದಿಗಳಲ್ಲಿ ಬೇಕಾಬಿಟ್ಟಿ ಮಲವಿಸರ್ಜನೆ ಮಾಡುತ್ತಿದರೆ ನಮಗೆ ಶುದ್ಧವಾದ ಕುಡಿಯುವ ನೀರೆಲ್ಲಿ? ಕಾಡಿರುವೆಲ್ಲೆಡೆ ಪ್ಲಾಸ್ಟಿಕ್ ಪಾರ್ಕುಗಳನ್ನೂ, ಜಲಪಾತವಿರುವ ಎಲ್ಲ ಕಡೆ ಬಾಟಲಿಪಾತ ನೋಡಬೇಕಷ್ಟೇ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಪ್ರಕೃತಿಸೌಂದರ್ಯವನ್ನು ಪ್ರದರ್ಶಿಸಿ ಹಣ ಗಳಿಸುವ ಮುಂಗಾರು ಮಳೆಯಂಥ ಚಿತ್ರಗಳಲ್ಲೂ ನಾಯಕರು ಉಪ್ಪೇರಿ, ಬಿಸ್ಕತ್ತಿನಂಥವನ್ನು ತಿಂದು ಪ್ಲಾಸ್ಟಿಕ್ ಹೊರಪದರಗಳನ್ನು ಪಕ್ಕಕ್ಕೆ ಎಸೆದು ಹೋಗುತ್ತಾರೆ. ಬೆಂಗಳೂರು-ಮೈಸೂರುಗಳ ಮಧ್ಯೆ ಓಡಾಡುವವರು ಹೆಚ್ಚಾದರು ಎಂಬ ಕಾರಣಕ್ಕೆ ಸಾವಿರಾರು ಮರಗಳನ್ನು ಕೊಚ್ಚಿ ಹಾಕಿದರು. ಈಗ ಬೆಂಗಳೂರು-ಹಾಸನ ರಸ್ತೆಯ ಸರದಿ ಬಂದಿದೆ. ಲಾಲ್‍ಬಾಗ್‍ನಲ್ಲಿ ಇರುವ ಮರಗಳು ಕತ್ತರಿಸಬೇಕಂತೆ ಮೆಟ್ರೋ ರೈಲಿಗೆ. ಆಡಳಿತ ವರ್ಗವೇ ಹೀಗಿರುವಾಗ ಒಳ್ಳೆಯ ನಡತೆಯ ಉದಾಹರಣೆಗಳು ಬಹಳ ವಿರಳ. ನೀತಿಯ ಪಾಠಕ್ಕೆ ಪಠ್ಯಪುಸ್ತಕದಲ್ಲಿ ಮಾತ್ರ ಅಸ್ತಿತ್ವ. ಅನೀತಿಯ ಪಾಠಕ್ಕೆ ಪಠ್ಯಪುಸ್ತಕವೊಂದನ್ನು ಬಿಟ್ಟರೆ ಉಳಿದೆಲ್ಲೆಡೆಯೂ. ಇಂಥ ಕಾರ್ಮೋಡದಲ್ಲೋಂದು ಬೆಳ್ಳಿಯ ರೇಖೆ ಕಾಣಿಸಿಕೊಳ್ಳಲಿ ಎಂದು ಆಶಿಸಬೇಕಷ್ಟೇ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-4301440654664657868?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/4301440654664657868/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=4301440654664657868' title='3 Comments'/><link rel='edit' type='application/atom+xml' href='http://www.blogger.com/feeds/34886019/posts/default/4301440654664657868'/><link rel='self' type='application/atom+xml' href='http://www.blogger.com/feeds/34886019/posts/default/4301440654664657868'/><link rel='alternate' type='text/html' href='http://manasinaputagalanaduve.blogspot.com/2009/04/blog-post.html' title='ಒಂದು ಶಬ್ದಾತೀತ ಮೌನಾಚರಣೆ'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>3</thr:total></entry><entry><id>tag:blogger.com,1999:blog-34886019.post-2924586733870608668</id><published>2008-12-28T21:00:00.003+05:30</published><updated>2008-12-28T23:08:39.313+05:30</updated><title type='text'>ನಮಸ್ಕಾರ</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_JaSAEbMHNYk/SVeb8GB6IWI/AAAAAAAAFL8/WHy6bnh6QGE/s1600-h/namaskara.jpg"&gt;&lt;img style="margin: 0px auto 10px; display: block; text-align: center; cursor: pointer; width: 320px; height: 218px;" src="http://4.bp.blogspot.com/_JaSAEbMHNYk/SVeb8GB6IWI/AAAAAAAAFL8/WHy6bnh6QGE/s320/namaskara.jpg" alt="" id="BLOGGER_PHOTO_ID_5284864144455639394" border="0" /&gt;&lt;/a&gt;&lt;br /&gt;ನಮಸ್ಕಾರ!&lt;br /&gt;&lt;br /&gt;ಮುಂದೆ ಏನು ಬರೆದಿದ್ದೀನಿ ಅಂತ ನೋಡುತ್ತಿದ್ದೀರಾ? ಬರೆಯಲು ಹೊರಟಿರುವುದು ಹಿಂದೆ ಬಳಸಿದ ಪದದ ಬಗ್ಗೆ; 'ನಮಸ್ಕಾರ'ದ ಬಗ್ಗೆ.&lt;br /&gt;&lt;br /&gt;ಜನರನ್ನು ಭೇಟಿ ಮಾಡಿದಾಗ "ನಮಸ್ಕಾರ" ಎನ್ನುತ್ತೇವೆ; ಕೈ ಜೋಡಿಸಿ ವಂದಿಸುತ್ತೇವೆ. ಯಾಕೆ? ಏನು ಅರ್ಥ ಇದಕ್ಕೆ?&lt;br /&gt;&lt;br /&gt;"ಏನು ಅರ್ಥ ಇದಕ್ಕೆ" ಎಂಬ ಪ್ರಶ್ನೆಗೆ ಹಲವರಿಗೆ ತಕ್ಷಣ ಉತ್ತರ ಹೊಳೆಯುವುದಿಲ್ಲ. ಸ್ವಲ್ಪ ತಡವಾಗಿ ಹೊಳೆಯುತ್ತದೆ "ಒಬ್ಬರನ್ನು ಇನ್ನೊಬ್ಬರು ಭೇಟಿಯಾದಾಗ ಅಭಿವಂದನೆ ವ್ಯಕ್ತಪಡಿಸಲು ನಮಸ್ಕಾರ ಮಾಡುತ್ತೇವೆ" ಎಂದು. ಆಂಗ್ಲದಲ್ಲಿ ಇದನ್ನು 'greeting' ಎನ್ನುತ್ತಾರೆ.&lt;br /&gt;&lt;br /&gt;ಈಗ ಮತ್ತೊಂದು ಪ್ರಶ್ನೆ. ಜಗತ್ತಿನಲ್ಲಿ ಕೈ ಕುಲುಕುವುದು, ತಬ್ಬಿಕೊಳ್ಳುವುದು, ಬೆನ್ನು ಬಗ್ಗಿಸುವುದು, ಚುಂಬಿಸುವುದು ಇತ್ಯಾದಿ ಹತ್ತಾರು ರೀತಿಯ ಅಭಿವಂದನೆಯನ್ನು ಸೂಚಿಸುವ ವಿಧಾನಗಳಿವೆ. ಎಲ್ಲಾ ಬಿಟ್ಟು ಕೈ ಜೋಡಿಸಿ ನಮಸ್ಕಾರ ಮಾಡುವುದು ಯಾಕೆ?&lt;br /&gt;&lt;br /&gt;ತಕ್ಷಣ ಹೊಳೆಯುವ ಉತ್ತರ "ನಮ್ಮ ಹಿರಿಯರು ಏನು ಮಾಡುತ್ತಿದ್ದರೋ ಅದನ್ನು ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಸಂಸ್ಕೃತಿಯಲ್ಲಿ ನಮಸ್ಕಾರ ಮಾಡಿಯೇ ಅಭಿವಂದನೆ ಸೂಚಿಸುವ ಪದ್ಧತಿ ಎಷ್ಟೋ ಸಹಸ್ರ ವರ್ಷಗಳಿಂದ ಇದೆ..." ಎಂದು. &lt;br /&gt;&lt;br /&gt;ದಿಟ. ಆದರೆ ನಮ್ಮ ಹಿರಿಯರಿಗೆ ಇದನ್ನು ಯಾರು ಹೇಳಿಕೊಟ್ಟರು? ಅವರ ಹಿರಿಯರು! ಅವರ ಹಿರಿಯರಿಗೆ? ಮತ್ತವರ ಹಿರಿಯರು!&lt;br /&gt;&lt;br /&gt;ಹೀಗೇ ಒಂದೊಂದೇ ತಲೆಮಾರಿನವರಿಗೆ ಅವರ ಹಿಂದಿನ ತಲೆಮಾರುಗಳು ಈ ವಿಧಿಯನ್ನು ಹೇಳಿಕೊಟ್ಟಿದ್ದಾರೆ ಎಂಬುದು ತಿಳಿಯುತ್ತದೆ. ಆದರೆ ಈ ವಿಧಿಯನ್ನು ಹುಟ್ಟುಹಾಕಿದವರಾರು? ಯಾರಾದರೂ ಒಬ್ಬರು ಇರಬೇಕಲ್ಲ; ಯಾವ ವಿಧಿಯೂ ತಾನೇ ತಾನಾಗಿ ಬಂದುಬಿಡುವುದಿಲ್ಲ. ಅದಕ್ಕೂ ಮುಖ್ಯವಾಗಿ, ಅಪಾರ ಬುದ್ಧಿಯ ಸಂಪತ್ತುಳ್ಳ ಮನುಷ್ಯ ಜನಾಂಗದಲ್ಲಿ ಈ ವಿಧಿ ಬಂದಿದೆ ಎಂದರೆ ಇದಕ್ಕೆ ಅರ್ಥವಿರದೇ ಇರುವುದಿಲ್ಲ. ಕಾಲು ಜೋಡಿಸಿ ನಮಸ್ಕಾರ ಎನ್ನುವುದಿಲ್ಲ, ಹೊಡೆದೋ ಒದ್ದೋ ನಮಸ್ಕಾರ ಎನ್ನುವುದಿಲ್ಲ, ಕುಣಿದು-ಕುಪ್ಪಳಿಸಿ ನಮಸ್ಕಾರ ಎನ್ನುವುದಿಲ್ಲ, ಅಥವಾ ಹಿಂಬದಿಗೆ ತಿರುಗಿಯೂ ನಮಸ್ಕಾರ ಎನ್ನುವುದಿಲ್ಲ. ಕೈ ಜೋಡಿಸಿ ಮಾತ್ರ ನಮಸ್ಕಾರ ಎನ್ನುತ್ತೇವೆ. ಅದೂ 'ನಮಸ್ಕಾರ' ಅಥವಾ 'ನಮಸ್ತೇ' ಎಂದೇ ಎನ್ನುತ್ತೇವೆ. ಬೇರೆ ಏನಾದರೂ ಹೇಳಬಹುದಿತ್ತಲ್ಲ! ಯಾಕೆ 'ನಮಸ್ಕಾರ' ಅಥವಾ 'ನಮಸ್ತೇ' ಮಾತ್ರ? ಬೇರೆ ಯಾವ ವಿಧಿಯನ್ನೂ ಅಭಿವಂದನೆಗೆ &lt;span&gt;ಭಾರತೀಯರು&lt;/span&gt; ಏಕೆ ಬಳಸಲಿಲ್ಲ?&lt;br /&gt;&lt;br /&gt;ಇಷ್ಟೊಂದು ಪ್ರಶ್ನೆಗಳ ಉತ್ತರ ನಮ್ಮ ಶಾಲೆಯಲ್ಲಿ ಹೇಳಿಕೊಟ್ಟಿಲ್ಲ. ಹೆಚ್ಚು ಪಕ್ಷ &lt;span&gt;ಮನೆಯಲ್ಲಿರುವ &lt;/span&gt;ಹಿರಿಯರೂ ಹೇಳಿಕೊಟ್ಟಿರಲಿಕ್ಕಿಲ್ಲ. &lt;span&gt;ಯಾರೂ ಹೇಳಿಕೊಡದ ವಿಷಯ ನಮಗೆ ಗೊತ್ತಿಲ್ಲದಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. &lt;/span&gt;ಭಾರತೀಯನಾದ ನನಗೆ ನಮ್ಮ ಸ್ಥಿತಿ ಅರ್ಥವಾಗುತ್ತದೆ. ಆದರೆ ಹೊರದೇಶದಿಂದ ಬಂದ ಯಾರೋ ಒಬ್ಬರು ಇದೇ ಪ್ರಶ್ನೆ ಕೇಳಿದರೆ ಅವರಿಗೆ &lt;span&gt;"ಗೊತ್ತಿಲ್ಲ; ಆದರೂ ನಮಸ್ಕಾರ ಮಾಡುತ್ತೇವೆ" ಎಂಬ &lt;/span&gt;&lt;span&gt;ಉತ್ತರ&lt;/span&gt; ಕೊಟ್ಟರೆ ಹಾಸ್ಯಾಸ್ಪದವಾಗುತ್ತದೆ ಅಷ್ಟೇ.&lt;br /&gt;&lt;br /&gt;ನಮ್ಮ ಪರಿಸ್ಥಿತಿ ಹಾಗೇ ಇದೆ. ಎಷ್ಟೋ ವಿಧಿಗಳನ್ನು, ಆಚರಣೆಗಳನ್ನು ಕಾರಣ &lt;span&gt;ತಿಳಿಯದೆಯೇ &lt;/span&gt;ಮಾಡಿಕೊಂಡು ಬರುತ್ತಿದ್ದೇವೆ. ಕೆಲವರಿಗೆ ಯಾಕೆ ಹೀಗೆ ಎಂಬ ಪ್ರಶ್ನೆಯೇ ಬರುವುದಿಲ್ಲ. ಪ್ರಶ್ನೆ ಬಂದವರಿಗೆ ಉತ್ತರ ಹೇಳುವವರು ಸಿಗುವುದಿಲ್ಲ. ಉತ್ತರ ಸಿಗದಿದ್ದಾಗ "ಇವೆಲ್ಲಾ ಅರ್ಥವಿಲ್ಲದ್ದು" ಎಂದು ವಿಧಿ-ಆಚರಣೆಗಳನ್ನು ಹಲವರು ಕೈಬಿಡುವುದುಂಟು.&lt;br /&gt;&lt;br /&gt;ಆದರೆ ಹಾಗೆ ಮಾಡುವುದು ಮೂರ್ಖತನವಾಗುತ್ತದೆ. ನಮಗೆ ಅರ್ಥ ತಿಳಿದಿಲ್ಲ ಎಂಬ ಕಾರಣಕ್ಕೆ ಆ ವಿಧಿಗಳಿಗೆ, ಆಚರಣೆಗಳಿಗೆ ಅರ್ಥವಿಲ್ಲ ಎನ್ನುವುದು ಶುದ್ಧ ಮೂರ್ಖತನ! ಅರ್ಥವಿಲ್ಲದ ಆಚರಣೆಗಳನ್ನು ಅನುಷ್ಠಾನಕ್ಕೆ ತರಲು ನಮ್ಮ ಹಿರಿಯರೇನೂ ಮೂರ್ಖರಾಗಿರಲಿಲ್ಲ. ಕೆಲವು ಆಚರಣೆಗಳಿಗೆ, ವಿಧಿಗಳಿಗೆ ನಮ್ಮ ಕಲ್ಪನೆಗೂ ಮೀರಿದ ಸಮಂಜಸವಾದ ಅರ್ಥಗಳಿರಬಹುದು. ಹಾಗೆಯೇ ಇನ್ನು ಕೆಲವು ಆಚರಣೆಗಳು ಯಾವುದೋ ಕಾಲಕ್ಕೆ ಅನುಗುಣವಾಗಿದ್ದು, ಇಂದು ಅದರ ಅವಶ್ಯಕತೆ ಇಲ್ಲದೆಯೂ ಇರಬಹುದು. ನಾವು ಪ್ರತಿಯೊಂದು ಆಚರಣೆಯ ಹಿಂದಿನ ಅರ್ಥವನ್ನು ಸರಿಯಾಗಿ ತಿಳಿದು ಇಂದಿಗೆ ಅರ್ಥಹೀನ ಎನ್ನಿಸುವುದನ್ನು ಬಿಟ್ಟು, ಅರ್ಥವಿರುವುದನ್ನು ಪಾಲಿಸಿ, ಅಗತ್ಯವಾದ ಹೊಸ ವಿಧಿಗಳನ್ನೂ ಅನುಷ್ಠಾನಕ್ಕೆ ತರುವುದೇ ಮನುಷ್ಯನಿಗೆ ನಿಜವಾದ ವಿಕಾಸದ ಮಾರ್ಗ.&lt;br /&gt;&lt;br /&gt;ಇಷ್ಟೆಲ್ಲಾ ಬರೆಯುತ್ತಿರುವ ನನಗೂ ಎಷ್ಟೋ ವಿಧಿ-ಆಚರಣೆಗಳ ಅರ್ಥ ಗೊತ್ತಿಲ್ಲ. ನಾನೇನೂ ಸರ್ವಜ್ಞನಲ್ಲ. ಆದರೆ, ತಿಳಿಯುವ ಪ್ರಯತ್ನ ಮಾಡುತ್ತಿದ್ದೇನೆ. ನನಗೆ ಗೊತ್ತಾದ ವಿಷಯಗಳನ್ನು ನಾನು ಇತರರೊಂದಿಗೆ ಹಂಚಿಕೊಳ್ಳುತ್ತೇನೆ. ಎಲ್ಲರೂ ಹೀಗೆ ಮಾಡಿದರೆ ನಮ್ಮ ಸಮಾಜ ಬೇಕಾದಷ್ಟು ಉದ್ಧಾರವಾಗುತ್ತದೆ ಅಲ್ಲವೇ?&lt;br /&gt;&lt;br /&gt;ಮತ್ತೊಂದು ಮುಖ್ಯವಾದ ಮಾತು. ಭಾರತದ ಸಂಸ್ಕೃತಿಯಲ್ಲಿ ವೈಜ್ಞಾನಿಕ ಕಾರಣಗಳಿಂದ ಬಂದ ಅನಷ್ಠಾನಗಳು ಎಷ್ಟೋ ಅಷ್ಟೇ ಅಧ್ಯಾತ್ಮಿಕ ಕಾರಣಗಳಿಂದಲೂ ಬಂದಿದೆ. ಇಂದಿಗೂ ಭಾರತದ ಬಹುಪಾಲು ಜನರಿಗೆ ದೈವ ಶಕ್ತಿಯಲ್ಲಿ, ಅಧ್ಯಾತ್ಮಜ್ಞಾನದಲ್ಲಿ ನಂಬಿಕೆ ಇದೆ. ಆದ್ದರಿಂದ ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಅಥವಾ ಆಧ್ಯಾತ್ಮಿಕ ಅಥವಾ ಎರಡೂ ಕಾರಣಗಳಿರಬಹುದು.&lt;br /&gt;&lt;br /&gt;ಈಗ ಮತ್ತೆ ನಮಸ್ಕಾರದ ವಿಷಯಕ್ಕೆ ಬರೋಣ.&lt;br /&gt;&lt;br /&gt;ಭಾರತದ ಭಾಷೆಗಳಿಗೆ ಮೂಲ ಭಾಷೆಯಾದ ಸಂಸ್ಕೃತದಿಂದ 'ನಮಸ್ಕಾರ' ಮತ್ತು 'ನಮಸ್ತೇ' ಪದಗಳು ಬಂದಿವೆ. ಮೊದಲು 'ನಮಸ್ತೇ' ಬಗ್ಗೆ &lt;span&gt;ನೋಡೋಣ&lt;/span&gt;. ನಂತರ 'ನಮಸ್ಕಾರ' ಎಂಬ ಪದದ ಬಗ್ಗೆ.&lt;br /&gt;&lt;br /&gt;ನಮಸ್ತೇ ಎಂಬ ಪದವು ನಮಃ + ತೇ ಎಂದು ವಿಭಾವಗಾಗುತ್ತದೆ. ನಮಃ ಎಂದರೆ ವಂದನೆಗಳು, ತೇ ಎಂದರೆ ನಿನಗೆ. ನಮಸ್ತೇ ಎಂದರೆ ನಿನಗೆ ವಂದನೆಗಳು ಎಂದು ಅರ್ಥ.&lt;br /&gt;&lt;br /&gt;ನಮಸ್ಕಾರ ಎಂಬ ಪದವನ್ನು ನಮಃ + ಕಾರ ಎಂದು ಬಿಡಿಸಬಹುದು. ನಮಃ ಎಂದರೆ ವಂದನೆಗಳು, ಕಾರ ಎಂದರೆ ಮಾಡುವವನು. "ನಮಸ್ಕಾರ" ಎಂದರೆ ವಂದಿಸುವವನು ಎಂದು ಅರ್ಥ. ಯಾರು ಇದನ್ನು ಹೇಳುತ್ತಾರೋ ಅವರೇ ವಂದಿಸುವವರಾಗುತ್ತಾರೆ. &lt;span&gt;ಯಾರ ಮುಂದೆ ಹೇಳುತ್ತಾರೋ ಅವರೇ ವಂದ್ಯರಾಗುತ್ತಾರೆ. &lt;/span&gt;&lt;span&gt;ಹಾಗಾಗಿ, ಸಾಧಾರಣವಾಗಿ, "ನಮಸ್ಕಾರ" ಎಂದರೆ "ನಾನು ನಿನಗೆ / ನಿಮಗೆ ವಂದಿಸುವವನು" ಎಂದಾಗುತ್ತದೆ.&lt;/span&gt;&lt;br /&gt;&lt;br /&gt;ನಮಸ್ಕಾರ ಎಂಬ ಪದವನ್ನು ನಮ್ + ಅಸ್ + ಕಾರ &lt;span&gt;ಎಂದೂ ಬಿಡಿಸುತ್ತಾರೆ&lt;/span&gt;. ನಮ್ ಎಂದರೆ ವಂದಿಸು, ಅಸ್ ಎಂದರೆ ಇರು, ಕಾರ ಎಂದರೆ ಮಾಡುವವನು. ನಮಸ್ಕಾರ ಎಂದರೆ "ಇರುವವನಿಗೆ ವಂದಿಸುವವನು (ನಾನು)" ಎಂದರ್ಥ. ಆದರೆ ಎಲ್ಲಿ ಇರುವವನು? ಯಾರಿಗೆ ಈ ನಮಸ್ಕಾರ? ಬಹಳ ಲೌಕಿಕ ದೃಷ್ಟಿಯಿಂದ ಯಾರ ಮುಂದೆ ನಮಸ್ಕರಿಸುತ್ತೀವೋ ಅವರಿಗೇ ನಮಸ್ಕಾರ. ಆದರೆ ಸ್ವಲ್ಪ ಅಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದರೆ ಇದರ ಅಂತರಾರ್ಥ ನಾವು ಯಾರಿಗೆ ನಮಸ್ಕರಿಸುತ್ತೀವೋ ಅವರೊಳಗೆ ಇರುವ ದೇವರಿಗೆ ವಂದನೆಗಳು ಎಂದು.&lt;br /&gt;&lt;br /&gt;&lt;span&gt;ಕೆಲವರು 'ಅ'ಕಾರ, 'ಇ'ಕಾರ, 'ಯ'ಕಾರ, 'ಳ'ಕಾರ ಎಂದಂತೆ 'ನಮಸ್'ಕಾರ ಎಂಬ ಬಳಕೆ ಎಂದೂ ಹೇಳುತ್ತಾರೆ.&lt;/span&gt;&lt;br /&gt;&lt;br /&gt;ಪದಗಳಲ್ಲೇನೋ ಸುಲಭವಾಗಿ "ನಿನಗೆ ವಂದನೆಗಳು" ಎನ್ನಲು ನಮಸ್ಕಾರ &lt;span&gt;ಎನ್ನುತ್ತೇವೆ&lt;/span&gt; ಎಂದು ಸಲೀಸಾಗಿ ಅರ್ಥೈಸಿಕೊಂಡುಬಿಡಬಹುದು. ಆದರೆ ವಂದಿಸುವಾಗ ಕೈ ಜೋಡಿಸುವುದು ಯಾಕೆ?&lt;br /&gt;&lt;br /&gt;ಕೈ ಜೋಡಿಸುವುದಕ್ಕೆ ಯಾವ ಲೌಕಿಕ ಅರ್ಥವೂ ಇದ್ದಂತೆ ಕಾಣುವುದಿಲ್ಲ. ಆದರೆ ಅಧ್ಯಾತ್ಮಿಕ ಅರ್ಥ ಇದೆ.  ನಾವು ನಮಸ್ಕಾರ ಎನ್ನುವುದು ಯಾವಾಗ? ಇಬ್ಬರು ಭೇಟಿಯಾದಾಗ. ಹಾಗಾಗಿ ಎರಡು ಕೈಗಳು ಜೋಡಿಸುವುದು. ಎರಡು ಕೈಗಳ ಜೋಡಣೆ ಎರಡು ಆತ್ಮಗಳ ಅಥವಾ ಜೀವಗಳ ಭೇಟಿಯ ಸಂಕೇತ.  ಕೈ ಜೋಡಣೆಗೆ ಮತ್ತೊಂದು ಅರ್ಥವೂ ಇದೆ. ಎಡಗೈ ನಮ್ಮ ಸಂಕೇತ. ಬಲಗೈ ನಾವು ಯಾರಿಗೆ ವಂದಿಸುತ್ತಿದ್ದೇವೋ ಅವರೊಳಗಿನ ದೇವರ ಸಂಕೇತ. ಕೈಗಳ ಜೋಡಣೆ ಭೇಟಿಯ ಸಂಕೇತ. ಅವರೊಳಗಿರುವ ದೇವನಿಗೆ ಗೌರವ ಸಲ್ಲಿಸುವ ಮೂಲಕ ಅವರಿಗೂ ಗೌರವ ಸಲ್ಲಿಸುತ್ತೇವೆ. &lt;span&gt;&lt;br /&gt;&lt;/span&gt;&lt;span&gt;&lt;br /&gt;'ನಮ:' ಅಥವಾ 'ನಮಸ್' ಪದಕ್ಕೆ ಅಧ್ಯಾತ್ಮಿಕವಾದ ಇನ್ನೊಂದು ಅರ್ಥ ಇದೆ. 'ನ + ಮೇ' (ಅಥವಾ 'ನ ಮಮ') ಎಂದು ಕೆಲವರು ಇದನ್ನು ಬಿಡಿಸುತ್ತಾರೆ. ಹಾಗೆಂದರೆ ಸಂಸ್ಕೃತದಲ್ಲಿ "ನನ್ನದಲ್ಲ" ಎಂದರ್ಥ. ನನ್ನದಲ್ಲ ಎಂದರೆ ಯಾರದ್ದೋ ಆಗಿರಬೇಕಲ್ಲ ಎಂದು ಕೇಳಬಹುದು. ಇಂದು ಹುಟ್ಟಿ ಯಾವುದನ್ನೋ "ನನ್ನದು" ಎಂದು ನಾಳೆ ಸತ್ತಾಗ ಅದು ಬೇರೆಯವರದಾಗುವುದಾದರೆ, ಯಾವ ವಸ್ತುವೂ ಅಂಥವರದ್ದಾಗಲು ಸಾಧ್ಯವಿಲ್ಲ. ಹಾಗಾಗಿ, ಹುಟ್ಟಿ-ಸಾವುಗಳಿರದ ದೇವರದ್ದು ಇದೆಲ್ಲವೂ ಎಂಬ ಅರ್ಥ ಅನ್ವಯವಾಗುತ್ತದೆ. ಆದರೆ ನಾವು ದೇವರಿಗೆ ಮಾತ್ರ ನಮಸ್ಕರಿಸುವುದಿಲ್ಲ. ಜನರಿಗೂ ನಮಸ್ಕರಿಸುತ್ತೇವೆ. ದೇವರಿಗೆ ನಮಸ್ಕರಿಸಿದರೂ &lt;/span&gt;&lt;span&gt;ಎಷ್ಟೋ&lt;/span&gt;&lt;span&gt; ಜನಕ್ಕೆ ನೂರಾರು ದೇವರುಗಳು! ಆದರೆ ಈ ಸೃಷ್ಟಿಯಲ್ಲಿ ಒಂದರಂತಿನ್ನೊಂದಿಲ್ಲ. ದೇವರಂತಿನ್ನೊಬ್ಬ ದೇವರಿಲ್ಲ. ಆದರೆ ಅವನಿಗಿಂತ ಕಡಿಮೆ ಯೋಗ್ಯತೆಯ ದೇವತೆಗಳಿರಬಹುದು. "ಎಲ್ಲವೂ ನನ್ನದು" ಎನ್ನಲು ಅವರೇನೂ ಎಲ್ಲವನ್ನೂ ಗೆದ್ದಿಲ್ಲ. ಹಾಗಾಗಿ, ಅವರಿಗೆ ನಮಸ್ಕಾರ ಮಾಡಿದರೂ ಹಿರಿಯರು ಹೇಳಿದರು&lt;br /&gt;&lt;br /&gt;&lt;/span&gt;&lt;div style="text-align: center;"&gt;&lt;span&gt;ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಮ್ |&lt;/span&gt;&lt;br /&gt;&lt;span&gt;ಸರ್ವದೇವನಮಸ್ಕಾರ: ಕೇಶವಂ ಪ್ರತಿಗಚ್ಛತಿ ||&lt;/span&gt;&lt;br /&gt;&lt;br /&gt;&lt;span&gt;[ಆಕಾಶದಿಂದ ಬಿದ್ದ ನೀರೆಲ್ಲವೂ ಹೇಗೆ ಸಾಗರಕ್ಕೆ ಹೋಗಿ ಸೇರುತ್ತವೋ ಹಾಗೆ ಎಲ್ಲ ದೇವರಿಗೆ ಮಾಡಿದ ನಮಸ್ಕಾರಗಳು ಕೇಶವನಿಗೆ ಹೋಗಿ ಸೇರುತ್ತವೆ]&lt;/span&gt;&lt;br /&gt;&lt;/div&gt;&lt;span&gt;&lt;br /&gt;ಇಲ್ಲಿ ದೇವರನ್ನು ಕೇಶವ ಎಂದಿದ್ದಾರೆ. ಆದರೆ ಹೆಸರಿಗಿಂತ ಭಾವ ಮುಖ್ಯ. ದೇವರು ಎಂಬ ಭಾವವಿದ್ದರೆ ಸಾಕು; ಆ ಶಕ್ತಿಯನ್ನು ಯಾವ ಹೆಸರಿಂದ ಬೇಕಾದರೂ ಕರೆಯಬಹುದು.&lt;br /&gt;&lt;br /&gt;&lt;/span&gt;&lt;span&gt;ಇದಾವುದೂ ಸ್ವಂತವಾಗಿ ಹೇಳಿದ್ದಲ್ಲ. &lt;/span&gt;&lt;span&gt;ಒಮ್ಮೆ ಇದ್ದಕ್ಕಿದ್ದಂತೆ &lt;/span&gt;"ನಮಸ್ಕಾರ"ದ ಅರ್ಥ ಏನು ಎಂಬ ಪ್ರಶ್ನೆ ಉದ್ಭವಿಸಿದಾಗ, ಅಂತರ್ಜಾಲದಲ್ಲಿ ಹುಡುಕಾಡಿದಾಗ ನನಗೆ ಸಿಕ್ಕ ಮಾಹಿತಿ ಇದು. &lt;span&gt;ನಮ್ಮ ಪೂರ್ವಜರ ಸಂಸ್ಕೃತಿಯಲ್ಲಿಯ ಕೆಲವು ವಿಷಯಗಳನ್ನು ಒಪ್ಪಿಕೊಳ್ಳಲು ಕಾರಣ ತಿಳಿಯದಿದ್ದರೂ ಬಿಡಲಾಗದ ಪರಿಸ್ಥಿತಿಯಲ್ಲಿರುವ ನನ್ನಂಥವರಿಗೆ ಇದನ್ನೋದಿ ಏನಾದರೂ ಉಪಯೋಗವಾದರೆ ನನಗಷ್ಟೇ ಸಂತೋಷ. &lt;/span&gt;ಮೇಲೆ ಹೇಳಿರುವುದಕ್ಕಿಂತ ಹೆಚ್ಚು ಸೂಕ್ತವಾದ ರೋಚಕವಾದ ಅರ್ಥವಿದ್ದರೂ ಇದ್ದೀತು. ಆದರೆ ನನಗೆ ಸಿಕ್ಕಿದಷ್ಟನ್ನು ಇಲ್ಲಿ ಬರೆದಿದ್ದೇನೆ. ಯಾರಿಗಾದರೂ ಹೆಚ್ಚು ತಿಳಿದಿದ್ದಲ್ಲಿ ಅಥವಾ ಮುಂದೆ ತಿಳಿದಲ್ಲಿ ಅವರೂ ಅದರ ಬಗ್ಗೆ ಇತರರಿಗೆ ತಿಳಿಸಿದರೆ ಉಪಕಾರವಾಗುತ್ತದೆ. &lt;span&gt;&lt;br /&gt;&lt;br /&gt;[ಅರ್ಥ ಗೊತ್ತಿಲ್ಲದೇ ಇಂದು ಸಾರ್ವಜನಿಕ ಶೌಚಾಲಯಗಳು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳಲ್ಲೂ ನಮಸ್ಕಾರದ ಚಿತ್ರ ಅಥವಾ ಸಂಕೇತ ಹಾಕುತ್ತಾರೆ. ಇದಕ್ಕೇನು ಅರ್ಥವೋ ಆ ದೇವರೇ ಬಲ್ಲ!&lt;/span&gt;]&lt;br /&gt;&lt;br /&gt;&lt;span&gt;ಇನ್ನೂ 'ಸಾಷ್ಟಾಂಗ' ಮತ್ತು 'ದೀರ್ಘದಂಡ' ನಮಸ್ಕಾರಗಳ ಅರ್ಥದ ಬಗ್ಗೆ ಮಾಹಿತಿ ಸಂಗ್ರಹಿಸಿಲ್ಲ. ನನಗೆ ಮಾಹಿತಿ ಸಿಕ್ಕಾಗ ಈ ಬ್ಲಾಗಿನಲ್ಲೂ ಬರೆಯುತ್ತೇನೆ. ಅಲ್ಲಿಯವರೆಗೂ, &lt;/span&gt;ನಮಸ್ಕಾರ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-2924586733870608668?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/2924586733870608668/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=2924586733870608668' title='7 Comments'/><link rel='edit' type='application/atom+xml' href='http://www.blogger.com/feeds/34886019/posts/default/2924586733870608668'/><link rel='self' type='application/atom+xml' href='http://www.blogger.com/feeds/34886019/posts/default/2924586733870608668'/><link rel='alternate' type='text/html' href='http://manasinaputagalanaduve.blogspot.com/2008/12/blog-post_28.html' title='ನಮಸ್ಕಾರ'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_JaSAEbMHNYk/SVeb8GB6IWI/AAAAAAAAFL8/WHy6bnh6QGE/s72-c/namaskara.jpg' height='72' width='72'/><thr:total>7</thr:total></entry><entry><id>tag:blogger.com,1999:blog-34886019.post-4592442957845258046</id><published>2008-12-20T22:05:00.003+05:30</published><updated>2008-12-20T22:20:32.034+05:30</updated><title type='text'>ಓಂ ಧೋನಯೇ ನಮಃ</title><content type='html'>ಈ ಷಡಕ್ಷರೀ ಮಂತ್ರವನ್ನು ನೀವೆಲ್ಲೂ ಕೇಳಿರಲಾರಿರಿ. ಆದರೆ ಕೇಳುವ ಕಾಲ ದೂರವಿಲ್ಲ. ನಮ್ಮ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಘ್ ಧೋನಿ ಈಗಲೇ ಸಹಸ್ರಾರು ಜನರ ಹನುಮಂತನ ಬಾಲದಂತಿರುವ ದೇವರುಗಳ ಪಟ್ಟಿಗೆ ಹೊಸ ಸೇರ್ಪಡೆ. ಈತನಿಗೆ ದೇವರ ಪಟ್ಟ ಕರುಣಿಸಿದ್ದು ಅಭಿಮಾನಗಳು!&lt;br /&gt;&lt;br /&gt;ಸಚಿನ್ ದೇವರು ಎಂದು ಎಷ್ಟೋ ಜನ ಹೇಳುತ್ತಾರೆ. ಆದರೆ ಸಚಿನ್ ವಿಗ್ರಹ ಇಟ್ಟು ಪೂಜೆಯನ್ನು ಇನ್ನೂ ಯಾರೂ ಮಾಡಲಿಲ್ಲ ಎನ್ನಿಸುತ್ತದೆ. ಆದರೆ ಧೋನಿಯ ವಿಗ್ರಹವೂ ಬರಲಿದೆ, (ಅದರಲ್ಲಿ ಧೋನಿಯನ್ನು ಪ್ರತಿಷ್ಠಾಪಿಸಿಯೋ ಪ್ರತಿಷ್ಠಾಪಿಸದೆಯೋ) ಪೂಜೆಯೂ ಆಗುತ್ತದೆ ಎನ್ನುತ್ತಾರೆ ಜಿತೇಂದರ್ ಸಿಂಘ್ - ಧೋನಿ ಅಭಿಮಾನಿಗಳ ಸಂಘದ ನಾಯಕ. ಧೋನಿ-ದೇವಾಲಯದಿಂದ ಪವಿತ್ರವಾಗಲಿರುವ ಊರು ರಾಂಚಿ.&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_JaSAEbMHNYk/SU0hW0g87NI/AAAAAAAAFLw/stsITSwCiUM/s1600-h/mahendra-singh-dhoni.jpg"&gt;&lt;img style="margin: 0px auto 10px; display: block; text-align: center; cursor: pointer; width: 307px; height: 320px;" src="http://3.bp.blogspot.com/_JaSAEbMHNYk/SU0hW0g87NI/AAAAAAAAFLw/stsITSwCiUM/s320/mahendra-singh-dhoni.jpg" alt="" id="BLOGGER_PHOTO_ID_5281914613913152722" border="0" /&gt;&lt;/a&gt;&lt;br /&gt;ಧೋನಿಯ ಸಿಕ್ಸರುಗಳನ್ನು ಭೀಮನ ಗದೆಯಿಂದ ಹೊಡೆದ ಸಿಕ್ಸರ್ ಎನ್ನುತ್ತಿದ್ದರು. ಈಗ ಭೀಮನಿಗಿಂತಲೂ ಎತ್ತರಕ್ಕೆ ಧೋನಿ ಏರುತ್ತಿದ್ದಾರೆ. ಧೋನಿಯನ್ನು ಒಲಿಸಲು ಏನೇನು ಪೂಜೆಗಳು, ಸೇವೆಗಳು, ಹೋಮ-ಹವನಗಳು ಆ ಮಂದಿರದಲ್ಲಿ ನಡೆಯುತ್ತವೋ ಕಾದು ನೋಡೋಣ! ಪವಾಡ-ಮಹಿಮೆಗಳನ್ನು ಕೇಳಲೂ ಕಾಯಬೇಕಾದ್ದೇ!&lt;br /&gt;&lt;br /&gt;ಓಂ ಮಹೇಂದ್ರಾಯ ಸಿಂಘೇ ಧೋನಯೇ ನಮಃ&lt;br /&gt;&lt;br /&gt;[ಇಂದಿನ ಸುದ್ದಿಯಲ್ಲಿ ಧೋನಿ-ದೇವ&lt;span style="font-weight: bold;"&gt; &lt;/span&gt;- &lt;a href="http://www.dnaindia.com/report.asp?newsid=1215512"&gt;ಕೊಂಡಿ ೧&lt;/a&gt;, &lt;a href="http://timesofindia.indiatimes.com/India/A_Dhoni_temple_in_Ranchi_soon/articleshow/3867286.cms"&gt;ಕೊಂಡಿ ೨&lt;/a&gt;, &lt;a href="http://www.hindustantimes.com/StoryPage/StoryPage.aspx?sectionName=HomePage&amp;amp;id=7e1bd01b-0b96-4692-9e98-75766c9de586&amp;amp;MatchID1=4856&amp;amp;TeamID1=6&amp;amp;TeamID2=2&amp;amp;MatchType1=1&amp;amp;SeriesID1=1223&amp;amp;MatchID2=4873&amp;amp;TeamID3=1&amp;amp;TeamID4=3&amp;amp;MatchType2=1&amp;amp;SeriesID2=1229&amp;amp;PrimaryID=4856&amp;amp;IsCricket=true&amp;amp;Headline=Fans+to+build+Dhoni+temple+in+Ranchi"&gt;ಕೊಂಡಿ ೩&lt;/a&gt;]&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-4592442957845258046?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/4592442957845258046/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=4592442957845258046' title='3 Comments'/><link rel='edit' type='application/atom+xml' href='http://www.blogger.com/feeds/34886019/posts/default/4592442957845258046'/><link rel='self' type='application/atom+xml' href='http://www.blogger.com/feeds/34886019/posts/default/4592442957845258046'/><link rel='alternate' type='text/html' href='http://manasinaputagalanaduve.blogspot.com/2008/12/blog-post.html' title='ಓಂ ಧೋನಯೇ ನಮಃ'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_JaSAEbMHNYk/SU0hW0g87NI/AAAAAAAAFLw/stsITSwCiUM/s72-c/mahendra-singh-dhoni.jpg' height='72' width='72'/><thr:total>3</thr:total></entry><entry><id>tag:blogger.com,1999:blog-34886019.post-8099616706427711465</id><published>2008-11-05T19:27:00.000+05:30</published><updated>2008-11-05T19:29:35.275+05:30</updated><title type='text'>ಬದುಕು ಜಟಕಾ ಬಂಡಿ...</title><content type='html'>&lt;div style="text-align: justify;"&gt;ಯಾಕೋ ಒಂದು ವಾರದಿಂದ ನನ್ನ ದೇಹವೂ ಮನಸ್ಸೂ ಚಕ್ರ ಕಟ್ಟಿಕೊಂಡಂತಾಗಿಬಿಟ್ಟಿದೆ. ನಿರಂತರ ಪ್ರಯಾಣ, ಕ್ಷಣ-ಕ್ಷಣಕ್ಕೂ ತಿರುವುಗಳು!&lt;br /&gt;&lt;br /&gt;ಈ ಕಗ್ಗ ಬಹಳ ನೆನಪಾಗುತ್ತಿದೆ. ಯಾಕೋ ಇಲ್ಲಿ ಬರೆಯಬೇಕೆನ್ನಿಸಿತು. ಬರೆಯುತ್ತಿದ್ದೀನಿ.&lt;br /&gt;&lt;br /&gt;ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ&lt;br /&gt;ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು |&lt;br /&gt;ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು&lt;br /&gt;ಪದ ಕುಸಿಯೆ ನೆಲವಿಹುದು - ಮಂಕುತಿಮ್ಮ ||&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-8099616706427711465?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/8099616706427711465/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=8099616706427711465' title='4 Comments'/><link rel='edit' type='application/atom+xml' href='http://www.blogger.com/feeds/34886019/posts/default/8099616706427711465'/><link rel='self' type='application/atom+xml' href='http://www.blogger.com/feeds/34886019/posts/default/8099616706427711465'/><link rel='alternate' type='text/html' href='http://manasinaputagalanaduve.blogspot.com/2008/11/blog-post_05.html' title='ಬದುಕು ಜಟಕಾ ಬಂಡಿ...'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>4</thr:total></entry><entry><id>tag:blogger.com,1999:blog-34886019.post-261697551500281966</id><published>2008-10-31T01:32:00.003+05:30</published><updated>2008-10-31T08:23:02.897+05:30</updated><title type='text'>ಕುಡುಮರಿಯ ದಾರಿಯಲ್ಲಿ...</title><content type='html'>ಬೆಳಿಗ್ಗೆ ಉಡುಪಿಯಿಂದ ಬೈಕ್ ಹತ್ತಿ ಅರುಣನೊಡನೆ ಕುಡುಮರಿ ಜಲಪಾತಕ್ಕೆ ಹೊರಟೆ. ಬೈಕಿನಲ್ಲಿ ರಸ್ತೆ ಇರುವ ತನಕ ಹೋಗಿ ಸುಮಾರು ಎರಡು ತಾಸಿನ ಚಾರಣದ ಹಾದಿಯಲ್ಲಿ ಜಲಪಾತ ತಲುಪಬಹುದು ಎಂಬ ಮಾಹಿತಿ ಮಾತ್ರ ನಮಗೆ ತಿಳಿದಿತ್ತು. ದಾರಿಯಲ್ಲಿ ಆರಾಮಾಗಿ ಕಡಲ ಬದಿಯಲ್ಲಿ ಅಲೆಗಳನ್ನು ನೋಡುತ್ತಾ ಕಾಲ ಕಳೆದಾಗ ಮುಂದೇನು ಕಾದಿದೆ ಎಂಬ ಅರಿವು ನಮಗೆ ಕಿಂಚಿತ್ತಾದರೂ ಇರಲಿಲ್ಲ. "ಹೋಗಕ್ಕೆ ಬರಕ್ಕೆ ಸೇರಿ ನಾಲ್ಕು ಘಂಟೆ, ಅಲ್ಲೊಂದು ಅರ್ಧ ಘಂಟೆ - ಎಲ್ಲಾ ಸೇರಿ ಅಬ್ಬಬ್ಬಾ ಅಂದ್ರೂ ಐದು ಘಂಟೆಯಲ್ಲಿ ಮುಗಿಸಿಬಿಡ್ತೀವಿ ನೋಡು" ಎಂದು ಮಾತಾಡಿಕೊಂಡು ಚಾರಣಕ್ಕೆ ಹೊರಟಾಗ ಹನ್ನೊಂದು ಘಂಟೆಯಾಗಿತ್ತು. ಹೊರಡುವುದಕ್ಕೆ ಮುಂಚೆ ಸ್ಥಳೀಯರನ್ನು ವಿಚಾರಿಸಿದಾಗ ಅರುಣ್ "ಒಂದು ಮುಕ್ಕಾಲ್ ಘಂಟೆ ದಾರೀನಾ?" ಅಂತ ಕೇಳಿದಾಗ "ಹ್ಞೂ" ಅಂತ ಬೇರೆ ಹೇಳಿದ್ದರು. ನಾವಿಬ್ಬರು "ಅವ್ರಿಗೆ ಮುಕ್ಕಾಲ್ ಘಂಟೆ ಆದ್ರೆ ನಮಗೆ ಹೆಚ್ಚೂಂದ್ರೆ ಒಂದುವರ್ ಘಂಟೆ; ಚಿಕ್ಕ ಟ್ರೆಕ್ಕು..." ಅಂತ ಬೇರೆ ಡೈಲಾಗ್ ಹೊಡೆದಿದ್ದೆವು.&lt;br /&gt;&lt;br /&gt;ಚಾರಣ ಶುರು ಮಾಡಿದ ಹತ್ತು ನಿಮಿಷಕ್ಕೇ ದಟ್ಟ ಕಾಡಿನಲ್ಲಿದ್ದೆವು. "ಇಲ್ಲೆಲ್ಲಾ ಪರ್ವಾಗಿಲ್ವೋ ಕಾಡು... ಥಿಕ್ ಆಗಿದೆ" ಅಂತ ಅರುಣ್ ಹೇಳಿದಾಗಲೇ ಈ ಚಾರಣ ನಾವೆಣಿಸಿದಂತೆ ಮಕ್ಕಳಾಟವಲ್ಲ ಎಂದು ನನಗನ್ನಿಸಿತ್ತು. "ಎಷ್ಟು ಥಿಕ್ ಆಗಿದ್ರೂ ಲೀಚ್ ಇರಲ್ಲ ಇಲ್ಲೆಲ್ಲ... ಅದೇ ಬೇಜಾರು" ಅಂತ ಬೇಜವಾಬ್ದಾರಿಯ ಡೈಲಾಗ್ ಹೊಡೆದೆ. ನನಗೇ ಗೊತ್ತಿಲ್ಲದೇ ನನ್ನ ಕಾಲಿಗೆ ಹತ್ತಾರು ಜಿಗಣೆಗಳು ಆಗಲೇ ಹತ್ತಿಬಿಟ್ಟಿದ್ದವು! ಸೂರ್ಯಕಿರಣಗಳಿಗೆ ಒಳನುಗ್ಗಲು ಜಾಗವೇ ಇರದಷ್ಟು ದಟ್ಟವಾಗಿ ಬೆಳೆದ ಕಾಡದು. ಅಸಾಧ್ಯ ಸೆಕೆ. "ಜಲಪಾತಕ್ಕೆ ತಾನೆ ಹೋಗ್ತಿರೋದು; ಯಾವ್ದೋ ಹೊಳೆ ಇದ್ದೇ ಇರತ್ತೆ... ಅರ್ಧ ಬಾಟಲ್ ನೀರು ಸಾಕು" ಅಂತ ಬೇರೆ ಲೆಕ್ಕ ಹಾಕಿಕೊಂಡು ಹೆಚ್ಚು ನೀರೂ ತೆಗೆದುಕೊಂಡು ಹೋಗಿರಲಿಲ್ಲ. ದಾರಿಯಲ್ಲಿ ಒಂದು ತೊರೆಯೂ ಇಲ್ಲ. ಮುಂದೆ ಹೋಗುತ್ತಿದ್ದಂತೆಯೇ ದಾರಿ ಕೂಡ ಅಸ್ಪಷ್ಟವಾಗುತ್ತಿತ್ತು. ಎಷ್ಟೋ ಬಾರಿ ಅತ್ತಿತ್ತ ನೋಡಿ ನಮಗೆ ದಾರಿ ಅನ್ನಿಸಿದ ಕಡೆ ನುಗ್ಗಿದೆವು. ಇನ್ನೆಷ್ಟೋ ಕಡೆ ಮುಳ್ಳಿನ ಪೊದೆಯೋ, ಮರವೋ ಬಿದ್ದು ಮುಂದೆ ದಾರಿ ಕಾಣುತ್ತಿದ್ದರೂ ಹೋಗಲಾಗುತ್ತಿರಲಿಲ್ಲ. ಬೇರೆ ಕಡೆಯಿಂದ ದಾರಿ ಮಾಡಿಕೊಂಡು ಅಲ್ಲಿಗೆ ಬಂದು ಸೇರುವುದು ಆ ಮುಳ್ಳುಗಾಡಲ್ಲಿ ವಿಪರೀತ ಸಾಹಸವೇ ಸರಿ. ಸ್ವಲ್ಪ ಎಚ್ಚರ ತಪ್ಪಿ ಮೈಮರೆತು ಅತ್ತಿತ್ತ ನೋಡುತ್ತಾ ನಿಂತರೆ ನಾವು ಎಲ್ಲಿಂದ ಬಂದೆವು, ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗುವುದಿಲ್ಲ. ಎಲ್ಲಾ ದಾರಿಯೂ ಒಂದೇ ರೀತಿ ಕಾಣುತ್ತದೆ! ಇಷ್ಟು ದಟ್ಟ ಕಾಡಲ್ಲಿ ದಿಕ್ಕೊಂದನ್ನೇ ಲೆಕ್ಕ ಹಾಕಿಕೊಂಡು ಹೋಗಬೇಕು. ಚಾರಣದ ಮೊದಲಲ್ಲಿ ದೂರದಲ್ಲಿ ಸಣ್ಣದಾಗಿ ಕಾಣುವ ಜಲಪಾತದ ದಿಕ್ಕು ಹಿಡಿದು ಚಾರಣ ಮಾಡಬೇಕು. ದಾರಿಯೂ ಸೀದ ಹೋಗುವುದಿಲ್ಲ. ಬಲಕ್ಕೆ ಬಳಸಿಕೊಂಡು ಹೋಗುತ್ತದೆ. ಕಾಡಿಗೆ ನುಗ್ಗಿದ ನಂತರ ಚಾರಣದ ಅಂತ್ಯ ಸಮೀಪಿಸುವ ತನಕ ಜಲಪಾತ ಕಾಣಿಸುವುದಿಲ್ಲ. ಆಮೇಲೂ ಎಲ್ಲೋ ಮರಗಳ ಸಂದಿಯಲ್ಲಿ ಗಮನಿಸಿ ನೋಡಿದರೆ ಮಾತ್ರ ಕಾಣಿಸುತ್ತದೆ. ಜಲಪಾತ ಬಹಳ ದೊಡ್ದದಾದರೂ ಆಶ್ಚರ್ಯಕರವಾಗಿ ಸದ್ದೇ ಇಲ್ಲ!&lt;br /&gt;&lt;br /&gt;ಹೇಗೋ ಮಾಡಿ ತೋಚಿದಲ್ಲೆಲ್ಲಾ ನುಗ್ಗಿ ಹೋಗುತ್ತಿರುವಾಗ ಜಲಪಾತ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಒಂದು ಕಡೆ ಕಾಣಿಸಿತು. ಆದರೆ ಅತ್ತ ದಾರಿ ಮಾತ್ರ ಇರಲೇ ಇಲ್ಲ. ತೋಚಿದ ದಾರಿಯಲ್ಲಿ ಜಲಪಾತದತ್ತ ಹೋಗಲು ಪ್ರಯತ್ನಿಸಿದೆವು. ಕೊನೆಗೆ ಜಲಪಾತ ತೀರ ಹತ್ತಿರ ಇದೆ ಎಂದು ಗೊತ್ತಿದ್ದರೂ ಅಲ್ಲಿಗೆ ಹೇಗೆ ಹೋಗುವುದು ಎಂದು ಗೊತ್ತಾಗದೇ ಒಂದಷ್ಟು ಬಂಡೆಕಲ್ಲುಗಳ ರಾಶಿಯಲ್ಲಿ ಸುಸ್ತಾಗಿ ಕುಳಿತುಬಿಟ್ಟೆವು. ಹತ್ತು ನಿಮಿಷ ವಿಶ್ರಾಂತಿಯ ನಂತರ ದೀರ್ಘವಾಗಿ ಯೋಚಿಸಿ ಇಬ್ಬರಿಗೂ ಸೂಕ್ತ ಎನ್ನಿಸಿದ ಒಂದು ದಾರಿ ಗುರುತಿಸಿದೆವು. ಮಳೆಗಾಲದಲ್ಲಿ ಹೊಳೆಯೊಂದರ ದಾರಿಯಂತಿದ್ದ ನಾವು ಕೂತಿದ್ದ ಬಂಡೆಗಲ್ಲುಗಳ ರಾಶಿಯ ಮೇಲೇ ಮುಂದೆ ಹೋದರೆ ಒಂದು ಹಳ್ಳಕ್ಕೆ ಇಳಿದು ಮತ್ತೆ ಆ ಹಳ್ಳದಿಂದ ಬಲಕ್ಕೆ ಮೇಲೆ ಹತ್ತುವುದು ಎಂಬುದು ನಮ್ಮ ಲೆಕ್ಕವಾಗಿತ್ತು. ಆದರೆ ಆ ಹಳ್ಳಕ್ಕೆ ಇಳಿಯುವುದೇನೋ ಇಳಿದುಬಿಟ್ಟೆವು. ಹತ್ತುವುದು ಎಲ್ಲಿಂದ ಎಂದು ಮಾತ್ರ ಗೊತ್ತಾಗಲಿಲ್ಲ. ಸ್ವಲ್ಪ ಹತ್ತಿದರೆ ಜಲಪಾತವೇನೋ ಕಾಣುತ್ತಿದೆ, ಆದರೆ ಮುಂದೆ ದಾರಿ ಇಲ್ಲ! ನಾವು ಮುಂಚೆ ಯೋಚಿಸಿದ ಜಾಗದಲ್ಲೇ ಹಳ್ಳದಿಂದ ಮೇಲೆ ಹತ್ತಿ ಎರಡು ನಿಮಿಷ ನಡೆದ ನಂತರ ಹೊಳೆಯೊಂದು ಸಿಕ್ಕಿತು. ಬಾಯಾರಿ ಬಳಲಿ ಹೋಗಿದ್ದ ನಾವು ಹೊಟ್ಟೆ ತುಂಬ ನೀರು ಕುಡಿದಮೇಲೆ ಸ್ವಲ್ಪ ಚೈತನ್ಯ ಬಂತು.&lt;br /&gt;&lt;br /&gt;ಜಲಪಾತ ಕಾಣುತ್ತಿದೆ, ಹೊಳೆ ಜಲಪಾತದಿಂದಲೇ ಬರುತ್ತಿರುವುದು ಎಂದೂ ಗೊತ್ತು; ಆದರೆ ಜಲಪಾತಕ್ಕೆ ದಾರಿ ಮಾತ್ರ ತಿಳಿಯುತ್ತಿಲ್ಲ! ಒಂದಷ್ಟು ಹುಡುಕಾಟದ ನಂತರ ಅರುಣನಿಗೆ ಬೇರೆ ದಾರಿ ಸಿಕ್ಕಿತು. ಹೊಳೆಯ ಬದಿಯಲ್ಲಿ ಸ್ವಲ್ಪ ಹಿಂದೆ ಹೋಗಿ ಅಲ್ಲಿಂದ ಹೊಳೆಯ ಹಾದಿಯಲ್ಲೇ ಜಲಪಾತಕ್ಕೆ ಹೋಗಬಹುದು ಎಂದು ಲೆಕ್ಕ ಹಾಕಿದೆವು. ಆ ದಾರಿಯಲ್ಲಿ ಜಲಪಾತಕ್ಕೆ ಬಹಳ ಹತ್ತಿರವೇನೋ ಹೋದೆವು. ಆದರೆ ಮತ್ತೊಂದು ನೂರು ಮೀಟರ್ ಉಳಿದಿದೆ ಎನ್ನುವಾಗ ಮುಳ್ಳಿನ ಪೊದೆಯೊಂದನ್ನು ದಾಟಲು ತೋಚದೇ ಸ್ವಲ್ಪ ದೂರದಿಂದಲೇ ಜಲಪಾತ ನೋಡಿ ತೃಪ್ತಿಪಟ್ಟುಕೊಳ್ಳಬೇಕಾಯಿತು.&lt;br /&gt;&lt;br /&gt;ಹೋಗುವಾಗಲೇ ಬಹಳ ಕಷ್ಟ ಪಟ್ಟು ದಾರಿ ಮಾಡಿಕೊಂಡು ಹೋಗಿದ್ದೆವು. ಆದರೆ ಜಲಪಾತದ ದಿಕ್ಕು ಗೊತ್ತಿತ್ತು. ಚಾರಣದ ಕೊನೆಯ ಹಂತದಲ್ಲಾದರೂ ಜಲಪಾತ ಅಲ್ಲಲ್ಲಿ ಕಾಣುತ್ತಿತ್ತು. ಹಿಂದಿರುಗುವಾಗ ಅದಾವುದೂ ಇಲ್ಲ. ನಾವು ಕೊನೆಗೆ ಹೊಳೆಗೆ ಎಲ್ಲಿ ಇಳಿದೆವು ಎಂಬುದನ್ನೇ ಗಮನಿಸಿರಲಿಲ್ಲ. ಈಗ ನಾನು ಒಂದಷ್ಟು ಕಡೆ ನೋಡಿದ್ದಾಯಿತು, ಅರುಣ್ ಒಂದಷ್ಟು ಕಡೆ ನೋಡಿದ್ದಾಯಿತು. ಯಾವ ದಾರಿಯೂ ನಾವು ಬಂದ ದಾರಿಯಂತಿರಲಿಲ್ಲ. ಆದರೂ ಎಲ್ಲವೂ ಒಂದೇ ರೀತಿ ಕಾಣುತ್ತಿದೆ! ನಾನು "ಸ್ವಲ್ಪ ಹೊಳೆಯ ದಾರಿಯಲ್ಲೇ ಹೋದರೆ ಎತ್ತರದ ಬಂಡೆ ರಾಶಿ ಸಿಗತ್ತೆ, ಅಲ್ಲಿಂದ ನಂಗೆ ರೂಟ್ ಗೊತ್ತಾಗತ್ತೆ" ಎಂದೆ. ಅಷ್ಟರಲ್ಲಿ ಅರುಣ ನಾವು ಬರುವಾಗ ಕಂಡ ಒಂದು ಅಂಗೈ ಅಗಲದಷ್ಟು ದೊಡ್ಡ ಜೇಡವನ್ನೂ, ಐದಾರು ಅಡಿ ಅಗಲವಿದ್ದ ಅದರ ಬಲೆಯನ್ನೂ ನೋಡಿದ ಸ್ಥಳ ಹುಡುಕೋಣ ಎಂದ. ಆ ಜಾಗ ಸಿಗದಿದ್ದರೂ ಒಂದು ದೊಡ್ಡ ಮರ ನೋಡಿ "ಈ ಮರದ ಪಕ್ಕಾನೇ ನಾವು ಇಳಿದಿದ್ದು" ಎಂದು ಅಲ್ಲಿ ಹತ್ತಲು ಶುರು ಮಾಡಿದ. ನನಗೆ ಅದು ದಾರಿಯಲ್ಲ ಎನ್ನಿಸುತ್ತಿತ್ತು. "ಸ್ವಲ್ಪ ಮುಂದೆ ಹೋದರೆ ಬಂಡೆಗಳ ರಾಶಿಯಿಂದ ನನಗೆ ದಾರಿ ಖಚಿತವಾಗಿ ಗೊತ್ತಾಗತ್ತಲ್ಲ... ಇಲ್ಲೆಲ್ಲಾ ಯಾಕೋ ನುಗ್ತೀಯಾ? ಇದೇ ರೂಟು ಅಂತ ಗ್ಯಾರಂಟೀ ನಾ?" ಎಂದು ಕೇಳಿದೆ. "ಹೌದು" ಎಂದ. ಸರಿ ಎಂದು ಅವನ ಹಿಂದೆ ಹೊರಟೆ. ನಾವು ಹೊಳೆಗೆ ಇಳಿದ ಸ್ಥಳದಲ್ಲೇ ಹತ್ತಿದೆವೋ ಇಲ್ಲವೋ ಗೊತ್ತಿಲ್ಲ; ಆದರೆ ನಾವು ಬಂದ ದಾರಿ ಮಾತ್ರ ಸಿಕ್ಕಿತು.&lt;br /&gt;&lt;br /&gt;ನಾವು ಬಂದ ದಾರಿಯಲ್ಲೇ ವಾಪಸ್ ಹೋದರೂ ದಾರಿ ತಪ್ಪದೇ ಸರಿಯಾಗಿ ಹೋಗುತ್ತೀವಿ ಎಂಬ ನಂಬಿಕೆ ನಮಗಿರಲಿಲ್ಲ. ಅಂಥ ದಟ್ಟ ಕಾಡದು. ಆ ಸ್ಥಿತಿಯಲ್ಲೂ ಒಂದು ದುಸ್ಸಾಹಕ್ಕೆ ಕೈ ಹಾಕಿಬಿಟ್ಟೆವು.&lt;br /&gt;&lt;br /&gt;ಬರುವಾಗ, ಕಲ್ಲು ಬಂಡೆಗಳ ಮೇಲೆ ವಿಶ್ರಾಂತಿ ತೆಗೆದುಕೊಂಡಾಗ ಎದುರು ಕಾಣುತ್ತಿದ್ದ ಹಳ್ಳವೊಂದನ್ನು ತೋರಿಸಿ "ನಾವು ಬಲಗಡೆಯಿಂದ ಬಳಸಿಕೊಂಡು ಬರುವ ಬದಲು ಆ ಹಳ್ಳಕ್ಕೆ ಇಳಿದಿದ್ದರೆ ಇಷ್ಟು ಕಷ್ಟ ಆಗ್ತಿರ್ಲಿಲ್ವೇನೋ... ನಾವು ಸುಮ್ಮನೆ ಸುತ್ತಿ ಬಂದಿದ್ದೀವಿ ಅನ್ಸತ್ತೆ" ಎಂದು ಹೇಳಿದ್ದೆ. ನಾನು ಹಾಗೆ ಹೇಳಲು ಕಾರಣವಿತ್ತು. ಯಾವ ಮನುಷ್ಯನೂ 'ದಾರಿ' ಎಂದು ಕರೆಯಲಾಗದಂಥ ದಾರಿಯಲ್ಲಿ ನಾವು ಬಂದದ್ದು. ದಾರಿ ಬೇರೆ ಇರಬೇಕು ಎಂದು ಸಂಶಯ ಬರುವುದು ಅಲ್ಲಿನ ಪರಿಸ್ಥಿತಿಯಲ್ಲಿ ಆಶ್ಚರ್ಯವೇನಲ್ಲ. ಅರುಣ್ ಅದೇ ಗುಂಗಿನಲ್ಲೇ ಯೋಚಿಸುತ್ತಾ ಮುಂದೊಂದು ಕಡೆ "ನೋಡು, ಈ ಮರದ ಪಕ್ಕ ಹೊರಟುಬಿಟ್ಟರೆ ನೀನು ಹೇಳಿದ ಹಳ್ಳದ ಕಡೆ ಹೋಗ್ತೀವಿ. ಇದೇ ಕರೆಕ್ಟ್ ರೂಟ್" ಎಂದ. ದಿಕ್ಕನ್ನು ಲೆಕ್ಕ ಹಾಕಿ ನಾನೂ ಹೌದೆಂದೆ. ನಾವು ಬಂದ ದಾರಿಗಿಂತ ಸುಲಭವಾದ, ಹತ್ತಿರದ ದಾರಿ ಸಿಗುತ್ತದೆ ಎಂಬ ದುರಾಸೆಯಿಂದ ಬಂದ ದಾರಿ ಬಿಟ್ಟು ಗೊತ್ತಿಲ್ಲದ ಮತ್ತೊಂದು ದಾರಿಯಲ್ಲಿ ಹೊರಟುಬಿಟ್ಟೆವು. ಆ ದಾರಿಯಲ್ಲಿ ಎಲ್ಲವೂ ಸರಿಯಾಗಿತ್ತು, ನಾವು ಇಳಿಯಬೇಕೆಂದಿದ್ದ ಹಳ್ಳ ಕಾಣುವ ವರೆಗೂ!&lt;br /&gt;&lt;br /&gt;ಹಳ್ಳ ಏನೋ ಕಾಣುತ್ತಿದೆ, ಆದರೆ ಇಳಿಯುವುದು ಹೇಗೆ? ಒಮ್ಮೆಗೇ ನೂರಡಿ ಪ್ರಪಾತ! ವಾಪಸ್ ಹೋಗಿ ಬಂದ ದಾರಿಯನ್ನೇ ಹಿಡಿಯೋಣ ಎಂದರೆ ನಾವು ಬಹಳ ಮುಂದೆ ಬಂದುಬಿಟ್ಟಿದ್ದೇವೆ. ಮತ್ತೆ, ಹೀಗೇ ಎಡಕ್ಕೆ ಹೋದರೆ ಬೇಗಲೇ ನಾವು ಬಂದ ದಾರಿ ಸಿಕ್ಕಬಹುದು ಎಂಬ ಆಲಸ್ಯ! ಹಾಗೇ ಎಡಕ್ಕೆ ಹೋಗಿ ನೋಡಿದರೆ ಅಲ್ಲಿ ದಾರಿಯಿಲ್ಲ! ವಿಪರೀತ ಜಾರಿಕೆ ಬೇರೆ. ಅರುಣ್ ಒಂದು ಗಟ್ಟಿಯಾದ ಗಿಡದ ಬಳ್ಳಿಯನ್ನು ಹಿಡಿದುಕೊಂಡೇ ಒಂದು ಬಹಳ ಇಳಿಜಾರಿನ ಪ್ರದೇಶದಲ್ಲಿ ಅಡ್ಡಕ್ಕೆ ಚಾರಣ ಮಾಡಿದ. ಅವನು ಅತ್ತ ಕಡೆ ಹೋದಮೇಲೆ ನನ್ನನ್ನೂ "ಆ ಬಳ್ಳಿ ಹಿಡ್ಕೊಂಡ್ಬಿಡು. ಏನೇ ಆದರೂ ಬಿಡಬೇಡ" ಎಂದು ಹೇಳಿದ. ನನಗೇನೋ ಅದು ಬಹಳ ಕಷ್ಟ, ಯಾವ ಕ್ಷಣದಲ್ಲಾದರೂ ಜಾರಿ ಬೀಳಬಹುದು ಎನ್ನಿಸಿತ್ತು. ಬಿದ್ದರೆ ಸೀದ ಪ್ರಪಾತದ ಕಡೆ ಉರುಳುತ್ತೀನಿ ಎಂದು ಗೊತ್ತಿತ್ತು. ಆದರೂ ಬೇರೆ ವಿಧಿ ಇರಲಿಲ್ಲ. ಹೇಗೋ ನಾನು ಆ ಜಾಗವನ್ನು ದಾಟಿ ಹೋಗಲೇ ಬೇಕಾಯಿತು. ಅವನು ಹೇಳಿದಂತೆಯೇ ಗಟ್ಟಿಯಾಗಿ ಬಳ್ಳಿ ಹಿಡಿದುಕೊಂಡು ದಾಟುತ್ತಿದ್ದೆ. ಪಕ್ಕದಲ್ಲಿ ಗಟ್ಟಿಯಾದ ಮತ್ತೊಂದು ಮರದ ಕೊಂಬೆ ಕಾಣಿಸಿತು. ಅದನ್ನು ಗಟ್ಟಿಯಾಗಿ ಎಳೆದು ನೋಡಿದೆ. ಮುರಿಯಲಿಲ್ಲ. ಧೈರ್ಯವಾಗಿ ಅದನ್ನು ಹಿಡಿದು ಇನ್ನೇನು ಆ ಕಡೆ ದಾಟಿಬಿಡಬೇಕು ಎನ್ನುವಷ್ಟರಲ್ಲಿ ಕೊಂಬೆ ಮುರಿಯಿತು! ಕೆಳಕ್ಕೆ ಜಾರಿದೆ! ಆದರೆ ಸಾಧ್ಯವಾದಷ್ಟು ಪಾದಗಳನ್ನು ಊರಿ ಇಳಿಜಾರಿನ ದಾರಿಯಲ್ಲಿದ್ದ ಸಣ್ಣ ಕಲ್ಲುಗಳನ್ನು ಹಿಡಿದು ಉರುಳುವುದರಿಂದ ತಪ್ಪಿಸಿಕೊಂಡೆ. ಆದರೂ ಹತ್ತು ಅಡಿ ಕೆಳಕ್ಕೆ ಜಾರಿಬಿಟ್ಟಿದ್ದೆ! ಈಗ ನಾನು ಜಾರದೇ ಇರುವುದೇ ಸಾಹಸವಾಗಿತ್ತು. ಅರುಣ್ ನನಗೆ ಸಹಾಯ ಮಾಡುವ ಸ್ಥಿತಿಯಲಿರಲಿಲ್ಲ. ಸಹಾಯಕ್ಕೆಂದು ಬಂದಿದ್ದರೆ ಅವನೂ ಜಾರಿ ಬೀಳುತ್ತಿದ್ದ ಅಷ್ಟೇ. ಹೇಗೋ, ಇದ್ದ ಸ್ಥಿತಿಯಲ್ಲೇ ಇದ್ದುದರಲ್ಲಿ ಗಟ್ಟಿಯಾದ ಕಲ್ಲುಗಳನ್ನು ಹಿಡಿದುಕೊಂಡು ಒಂದೆರಡು ಬಾರಿ ಕೊಂಚ ಜಾರಿಯೇ ಆ ಇಳಿಜಾರಿನ ಪ್ರದೇಶದಿಂದ ಮೇಲೆ ಬಂದೆ.&lt;br /&gt;&lt;br /&gt;ಈಗಲೇ ಸುಸ್ತಾಗಿ ಹೋಗಿದ್ದೆವು. ಇಳಿಜಾರು ಪ್ರದೇಶದಿಂದ ಆಚೆ ಬಂದಿದ್ದೆವು ನಿಜ. ಆದರೆ ದಾರಿ ಇನ್ನೂ ಸಿಕ್ಕಿರಲಿಲ್ಲ. ನಮಗೆ ಸರಿಯಾದ ದಿಕ್ಕು ಎನ್ನಿಸಿದ ಕಡೆಯೆಲ್ಲಾ ಇಳಿಯಲಾಗದಷ್ಟು ಇಳಿಜಾರು ಇತ್ತು. ಈ ಇಳಿಜಾರು ಪ್ರದೇಶದ ಸಹವಾಸವೇ ಬೇಡ ಎಂದು ಆ ಹಳ್ಳವನ್ನು ಬಳಸಿಕೊಂಡು ಹೊರಟೆವು. ಇಳಿಜಾರು ಬೇಡ ಎಂದು ಬಳಸು ದಾರಿಯಲ್ಲಿ ಹೊರಟರೆ ಅಲ್ಲಿ ಎತ್ತರಕ್ಕೆ ಹತ್ತಿ ಹತ್ತಿ ಸಾಕಾಯಿತು. ಈಗ ನಾವು ಕಾಡಿನಲ್ಲಿ ದಾರಿಗಾಣದೇ ಕಳೆದುಹೋಗಿ ಎರಡು ತಾಸಿಗೂ ಹೆಚ್ಚು ಸಮಯವಾಗಿತ್ತು. ಆದರೂ ಆ ಸೂರ್ಯಕಿರಣಗಳಿಗೇ ಅಭೇದ್ಯವಾದ ಕಾಡಿನಲ್ಲಿ ದಾರಿಯ ಸುಳಿವಿಲ್ಲ, ಬೆಳಕಿನ ಸೂಚನೆಯಿಲ್ಲ! ಹೊಳೆಯಿಂದ ಒಂದು ಬಾಟಲಿ ತುಂಬ ತುಂಬಿಸಿಕೊಂಡು ಬಂದಿದ್ದ ನೀರೆಲ್ಲಾ ಖಾಲಿಯಾಗಿತ್ತು. ನಾಲ್ಕು ಘಂಟೆಯ ಚಾರಣ ತಾನೆ ಎಂದು ತಿನ್ನಲಿಕ್ಕೂ ಸರಿಯಾಗಿ ಏನನ್ನೂ ತಂದಿರಲಿಲ್ಲ. ಮುಂದೆ ನಡೆದು ಹೋಗಲು ಶಕ್ತಿಯೂ ಇರಲಿಲ್ಲ. ಈಗ ನಾವಿದ್ದ ಕಡೆಯಲ್ಲಿ ಸುತ್ತಲೂ ಮುಳ್ಳಿನ ಪೊದೆಗಳು. ಅಲ್ಲಿಗೆ ಹೇಗೆ ಬಂದೆವು ಎಂದು ಗೊತ್ತಿಲ್ಲ. ಹೊರಹೋಗುವ ದಾರಿ ಹೇಗೆ ಎಂದೂ ಗೊತ್ತಿಲ್ಲ. ನಮ್ಮ ಬಲಬದಿಯಲ್ಲಿ ಈಗ ಹಳ್ಳ ಇರಲಿಲ್ಲ, ಆದರೆ ಮುಳ್ಳಿನ ಪೊದೆ ಇತ್ತಲ್ಲ!&lt;br /&gt;&lt;br /&gt;ಮೋಡ ಹಾಕಿಕೊಳ್ಳುತ್ತಿತ್ತು ಎನ್ನಿಸುತ್ತದೆ. ಇದ್ದ ಅಲ್ಪ-ಸ್ವಲ್ಪ ಬೆಳಕೂ ಕಡಿಮೆಯಾಗುತ್ತಾ ಬರುತ್ತಿತ್ತು. ಸಮಯವೇನೋ ಸಂಜೆ ನಾಲ್ಕು ಘಂಟೆ ಸಮೀಪಿಸುತ್ತಿತ್ತಷ್ಟೇ. ಆದರೆ ಅಲ್ಲಿ ಸಂಜೆ ಆರು ಘಂಟೆಯ ನಂತರ ಚಾರಣ ಮಾಡುವುದು ಅಸಾಧ್ಯ ಎಂದು ನಮಗೆ ಚೆನ್ನಾಗಿ ಗೊತ್ತಿತ್ತು. ಈಗ ನಮಗೆ ಇನ್ನೊಂದು ಘಂಟೆಯಲ್ಲಿ ದಾರಿ ಸಿಗದೇ ಹೋದರೆ ಏನು ಮಾಡಬೇಕು ಎಂಬುದನ್ನು ಅರುಣ್ ಚರ್ಚಿಸಲು ಶುರು ಮಾಡಿದ. ಊಟ-ತಿಂಡಿ, ನೀರು - ಏನೂ ಇರಲಿಲ್ಲ. ಹೆಚ್ಚೆಂದರೆ ಜಿಗಣೆಗಳಿಲ್ಲದ ಒಂದು ಜಾಗ ಹುಡುಕಬಹುದಾಗಿತ್ತು ಅಷ್ಟೇ. ತಿನ್ನಲು ಒಂದು ದೊಡ್ಡ ಚಾಕಲೇಟ್ ಕೊಟ್ಟು "ಚಾಕಲೇಟನ್ನು ಒಂದು ದಿನದ ಆಹಾರ ಅಂತಾರೆ. ಇದನ್ನು ತಿಂದು ಒಂದು ದಿನ ಆರಾಮಾಗಿ ಸರ್ವೈವ್ ಆಗ್ಬೋದು" ಅಂತ ಅರುಣ್ ನನಗೆ ಉಪದೇಶ ಮಾಡಿದ. ನಾನು ಅದೇ ಸಮಯದಲ್ಲಿ "ತಲೆ ಕೆಡಿಸಿಕೊಳ್ಳೋದು ಬೇಡ. ನನ್ನ ಪಾಲಿಸಿ ಇಷ್ಟೇ - ಯಾರು ನಮ್ಮನ್ನು ಇಲ್ಲಿ ಕರೆತಂದನೋ, ಅವನೇ ನಮ್ಮನ್ನು ಇಲ್ಲಿಂದ ಪಾರು ಮಾಡುತ್ತಾನೆ. ಈಗ ನಮ್ಮ ಕೆಲಸ ನಾವು ಕೈಲಾದಷ್ಟು ಮಾಡೋಣ ಅಷ್ಟೇ - ದಾರಿ ಹುಡುಕೋದು" ಎಂಬ ಉಪದೇಶ ಮಾಡುತ್ತಿದ್ದೆ. ನನಗೆ ಅವನ ಉಪದೇಶವೂ, ಅವನಿಗೆ ನನ್ನ ಉಪದೇಶವೂ ಬೇಡವಾಗಿತ್ತು. ಚಾಕಲೇಟ್ ತಿಂದು ಹತ್ತು ನಿಮಿಷ ಎಲ್ಲವನ್ನೂ ಮರೆತು ಬೇರಾವುದೋ ವಿಷಯ ಚರ್ಚಿಸಿಕೊಂಡು ಕೂತುಬಿಟ್ಟೆವು. ನಂತರ "ಈಗ ಯಾವ ಕಡೆ ಹೋಗಬೇಕೆಂದು ಏನಾದರೂ ಒಂದು ನಿರ್ಧಾರ ತೆಗೆದುಕೊಳ್ಳಬೇಕು, ಹೀಗೇ ಕೂತರಾಗಲ್ಲ" ಎಂದು ಮಾತಾಡಿಕೊಂಡು ಕಷ್ಟ ಪಟ್ಟು ಆ ಮುಳ್ಳಿನ ಪೊದೆಗಳಿಂದ ಬಿಡಿಸಿಕೊಂಡು ಹೊರಬಂದೆವು. ನಾನು ನಾವಿದ್ದ ಜಾಗದಿಂದ ಕೆಳಭಾಗದಲ್ಲಿ ಏನಾದರೂ ದಾರಿಯ ಸುಳಿವು ಸಿಗಬಹುದೇ ಎಂದು ಹುಡುಕಿದೆ. ಅರುಣ್ ಸ್ವಲ್ಪ ಎತ್ತರಕ್ಕೆ ಹತ್ತಿ ನೋಡಲು ಹೋದ. ಇಬ್ಬರಿಗೂ ದಾರಿ ಸಿಗುತ್ತಿಲ್ಲ ಎಂಬುದನ್ನು ಬಿಟ್ಟು ಏನೂ ಗೊತ್ತಾಗಲಿಲ್ಲ. ಆದರೆ ಅಲ್ಲಿಯೇ ನಿಲ್ಲುವಂತಿಲ್ಲ. ಎಲ್ಲಾದರೂ ಹೋಗಬೇಕಲ್ಲ!&lt;br /&gt;&lt;br /&gt;ಅರುಣ್ ನಾನಿದ್ದ ಕಡೆ ಬಂದು "ಈಗ ನಂಗೇನೂ ಗೊತ್ತಾಗ್ತಿಲ್ಲ. ನೀನೇ ಹೇಳು ಎಲ್ಲಿಗ್ ಹೋಗಬೇಕು ಅಂತ. ನಂಗೆ ಸುಸ್ತಾಗಿದೆ. ನೀನು ಹೋಗೋಣ ಅಂದ ಕಡೆ ನಾನು ಬರ್ತೀನಿ. ಈಗ ನಿನ್ನ ಇಂಟ್ಯೂಶನ್ ಎಲ್ಲಿಗೆ ಹೋಗಬೇಕು ಅನ್ನತ್ತೆ ಹೇಳು" ಎಂದು ಹೇಳಿದ. ಅರುಣನಿಗೆ ಈ 'ಇಂಟ್ಯೂಶನ್' - ಎಂದರೆ ಮನಸ್ಸಿಗೆ ಥಟ್ ಎಂದು ಹೊಳೆಯುವ ವಿಚಾರಗಳ ಮೇಲೆ ಒಮ್ಮೊಮ್ಮೆ ಬಲವಾದ ನಂಬಿಕೆ ಇರುವುದನ್ನು ನಾನು ಗಮನಿಸಿದ್ದೇನೆ. ಒಮ್ಮೊಮ್ಮೆ, ಮನಸ್ಸಿಗೆ ಏನೋ ಒಂದು ಸರಿ ಎಂದು ತೋರುತ್ತದೆ. ಯಾವ ಕಾರಣಕ್ಕೆ ಎಂದು ಗೊತ್ತಾಗುವುದಿಲ್ಲ. ಆದರೆ ಸರಿ ಎಂದು ಮಾತ್ರ ಯಾಕೋ ತೋರುತ್ತದೆ. ಹಲವು ಬಾರಿ ಇಂಥಾ ಇಂಟೂಶನ್‍ಗಳು ಅದ್ಭುತ ಸಾಧಿಸಿಬಿಡುತ್ತವೆ.&lt;br /&gt;&lt;br /&gt;ನಾನಿದ್ದ ಜಾಗದಿಂದ ಎಲ್ಲಾ ದಿಕ್ಕಿನಲ್ಲೂ ಸ್ವಲ್ಪ ದೂರ ಕಣ್ಣು ಹಾಯಿಸಿದೆ. ನಾವು ಮೊದಲು ಹೋಗಬೇಕೆಂದುಕೊಂಡಿದ್ದ ದಿಕ್ಕಿನಲ್ಲಿ, ದೂರದಲ್ಲಿ, ಸ್ವಲ್ಪ ಬೆಳಕು ಬಿದ್ದು ಎದ್ದು ಕಾಣುತ್ತಿದ್ದ ತಿಳಿಹಸಿರ ಬಯಲು ಪ್ರದೇಶ ಕಾಣಿಸಿತು. ಆ ಪ್ರದೇಶ ನಾವು ಇದ್ದ ಜಾಗಕ್ಕಿಂತಲೂ ಕಡಿಮೆ ಎತ್ತರದಲ್ಲಿತ್ತು. ಆದರೆ ನನಗೆ ಎಷ್ಟೋ ಹೊತ್ತಿನಿಂದ ನಾವು ಅಗತ್ಯಕ್ಕಿಂತ ಬಹಳ ಎತ್ತರಕ್ಕೆ ಹತ್ತಿಬಿಟ್ಟಿದ್ದೇವೆ ಎನ್ನಿಸುತ್ತಲೇ ಇತ್ತು. ಈಗ ಕೆಳಪ್ರದೇಶದಲ್ಲಿ ಬೆಳಕು ಕಂಡ ಕೂಡಲೇ ಅತ್ತ ಬೆರಳು ಮಾಡಿ "ಅಲ್ಲಿಗೆ ಹೋಗೋಣ... ಈ ಕಾಡಿನಲ್ಲಿ ಏನೂ ಕಾಣಲ್ಲ... ಬಯಲಿಗೆ ಹೋದರೆ ಏನಾದರೂ ಗೊತ್ತಾಗಬಹುದು" ಎಂದೆ. ನನಗೂ ಖಚಿತವಾಗಿ ದಾರಿ ಗೊತ್ತಿರಲಿಲ್ಲ. ಆದರೂ ತೋಚಿದ್ದು ಹೇಳಿದೆ. ಅರುಣ್ ಮುಂದೆ ಹೊರಟ.&lt;br /&gt;&lt;br /&gt;ಅದೇ ಸಮಯದಲ್ಲಿ ಇದ್ದಕ್ಕಿದ್ದಂತೆ ನನಗೊಂದು ವಿಚಾರ ನೆನಪಾಯಿತು. ಬರುವಾಗ ದಾರಿಯಲ್ಲಿದ್ದ ಒಂದು ಬಂಡೆಯ ಅಡಿಯಲ್ಲಿ ಚಿಕ್ಕ ಗುಹೆಯಂತಿದ್ದ ವಿಪರೀತ ಒದ್ದೆ ಪ್ರದೇಶದಲ್ಲಿ ಚಿರತೆಯದ್ದಿರಬಹುದು ಎಂದು ಅರುಣ್ ಒಂದು ಪ್ರಾಣಿಯ ಹೆಜ್ಜೆ ಗುರುತನ್ನು ತೋರಿಸಿದ್ದ. ಅದನ್ನು ನೆನಪಿಸಿಕೊಂಡು "ಹೋಗುವಾಗ ಹಾಗೇ ನೀನು ತೋರಿಸಿದ ಆ ಪಗ್ ಮಾರ್ಕ್ಸ್ (ಹೆಜ್ಜೆ ಗುರುತು) ಎಲ್ಲಾದರೂ ಕಾಣತ್ತಾ ನೋಡು, ಅದೇನಾದ್ರೂ ಸಿಕ್ಕಿಬಿಟ್ಟರೆ ಅಲ್ಲಿಂದ ದಾರಿ ಹುಡುಕಬೋದು" ಎಂದು ಕೂಗಿ ಹೇಳಿದೆ. ತಕ್ಷಣ ಅರುಣ್ "ಒಂದು ಮರದ ಮೇಲೆ ಯಾವುದೋ ಪ್ರಾಣಿಯ ಲದ್ದಿ ನೋಡಿದ್ವಲ್ಲ... ಅದೂ ಸಿಗಬಹುದು" ಎಂದು ಹೇಳಿ ಮುಂದೆ ಹೊರಟ. ನಾನು ಅವನ ಹಿಂದೆ ಹೊರಟೆ. ಹತ್ತಾರು ಚದರ ಮೈಲಿಯ ಕಾಡು... ಸಾವಿರಾರು ಬಂಡೆಗಳು, ಲಕ್ಷಾಂತರ ಮರಗಳು! ಜೊತೆಗೆ ನಾವು ಎಲ್ಲಿದ್ದೇವೆ ಎಂದು ಗೊತ್ತಿಲ್ಲ! ಅಲ್ಲಿ ಯಾವುದೋ ಒಂದು ಬಂಡೆಯ ಕೆಳಗಿದ್ದ ಹೆಜ್ಜೆ ಗುರುತೋ, ಮರದ ಮೇಲಿನ ಲದ್ದಿಯೋ ಕಾಣಸಿಗಬಹುದು ಎಂಬ ಸಾಧ್ಯತೆಯೆಷ್ಟು? ಬಹುತೇಕ ಶೂನ್ಯವೆಂದೇ ಹೇಳಬೇಕಲ್ಲವೇ? ಆದರೂ ಆಶ್ಚರ್ಯ ಎಂದರೆ, ಇಂಥ ಲೆಕ್ಕವಿಲ್ಲದಷ್ಟು ಸಣ್ಣ ವಿಚಾರ ಬಲು ದೊಡ್ಡ ವಿಚಾರ ಎಂಬಂತೆ ಹೊಳೆದಿದೆ. ಇನ್ನೂ ಆಶ್ಚರ್ಯ ಎಂದರೆ, ಐವತ್ತು ಅಡಿ ನಡೆಯುವಷ್ಟರಲ್ಲಿ ಅರುಣ್ ಕೂಗಿ ಹೇಳುತ್ತಾನೆ "ಪಗ್ ಮಾರ್ಕ್ಸ್ ಸಿಕ್ತೋ!!!" ಅಂತ!!!!!&lt;br /&gt;&lt;br /&gt;ನನ್ನ ಬಾಯನ್ನು ನಾನೇ ನಂಬಲಾಗಲಿಲ್ಲ! ಅವನಿಗೂ ಏನು ಹೇಳಬೇಕು ತೋಚುತ್ತಿಲ್ಲ! ನಮ್ಮ ಅದೃಷ್ಟವನ್ನು ನಾವೇ ನಂಬಲಾಗುತ್ತಿಲ್ಲ! ಪಗ್ ಮಾರ್ಕ್ಸ್ ನೋಡಿ ದಿಗ್ಭ್ರಾಂತನಾಗಿ ಯೋಚಿಸುತ್ತಿರುವಾಗಲೇ "ಇದಿಕ್ಕೆ ಸ್ವಲ್ಪ ಹಿಂದೆನೇ ಇದ್ದಿದ್ದು ಲದ್ದಿ ಇದ್ದ ಮರ... ಬೇಗ ಬಾ ಹೋಗೋಣ" ಎಂದು ಮುಂದೆ ಅರುಣ ಮುಂದೆ ಹೋಗುತ್ತಾನೆ. ಆ ಮರವೂ ಸಿಕ್ಕಿಬಿಡುತ್ತದೆ! ಮೂರು ಘಂಟೆಗಳ ಕಾಲ ಮನಸ್ಸಿಗೆ ಬಂದ ಇಂಟ್ಯೂಶನ್ ಎಲ್ಲಾ ಕಾಡಿನಲ್ಲಿ ನಮ್ಮನ್ನು ಅಲೆಸುವ ಕೆಲಸ ಮಾಡಿದವಷ್ಟೇ. ಈಗ ಅದೇ ಇಂಟ್ಯೂಶನ್ ಹೇಗೆ ಕೆಲಸ ಮಾಡುತ್ತಿತ್ತೋ ಗೊತ್ತಿಲ್ಲ! ವಿಧಿಯಾಟಕ್ಕೆ ತಲೆಬಾಗಿ ಮನಸ್ಸನ್ನು ಹಗುರ ಮಾಡಿಕೊಂಡು ಒಂದಷ್ಟು ಹಾಸ್ಯ ಶುರು ಮಾಡಿದೆವು. "ನಾವೇನಾದರೂ ಇವತ್ತು ಕಳೆದುಹೋಗಿದ್ದರೆ..." ಎಂಬ ಅಂತೆ-ಕಂತೆ ಯೋಚನೆಗಳಿಗೆ ರೆಕ್ಕೆ-ಪುಕ್ಕ ಕಟ್ಟಿ ಹಾರಿಬಿಡುತ್ತಿದ್ದೆವು. ಏನೇನು ಯೋಚಿಸಿದೆವು ಎಂದು ಇಲ್ಲಿ ಬರೆಯುವುದಿಲ್ಲ. ಬರೆದರೆ ಓದಿದವರೆಲ್ಲಾ ನಮ್ಮಿಬ್ಬರ ಮನೆಗಳಿಗೂ ಹೋಗಿ ಎಲ್ಲಿ ವರದಿ ಒಪ್ಪಿಸಿಬಿಡುತ್ತಾರೋ ಎಂದು ಭಯ! ಈ ಕಥೆಗಳ ಮಧ್ಯೆಯೇ "ಅಣ್ಣಾ... ಕಥೆ ಸಾಕಣ್ಣ... ನಾವು ಬೈಕ್ ಹತ್ರ ಹೋದಮೇಲೆ ಇದೆಲ್ಲಾ ಮಾತಾಡೋಣ... ಇನ್ನೂ ನಾವು ಕಳೆದುಹೋಗಕ್ಕೆ ಚಾನ್ಸ್ ಇದೆ... ರೂಟ್ ಏನ್ ಸುಲಭ ಇಲ್ಲ... ಈಗ ನಡಿ ಮುಂದೆ" ಎಂದೆ.&lt;br /&gt;&lt;br /&gt;ಮತ್ತೆ ಇಂಟ್ಯೂಶನ್ ಕೆಲಸ ಮಾಡಿತು. ದಾರಿ ತಪ್ಪಿದೆವು! ಇಬ್ಬರೂ ಒಂದೊಂದು ಮುಳ್ಳಿನ ಪೊದೆಗಳಲ್ಲಿ ಒಬ್ಬರಿಗೊಬ್ಬರು ಕಾಣದಷ್ಟು ದೂರ ಸಿಕ್ಕಿಕೊಂಡು ಮುಳ್ಳಿನಿಂದ ಬಿಡಿಸಿಕೊಳ್ಳುವುದಕ್ಕೇ ಹತ್ತು ನಿಮಿಷ ತೆಗೆದುಕೊಂಡೆವು. ಆಮೇಲೆ, "ನೀನೆಲ್ಲಿದೀಯ? ನೀನೆಲ್ಲಿದೀಯ?" ಎಂದು ಕೇಳಿಕೊಂಡು ಇಬ್ಬರೂ ಒಂದು ಕಡೆ ಸೇರುವುದಕ್ಕೆ ಇನ್ನೊಂದು ಹತ್ತು ನಿಮಿಷ. ಮತ್ತೆ ನಾವು ಬಂದ ದಾರಿಯಲ್ಲೇ ಹಿಂದೆ ಹೋಗಿ ಸರಿಯಾಗಿ ದಾರಿ ಗುರುತಿಸೋಣ ಎಂದುಕೊಂಡು ಮತ್ತೆ ಬಂದೆವು. ಮತ್ತೆ ನಾನು ಸಿಕ್ಕಿಕೊಂಡ ಅದೇ ಮುಳ್ಳಿನ ಪೊದೆ ಸಿಕ್ಕಿತು. ಅದನ್ನು ದಾಟಿ ಸೀದ ಹೋಗಿದ್ದರೆ ದಾರಿ ಇತ್ತು. ಮುಂಚೆ ನಾನು ಪೊದೆಯಲ್ಲಿ ಸಿಕ್ಕಿಕೊಂಡರೆ ಆ ಪೊದೆಯನ್ನು ಅರುಣ್ ದಾಟಿ ಬಲಕ್ಕೆ ತಿರುಗಿ ಅಲ್ಲಿ ಮತ್ತೊಂದು ಪೊದೆಯಲ್ಲಿ ಸಿಕ್ಕಿಕೊಂಡಿದ್ದ. "ಎದುರಿಗಿದ್ದ ದಾರೀನೂ ಮಿಸ್ ಮಾಡ್ತೀವಲ್ಲೋ... ಏನಾಗಿದೆ ನಮ್ಗೆ?" ಎನ್ನುತ್ತಾ ಸರಿಯಾದ ದಾರಿ ಹಿಡಿದು ಹೊರಟೆವು. ಇನ್ನೊಂದು ಹದಿನೈದು ನಿಮಿಷ ನಡೆದಮೇಲೆ ಚಾರಣದ ಪ್ರಾರಂಭದಲ್ಲಿ ಸಿಕ್ಕಿದ ಸಣ್ಣ ತೊರೆ ಸಿಕ್ಕಿತು. ಅಲ್ಲಿ ಅರ್ಧ ಘಂಟೆ ನೀರು ಕುಡಿಯುವ ವಿರಾಮ! ಆಮೇಲೆ ಐದು ನಿಮಿಷ ನಡೆದು ಬೈಕು ನಿಲ್ಲಿಸಿದತ್ತ ಹೊರಟೆವು. ದಟ್ಟ ಕಾಡಿನಿಂದ ಆಚೆ ಬಂದದ್ದು ಆ ತೊರೆ ದಾಟಿದಮೇಲೇ!&lt;br /&gt;&lt;br /&gt;"ನಾಲ್ಕು ಘಂಟೆಯ ಚಾರಣ, ಸಣ್ಣದು" ಎಂದುಕೊಂಡು ಹೊರಟ ಚಾರಣದಲ್ಲಿ ಎಂತೆಂಥ ಅನುಭವಗಳು! ಆರೇಳು ಘಂಟೆಯ ಅನುಭವ ಅಷ್ಟೇ. ಅದರಲ್ಲಿ ದಾರಿಗಾಣದೇ ಅಲೆದದ್ದು ಮೂರು ಘಂಟೆಯಷ್ಟೇ. ಆದರೂ, ಆಗ ಮೂರು ಘಂಟೆ ಎಷ್ಟೋ ಹೊತ್ತಾದಂತೆ ಇತ್ತು. ಕಾಡಿನಲ್ಲಿ ಕಳೆದುಹೋಗುತ್ತಿರುವುದು ನಮ್ಮಿಬ್ಬರಿಗೆ ಇದು ಮೊದಲನೆಯ ಬಾರಿಯೇನಲ್ಲ. ಕೊನೆಯ ಸರ್ತಿಯೂ ಅಲ್ಲ ಎಂದು ನಂಬಿದ್ದೇನೆ. ಆದರೆ ಈ ಉತ್ಕೃಷ್ಟ ಅನುಭವವನ್ನು ನಾವಿಬ್ಬರೂ ಜೀವನಪರ್ಯಂತ ಮರೆಯುವುದಿಲ್ಲ ಎಂದು ಮಾತ್ರ ಖಚಿತವಾಗಿ ಹೇಳಬಲ್ಲೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-261697551500281966?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/261697551500281966/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=261697551500281966' title='10 Comments'/><link rel='edit' type='application/atom+xml' href='http://www.blogger.com/feeds/34886019/posts/default/261697551500281966'/><link rel='self' type='application/atom+xml' href='http://www.blogger.com/feeds/34886019/posts/default/261697551500281966'/><link rel='alternate' type='text/html' href='http://manasinaputagalanaduve.blogspot.com/2008/10/blog-post.html' title='ಕುಡುಮರಿಯ ದಾರಿಯಲ್ಲಿ...'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>10</thr:total></entry><entry><id>tag:blogger.com,1999:blog-34886019.post-2545750747040360886</id><published>2008-09-20T17:34:00.004+05:30</published><updated>2008-09-24T21:43:23.649+05:30</updated><title type='text'>ವಸುಧೈವ ಕುಟುಂಬಕಮ್</title><content type='html'>&lt;div style="text-align: justify;"&gt;"ಎಂ. ಟಿ. ಸ್ಟೋಲ್ಟ್ ವೇಲರ್" ಎಂಬ ಹಡಗನ್ನು ಸೊಮಾಲಿಯಾ ಮೂಲದವರಾದ ಕೆಲವರು ಅಪಹರಿಸಿದ್ದಾರೆ. ಅದರಲ್ಲಿ ಪ್ರಯಾಣಿಸುತ್ತಿರುವ ೧೮ ಜನ ಭಾರತೀಯರು ಸುರಕ್ಷಿತವಾಗಿದ್ದಾರೆ. ಡೆಹ್ರಾಡುನ್ ಮೂಲದವರಾದ ಹಡಗಿನ 'ಮಾಸ್ಟರ್' ಪಿ. ಕೆ. ಗೋಯಲ್ ತಮ್ಮ ಮನೆಗೆ ಕರೆ ಮಾಡಿ ತಾನು ಸುರಕ್ಷಿತವಾಗಿರುವುದನ್ನು ತಿಳಿಸಿದ್ದಾರೆ.&lt;br /&gt;&lt;br /&gt;ಭಾರತೀಯ ವಾರ್ತಾಪತ್ರಿಕೆಗಳು ಇತ್ತೀಚೆಗೆ ಪ್ರಕಟಿಸಿರುವ ವರದಿ ಇದು. ೧೮ ಜನ ಭಾರತೀಯರು ಸುರಕ್ಷಿತವಾಗಿರುವ ವರದಿಗಳು ಓದಿ ಸ್ವಲ್ಪ ಸಮಾಧಾನ ಆಗುತ್ತದಾದರೂ ಹಡಗನ್ನು ಅಪಹರಿಸಿರುವುದು ದುರದೃಷ್ಟಕರ.&lt;br /&gt;&lt;br /&gt;"ಈ ಊರಿನಿಂದ ಈ ಊರಿಗೆ ಹೋಗುತ್ತಿದ್ದ ವಿಮಾನ ಅಪಹರಿಸಲ್ಪಟ್ಟಿದೆ" ಎಂದೋ ಅಥವಾ "ಈ ಊರಿನಿಂದ ಈ ಊರಿಗೆ ಹೋಗುತ್ತಿದ್ದ ವಿಮಾನಕ್ಕೆ ಅಪಘಾತವಾಗಿದೆ" ಎಂದೋ ಎಷ್ಟೋ ಬಾರಿ ವರದಿಗಳನ್ನು ನೋಡಿದ್ದೀವಿ. ರೈಲಿನ ಅಪಘಾತಗಳ ಸುದ್ದಿ ಕೇಳಿದ್ದೀವಿ. ವಾರ್ತಾ ಪತ್ರಿಕೆಗಳು ಮತ್ತು ದೂರದರ್ಶನ ಚಾನಲ್ ಗಳು ಅದರಲ್ಲಿದ್ದ ಭಾರತೀಯರ/ಕರ್ನಾಟಕದವರ ಬಗ್ಗೆ ಸುದ್ದಿ ಸಂಗ್ರಹಿಸಿ ನಮ್ಮ ಮುಂದಿಡುತ್ತದೆ. ಆ ವಿಮಾನದಲ್ಲಿ/ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಮ್ಮವರು-ತಮ್ಮವರು ಸುರಕ್ಷಿತವಾಗಿರುವ ಖಚಿತ ಸಮಾಚಾರ ತಿಳಿದರೆ ನಮಗೆ ಚಿಂತೆ ಸ್ವಲ್ಪ ಕಡಿಮೆ; ಬಹಳ ಸಮಾಧಾನವೆಂದೇ ಹೇಳಬಹುದು.&lt;br /&gt;&lt;br /&gt;ಆದರೆ ಒಮ್ಮೆ ಯೋಚಿಸೋಣ. "ಎಂ. ಟಿ. ಸ್ಟೋಲ್ಟ್ ವೇಲರ್" ಹಡಗಿನಲ್ಲಿ ಪ್ರಯಾಣಿಸುತ್ತಿರುವುದು ೧೮ ಜನ ಭಾರತೀಯರು ಮಾತ್ರ ಅಲ್ಲ. ಬೇರೆ ದೇಶದ ಕೆಲವರೂ ಇದ್ದಾರೆ. ಅವರ ಬಗ್ಗೆ ಸುದ್ದಿಯನ್ನು ಯಾವ ಭಾರತೀಯ ದಿನಪತ್ರಿಕೆಯೂ ಪ್ರಕಟಿಸಿಲ್ಲ. "ಯಾಕೆ? ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವವರಿಲ್ಲವೇ? ಅವರಿಗೇನು ಅಪ್ಪ, ಅಮ್ಮ, ಹೆಂಡತಿ, ಮಕ್ಕಳು... ಯಾರೂ ಇಲ್ಲವೇ? ಅವರ ಬಗ್ಗೆ ಯಾಕೆ ಸುದ್ದಿಯಿಲ್ಲ?" ಎಂದು ಕೇಳಿದರೆ ವರದಿ ಪ್ರಕಟಿಸುವವರಿಂದ ನಮಗೆ ಸಿಗುವ ಉತ್ತರ "ನಮ್ಮ ದೇಶದವರ ಬಗ್ಗೆ ನಮಗೆ ಗೊತ್ತಾದರೆ ಸಾಕು ಕಣ್ರೀ. ಬೇರೆ ದೇಶದವರ ಬಗ್ಗೆ ಅವರ ದೇಶದವರು ವರದಿ ಮಾಡಿಕೊಳ್ಳಲಿ. ಅವರ ಬಗೆಗಿನ ಸುದ್ದಿ ನಮ್ಮ ದೇಶದ ಯಾರಿಗೂ ಬೇಡ. ಅದಕ್ಕೇ ಪ್ರಕಟಿಸಿಲ್ಲ". ಮುಂದೆ ಮಾತನಾಡುವಂತಿಲ್ಲ. ಯಾಕೆಂದರೆ ನಾವೂ ಹೀಗೇ! ಎಲ್ಲಿ ಅಪಘಾತವಾದರೂ, ಭೂಕಂಪವಾದರೂ, ಪ್ರವಾಹವಾದರೂ, ಸುನಾಮಿ ಬಂದರೂ "ನಮ್ಮವರಿಗೆ ಏನಾಯಿತು" ಎಂದು ಮಾತ್ರ ತಲೆ ಕೆಡಿಸಿಕೊಳ್ಳುತ್ತೇವೆ. ನಮ್ಮವರಲ್ಲದ ಸಹಸ್ರಾರು ಜನ ಸತ್ತರೂ, ನೂರಾರು ಜನಕ್ಕೆ ಗಾಯವಾದರೂ ಅದರ ಬಗ್ಗೆ ಹಲವರಿಗೆ ಬೇಸರವೂ ಇಲ್ಲ, ಆಸಕ್ತಿಯೂ ಇಲ್ಲ.&lt;br /&gt;&lt;br /&gt;ಮುಂದೆ ಓದುವಾಗ ವೇದಾಂತ ಕೊರೆಯುತ್ತಿದ್ದೀನಿ ಎನ್ನಿಸಿದರೆ ಕ್ಷಮಿಸಿ. ವೇದಾಂತದಲ್ಲಿ (ವೇದದ ಅಂತಸ್ಸತ್ವದಲ್ಲಿ) ನಾವು ಹೀರಬೇಕಾದ ನೀತಿಯ ರಸವಿದೆ. ಆ ರಸ ಸಿಗಲು ವೇದದ ಅಂತದ ತನಕ ಕೊರೆಯಲೇಬೇಕು.&lt;br /&gt;&lt;br /&gt;ರಾಮಾಯಣ ಓದುತ್ತೇವೆ. ಮಹಾಭಾರತ ಓದುತ್ತೇವೆ. ಭಗವದ್ಗೀತೆ ಓದುತ್ತೇವೆ. ಬ್ರಾಹ್ಮಣರು ಎಂದು ತಮ್ಮನ್ನು ತಾವು ಕರೆದುಕೊಳ್ಳುವವರು ವೇದಮಂತ್ರಗಳನ್ನು ಹೇಳುತ್ತಾರೆ. ಅಷ್ಟೆ ಯಾಕೆ? ಶಾಲೆಯಲ್ಲೂ ನಾವು ಅನೇಕ ವೇದಮಂತ್ರಗಳನ್ನು, ಪುರಾಣೋಕ್ತಿಗಳನ್ನು ಪ್ರಾರ್ಥನೆಯಾಗಿ ಹೇಳಿದ್ದುಂಟು. ಇದನ್ನೆಲ್ಲಾ ಮಾಡುವವರಲ್ಲಿ ಹೆಚ್ಚಿನವರು ಎರಡು ಪೈಕಿಗೆ ಸೇರುತ್ತಾರೆ. "ಈ ವೇದ, ಮಹಾಭಾರತ, ಗೀತೆ, ರಾಮಾಯಣ ಎಲ್ಲವೂ ಕಟ್ಟುಕಥೆಗಳು. ಯಾವನೋ ವ್ಯಾಸ ಅಂತೆ, ವಾಲ್ಮೀಕಿ ಅಂತೆ. ಬೇರೆ ಕೆಲಸ ಇರ್ಲಿಲ್ಲ ಅಂತ ಕಾಣತ್ತೆ. ಸಾವಿರಗಟ್ಟಲೆ ಶ್ಲೋಕ ಬರೆದುಬಿಟ್ಟರು. ಅದನ್ನು ಮೂಢರು ಭಕ್ತಿಭಾವದಿಂದ ಕಂಡು ಕೆನ್ನೆ ತಟ್ಟಿಕೊಳ್ಳುತ್ತಾರೆ. ನಮಗೆ ಬುದ್ಧಿ ಇಲ್ವಾ? ಆ ಕಥೆಯಲ್ಲಿ ಇರೋದೆಲ್ಲಾ ಸಾಧ್ಯಾನಾ? ಎಲ್ಲಾ ಬರೀ ಸುಳ್ಳು" ಎನ್ನುವವರು ಒಂದು ಪೈಕಿ. ಮೊದಲನೆಯ ಪೈಕಿಯವರು ಹೇಳಿದಂತೆ ಆ ಗ್ರಂಥಗಳನ್ನು, ಶ್ಲೋಕಗಳನ್ನು ಓದಿ ಅಥವಾ ಕಥೆ ಕೇಳಿ ಮೂಢ ಭಕ್ತಿಭಾವದಿಂದ ಕೆನ್ನೆ ತಟ್ಟಿಕೊಳ್ಳುವವರು ಮತ್ತೊಂದು ಪೈಕಿ. ಮೂರನೆಯ ಪೈಕಿಯೂ ಇದೆ. ಬೆರಳೆಣಿಕೆಯಷ್ಟು ಜನ ವೇದಾಂತವನ್ನು ಸರಿಯಾಗಿ ತಿಳಿದು ಪ್ರಜ್ಞಾಪೂರ್ವಕ ಭಕ್ತಿಭಾವದಿಂದ ವೇದ-ಪುರಾಣಗಳನ್ನು ಕಾಣುವವರು ಅವರು. ಈ ಪೈಕಿಗೆ ನಾವು ಸೇರಬೇಕಾಗಿದೆ. ನಾನಂತೂ ಈ ನಿಟ್ಟಿನಲ್ಲಿ ಪ್ರಯತ್ನ ಪ್ರಾರಂಭಿಸಿದ್ದೇನೆ. ನನ್ನ ಜೊತೆಯಲ್ಲಿ ಎಲ್ಲರೂ ಬರಲಿ ಎಂದು ನನ್ನ ಆಶಯ.&lt;br /&gt;&lt;br /&gt;ನಮಗೆ ತಿಳಿಯುವ ಪ್ರಕಾರ ರಾಮಾಯಣ ಕನಿಷ್ಠ ಪಕ್ಷ ಸುಮಾರು ಹತ್ತು ಲಕ್ಷ ವರ್ಷಗಳ ಹಳೆಯ ಗ್ರಂಥ. ಮಹಾಭಾರತ ಐದು ಸಾವಿರ ಚಿಲ್ಲರೆ ವರ್ಷ ಹಳೆಯದು. ವೇದೋಪನಿಷತ್ತುಗಳು ಯಾವ ಕಾಲದಿಂದಿದೆ ಎಂದು ಯಾರಿಗೂ ಗೊತ್ತಿಲ್ಲ. ಬಹಳ ಹಳೆಯದು ಎಂದು ಮಾತ್ರ ಗೊತ್ತು. ಈ ಗ್ರಂಥಗಳೆಲ್ಲವೂ ತಮ್ಮ ರಚನೆಯ ಸಮಯದಿಂದಲೂ ಜನರಿಂದ ಮಾನ್ಯವಾಗಿದೆ ಎಂದೂ ನಮಗೆ ತಿಳಿಯುತ್ತದೆ. ಈಗ "ನಮಗೂ ಬುದ್ಧಿ ಇದೆ, ಇದೆಲ್ಲಾ ಬರೀ ಢೋಂಗಿ..." ಎನ್ನುವ ಕೆಲವರ ವಾದವೂ ಯೋಚಿಸಬೇಕಾದ್ದೇ. ಆದರೆ ಒಂದು ಪ್ರಶ್ನೆ. ಸಹಸ್ರಾರು ವರ್ಷಗಳಿಂದ ಈ ಗ್ರಂಥಗಳನ್ನೆಲ್ಲಾ ಪವಿತ್ರ ಗ್ರಂಥಗಳು ಎಂದು ಕರೆಯುತ್ತಿದ್ದ ನಮ್ಮ ಪೂರ್ವಜರಿಗೆ ಬುದ್ಧಿ ಇರಲಿಲ್ಲವೇ?&lt;br /&gt;&lt;br /&gt;ಭಗವದ್ಗೀತೆಯ ಮೊದಲನೆಯ ಅಧ್ಯಾಯದಲ್ಲಿ ಕೃಷ್ಣ ಮಾತಾಡುವುದೇ ಇಲ್ಲ. ಈಗ ಕೆಲವರು ಹೇಳುವಂತೆ ಭಗವದ್ಗೀತೆ ಎಂದರೆ "ಭಗವಂತನ ಗೀತೆ"; ಭಗವಂತನೇ ಆಡಿದ ಮಾತು ಎನ್ನುವ ಕಾರಣಕ್ಕೆ ಮಾತ್ರ ಭಗವದ್ಗೀತೆ ಮಾನ್ಯವಾಗಿದ್ದರೆ ಭಗವಂತನಾದ ಕೃಷ್ಣನ ಮಾತೇ ಇರದ ಮೊದಲನೆಯ ಅಧ್ಯಾಯ ಯಾಕೆ ಬೇಕು? "ಕೃಷ್ಣ ಎರಡನೆಯ ಅಧ್ಯಾಯದಲ್ಲಿ ಅರ್ಜುನನ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ. ಮೊದಲನೆಯ ಅಧ್ಯಾಯದಲ್ಲಿ ಪ್ರಶ್ನೆಗಳನ್ನೇ ಓದದಿದ್ದರೆ ಉತ್ತರಗಳು ಅರ್ಥವಾಗುವುದಾದರೂ ಹೇಗೆ? ಇದೆಂಥ ಪ್ರಶ್ನೆ!" ಎಂದು ಕೆಲವರು ಕೇಳಬಹುದು. ನಿಜ. ಪ್ರಶ್ನೆ ತಿಳಿಯದೇ ಉತ್ತರ ತಿಳಿದೂ ಪ್ರಯೋಜನವಿಲ್ಲ. ಆದರೆ ವ್ಯಾಸರು ಅರ್ಜುನನ ಮಾತುಗಳನ್ನು ಯಥಾವತ್ತಾಗಿ ಇರಿಸುವ ಬದಲು ಅದರ ಸಾರಾಂಶ ಹೇಳಿ ಕೃಷ್ಣನ ಉತ್ತರಗಳು ಬರೆದಿದ್ದರೆ ನಡೆಯುತ್ತಿತ್ತಲ್ಲ. ಅಲ್ಲಿ ಸಂಜಯನ ಮಾತು ಯಾಕೆ? ಧೃತರಾಷ್ಟ್ರನ ಮಾತು ಯಾಕೆ?&lt;br /&gt;&lt;br /&gt;ಭಗವದ್ಗೀತೆಯ ಮೊದಲನೆಯ ಅಧ್ಯಾಯದ ಕಥೆ ಸವಿಸ್ತಾರವಾಗಿರಲು ಹಲವು ಕಾರಣಗಳಿರುತ್ತದೆ. ಅದರಲ್ಲಿ ನನಗೆ ತಿಳಿದ, ಒಂದು ಮುಖ್ಯವಾದ ವಿಚಾರ ಎಂದರೆ ಅರ್ಜುನನ ಮನೋಭಾವ. "ನನ್ನವರನ್ನು ಎದುರು ಪಕ್ಷದಲ್ಲಿ ನೋಡಿ ಬೇಸರವಾಗುತ್ತಿದೆ", "ನಮ್ಮವರನ್ನೇ ಕೊಂದು ರಾಜ್ಯಭೋಗ ಮಾಡುವುದು ನನಗೆ ಶ್ರೇಯಸ್ಕರವಾಗಿ ಕಾಣುವುದಿಲ್ಲ", "ನನ್ನ ಅಜ್ಜ, ಗುರುಗಳು... ಇವರನ್ನೆಲ್ಲಾ ಕೊಲ್ಲಲು ನನ್ನಿಂದಾಗದು", "ಧೃತರಾಷ್ಟ್ರನ ಮಕ್ಕಳಾದ ನನ್ನ ಬಂಧುಗಳನ್ನು ಕೊಲ್ಲಬಾರದು", "ನಮ್ಮ ಕುಲ ನಾಶವಾಗುವುದರಿಂದ ನಮ್ಮ ಕುಲಧರ್ಮಗಳು ನಾಶವಾಗುತ್ತವೆ. ಅಧರ್ಮ ನಮ್ಮಲ್ಲಿ ಬಂದು ಸೇರುತ್ತದೆ. ನಮ್ಮ ಕುಲದ ಸ್ತ್ರೀಯರೆಲ್ಲಾ ನೀತಿಭ್ರಷ್ಟರಾಗುತ್ತಾರೆ. ಬೇಡದ ಸಂತಾನೋತ್ಪತ್ತಿಯಾಗುತ್ತದೆ. ನಾವು ಮಹಾ ಪಾಪ ಮಾಡಲು ಹೊರಟಿದ್ದೇವೆ. ನಮಗೆ ನರಕದಲ್ಲಿ ಅನಿಯತವಾದ ವಾಸ ಖಚಿತ" ಇತ್ಯಾದಿ ಮಾತುಗಳನ್ನೆಲ್ಲಾ ಅರ್ಜುನ ಆಡುತ್ತಾನೆ. ಆದರೆ ಕೃಷ್ಣ ಈ ಯಾವ ವಿಷಯಗಳ ಬಗ್ಗೆಯೂ ಮಾತನಾಡದೇ "ಹೇಡಿಯಂತೆ ಮಾತಾಡಬೇಡ. ನಿನ್ನ ಕ್ಷುದ್ರವಾದ ಹೃದಯದೌರ್ಬಲ್ಯವನ್ನು ಬಿಟ್ಟು ಎದ್ದೇಳು" ಎನ್ನುತ್ತಾನೆ.&lt;br /&gt;&lt;br /&gt;"ಅರ್ಜುನ ಯುದ್ಧ ಬೇಡ ಎಂದಾಗಲೂ ಕೃಷ್ಣನೇ ಅವನನ್ನು ಯುದ್ಧಕ್ಕೆ ಪ್ರಚೋದಿಸಿದ್ದು. ಕುರುಕ್ಷೇತ್ರದಲ್ಲಾದ ನರಮೇಧಕ್ಕೆ ಕೃಷ್ಣನೇ ಕಾರಣ. ಅಂಥವನನ್ನು ದೇವರು ಎನ್ನುವರನ್ನು ಮೂರ್ಖರು ಎನ್ನದೇ ಮತ್ತೇನು ಹೇಳಬೇಕು?" ಎಂದು ಹಲವರು ವಾದಿಸುತ್ತಾರೆ. ಆದರೆ, ಮಹಾಭಾರತದಲ್ಲಿ ಗೀತೋಪದೇಶದ ಕಥೆಯ ಸ್ವಲ್ಪ ಮುಂಚೆ, ಯುದ್ಧ ಶುರುವಾಗಲೂ ಮುಂಚೆ ಸ್ವತಃ ಕೃಷ್ಣನೇ ಕೌರವರ ಬಳಿ ಸಂಧಾನಕ್ಕೆ ಹೋಗಿ ಯುದ್ಧ ತಪ್ಪಿಸಲು ಪ್ರಯತ್ನ ಮಾಡಿದ ಎನ್ನುವುದನ್ನು ಅವರು ಗಮನಿಸುವುದಿಲ್ಲ. ಮೇಲಾಗಿ, ಈ ಸಂದರ್ಭದಲ್ಲಿ ಅರ್ಜುನ ಯುದ್ಧ ಬೇಡ ಎನ್ನಲು ಕಾರಣವೇನು? ತನ್ನವರು ಸಾಯುತ್ತಾರೆ (ತನ್ನ ಅಜ್ಜ ಭೀಷ್ಮ, ಗುರುಗಳಾದ ದ್ರೋಣ, ಬಾಂಧವರಾದ ಕೌರವರು, ಇತ್ಯಾದಿ), ತನ್ನ ಕುಲ ನಾಶವಾಗುತ್ತದೆ, ತನ್ನ ಕುಲದ ಸ್ತ್ರೀಯರು ಕೆಡುತ್ತಾರೆ, ಪಾಂಡವರಿಗೆ ಪಾಪ ಬರುತ್ತದೆ, ಪಾಂಡವರು ನರಕಕ್ಕೆ ಹೋಗಬೇಕಾಗುತ್ತದೆ... ಇಂಥದೇ ಕಾರಣಗಳು. ಪ್ರತಿಯೊಂದು ಕಾರಣದ ಹಿಂದೆಯೂ ತಾನು, ತನ್ನದು, ತನ್ನವರು ಎಂಬುದು ಎದ್ದು ಕಾಣುತ್ತದೆ. ತನ್ನ ಸ್ವಾರ್ಥಕ್ಕೆ ಅರ್ಜುನ ಯುದ್ಧ ಬೇಡವೆಂದ ಅಷ್ಟೇ. ಅಲ್ಲಿ ಸೇರಿದ್ದ ಹದಿನೆಂಟು ಅಕ್ಷೋಹಿಣಿ ಸೇನೆಯಲ್ಲಿ ನೂರು ಚಿಲ್ಲರೆ ಜನರಾದ ತನ್ನ ಬಾಂಧವರ ಹಿತಚಿಂತನೆ ಮಾತ್ರ ಮಾಡುವುದೇ? ಅದೂ ಪ್ರಜಾರಕ್ಷಕನಾಗಿರಬೇಕಾದ ರಾಜನ ಸ್ವಂತ ತಮ್ಮನಾಗಿ! ಉಳಿದ ಲಕ್ಷಗಟ್ಟಲೆ ಜನರ ಪಾಡು? ಅವರಿಗೇನು ದುಃಖಿಸುವ ಅಪ್ಪ-ಅಮ್ಮ ಇರಲಿಲ್ಲವೇ? ಹೆಂಡತಿ-ಮಕ್ಕಳಿರಲಿಲ್ಲವೆ? ಅವರ ಕುಲಸ್ತ್ರೀಯರಿಗೆ ಅನಾಹುತ ಕಾದಿರಲಿಲ್ಲವೇ? ಕುರುಕ್ಷೇತ್ರದ ಯುದ್ಧಕ್ಕೆ ಹಿಂದಿನ ಯಾವ ಯುದ್ಧದಲ್ಲೂ ಅರ್ಜುನನಿಗೆ ಅನುಕಂಪ ಬಂದು ಎದುರಾಳಿಯನ್ನು ಕೊಲ್ಲಬಾರದು ಎನ್ನಿಸಿರಲಿಲ್ಲ. ಯಾಕೆಂದರೆ ಎದುರಾಳಿಗಳು ತನ್ನವರಾಗಿರಲಿಲ್ಲ. ಹೀಗೆ ಸ್ವಾರ್ಥ ಮನೋಭಾವ ಪ್ರದರ್ಶಿಸಿದ್ದನ್ನೇ ಕೃಷ್ಣ 'ಕ್ಷುದ್ರ ಹೃದಯದೌರ್ಬಲ್ಯ' ಎಂದಿದ್ದು. ಎಲ್ಲರ ಹಿತ ಕೃಷ್ಣನಿಗೆ ಮುಖ್ಯವಾಗಿತ್ತು. ಯುದ್ಧ ನಿಲ್ಲಿಸಬಹುದಿತ್ತು. ಆದರೆ ಯುದ್ಧ ನಿಲ್ಲಿಸಿದ್ದರೆ ದುರ್ಯೋಧನನಿಗೆ ರಾಜ್ಯ ಬಿಟ್ಟುಕೊಡಬೇಕಾಗಿತ್ತು. ತನ್ನ ಅತ್ತಿಗೆಯ ಲೆಕ್ಕಕ್ಕೆ ಬರುವ ದ್ರೌಪದಿಯದ್ದೇ ಮಾನಭಂಗ ಮಾಡಿಸಿದ ಅವನ ಆಳ್ವಿಕೆಯಲ್ಲಿ ರಾಜ್ಯದ ಜನರಿಗೆ, ಅದರಲ್ಲೂ ವಿಶೇಷವಾಗಿ ಸ್ತ್ರೀಯರಿಗೆ ಸುಖ ಸಿಗುತ್ತಿತ್ತೇ?&lt;br /&gt;&lt;br /&gt;ಈಗ ಅರ್ಜುನ ಇಲ್ಲ. ಅವನ ಜಾಗದಲ್ಲಿ ನಾವೆಲ್ಲಾರೂ ಇದ್ದೇವೆ. ಯಾವ ಅನಾಹುತ ಆದರೂ, ಎಷ್ಟು ಜನ ಸತ್ತರೂ, ಏನೇನು ಆದರೂ ನಮ್ಮವರ ಹಿತದ ಬಗ್ಗೆ ಮಾತ್ರ ಚಿಂತಿಸುತ್ತೇವೆ. ನಮಗೆ ಪರಿಚಯವಿರದವರು ಏನಾದರೂ ನಮಗೆ ಚಿಂತೆಯಿಲ್ಲ. ಕೆಲವು ತಿಂಗಳುಗಳ ಹಿಂದೆ ಭಾರತದ ಒಂದು ಊರಿನಲ್ಲಿ ಯಾರಿಗೋ ಅಪಘಾತವಾಗಿ ನಡುರಸ್ತೆಯಲ್ಲಿ ಬಿದ್ದಿದ್ದರೆ ಒಬ್ಬರೂ ಸಹಾಯಕ್ಕೆ ಹೋಗದೇ ಕೆಲವರು ಮಾತ್ರ ಘಟನೆಯನ್ನು ನೋಡುತ್ತಾ ನಿಂತಿದ್ದರೆಂಬ ವರದಿ ದಿನಪತ್ರಿಕೆಗಳಲ್ಲಿ ಬಂದಿತ್ತು. ನಾವೂ ಬಿದ್ದಾಗಲೇ ನಮಗೆ ಬಿದ್ದವರ ಕಷ್ಟ ಗೊತ್ತಾಗುವುದು ಎನ್ನಿಸುತ್ತದೆ. ಸ್ವಾರ್ಥದ ಪರಮಾವಧಿ ಇದು. ಯಾವನೋ ಬಿದ್ದರೆ ನಮಗೇನಾಗಬೇಕೆಂಬ ಮನೋಭಾವ. ನಾವು ಅರ್ಜುನನಿಗಿಂತ ಸಹಸ್ರ ಪಟ್ಟು ಸ್ವಾರ್ಥವನ್ನು ಪ್ರದರ್ಶಿಸುತ್ತಿದ್ದೇವೆ. ನಮಗೆ ಕೃಷ್ಣನ ಮಾತು ಅನ್ವಯಿಸುವುದಿಲ್ಲವೇ? ಗೀತೆ ಕೇಳಿದ ತಕ್ಷಣ ಏನೋ ಅಮೂಲ್ಯವಾದುದರ ಸಾಕ್ಷಾತ್ಕಾರವಾದವರಂತೆ ಆಡಿದರೆ ಪ್ರಯೋಜನವಿಲ್ಲ. ಗೀತೆಯಲ್ಲಿರುವ ನೀತಿ ನಮ್ಮಿಂದ ಅನುಷ್ಠಾನಕ್ಕೆ ಬರಬೇಕು. ಆಗಲೇ ಸಮಾಜದ ಉದ್ಧಾರ. ಆಗಲೇ ದೇವರೂ ಮೆಚ್ಚುವುದು. "ಬೇರೆ ಚಿಂತೆ ಬಿಟ್ಟು ನನ್ನ ಉಪಾಸನೆಯನ್ನು ಯಾರು ಮಾಡುತ್ತಾರೋ ಅವರ ಯೋಗಕ್ಷೇಮದ ಹೊಣೆಯನ್ನು ನಾನು ಹೊರುತ್ತೇನೆ" ಎಂದು ಮತ್ತು "ಎಲ್ಲಾ ಧರ್ಮಗಳನ್ನು ಬಿಟ್ಟು ನನಗೆ ಶರಣಾಗು. ನಾನು ನಿನ್ನನ್ನು ಪಾಪಗಳಿಂದ ರಕ್ಷಿಸುತ್ತೇನೆ" ಎಂದೂ ಕೃಷ್ಣ ಹೇಳಿರುವುದು ನಿಜ. ಆದರೆ ಉಪಾಸನೆ ಎಂದರೇನು? ಶರಣು ಹೋಗುವುದು ಎಂದರೇನು? ಒಬ್ಬರಿಗೆ ಶರಣುಹೋಗಿ ಅವರ ಉಪಾಸನೆ ಮಾಡುವುದು ಎಂದರೆ ಅವರ ಆಜ್ಞೆಯನ್ನು ಶಿರಸಾ ವಹಿಸಿ ಪಾಲಿಸುವುದು. ಅವರು ಆಡಿದ ಮಾತುಗಳೆಲ್ಲಾ ಸತ್ಯ ಎಂದು ನಂಬುವುದು. ಇದೇ ಗೀತೆಯಲ್ಲಿ ಕೃಷ್ಣ "ನಾನು ವೈಶ್ವಾನರನಾಗಿ ಎಲ್ಲಾ ಪ್ರಾಣಿಗಳ ದೇಹದೊಳಗೆ ಇರುವವನು", "ಎಲ್ಲರ ಹೃದಯದಲ್ಲೂ ನಾನಿದ್ದೇನೆ", "ಈಶ್ವರನು ಎಲ್ಲ ಜೀವಿಗಳ ಹೃದಯದಲ್ಲೂ ಕುಳಿತಿರುತ್ತಾನೆ" ಎಂದೆಲ್ಲಾ ಹೇಳಿದ್ದಾನೆ. ಹಾಗಾಗಿ ಎಲ್ಲಾ ಜೀವಿಗಳನ್ನೂ ಗೌರವಿಸಿದರೆ ಮಾತ್ರ ನಾವು ಕೃಷ್ಣನಿಗೆ ಗೌರವಿಸುವಲ್ಲಿ ಅರ್ಥ. ಇಲ್ಲದಿದ್ದರೆ ಕೃಷ್ಣನಿಗೆ ಗೌರವಿಸುವಲ್ಲಿ ಅರ್ಥವಿಲ್ಲ ಮತ್ತು ಲೋಕದಲ್ಲೂ ಅನರ್ಥಕ್ಕೆ ನಾವು ಕಾರಣರಾಗುತ್ತೇವೆ. ಪ್ರತಿಯೊಬ್ಬ ಜೀವಿಯನ್ನೂ ಆ ಜೀವಿಯೊಳಗೆ ಈಶ್ವರನಿದ್ದಾನೆಂಬ ಕಾರಣಕ್ಕಾದರೂ ಗೌರವಿಸಿದರೆ ಇಂದು ಲೋಕದಲ್ಲಿ  ನಡೆಯುತ್ತಿರುವ ಹಿಂಸಾಚಾರ ನಿಲ್ಲುತ್ತದೆ. ಈಶ್ವರ ನಮ್ಮವನಾದರೆ ಎಲ್ಲ ಜೀವಿಗಳೂ ನಮ್ಮವರು. ಆಗ "ನಮ್ಮವರು ಚೆನ್ನಾಗಿರಲಿ" ಎಂದರೆ ಸಾಕು, ಏನೂ ತೊಂದರೆಯಿಲ್ಲ. ಯಾಕೆಂದರೆ ನಮ್ಮವರಲ್ಲದ ಬೇರೆಯವರು ಇರುವುದೇ ಇಲ್ಲ! "ಇಡೀ ಪ್ರಪಂಚವೇ ಒಂದು ಕುಟುಂಬ" (ವಸುಧೈವ ಕುಟುಂಬಕಮ್) ಎನ್ನುವ ಹಿತವಚನವೂ ಇದನ್ನೇ ಹೇಳುವುದು.&lt;br /&gt;&lt;br /&gt;ಹಿಂದಿನ ಕಾಲದಲ್ಲಿ, ಎಂದರೆ ವೇದದ ಕಾಲದಲ್ಲಿ ಯಾವ ಪ್ರಾರ್ಥನೆಯೂ "ನನಗೆ ಒಳ್ಳೆಯದಾಗಲಿ" ಎಂದು ಮಾಡುತ್ತಿರಲಿಲ್ಲ. "ನಮಗೆ/ಎಲ್ಲರಿಗೆ ಒಳ್ಳೆಯದಾಗಲಿ" ಎಂಬ ಪ್ರಾರ್ಥನೆಗಳು ಮಾತ್ರ ವೇದದಲ್ಲಿರುವುದು. ನಾವೂ ಅಂಥ ಹಲವು ಮಂತ್ರಗಳನ್ನು ಪ್ರಾರ್ಥನೆಯಾಗಿ ಹೇಳಿದ್ದೇವೆ, ಹೇಳುತ್ತಿರುತ್ತೇವೆ.&lt;br /&gt;&lt;br /&gt;&lt;div style="text-align: center;"&gt;&lt;span style="font-weight: bold;"&gt;ಸರ್ವೇಪಿ&lt;/span&gt;&lt;span style="font-weight: bold;"&gt; ಸುಖಿನಃ ಸನ್ತು | &lt;/span&gt;&lt;br /&gt;&lt;span style="font-weight: bold;"&gt;ಸರ್ವೇ&lt;/span&gt;&lt;span style="font-weight: bold;"&gt; ಸನ್ತು ನಿರಾಮಯಾಃ | &lt;/span&gt;&lt;br /&gt;&lt;span style="font-weight: bold;"&gt;ಸರ್ವೇ&lt;/span&gt;&lt;span style="font-weight: bold;"&gt; ಭದ್ರಾಣಿ ಪಶ್ಯಂತು | &lt;/span&gt;&lt;br /&gt;&lt;span style="font-weight: bold;"&gt;ಮಾ&lt;/span&gt;&lt;span style="font-weight: bold;"&gt; ಕಶ್ಚಿತ್ ದುಃಖಭಾಗ್ ಭವೇತ್ ||&lt;/span&gt;&lt;br /&gt;&lt;br /&gt;(&lt;span&gt;ಎಲ್ಲರೂ&lt;/span&gt; ಸುಖವಾಗಿರಲಿ. ಎಲ್ಲರೂ ಆರೋಗ್ಯವಂತರಾಗಿರಲಿ. ಎಲ್ಲರೂ ಒಳ್ಳೆಯದನ್ನೇ ನೋಡುವಂತಾಗಲಿ. ಯಾರಿಗೂ ದುಃಖ &lt;span&gt;ಬರದಿರಲಿ&lt;/span&gt;.)&lt;br /&gt;&lt;br /&gt;&lt;span style="font-weight: bold;"&gt;ಶಂ&lt;/span&gt;&lt;span style="font-weight: bold;"&gt; ನೋ ಅಸ್ತು ದ್ವಿಪದೇ ಶಂ ಚತುಷ್ಪದೇ |&lt;/span&gt;&lt;br /&gt;&lt;br /&gt;(&lt;span&gt;ನಾವು&lt;/span&gt; ಮನುಷ್ಯರಿಗೂ, ಪ್ರಾಣಿಗಳಿಗೂ ಒಳ್ಳೆಯದಾಗಲಿ.)&lt;br /&gt;&lt;br /&gt;&lt;span style="font-weight: bold;"&gt;ಸರ್ವೇಷಾಂ&lt;/span&gt;&lt;span style="font-weight: bold;"&gt; ಸ್ವಸ್ತಿರ್ಭವತು | &lt;/span&gt;&lt;br /&gt;&lt;span style="font-weight: bold;"&gt;ಸರ್ವೇಷಾಂ&lt;/span&gt;&lt;span style="font-weight: bold;"&gt; ಶಾಂತಿರ್ಭವತು | &lt;/span&gt;&lt;br /&gt;&lt;span style="font-weight: bold;"&gt;ಸರ್ವೇಷಾಂ&lt;/span&gt;&lt;span style="font-weight: bold;"&gt; ಪೂರ್ಣಂ ಭವತು | &lt;/span&gt;&lt;br /&gt;&lt;span style="font-weight: bold;"&gt;ಸರ್ವೇಷಾಂ ಮಂಗಲಂ ಭವತು ||&lt;/span&gt;&lt;br /&gt;&lt;br /&gt;(&lt;span&gt;ಎಲ್ಲರಿಗೂ&lt;/span&gt; ಒಳ್ಳೆಯದಾಗಲಿ. ಎಲ್ಲರಲ್ಲಿಯೂ ಶಾಂತಿ ಇರಲಿ. ಎಲ್ಲವೂ ಪೂರ್ಣವಾಗಲಿ. ಎಲ್ಲರಿಗೂ ಮಂಗಳವಾಗಿಲಿ.)&lt;br /&gt;&lt;/div&gt;&lt;br /&gt;ಇಂಥ ಲೋಕಹಿತದ ವಿಚಾರಗಳನ್ನು ತಿಳಿಸುವ ವಿದ್ಯೆ ಜೀರ್ಣಿಸಿಕೊಳ್ಳದೇ ಭಗವದ್ಗೀತೆ, ಮಹಾಭಾರತ ಮತ್ತು ವೇದದ ಪುಸ್ತಕಗಳಿಗೆ ಅರಶಿನ-ಕುಂಕುಮ ಹಚ್ಚಿ ಅಕ್ಷತೆ ಕಾಳು ಹಾಕುತ್ತೀವಿ. ಕೆಲವರಂತೂ ಇಂಥ ಪುಸ್ತಕಗಳನ್ನು ವರ್ಷವಿಡೀ ಚಿನ್ನ ಅಥವಾ ಬೆಳ್ಳಿಯ ಪೆಟ್ಟಿಗೆಯಲ್ಲಿ ಮುಚ್ಚಿಟ್ಟು ದಸರಾ ಹಬ್ಬದ ಸರಸ್ವತೀ ಪೂಜೆಗೆ ಮಾತ್ರ ತೆಗೆದು ಅದ್ದೂರಿಯಾಗಿ ಪೂಜೆ ಮಾಡಿ ಮತ್ತೆ ಪೆಟ್ಟೆಗೆಯಲ್ಲಿ ಭದ್ರವಾಗಿಡುತ್ತಾರೆ. ಏನು ಪ್ರಯೋಜನ? ಸಂಸ್ಕೃತದಲ್ಲಿ ಒಂದು ಸುಭಾಷಿತವಿದೆ -&lt;br /&gt;&lt;br /&gt;&lt;div style="text-align: center;"&gt;&lt;span style="font-weight: bold;"&gt;ಪುಸ್ತಕಸ್ಥಾ ತು ಯಾ ವಿದ್ಯಾ ಪರಹಸ್ತಗತಂ ಧನಮ್ |&lt;/span&gt;&lt;br /&gt;&lt;span style="font-weight: bold;"&gt;ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಮ್ ||&lt;/span&gt;&lt;br /&gt;&lt;/div&gt;&lt;br /&gt;"ಪುಸ್ತಕದಲ್ಲಿರುವ ವಿದ್ಯೆ ಮತ್ತು ಬೇರೆಯವರ ಬಳಿ ಇರುವ ಹಣ ನಮಗೆ ಬೇಕಾದ ಕಾಲದಲ್ಲಿ ವಿದ್ಯೆಯೂ ಅಲ್ಲ ಹಣವೂ ಅಲ್ಲ" ಎಂದು ಮೇಲಿನ ಸುಭಾಷಿತದ ಸಾರಾಂಶ.&lt;br /&gt;&lt;br /&gt;ನನಗೆ ಸಂಸ್ಕೃತದ ಜ್ಞಾನವಿಲ್ಲ. ಆದರೆ ತಿಳಿದವರು ಹೇಳಿದ್ದು ಕೇಳಿಯೋ ಅಥವಾ ಕನ್ನಡ/ಆಂಗ್ಲ ಅನುವಾದಗಳನ್ನೋ ಓದಿ ಎಷ್ಟಾಗುತ್ತದೋ ಅಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನಷ್ಟೇ. ಇಲ್ಲಿ ಬರೆದಿರುವುದೆಲ್ಲವೂ ನನಗೆ ಹೊಳೆದದ್ದು ಮಾತ್ರ ಅಲ್ಲ. ತಿಳಿದವರಿಂದ ಕೇಳಿ ನನಗೆ ಸರಿ ಎನ್ನಿಸಿದ ವಿಚಾರಗಳೂ ಇವೆ. ಇದರಿಂದ ಲೋಕಕ್ಕೆ ಸ್ವಲ್ಪ ಉಪಯೋಗವಾದರೆ ನನಗೆ ಅಷ್ಟೇ ಸಂತೋಷ ಸಾಕು. ನಾನು ಭಗವದ್ಗೀತೆಯ ಕೆಲವು ಶ್ಲೋಕಗಳು, ವೇದದ ಬೆರಳೆಣಿಕೆಯಷ್ಟು ಶ್ಲೋಕಗಳು ಮತ್ತು ಕೆಲವು ಹಿತೋಕ್ತಿಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಿದ್ದೇನೆ. ಹಾಗೇ ಗಾಂಧೀಜಿಯ ಆತ್ಮಚರಿತ್ರೆಯಲ್ಲಿ, ಬಸವಣ್ಣನವರ ವಚನಗಳಲ್ಲಿ, ಡಿ.ವಿ.ಜಿ. ಅವರ ಕಗ್ಗಗಳಲ್ಲಿ, ಬೈಬಲ್ ನಲ್ಲಿ, ಕುರಾನ್ ನಲ್ಲಿ, ಗುರು ಗ್ರಂಥ್ ಸಾಹಿಬ್ ನಲ್ಲಿ... ಎಲ್ಲಾ ಕಡೆಯೂ ಇಂಥ ಅಮೂಲ್ಯವಾದ ನೀತಿಪಾಠ ಇದೆ ಎಂದು ಕೇಳಿದ್ದೇನೆ. ನನಗೆ ಅವುಗಳನ್ನು ಓದಿ ಅದರ ಬಗ್ಗೆ ಬರೆಯಲು ಅನುಕೂಲ-ಅವಕಾಶಗಳಿಲ್ಲ. ಆದರೆ ತಿಳಿದುಕೊಳ್ಳುವ ಆಸಕ್ತಿ ಇದೆ. ಅದರ ಬಗ್ಗೆ ಇನ್ಯಾರಾದರೂ ತಿಳಿಸಿಕೊಟ್ಟರೆ ಅದು ಮತ್ತೊಂದು ಸಂತೋಷಕರ ವಿಚಾರ. ಇಂಥ ವಿಚಾರಗಳಿಂದ ಅಯೋಧ್ಯೆ, ಗುಜರಾತ್, ಮಂಗಳೂರಿನಂಥ ಜಾಗಗಳಲ್ಲಿ ಶಾಂತಿ ನೆಲೆಸಿದರೆ ಅದು ಬಹಳ ದೊಡ್ಡ ಸಂತೋಷ.&lt;br /&gt;&lt;br /&gt;ಈ ಲೇಖನಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಷಯ ಇದೆ. ಎಮ್. ಎಸ್. ಸುಬ್ಬುಲಕ್ಷ್ಮಿಯವರು ಸಂಯುಕ್ತ ರಾಷ್ಟ್ರಗಳ ಸಮ್ಮೇಳನದಲ್ಲಿ ಭಾಗವಹಿಸಲು ಹೊರಟಾಗ ಅಲ್ಲಿ ಹಾಡಲು ಶ್ರೀ ಚಂದ್ರಶೇಖರ ಸರಸ್ವತಿ ಸ್ವಾಮಿಗಳು ಬರೆದುಕೊಟ್ಟ ಒಂದು ಸುಂದರವಾದ ಪದ್ಯವನ್ನೂ, ನನಗೆ ತಿಳಿದಂತೆ ಅದರ ಸಂಕ್ಷಿಪ್ತ ಅರ್ಥವನ್ನೂ ಕೆಳಗೆ ಕೊಟ್ಟಿದ್ದೇನೆ. ಸಂಯುಕ್ತ ರಾಷ್ಟ್ರದಲ್ಲಿ ಎಂ.ಎಸ್.ಸುಬ್ಬುಲಕ್ಷ್ಮಿಯವರು ಹಾಡಿದ್ದು &lt;a href="http://acharya.iitm.ac.in/maitreem.mp3"&gt;ಈ ಕೊಂಡಿಯಲ್ಲಿ&lt;/a&gt; ಲಭ್ಯ.  ಕೇಳಿ, ಕೇಳಿಸಿ, ನೀತಿವಿದ್ಯೆ ನಿಮ್ಮದಾಗಿಸಿ. ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲರೂ ಚೆನ್ನಾಗಿರಲಿ.&lt;br /&gt;&lt;br /&gt;&lt;div style="text-align: center;"&gt;&lt;span style="font-weight: bold;"&gt;ಮೈತ್ರೀಂ ಭಜತ, ಅಖಿಲ ಹೃಜ್ಜೈತ್ರೀಮ್&lt;/span&gt;&lt;br /&gt;&lt;span style="font-weight: bold;"&gt;ಆತ್ಮವದೇವ ಪರಾನಪಿ ಪಶ್ಯತ |&lt;/span&gt;&lt;br /&gt;&lt;span style="font-weight: bold;"&gt;ಯುದ್ಧಂ ತ್ಯಜತ, ಸ್ಪರ್ಧಾಂ ತ್ಯಜತ&lt;/span&gt;&lt;br /&gt;&lt;span style="font-weight: bold;"&gt;ತ್ಯಜತ ಪರೇಷ್ವಕ್ರಮಮಾಕ್ರಮಣಮ್ ||&lt;/span&gt;&lt;br /&gt;&lt;br /&gt;(&lt;span&gt;ಎಲ್ಲ&lt;/span&gt; &lt;span&gt;ಹೃದಯಗಳನ್ನು&lt;/span&gt; ಗೆಲ್ಲುವ ಸ್ನೇಹವನ್ನು ಬಯಸು. ಪರರನ್ನೂ ನಮ್ಮಂತೆಯೇ ಕಾಣು. ಯುದ್ಧವನ್ನು ಬಿಟ್ಟುಬಿಡು, ಸ್ಪರ್ಧೆಯನ್ನು ಬಿಟ್ಟುಬಿಡು. ಪರರ ಮೇಲೆ ಅಕ್ರಮವಾದ (ಕಾರಣವಿಲ್ಲದ) ಆಕ್ರಮಣವನ್ನು ಮಾಡುವುದನ್ನು ತ್ಯಜಿಸು.)&lt;br /&gt;&lt;br /&gt;&lt;span style="font-weight: bold;"&gt;ಜನನೀ ಪೃಥಿವೀ ಕಾ ಮದುಘಾಸ್ತೇ&lt;/span&gt;&lt;br /&gt;&lt;span style="font-weight: bold;"&gt;ಜನಕೋ ದೇವಃ ಸಕಲ ದಯಾಲುಃ |&lt;/span&gt;&lt;br /&gt;&lt;span style="font-weight: bold;"&gt;ದಾಮ್ಯತ ದತ್ತ ದಯಧ್ವಂ ಜನತಾಃ&lt;/span&gt;&lt;br /&gt;&lt;span style="font-weight: bold;"&gt;ಶ್ರೇಯೋ ಭೂಯಾತ್ ಸಕಲ ಜನಾನಾಮ್ ||&lt;/span&gt;&lt;br /&gt;&lt;br /&gt;(&lt;span&gt;ಭೂಮಿ&lt;/span&gt; ತಾಯಿಯು ನಿನ್ನ ಇಷ್ಟಾರ್ಥ ಪೂರೈಸುವಳು. ನಮ್ಮನ್ನೆಲ್ಲಾ ಹುಟ್ಟಿಸಿದ ದೇವರು ಸಕಲ ದಯೆಯುಳ್ಳವನು. ಜನರೇ, ನಿಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಿ, (ಯೋಗ್ಯರಿಗೆ) ದಾನ ನೀಡಿ, ದಯೆ ತೋರಿಸಿ. ಎಲ್ಲ ಜನರಿಗೂ ಒಳ್ಳೆಯದಾಗಲಿ.)&lt;br /&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-2545750747040360886?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/2545750747040360886/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=2545750747040360886' title='9 Comments'/><link rel='edit' type='application/atom+xml' href='http://www.blogger.com/feeds/34886019/posts/default/2545750747040360886'/><link rel='self' type='application/atom+xml' href='http://www.blogger.com/feeds/34886019/posts/default/2545750747040360886'/><link rel='alternate' type='text/html' href='http://manasinaputagalanaduve.blogspot.com/2008/09/blog-post_20.html' title='ವಸುಧೈವ ಕುಟುಂಬಕಮ್'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>9</thr:total></entry><entry><id>tag:blogger.com,1999:blog-34886019.post-2798140125153964640</id><published>2008-09-03T13:58:00.006+05:30</published><updated>2008-09-03T14:25:50.331+05:30</updated><title type='text'>ಮಹಾಗಣಪತಿಂ ಮನಸಾ ಸ್ಮರಾಮಿ</title><content type='html'>&lt;div style="text-align: justify;"&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_JaSAEbMHNYk/SL5PZPsYuLI/AAAAAAAADfY/CYLp2UrglLI/s1600-h/ganapati.jpg"&gt;&lt;img style="margin: 0px auto 10px; display: block; text-align: center; cursor: pointer;" src="http://1.bp.blogspot.com/_JaSAEbMHNYk/SL5PZPsYuLI/AAAAAAAADfY/CYLp2UrglLI/s320/ganapati.jpg" alt="" id="BLOGGER_PHOTO_ID_5241714311433861298" border="0" /&gt;&lt;/a&gt;&lt;br /&gt;&lt;span&gt;ಇಂದು&lt;/span&gt; &lt;span&gt;ಗಣೇಶ&lt;/span&gt; &lt;span&gt;ಚತುರ್ಥಿ&lt;/span&gt;. &lt;span&gt;ಭಾರತದಾದ್ಯಂತ&lt;/span&gt; &lt;span&gt;ಮತ್ತು&lt;/span&gt; &lt;span&gt;ಇತರ&lt;/span&gt; &lt;span&gt;ವಿಶ್ವದ&lt;/span&gt; &lt;span&gt;ಕೆಲವು&lt;/span&gt; &lt;span&gt;ಕಡೆಯೂ&lt;/span&gt; &lt;span&gt;ಸಂಭ್ರಮ&lt;/span&gt;-&lt;span&gt;ಸಡಗರದಿಂದ&lt;/span&gt; &lt;span&gt;ಗಣೇಶ&lt;/span&gt; &lt;span&gt;ವಿಗ್ರಹವನ್ನು&lt;/span&gt; &lt;span&gt;ಕೂಡಿಸಿ&lt;/span&gt; &lt;span&gt;ಪೂಜೆ&lt;/span&gt; &lt;span&gt;ಮಾಡುತ್ತಾರೆ&lt;/span&gt;. &lt;span&gt;ಕೆಲವರ&lt;/span&gt; &lt;span&gt;ಪೂಜೆ&lt;/span&gt; &lt;span&gt;ಕೇವಲ&lt;/span&gt; &lt;span&gt;ಒಂದು&lt;/span&gt; &lt;span&gt;ದಿನದ&lt;/span&gt; &lt;span&gt;ಮಟ್ಟಿಗಾದರೆ&lt;/span&gt; &lt;span&gt;ಕೆಲವರದ್ದು&lt;/span&gt; &lt;span&gt;ವಾರಕ್ಕೋ&lt;/span&gt;, &lt;span&gt;ತಿಂಗಳಿಗೋ&lt;/span&gt; &lt;span&gt;ವಿಸ್ತರಿಸಬಹುದು&lt;/span&gt;. &lt;span&gt;ದೀಪಾವಳಿ&lt;/span&gt; &lt;span&gt;ಮುಗಿಯುವ&lt;/span&gt; &lt;span&gt;ತನಕವೂ&lt;/span&gt; &lt;span&gt;ಗಣೇಶನ&lt;/span&gt; &lt;span&gt;ಪೂಜೆ&lt;/span&gt; &lt;span&gt;ಮಾಡುವ&lt;/span&gt; &lt;span&gt;ಅಭ್ಯಾಸ&lt;/span&gt; &lt;span&gt;ಕೆಲವರಿಗಿದೆ&lt;/span&gt;. &lt;span&gt;ಆದರೆ&lt;/span&gt;, &lt;span&gt;ಇಷ್ಟೆಲ್ಲಾ&lt;/span&gt; &lt;span&gt;ಮಾಡುತ್ತೀವಲ್ಲ&lt;/span&gt;, &lt;span&gt;ಗಣೇಶ&lt;/span&gt; &lt;span&gt;ಯಾರು&lt;/span&gt;?&lt;br /&gt;&lt;br /&gt;&lt;span&gt;ಗಣೇಶ&lt;/span&gt; &lt;span&gt;ಯಾರು&lt;/span&gt; &lt;span&gt;ಎಂಬ&lt;/span&gt; &lt;span&gt;ಪ್ರಶ್ನೆಗೆ&lt;/span&gt; &lt;span&gt;ಉತ್ತರ&lt;/span&gt; &lt;span&gt;ಬಹುಶಃ&lt;/span&gt; &lt;span&gt;ಯಾರಿಗೂ&lt;/span&gt; &lt;span&gt;ಖಚಿತವಾಗಿ&lt;/span&gt; &lt;span&gt;ಗೊತ್ತಿಲ್ಲ&lt;/span&gt;. &lt;span&gt;ನನ್ನ&lt;/span&gt; &lt;span&gt;ಅಭಿಪ್ರಾಯದ&lt;/span&gt; &lt;span&gt;ಪ್ರಕಾರ&lt;/span&gt; &lt;span&gt;ನಾವು&lt;/span&gt; &lt;span&gt;ಪೂಜಿಸುವ&lt;/span&gt; &lt;span&gt;ಗಣೇಶ&lt;/span&gt; &lt;span&gt;ಬಹುಶಃ&lt;/span&gt; &lt;span&gt;ಮನುಷ್ಯನ&lt;/span&gt; &lt;span&gt;ಅತಿದೊಡ್ಡ&lt;/span&gt; &lt;span&gt;ಸೃಷ್ಟಿ&lt;/span&gt;. &lt;span&gt;ಹೌದು&lt;/span&gt;, &lt;span&gt;ಮನುಷ್ಯನ&lt;/span&gt; &lt;span&gt;ಸೃಷ್ಟಿ&lt;/span&gt;! &lt;span&gt;ಯಾರಾದರೂ&lt;/span&gt; &lt;span&gt;ಮತ್ತೊಬ್ಬ&lt;/span&gt; &lt;span&gt;ವ್ಯಕ್ತಿಯ&lt;/span&gt; &lt;span&gt;ಬಗ್ಗೆ&lt;/span&gt; &lt;span&gt;ಸರಿಯಾಗಿ&lt;/span&gt;, &lt;span&gt;ಪೂರ್ಣವಾಗಿ&lt;/span&gt; &lt;span&gt;ತಿಳಿಯಬೇಕಾದರೆ&lt;/span&gt; &lt;span&gt;ಅವರ&lt;/span&gt; &lt;span&gt;ಹುಟ್ಟಿನ&lt;/span&gt; &lt;span&gt;ಬಗ್ಗೆಯೇ&lt;/span&gt; &lt;span&gt;ಮೊದಲು&lt;/span&gt; &lt;span&gt;ವಿಚಾರಿಸುವುದು&lt;/span&gt;. &lt;span&gt;ಗಣೇಶನ&lt;/span&gt; &lt;span&gt;ಹುಟ್ಟಿನ&lt;/span&gt; &lt;span&gt;ಬಗ್ಗೆ&lt;/span&gt; &lt;span&gt;ಪುರಾಣಗಳೇ&lt;/span&gt; &lt;span&gt;ಮೊದಲಾದ&lt;/span&gt; &lt;span&gt;ಹಲವು&lt;/span&gt; &lt;span&gt;ಪ್ರಾಚೀನ&lt;/span&gt; &lt;span&gt;ಗ್ರಂಥಗಳು&lt;/span&gt; &lt;span&gt;ಹೇಳುವ&lt;/span&gt; &lt;span&gt;ಅನೇಕ&lt;/span&gt; &lt;span&gt;ಕಥೆಗಳಿವೆ&lt;/span&gt;. &lt;span&gt;ಕೆಲವು&lt;/span&gt; &lt;span&gt;ಗಣೇಶನ&lt;/span&gt; &lt;span&gt;ಹುಟ್ಟಿನ&lt;/span&gt; &lt;span&gt;ಬಗ್ಗೆ&lt;/span&gt; &lt;span&gt;ಅಥವಾ&lt;/span&gt; &lt;span&gt;ಸೃಷ್ಟಿಯ&lt;/span&gt; &lt;span&gt;ಬಗ್ಗೆ&lt;/span&gt; &lt;span&gt;ಹೇಳುವುದು&lt;/span&gt; &lt;span&gt;ಏನೆಂದರೆ&lt;/span&gt;&lt;br /&gt;&lt;br /&gt;- &lt;span&gt;ಗಣೇಶ&lt;/span&gt; &lt;span&gt;ಶಿವನ&lt;/span&gt; &lt;span&gt;ಮಾನಸ&lt;/span&gt; &lt;span&gt;ಪುತ್ರ&lt;/span&gt;&lt;br /&gt;- &lt;span&gt;ಗಣೇಶ&lt;/span&gt; &lt;span&gt;ಕೃಷ್ಣನ&lt;/span&gt; &lt;span&gt;ಅವತಾರ&lt;/span&gt;&lt;br /&gt;- &lt;span&gt;ಗಣೇಶ&lt;/span&gt; &lt;span&gt;ಪಾರ್ವತಿಯ&lt;/span&gt; &lt;span&gt;ಸೃಷ್ಟಿ&lt;/span&gt;&lt;br /&gt;&lt;br /&gt;&lt;span&gt;ಪ್ರಸಿದ್ಧವಾದ್ದೇ&lt;/span&gt; &lt;span&gt;ಮೂರು&lt;/span&gt; &lt;span&gt;ಕಥೆಗಳು&lt;/span&gt;! &lt;span&gt;ಮೂರರಲ್ಲಿ&lt;/span&gt; &lt;span&gt;ಒಂದು&lt;/span&gt; &lt;span&gt;ಮಾತ್ರ&lt;/span&gt; &lt;span&gt;ನಿಜ&lt;/span&gt; &lt;span&gt;ಇರಲು&lt;/span&gt; &lt;span&gt;ಸಾಧ್ಯ&lt;/span&gt;! &lt;span&gt;ಯಾವುದು&lt;/span&gt; &lt;span&gt;ನಿಜ&lt;/span&gt;? &lt;span&gt;ಗಣೇಶ&lt;/span&gt; &lt;span&gt;ಪಾರ್ವತಿಯ&lt;/span&gt; &lt;span&gt;ಸೃಷ್ಟಿ&lt;/span&gt; &lt;span&gt;ಎಂಬ&lt;/span&gt; &lt;span&gt;ಕಥೆಯು&lt;/span&gt; &lt;span&gt;ಹೆಚ್ಚು&lt;/span&gt; &lt;span&gt;ಜನರು&lt;/span&gt; &lt;span&gt;ಒಪ್ಪಿಕೊಳ್ಳುವ&lt;/span&gt; &lt;span&gt;ಕಥೆ&lt;/span&gt;. &lt;span&gt;ಆದ್ದರಿಂದ&lt;/span&gt; &lt;span&gt;ಅದನ್ನೇ&lt;/span&gt; &lt;span&gt;ನೋಡೋಣ&lt;/span&gt;.&lt;br /&gt;&lt;br /&gt;&lt;span&gt;ಪಾರ್ವತಿ&lt;/span&gt; &lt;span&gt;ಒಮ್ಮೆ&lt;/span&gt; &lt;span&gt;ಸ್ನಾನ&lt;/span&gt; &lt;span&gt;ಮಾಡಲು&lt;/span&gt; &lt;span&gt;ಹೋಗುವಾಗ&lt;/span&gt; &lt;span&gt;ತನ್ನ&lt;/span&gt; &lt;span&gt;ಮೈಗೆ&lt;/span&gt; &lt;span&gt;ಅಂಟಿಕೊಂಡಿದ್ದ&lt;/span&gt; &lt;span&gt;ಕೊಳೆಯಿಂದ&lt;/span&gt; &lt;span&gt;ಒಬ್ಬನನ್ನು&lt;/span&gt; &lt;span&gt;ಸೃಷ್ಟಿಸಿ&lt;/span&gt; &lt;span&gt;ಸ್ನಾನದ&lt;/span&gt; &lt;span&gt;ಮನೆಯ&lt;/span&gt; &lt;span&gt;ಕಾವಲಿಗೆ&lt;/span&gt; &lt;span&gt;ನೇಮಿಸಿದಳು&lt;/span&gt; (&lt;span&gt;ಕೆಲವರ&lt;/span&gt; &lt;span&gt;ಪ್ರಕಾರ&lt;/span&gt; &lt;span&gt;ಸ್ನಾನದ&lt;/span&gt; &lt;span&gt;ಮನೆಯ&lt;/span&gt; &lt;span&gt;ಕಾವಲಲ್ಲ&lt;/span&gt;, &lt;span&gt;ಮನೆಯ&lt;/span&gt; &lt;span&gt;ಕಾವಲಷ್ಟೇ&lt;/span&gt;). &lt;span&gt;ಅವನ&lt;/span&gt; &lt;span&gt;ಹೆಸರೇ&lt;/span&gt; &lt;span&gt;ಗಣೇಶ&lt;/span&gt;. &lt;span&gt;ಸ್ವಲ್ಪ&lt;/span&gt; &lt;span&gt;ಹೊತ್ತಾದಮೇಲೆ&lt;/span&gt; &lt;span&gt;ಶಿವನು&lt;/span&gt; &lt;span&gt;ಮನೆಗೆ&lt;/span&gt; &lt;span&gt;ಬಂದಾಗ&lt;/span&gt; &lt;span&gt;ಪಾರ್ವತಿಯನ್ನು&lt;/span&gt; &lt;span&gt;ನೋಡಲು&lt;/span&gt; &lt;span&gt;ಗಣೇಶ&lt;/span&gt; &lt;span&gt;ಬಿಡಲಿಲ್ಲವಂತೆ&lt;/span&gt;. &lt;span&gt;ಶಿವನು&lt;/span&gt; &lt;span&gt;ಕೋಪಗೊಂಡು&lt;/span&gt; &lt;span&gt;ಗಣೇಶನ&lt;/span&gt; &lt;span&gt;ತಲೆ&lt;/span&gt; &lt;span&gt;ಕತ್ತರಿಸಿದ&lt;/span&gt;. &lt;span&gt;ನಂತರ&lt;/span&gt; &lt;span&gt;ಪಾರ್ವತಿಗೆ&lt;/span&gt; &lt;span&gt;ವಿಷಯ&lt;/span&gt; &lt;span&gt;ತಿಳಿದು&lt;/span&gt; &lt;span&gt;ಬಹಳ&lt;/span&gt; &lt;span&gt;ದುಃಖಿತಳಾಗಿ&lt;/span&gt; &lt;span&gt;ಕೋಪಗೊಂಡು&lt;/span&gt; &lt;span&gt;ಶಿವನನ್ನು&lt;/span&gt; &lt;span&gt;ತನ್ನ&lt;/span&gt; &lt;span&gt;ಮಗನನ್ನು&lt;/span&gt; &lt;span&gt;ಬದುಕಿಸುವಂತೆ&lt;/span&gt; &lt;span&gt;ಕೇಳಿದಾಗ&lt;/span&gt; &lt;span&gt;ಶಿವನು&lt;/span&gt; &lt;span&gt;ತನ್ನ&lt;/span&gt; &lt;span&gt;ಸೇವಕರಿಗೆ&lt;/span&gt; (&lt;span&gt;ಕೆಲವು&lt;/span&gt; &lt;span&gt;ಕಥೆಗಳ&lt;/span&gt; &lt;span&gt;ಪ್ರಕಾರ&lt;/span&gt; &lt;span&gt;ವಿಷ್ಣುವಿಗೇ&lt;/span&gt;!) &lt;span&gt;ಯಾರು&lt;/span&gt; &lt;span&gt;ಉತ್ತರದ&lt;/span&gt; &lt;span&gt;ಕಡೆ&lt;/span&gt; &lt;span&gt;ತಲೆಯಿಟ್ಟು&lt;/span&gt; &lt;span&gt;ಮಲಗಿದ್ದಾರೋ&lt;/span&gt; &lt;span&gt;ಅವರ&lt;/span&gt; &lt;span&gt;ತಲೆಯನ್ನು&lt;/span&gt; &lt;span&gt;ಕತ್ತರಿಸಿ&lt;/span&gt; &lt;span&gt;ತರಲು&lt;/span&gt; &lt;span&gt;ಹೇಳಿದ&lt;/span&gt;. &lt;span&gt;ಆದರೆ&lt;/span&gt; &lt;span&gt;ಆಗ&lt;/span&gt; &lt;span&gt;ಉತ್ತರದ&lt;/span&gt; &lt;span&gt;ಕಡೆ&lt;/span&gt; &lt;span&gt;ತಲೆ&lt;/span&gt; &lt;span&gt;ಮಾಡಿ&lt;/span&gt; &lt;span&gt;ಮಲಗಿದ್ದು&lt;/span&gt; &lt;span&gt;ಒಂದು&lt;/span&gt; &lt;span&gt;ಆನೆ&lt;/span&gt; &lt;span&gt;ಮಾತ್ರ&lt;/span&gt;. &lt;span&gt;ಆದ್ದರಿಂದ&lt;/span&gt; &lt;span&gt;ಆ&lt;/span&gt; &lt;span&gt;ಆನೆಯ&lt;/span&gt; &lt;span&gt;ತಲೆಯನ್ನೇ&lt;/span&gt; &lt;span&gt;ತರಲಾಯಿತು&lt;/span&gt;. &lt;span&gt;ಆ&lt;/span&gt; &lt;span&gt;ತಲೆಯನ್ನೇ&lt;/span&gt; &lt;span&gt;ಶಿವನು&lt;/span&gt; &lt;span&gt;ಗಣೇಶನಿಗೆ&lt;/span&gt; &lt;span&gt;ಪ್ರತಿಷ್ಠಾಪಿಸಿ&lt;/span&gt; &lt;span&gt;ಜೀವ&lt;/span&gt; &lt;span&gt;ನೀಡಿದ&lt;/span&gt;.&lt;br /&gt;&lt;br /&gt;&lt;span&gt;ಈ&lt;/span&gt; &lt;span&gt;ಕಥೆ&lt;/span&gt; &lt;span&gt;ಕೇಳಲು&lt;/span&gt; &lt;span&gt;ಮಾತ್ರ&lt;/span&gt; &lt;span&gt;ಚೆನ್ನಾಗಿದೆ&lt;/span&gt;. &lt;span&gt;ಚಿಕ್ಕ&lt;/span&gt; &lt;span&gt;ವಯಸ್ಸಿನಲ್ಲಿ&lt;/span&gt; &lt;span&gt;ಇದನ್ನು&lt;/span&gt; &lt;span&gt;ಕೇಳಿದಾಗ&lt;/span&gt; &lt;span&gt;ಹಿಂದೂ&lt;/span&gt; &lt;span&gt;ಮುಂದೂ&lt;/span&gt; &lt;span&gt;ಯೋಚಿಸದೇ&lt;/span&gt; &lt;span&gt;ಒಪ್ಪಿಕೊಳ್ಳುತ್ತೇವೆ&lt;/span&gt;. &lt;span&gt;ಆದರೆ&lt;/span&gt; &lt;span&gt;ಸ್ವಲ್ಪ&lt;/span&gt; &lt;span&gt;ಬುದ್ಧಿ&lt;/span&gt; &lt;span&gt;ಬೆಳೆದಮೇಲೆ&lt;/span&gt; &lt;span&gt;ಇದನ್ನು&lt;/span&gt; &lt;span&gt;ಒಪ್ಪುವ&lt;/span&gt; &lt;span&gt;ಮುಂಚೆ&lt;/span&gt; &lt;span&gt;ಸ್ವಲ್ಪ&lt;/span&gt; &lt;span&gt;ಯೋಚಿಸಬೇಕಲ್ಲವೇ&lt;/span&gt;? &lt;span&gt;ನಾನೂ&lt;/span&gt; &lt;span&gt;ಅನೇಕರಿಂದ&lt;/span&gt; &lt;span&gt;ಈ&lt;/span&gt; &lt;span&gt;ಕಥೆ&lt;/span&gt; &lt;span&gt;ಕೇಳಿದ್ದೀನಿ&lt;/span&gt;. &lt;span&gt;ಬೆರಳೆಣಿಕೆಯಷ್ಟು&lt;/span&gt; &lt;span&gt;ಜನರು&lt;/span&gt; &lt;span&gt;ಮಾತ್ರ&lt;/span&gt; &lt;span&gt;ಇದರ&lt;/span&gt; &lt;span&gt;ಸತ್ಯಾಸತ್ಯತೆಯ&lt;/span&gt; &lt;span&gt;ಬಗ್ಗೆಯೂ&lt;/span&gt; &lt;span&gt;ಅಭಿಪ್ರಾಯ&lt;/span&gt; &lt;span&gt;ಹೇಳಿದ್ದಾರೆ&lt;/span&gt;. &lt;span&gt;ಅದರಲ್ಲಿ&lt;/span&gt; &lt;span&gt;ನನಗೆ&lt;/span&gt; &lt;span&gt;ಸರಿ&lt;/span&gt; &lt;span&gt;ಅನ್ನಿಸಿದ್ದನ್ನು&lt;/span&gt;, &lt;span&gt;ಇನ್ನು&lt;/span&gt; &lt;span&gt;ಕೆಲವು&lt;/span&gt; &lt;span&gt;ನನಗೇ&lt;/span&gt; &lt;span&gt;ತೋರಿದ&lt;/span&gt; &lt;span&gt;ಪ್ರಶ್ನೆಗಳನ್ನೂ&lt;/span&gt; &lt;span&gt;ಸೇರಿಸಿದ&lt;/span&gt; &lt;span&gt;ಮೂರ್ನಾಲ್ಕು&lt;/span&gt; &lt;span&gt;ಪ್ರಶ್ನೆಗಳು&lt;/span&gt; &lt;span&gt;ಇಂತಿವೆ&lt;/span&gt;.&lt;br /&gt;&lt;br /&gt;- &lt;span&gt;ಪಾರ್ವತಿಯ&lt;/span&gt; &lt;span&gt;ಸ್ನಾನದ&lt;/span&gt; &lt;span&gt;ಮನೆಗೆ&lt;/span&gt; &lt;span&gt;ಬಾಗಿಲಿರಲಿಲ್ಲವೇ&lt;/span&gt;? &lt;span&gt;ಇಲ್ಲದಿದ್ದ&lt;/span&gt; &lt;span&gt;ಪಕ್ಷದಲ್ಲಿ&lt;/span&gt;, &lt;span&gt;ತನ್ನ&lt;/span&gt; &lt;span&gt;ಸ್ನಾನದ&lt;/span&gt; &lt;span&gt;ಮನೆಯನ್ನೋ&lt;/span&gt; &lt;span&gt;ಅಥವಾ&lt;/span&gt; &lt;span&gt;ಮನೆಯನ್ನೋ&lt;/span&gt; &lt;span&gt;ಕಾಯಲು&lt;/span&gt; &lt;span&gt;ಒಬ್ಬ&lt;/span&gt; &lt;span&gt;ಮನುಷ್ಯನನ್ನು&lt;/span&gt; &lt;span&gt;ಸೃಷ್ಟಿ&lt;/span&gt; &lt;span&gt;ಮಾಡುವ&lt;/span&gt; &lt;span&gt;ಬದಲು&lt;/span&gt; &lt;span&gt;ಅವಳೇಕೆ&lt;/span&gt; &lt;span&gt;ಒಂದು&lt;/span&gt; &lt;span&gt;ಬಾಗಿಲನ್ನೋ&lt;/span&gt; &lt;span&gt;ಚಿಲಕವನ್ನೋ&lt;/span&gt; &lt;span&gt;ಸೃಷ್ಟಿಸಲಿಲ್ಲ&lt;/span&gt;? &lt;span&gt;ಆ&lt;/span&gt; &lt;span&gt;ಸೃಷ್ಟಿ&lt;/span&gt; &lt;span&gt;ಇನ್ನೂ&lt;/span&gt; &lt;span&gt;ಸುಲಭವಲ್ಲವೇ&lt;/span&gt;? &lt;span&gt;ಸ್ನಾನದ&lt;/span&gt; &lt;span&gt;ಮನೆ&lt;/span&gt; &lt;span&gt;ಕಾಯಲು&lt;/span&gt; &lt;span&gt;ಒಬ್ಬ&lt;/span&gt; &lt;span&gt;ಮನುಷ್ಯನನ್ನೋ&lt;/span&gt; &lt;span&gt;ದೇವನನ್ನೋ&lt;/span&gt; &lt;span&gt;ಸೃಷ್ಟಿಸುವ&lt;/span&gt; &lt;span&gt;ಅಗತ್ಯವಿತ್ತೇ&lt;/span&gt;?&lt;br /&gt;- &lt;span&gt;ಶಿವನು&lt;/span&gt; &lt;span&gt;ಮನೆಗೆ&lt;/span&gt; &lt;span&gt;ಬಂದ&lt;/span&gt; &lt;span&gt;ತಕ್ಷಣ&lt;/span&gt; &lt;span&gt;ಪಾರ್ವತಿಯನ್ನು&lt;/span&gt; &lt;span&gt;ನೋಡಲು&lt;/span&gt; &lt;span&gt;ಸ್ನಾನದ&lt;/span&gt; &lt;span&gt;ಮನೆಗೇ&lt;/span&gt; &lt;span&gt;ನುಗ್ಗಲು&lt;/span&gt; &lt;span&gt;ಹೋದನೇ&lt;/span&gt;?&lt;br /&gt;- &lt;span&gt;ಪಾರ್ವತಿ&lt;/span&gt; &lt;span&gt;ಸೃಷ್ಟಿಸಿದ್ದರಬಹುದು&lt;/span&gt;, &lt;span&gt;ಆದರೆ&lt;/span&gt; &lt;span&gt;ತಿಲೋಕಜ್ಞಾನಿ&lt;/span&gt; &lt;span&gt;ಮತ್ತು&lt;/span&gt; &lt;span&gt;ತ್ರಿಕಾಲಜ್ಞಾನಿಯಾದ&lt;/span&gt; &lt;span&gt;ಶಿವನಿಗೆ&lt;/span&gt; &lt;span&gt;ತನ್ನ&lt;/span&gt; &lt;span&gt;ಮಗನನ್ನೇ&lt;/span&gt; &lt;span&gt;ಗುರುತು&lt;/span&gt; &lt;span&gt;ಹಿಡಿಯಲಾಗಲಿಲ್ಲವೇ&lt;/span&gt;?&lt;br /&gt;- &lt;span&gt;ಗಣೇಶನಿಗೆ&lt;/span&gt; &lt;span&gt;ಆನೆಯ&lt;/span&gt; &lt;span&gt;ತಲೆ&lt;/span&gt; &lt;span&gt;ಜೋಡಿಸಿ&lt;/span&gt; &lt;span&gt;ಜೀವ&lt;/span&gt; &lt;span&gt;ಕೊಟ್ಟ&lt;/span&gt; &lt;span&gt;ಶಿವನಿಗೆ&lt;/span&gt; &lt;span&gt;ಸ್ವಲ್ಪ&lt;/span&gt; &lt;span&gt;ಮುಂಚೆ&lt;/span&gt; &lt;span&gt;ತಾನೇ&lt;/span&gt; &lt;span&gt;ಕತ್ತರಿಸಿದ್ದ&lt;/span&gt; &lt;span&gt;ಹಳೆಯ&lt;/span&gt; &lt;span&gt;ತಲೆಯನ್ನೇ&lt;/span&gt; &lt;span&gt;ಜೋಡಿಸಲು&lt;/span&gt; &lt;span&gt;ಆಗಲಿಲ್ಲವೇ&lt;/span&gt; &lt;span&gt;ಅಥವಾ&lt;/span&gt; &lt;span&gt;ಅವನಿಗೆ&lt;/span&gt; &lt;span&gt;ಇಷ್ಟು&lt;/span&gt; &lt;span&gt;ಬುದ್ಧಿ&lt;/span&gt; &lt;span&gt;ಓಡಲಿಲ್ಲವೇ&lt;/span&gt;?&lt;br /&gt;&lt;br /&gt;&lt;span&gt;ಒಂದು&lt;/span&gt; &lt;span&gt;ಕಥೆಯ&lt;/span&gt; &lt;span&gt;ಬಗ್ಗೆಯೇ&lt;/span&gt; &lt;span&gt;ಇಷ್ಟೊಂದು&lt;/span&gt; &lt;span&gt;ಪ್ರಶ್ನೆಗಳು&lt;/span&gt;. &lt;span&gt;ಇನ್ನು&lt;/span&gt; &lt;span&gt;ಎಲ್ಲಾ&lt;/span&gt; &lt;span&gt;ಕಥೆಗಳನ್ನೂ&lt;/span&gt;, &lt;span&gt;ಅವುಗಳಲ್ಲಿರುವ&lt;/span&gt; &lt;span&gt;ಅನೇಕ&lt;/span&gt; &lt;span&gt;ಅಭಿಪ್ರಾಯಾಂತರಗಳನ್ನೂ&lt;/span&gt; &lt;span&gt;ಪರಿಗಣಿಸಿದರೆ&lt;/span&gt; &lt;span&gt;ಇನ್ನೆಷ್ಟು&lt;/span&gt; &lt;span&gt;ಪ್ರಶ್ನೆಗಳಿರಬಹುದು&lt;/span&gt;! &lt;span&gt;ಈ&lt;/span&gt; &lt;span&gt;ಪ್ರಶ್ನೆಗಳಿಗೆ&lt;/span&gt; &lt;span&gt;ಉತ್ತರಿಸುವವರಿದ್ದರೆ&lt;/span&gt; &lt;span&gt;ದಯವಿಟ್ಟು&lt;/span&gt; &lt;span&gt;ಉತ್ತರಿಸಿ&lt;/span&gt;. &lt;span&gt;ನನಗೆ&lt;/span&gt; &lt;span&gt;ಉತ್ತರ&lt;/span&gt; &lt;span&gt;ತಿಳಿದರೆ&lt;/span&gt; &lt;span&gt;ಗಣೇಶನಿಗೆ&lt;/span&gt; &lt;span&gt;ನಾನು&lt;/span&gt; &lt;span&gt;ನಮಸ್ಕರಿಸುವುದಕ್ಕೆ&lt;/span&gt; &lt;span&gt;ಹೆಚ್ಚಿನ&lt;/span&gt; &lt;span&gt;ಅರ್ಥ&lt;/span&gt; &lt;span&gt;ಬರುತ್ತದೆ&lt;/span&gt;.&lt;br /&gt;&lt;br /&gt;&lt;span&gt;ಗಣೇಶನ&lt;/span&gt; &lt;span&gt;ವಿವಾಹದ&lt;/span&gt; &lt;span&gt;ಬಗ್ಗೆಯೂ&lt;/span&gt; &lt;span&gt;ಅಭಿಪ್ರಾಯಭೇದಗಳು&lt;/span&gt;! &lt;span&gt;ಕೆಲವೆಡೆ&lt;/span&gt; &lt;span&gt;ಗಣೇಶ&lt;/span&gt; &lt;span&gt;ಬ್ರಹ್ಮಚಾರಿ&lt;/span&gt; &lt;span&gt;ಎಂದರೆ&lt;/span&gt; &lt;span&gt;ಕೆಲವೆಡೆ&lt;/span&gt; &lt;span&gt;ಅವನಿಗೆ&lt;/span&gt; &lt;span&gt;ಸಿದ್ಧಿ&lt;/span&gt;, &lt;span&gt;ಬುದ್ಧಿ&lt;/span&gt; &lt;span&gt;ಎಂಬ&lt;/span&gt; &lt;span&gt;ಎರಡು&lt;/span&gt; &lt;span&gt;ಹೆಂಡತಿಯರು&lt;/span&gt; &lt;span&gt;ಎನ್ನುತ್ತಾರೆ&lt;/span&gt;! &lt;span&gt;ಯಾವುದನ್ನು&lt;/span&gt; &lt;span&gt;ನಂಬುವುದು&lt;/span&gt;? &lt;span&gt;ಗಣೇಶನ&lt;/span&gt; &lt;span&gt;ಬಗ್ಗೆ&lt;/span&gt; &lt;span&gt;ಮತ್ತೊಂದು&lt;/span&gt; &lt;span&gt;ಸ್ವಾರಸ್ಯಕರವಾದ&lt;/span&gt; &lt;span&gt;ಕಥೆ&lt;/span&gt; &lt;span&gt;ಇದೆ&lt;/span&gt;. &lt;span&gt;ಒಮ್ಮೆ&lt;/span&gt; &lt;span&gt;ಗಣೇಶ&lt;/span&gt; &lt;span&gt;ಕಡುಬು&lt;/span&gt;, &lt;span&gt;ಮತ್ತಿತರ&lt;/span&gt; &lt;span&gt;ಖಾದ್ಯಗಳನ್ನು&lt;/span&gt; &lt;span&gt;ಹೊಟ್ಟೆ&lt;/span&gt; &lt;span&gt;ಒಡೆಯುವಷ್ಟು&lt;/span&gt; &lt;span&gt;ತಿಂದುಬಿಟ್ಟನಂತೆ&lt;/span&gt;. &lt;span&gt;ಒಡೆದ&lt;/span&gt; &lt;span&gt;ಹೊಟ್ಟೆಯನ್ನು&lt;/span&gt; &lt;span&gt;ಜೋಡಿಸಲು&lt;/span&gt; &lt;span&gt;ಒಂದು&lt;/span&gt; &lt;span&gt;ಹಾವನ್ನು&lt;/span&gt; &lt;span&gt;ಕಟ್ಟಿಕೊಂಡನಂತೆ&lt;/span&gt;. &lt;span&gt;ಇದನ್ನೆಲ್ಲಾ&lt;/span&gt; &lt;span&gt;ನೋಡಿದ&lt;/span&gt; &lt;span&gt;ಚಂದ್ರನು&lt;/span&gt; &lt;span&gt;ಸಿಕ್ಕಾಪಟ್ಟೆ&lt;/span&gt; &lt;span&gt;ನಕ್ಕನಂತೆ&lt;/span&gt;. &lt;span&gt;ಗಣೇಶನಿಗೆ&lt;/span&gt; &lt;span&gt;ಇದನ್ನು&lt;/span&gt; &lt;span&gt;ನೋಡಿ&lt;/span&gt; &lt;span&gt;ಕೋಪ&lt;/span&gt; &lt;span&gt;ಬಂದು&lt;/span&gt; "&lt;span&gt;ನೀನು&lt;/span&gt; &lt;span&gt;ಇನ್ನು&lt;/span&gt; &lt;span&gt;ಮುಂದೆ&lt;/span&gt; &lt;span&gt;ಕಾಣದೇ&lt;/span&gt; &lt;span&gt;ಹೋಗು&lt;/span&gt;" &lt;span&gt;ಎಂದು&lt;/span&gt; &lt;span&gt;ಚಂದ್ರನಿಗೆ&lt;/span&gt; &lt;span&gt;ಶಾಪ&lt;/span&gt; &lt;span&gt;ಕೊಟ್ಟ&lt;/span&gt;. &lt;span&gt;ಅದು&lt;/span&gt; &lt;span&gt;ಸಾಲದೆಂದು&lt;/span&gt; &lt;span&gt;ತನ್ನ&lt;/span&gt; &lt;span&gt;ಒಂದು&lt;/span&gt; &lt;span&gt;ದಂತವನ್ನೂ&lt;/span&gt; &lt;span&gt;ಕಿತ್ತು&lt;/span&gt; &lt;span&gt;ಚಂದ್ರನತ್ತ&lt;/span&gt; &lt;span&gt;ಎಸೆದ&lt;/span&gt;. &lt;span&gt;ಆಮೇಲೆ&lt;/span&gt; &lt;span&gt;ಚಂದ್ರ&lt;/span&gt; &lt;span&gt;ಬಂದು&lt;/span&gt; &lt;span&gt;ತಪ್ಪಾಯಿತೆಂದು&lt;/span&gt; &lt;span&gt;ಕ್ಷಮೆ&lt;/span&gt; &lt;span&gt;ಯಾಚಿಸಲು&lt;/span&gt; &lt;span&gt;ಆ&lt;/span&gt; &lt;span&gt;ಶಾಪವನ್ನು&lt;/span&gt; &lt;span&gt;ಸ್ವಲ್ಪ&lt;/span&gt; &lt;span&gt;ಕೆಳದರ್ಜೆಗಿಳಿಸಿ&lt;/span&gt; "&lt;span&gt;ಶುಕ್ಲಪಕ್ಷದ&lt;/span&gt; &lt;span&gt;ಪ್ರಾರಂಭದಲ್ಲಿ&lt;/span&gt; &lt;span&gt;ಸ್ವಲ್ಪ&lt;/span&gt;-&lt;span&gt;ಸ್ವಲ್ಪವಾಗಿಯೇ&lt;/span&gt; &lt;span&gt;ಕಾಣಿಸುತ್ತಾ&lt;/span&gt; &lt;span&gt;ಹುಣ್ಣಿಮೆಯ&lt;/span&gt; &lt;span&gt;ಹೊತ್ತಿಗೆ&lt;/span&gt; &lt;span&gt;ಪೂರ್ಣವಾಗಿ&lt;/span&gt; &lt;span&gt;ಕಾಣುತ್ತೀಯ&lt;/span&gt;, &lt;span&gt;ಮತ್ತೆ&lt;/span&gt; &lt;span&gt;ಅಮಾವಾಸ್ಯೆಯ&lt;/span&gt; &lt;span&gt;ತನಕ&lt;/span&gt; &lt;span&gt;ಪ್ರದಿದಿನವೂ&lt;/span&gt; &lt;span&gt;ಕಡಿಮೆ&lt;/span&gt; &lt;span&gt;ಪ್ರಮಾಣದಲ್ಲಿ&lt;/span&gt; &lt;span&gt;ಗೋಚರಿಸುತ್ತಾ&lt;/span&gt; &lt;span&gt;ಅಮಾವಾಸ್ಯೆಯ&lt;/span&gt; &lt;span&gt;ದಿನ&lt;/span&gt; &lt;span&gt;ಕಾಣುವುದೇ&lt;/span&gt; &lt;span&gt;ಇಲ್ಲ&lt;/span&gt;" &lt;span&gt;ಎಂದು&lt;/span&gt; &lt;span&gt;ಗಣೇಶ&lt;/span&gt; &lt;span&gt;ಹೇಳಿದನಂತೆ&lt;/span&gt;. &lt;span&gt;ಈ&lt;/span&gt; &lt;span&gt;ಕಥೆಯನ್ನು&lt;/span&gt; &lt;span&gt;ನಂಬುವುದು&lt;/span&gt; &lt;span&gt;ಬಹಳ&lt;/span&gt; &lt;span&gt;ಕಷ್ಟ&lt;/span&gt;. &lt;span&gt;ಶಾಪ&lt;/span&gt; &lt;span&gt;ಕೊಟ್ಟ&lt;/span&gt; &lt;span&gt;ಸಂಗತಿಯನ್ನು&lt;/span&gt; &lt;span&gt;ನಂಬಿದರೂ&lt;/span&gt; &lt;span&gt;ಹೊಟ್ಟೆ&lt;/span&gt; &lt;span&gt;ಒಡೆದುಕೊಳ್ಳುವಷ್ಟು&lt;/span&gt; &lt;span&gt;ತಿಂದ&lt;/span&gt; &lt;span&gt;ಸಂಗತಿಯನ್ನೂ&lt;/span&gt;, &lt;span&gt;ಹಾವು&lt;/span&gt; &lt;span&gt;ಕಟ್ಟಿ&lt;/span&gt; &lt;span&gt;ಒಡೆದ&lt;/span&gt; &lt;span&gt;ಹೊಟ್ಟೆಯನ್ನು&lt;/span&gt; &lt;span&gt;ಒಟ್ಟುಮಾಡಿಕೊಂಡ&lt;/span&gt; &lt;span&gt;ಸಂಗತಿಯನ್ನೂ&lt;/span&gt; &lt;span&gt;ನಂಬಲಸಾಧ್ಯ&lt;/span&gt;! &lt;span&gt;ಹೊಟ್ಟೆಬಾಕನಂತೆ&lt;/span&gt; &lt;span&gt;ತಿನ್ನುವ&lt;/span&gt; &lt;span&gt;ದೌರ್ಬಲ್ಯವಿರುವವನನ್ನು&lt;/span&gt; &lt;span&gt;ದೇವರೆಂದು&lt;/span&gt; &lt;span&gt;ಹೇಗೆ&lt;/span&gt; &lt;span&gt;ಕರೆಯುವುದು&lt;/span&gt;? &lt;span&gt;ಈ&lt;/span&gt; &lt;span&gt;ಕಥೆಯಲ್ಲಿ&lt;/span&gt; &lt;span&gt;ಸ್ವಲ್ಪ&lt;/span&gt; &lt;span&gt;ಸತ್ಯವಿದೆ&lt;/span&gt;. &lt;span&gt;ಚಂದ್ರನನ್ನು&lt;/span&gt; &lt;span&gt;ಗಣೇಶನ&lt;/span&gt; &lt;span&gt;ಶಾಪ&lt;/span&gt; &lt;span&gt;ತಟ್ಟಿದ&lt;/span&gt; &lt;span&gt;ರೀತಿಯಲ್ಲೇ&lt;/span&gt; &lt;span&gt;ನಾವು&lt;/span&gt; &lt;span&gt;ಹುಟ್ಟಿದಾಗಿನಿಂದಲೂ&lt;/span&gt; &lt;span&gt;ನೋಡುತ್ತಿದ್ದೀವಲ್ಲ&lt;/span&gt;! &lt;span&gt;ಈಗಲೂ&lt;/span&gt; &lt;span&gt;ಗಣೇಶ&lt;/span&gt; &lt;span&gt;ವಿಗ್ರಹಗಳಲ್ಲೆಲ್ಲಾ&lt;/span&gt; &lt;span&gt;ಹೊಟ್ಟೆಗೆ&lt;/span&gt; &lt;span&gt;ಹಾವು&lt;/span&gt; &lt;span&gt;ಸುತ್ತಿರುತ್ತದೆ&lt;/span&gt;, &lt;span&gt;ಆನೆಯ&lt;/span&gt; &lt;span&gt;ಮೋರೆಯೂ&lt;/span&gt; &lt;span&gt;ಇರುತ್ತದೆ&lt;/span&gt;! &lt;span&gt;ಹಾಗಾಗಿ&lt;/span&gt; &lt;span&gt;ಸ್ವಲ್ಪ&lt;/span&gt; &lt;span&gt;ಸತ್ಯವಂತೂ&lt;/span&gt; &lt;span&gt;ಇದೆ&lt;/span&gt;. &lt;span&gt;ಆದರೆ&lt;/span&gt; &lt;span&gt;ಎಷ್ಟು&lt;/span&gt; &lt;span&gt;ಸತ್ಯ&lt;/span&gt;? &lt;span&gt;ಯಾವುದು&lt;/span&gt; &lt;span&gt;ಸತ್ಯ&lt;/span&gt;? &lt;span&gt;ಚಂದ್ರ&lt;/span&gt; &lt;span&gt;ಬೇರೆ&lt;/span&gt; &lt;span&gt;ಕಾರಣಕ್ಕಾಗಿ&lt;/span&gt; &lt;span&gt;ಈ&lt;/span&gt; &lt;span&gt;ರೀತಿ&lt;/span&gt; &lt;span&gt;ಗೋಚರಿಸುತ್ತಾನೇ&lt;/span&gt;? &lt;span&gt;ಹೀಗೇ&lt;/span&gt; &lt;span&gt;ಬೇಕಾದಷ್ಟು&lt;/span&gt; &lt;span&gt;ಪ್ರಶ್ನೆಗಳಿವೆ&lt;/span&gt;. &lt;span&gt;ಇತ್ತೀಚಿನ&lt;/span&gt; &lt;span&gt;ದಿನಗಳಲ್ಲಂತೂ&lt;/span&gt; &lt;span&gt;ಗಣೇಶನಿಗೆ&lt;/span&gt; &lt;span&gt;ಗಾಂಧೀಜಿಯಂತೆ&lt;/span&gt; &lt;span&gt;ಅಲಂಕಾರ&lt;/span&gt; &lt;span&gt;ಮಾಡುವುದು&lt;/span&gt;, &lt;span&gt;ವೀರಪ್ಪನ್&lt;/span&gt; &lt;span&gt;ಜೊತೆ&lt;/span&gt; &lt;span&gt;ಕೂಡಿಸುವುದು&lt;/span&gt;, &lt;span&gt;ಸುಭಾಷ್&lt;/span&gt; &lt;span&gt;ಚಂದ್ರ&lt;/span&gt; &lt;span&gt;ಬೋಸ್&lt;/span&gt; &lt;span&gt;ರಂತೆ&lt;/span&gt; &lt;span&gt;ಅಲಂಕಾರ&lt;/span&gt; &lt;span&gt;ಮಾಡುವುದು&lt;/span&gt;... &lt;span&gt;ಹೀಗೆ&lt;/span&gt; &lt;span&gt;ಮನಸ್ಸಿಗೆ&lt;/span&gt; &lt;span&gt;ಬಂದಂತೆಲ್ಲಾ&lt;/span&gt; &lt;span&gt;ಗಣೇಶ&lt;/span&gt; &lt;span&gt;ವಿಗ್ರಹಗಳನ್ನು&lt;/span&gt; &lt;span&gt;ಮಾಡುತ್ತಿದ್ದಾರೆ&lt;/span&gt;. &lt;span&gt;ಇಂಥಾ&lt;/span&gt; &lt;span&gt;ಸಂಗತಿಗಳೂ&lt;/span&gt; &lt;span&gt;ನಾಳೆ&lt;/span&gt; &lt;span&gt;ಇತಿಹಾಸದಲ್ಲಿ&lt;/span&gt; &lt;span&gt;ಸೇರಿ&lt;/span&gt; &lt;span&gt;ಹೋಗಿ&lt;/span&gt; "&lt;span&gt;ಗಣೇಶ&lt;/span&gt; &lt;span&gt;ವೀರಪ್ಪನ್&lt;/span&gt; &lt;span&gt;ಬಳಿ&lt;/span&gt; &lt;span&gt;ಇದ್ದ&lt;/span&gt;" &lt;span&gt;ಎಂದು&lt;/span&gt; &lt;span&gt;ಒಂದು&lt;/span&gt; &lt;span&gt;ಕಥೆ&lt;/span&gt; &lt;span&gt;ಮಹಾಭಾರತಲ್ಲೋ&lt;/span&gt; &lt;span&gt;ಗಣೇಶ&lt;/span&gt; &lt;span&gt;ಪುರಾಣದಲ್ಲೋ&lt;/span&gt; &lt;span&gt;ಸೇರಿದರೆ&lt;/span&gt; &lt;span&gt;ಅಚ್ಚರಿಯಿಲ್ಲ&lt;/span&gt;!&lt;br /&gt;&lt;br /&gt;&lt;/div&gt;&lt;div style="text-align: justify;"&gt;&lt;span&gt;ಇದನ್ನೆಲ್ಲಾ&lt;/span&gt; &lt;span&gt;ಯೋಚಿಸಿದರೆ&lt;/span&gt; &lt;span&gt;ತಲೆ&lt;/span&gt; &lt;span&gt;ಕೆಡುತ್ತದೇ&lt;/span&gt; &lt;span&gt;ಹೊರತು&lt;/span&gt; &lt;span&gt;ಬೇರೇನೂ&lt;/span&gt; &lt;span&gt;ಆಗುವುದಿಲ್ಲ&lt;/span&gt;. &lt;span&gt;ಇದನ್ನೆಲ್ಲಾ&lt;/span&gt; &lt;span&gt;ನಾನು&lt;/span&gt; &lt;span&gt;ಇಲ್ಲಿ&lt;/span&gt; &lt;span&gt;ಬರೆಯುವುದಕ್ಕೂ&lt;/span&gt; &lt;span&gt;ಕಾರಣವಿದೆ&lt;/span&gt;. &lt;span&gt;ನಾವು&lt;/span&gt; &lt;span&gt;ಚಿಕ್ಕ&lt;/span&gt; &lt;span&gt;ಮಕ್ಕಳಿಂದ&lt;/span&gt; &lt;span&gt;ಹಿಡಿದು&lt;/span&gt; &lt;span&gt;ದೊಡ್ದವರಿಗೂ&lt;/span&gt; &lt;span&gt;ಇಂಥ&lt;/span&gt; &lt;span&gt;ಕಥೆಗಳನ್ನು&lt;/span&gt; &lt;span&gt;ಭಕ್ತಿಭಾವದಿಂದ&lt;/span&gt; &lt;span&gt;ಹೇಳಿ&lt;/span&gt; &lt;span&gt;ಕೆನ್ನೆ&lt;/span&gt; &lt;span&gt;ತಟ್ಟಿಕೊಳ್ಳುವಂತೆ&lt;/span&gt; &lt;span&gt;ಮಾಡುವ&lt;/span&gt; &lt;span&gt;ಮುಂಚೆ&lt;/span&gt; &lt;span&gt;ಸ್ವಲ್ಪ&lt;/span&gt; &lt;span&gt;ಯೋಚಿಸೋಣ&lt;/span&gt;. &lt;span&gt;ನಮಗೂ&lt;/span&gt; &lt;span&gt;ನಮ್ಮ&lt;/span&gt; &lt;span&gt;ಹಿರಿಯರು&lt;/span&gt; &lt;span&gt;ಹೇಳಿದ&lt;/span&gt; &lt;span&gt;ಕಥೆಗಳಿವು&lt;/span&gt;. &lt;span&gt;ಭಾರತೀಯ&lt;/span&gt; &lt;span&gt;ಸಂಸ್ಕೃತಿಯ&lt;/span&gt; &lt;span&gt;ಜೊತೆಗೇ&lt;/span&gt; &lt;span&gt;ಬಂದ&lt;/span&gt; &lt;span&gt;ಕಥೆಗಳು&lt;/span&gt; &lt;span&gt;ಇವೆಲ್ಲವೂ&lt;/span&gt;. &lt;span&gt;ಇದನ್ನು&lt;/span&gt; &lt;span&gt;ಅವಶ್ಯವಾಗಿ&lt;/span&gt; &lt;span&gt;ನಾವೂ&lt;/span&gt; &lt;span&gt;ಹತ್ತು&lt;/span&gt; &lt;span&gt;ಜನರಿಗೆ&lt;/span&gt; &lt;span&gt;ತಿಳಿಸಬೇಕು&lt;/span&gt;. &lt;span&gt;ಆದರೆ&lt;/span&gt; &lt;span&gt;ಇದನ್ನೆಲ್ಲಾ&lt;/span&gt; &lt;span&gt;ತಿಳಿಸುವಾಗ&lt;/span&gt; &lt;span&gt;ಅನೇಕರು&lt;/span&gt; "&lt;span&gt;ಇದರ&lt;/span&gt; &lt;span&gt;ಸತ್ಯಾಸತ್ಯತೆಯ&lt;/span&gt; &lt;span&gt;ಬಗ್ಗೆ&lt;/span&gt; &lt;span&gt;ಹೆಚ್ಚು&lt;/span&gt; &lt;span&gt;ಪ್ರಶ್ನೆ&lt;/span&gt; &lt;span&gt;ಮಾಡಬೇಡ&lt;/span&gt;. &lt;span&gt;ಅಂಥ&lt;/span&gt; &lt;span&gt;ಪ್ರಶ್ನೆ&lt;/span&gt; &lt;span&gt;ಏನಾದರೂ&lt;/span&gt; &lt;span&gt;ಮನಸ್ಸಿನಲ್ಲಿ&lt;/span&gt; &lt;span&gt;ಉದ್ಭವಿಸಿದರೆ&lt;/span&gt; &lt;span&gt;ಪಾಪ&lt;/span&gt; &lt;span&gt;ಬರುತ್ತದೆ&lt;/span&gt; &lt;span&gt;ನಿನಗೆ&lt;/span&gt;. &lt;span&gt;ಪ್ರಾಯಶ್ಚಿತ್ತವಾಗಿ&lt;/span&gt; &lt;span&gt;ಸುಮ್ಮನೆ&lt;/span&gt; &lt;span&gt;ಕೆನ್ನೆ&lt;/span&gt; &lt;span&gt;ತಟ್ಟಿಕೊಂಡು&lt;/span&gt; &lt;span&gt;ನಮಸ್ಕರಿಸು&lt;/span&gt;, &lt;span&gt;ಗಣೇಶನ&lt;/span&gt; &lt;span&gt;ಮುಂದೆ&lt;/span&gt; &lt;span&gt;ನೂರು&lt;/span&gt; &lt;span&gt;ಭಸ್ಕಿ&lt;/span&gt; &lt;span&gt;ಹೊಡಿ&lt;/span&gt;" &lt;span&gt;ಇತ್ಯಾದಿ&lt;/span&gt; &lt;span&gt;ಹೇಳುವುದನ್ನು&lt;/span&gt; &lt;span&gt;ಅನೇಕ&lt;/span&gt; &lt;span&gt;ಬಾರಿ&lt;/span&gt; &lt;span&gt;ಕೇಳಿದ್ದೇನೆ&lt;/span&gt;. &lt;span&gt;ಹೀಗೆ&lt;/span&gt; &lt;span&gt;ನಮ್ಮ&lt;/span&gt; &lt;span&gt;ನಂಬಿಕೆಗಳನ್ನು&lt;/span&gt; &lt;span&gt;ಮತ್ತೊಬ್ಬರೂ&lt;/span&gt; &lt;span&gt;ನಂಬಬೇಕು&lt;/span&gt; &lt;span&gt;ಎಂದು&lt;/span&gt; &lt;span&gt;ಒತ್ತಡ&lt;/span&gt; &lt;span&gt;ಹೇರುವುದು&lt;/span&gt; &lt;span&gt;ತಪ್ಪು&lt;/span&gt;. &lt;span&gt;ನಮಗಿಂತ&lt;/span&gt; &lt;span&gt;ಬುದ್ಧಿ&lt;/span&gt; &lt;span&gt;ಬೇರೆಯವರಿಗೆ&lt;/span&gt; &lt;span&gt;ಇರಬಹುದು&lt;/span&gt; &lt;span&gt;ಎಂಬ&lt;/span&gt; &lt;span&gt;ಬುದ್ಧಿ&lt;/span&gt; &lt;span&gt;ನಮಗೆ&lt;/span&gt; &lt;span&gt;ಇರಬೇಕು&lt;/span&gt;. &lt;span&gt;ಪ್ರಶ್ನಿಸುವವರನ್ನು&lt;/span&gt; &lt;span&gt;ಬೈಯ್ಯುವುದು&lt;/span&gt; &lt;span&gt;ತರವಲ್ಲ&lt;/span&gt;. &lt;span&gt;ಆ&lt;/span&gt; &lt;span&gt;ದೇವರೇ&lt;/span&gt; &lt;span&gt;ಪ್ರಶ್ನಿಸುವ&lt;/span&gt; &lt;span&gt;ಬುದ್ಧಿ&lt;/span&gt; &lt;span&gt;ಕೊಟ್ಟ&lt;/span&gt;. &lt;span&gt;ಹಾಗಾಗಿ&lt;/span&gt; &lt;span&gt;ಪ್ರಶ್ನಿಸುತ್ತೇವೆ&lt;/span&gt;. &lt;span&gt;ಅದರಲ್ಲೇನು&lt;/span&gt; &lt;span&gt;ತಪ್ಪು&lt;/span&gt;? &lt;span&gt;ಪ್ರತಿಯೊಬ್ಬನಿಗೂ&lt;/span&gt; &lt;span&gt;ಕಥೆ&lt;/span&gt; &lt;span&gt;ಹೇಳೋಣ&lt;/span&gt;. &lt;span&gt;ಅವರವರ&lt;/span&gt; &lt;span&gt;ಬುದ್ಧಿಗೆ&lt;/span&gt; &lt;span&gt;ಓಡಿದಂತೆ&lt;/span&gt; &lt;span&gt;ಅವರು&lt;/span&gt; &lt;span&gt;ನಂಬುವುದೋ&lt;/span&gt; &lt;span&gt;ಬಿಡುವುದೋ&lt;/span&gt; &lt;span&gt;ಮಾಡುತ್ತಾರೆ&lt;/span&gt;. &lt;span&gt;ಯಾರ&lt;/span&gt; &lt;span&gt;ಮೇಲೂ&lt;/span&gt; &lt;span&gt;ನಮ್ಮ&lt;/span&gt; &lt;span&gt;ನಂಬಿಕೆಗಳನ್ನು&lt;/span&gt; &lt;span&gt;ಹೇರುವುದು&lt;/span&gt; &lt;span&gt;ಬೇಡ&lt;/span&gt;. &lt;span&gt;ಗಣಪತಿ&lt;/span&gt; &lt;span&gt;ಇಲಿಯ&lt;/span&gt; &lt;span&gt;ಮೇಲೆ&lt;/span&gt; &lt;span&gt;ಓಡಾಡುತ್ತಾನೆ&lt;/span&gt;, &lt;span&gt;ಅವನಿಗೆ&lt;/span&gt; &lt;span&gt;ಆನೆಯ&lt;/span&gt; &lt;span&gt;ಮೋರೆಯಿದೆ&lt;/span&gt;, &lt;span&gt;ದಂತವನ್ನು&lt;/span&gt; &lt;span&gt;ಕಿತ್ತು&lt;/span&gt; &lt;span&gt;ಚಂದ್ರನತ್ತ&lt;/span&gt; &lt;span&gt;ಎಸೆದುದರಿಂದ&lt;/span&gt; &lt;span&gt;ಅವನಿಗೆ&lt;/span&gt; &lt;span&gt;ಒಂದೇ&lt;/span&gt; &lt;span&gt;ದಂತ&lt;/span&gt;, &lt;span&gt;ಇತ್ಯಾದಿ&lt;/span&gt; &lt;span&gt;ಕಥೆಗಳನ್ನು&lt;/span&gt; &lt;span&gt;ನಂಬಲು&lt;/span&gt; &lt;span&gt;ಅನೇಕರಿಗೆ&lt;/span&gt; &lt;span&gt;ಆಗುವುದಿಲ್ಲ&lt;/span&gt;. &lt;span&gt;ಅವರವರ&lt;/span&gt; &lt;span&gt;ಬುದ್ಧಿ&lt;/span&gt; &lt;span&gt;ತೋರಿಸಿದ&lt;/span&gt; &lt;span&gt;ದಾರಿಯಲ್ಲಿ&lt;/span&gt; &lt;span&gt;ಅವರನ್ನು&lt;/span&gt; &lt;span&gt;ಹೋಗಲು&lt;/span&gt; &lt;span&gt;ಬಿಡೋಣ&lt;/span&gt;.&lt;br /&gt;&lt;br /&gt;&lt;span&gt;ಗಣೇಶ&lt;/span&gt; &lt;span&gt;ಚಂದ್ರನಿಗೆ&lt;/span&gt; &lt;span&gt;ಶಾಪಕೊಟ್ಟ&lt;/span&gt; &lt;span&gt;ತಿಥಿಯಾದ&lt;/span&gt; &lt;span&gt;ಗಣೇಶ&lt;/span&gt; &lt;span&gt;ಚತುರ್ಥಿಯಂದು&lt;/span&gt; &lt;span&gt;ಚಂದ್ರನನ್ನು&lt;/span&gt; &lt;span&gt;ನೋಡಿದರೆ&lt;/span&gt; &lt;span&gt;ಅನಿಷ್ಟ&lt;/span&gt; &lt;span&gt;ಎಂದು&lt;/span&gt; &lt;span&gt;ಹಲವರ&lt;/span&gt; &lt;span&gt;ನಂಬಿಕೆ&lt;/span&gt; &lt;span&gt;ಇದೆ&lt;/span&gt;. &lt;span&gt;ಅದರ&lt;/span&gt; &lt;span&gt;ಪರಿಹಾರಕ್ಕಾಗಿ&lt;/span&gt; &lt;span&gt;ಸ್ಯಮಂತಕೋಪಾಖ್ಯಾನವನ್ನು&lt;/span&gt; &lt;span&gt;ಕೇಳುವ&lt;/span&gt; &lt;span&gt;ಸಂಪ್ರದಾಯವೂ&lt;/span&gt; &lt;span&gt;ಇದೆ&lt;/span&gt;. &lt;span&gt;ಇದನ್ನು&lt;/span&gt; &lt;span&gt;ನಂಬುವವರು&lt;/span&gt; &lt;span&gt;ನಂಬಲಿ&lt;/span&gt;. &lt;span&gt;ನಂಬುವುದರಿಂದ&lt;/span&gt; &lt;span&gt;ಸಮಾಜಕ್ಕೆ&lt;/span&gt; &lt;span&gt;ಯಾವ&lt;/span&gt; &lt;span&gt;ಅಡ್ಡಿಯೂ&lt;/span&gt; &lt;span&gt;ಇಲ್ಲ&lt;/span&gt;. &lt;span&gt;ಆದರೆ&lt;/span&gt; &lt;span&gt;ಗಣೇಶ&lt;/span&gt; &lt;span&gt;ಚತುರ್ಥಿಯಂದು&lt;/span&gt; &lt;span&gt;ಚಂದ್ರನನ್ನು&lt;/span&gt; &lt;span&gt;ನೋಡಿದರೆ&lt;/span&gt; &lt;span&gt;ಅನಿಷ್ಟದ&lt;/span&gt; &lt;span&gt;ಪರಿಹಾರಕ್ಕೆ&lt;/span&gt; &lt;span&gt;ಪಕ್ಕದ&lt;/span&gt; &lt;span&gt;ಮನೆಗೆ&lt;/span&gt; &lt;span&gt;ಕಲ್ಲೆಸಿಯಬೇಕು&lt;/span&gt; &lt;span&gt;ಎಂದು&lt;/span&gt; &lt;span&gt;ಕೆಲವರು&lt;/span&gt; &lt;span&gt;ಹೇಳುತ್ತಾರೆ&lt;/span&gt;! &lt;span&gt;ಕೆಲವರು&lt;/span&gt; &lt;span&gt;ಪಕ್ಕದ&lt;/span&gt; &lt;span&gt;ಮನೆಯ&lt;/span&gt; &lt;span&gt;ಸೂರಿನ&lt;/span&gt; &lt;span&gt;ಮೇಲೆ&lt;/span&gt; &lt;span&gt;ಕಲ್ಲು&lt;/span&gt; &lt;span&gt;ಎಸೆಯಬೇಕು&lt;/span&gt; &lt;span&gt;ಎಂದು&lt;/span&gt; &lt;span&gt;ಹೇಳುತ್ತಾರೆ&lt;/span&gt;. &lt;span&gt;ಇದು&lt;/span&gt; &lt;span&gt;ಕರ್ಮಕಾಂಡದ&lt;/span&gt; &lt;span&gt;ಪರಮಾವಧಿ&lt;/span&gt;! &lt;span&gt;ಹಾಗೇನಾದರೂ&lt;/span&gt; &lt;span&gt;ಮಾಡಿದರೆ&lt;/span&gt; &lt;span&gt;ಗಣೇಶ&lt;/span&gt; &lt;span&gt;ಚಂದ್ರನಿಗೆ&lt;/span&gt; &lt;span&gt;ಕೊಟ್ಟಂತೆ&lt;/span&gt; &lt;span&gt;ನಮಗೂ&lt;/span&gt; &lt;span&gt;ಶಾಪ&lt;/span&gt; &lt;span&gt;ಕೊಡಬಹುದೇ&lt;/span&gt; &lt;span&gt;ಹೊರತು&lt;/span&gt; &lt;span&gt;ಅನಿಷ್ಟ&lt;/span&gt; &lt;span&gt;ಪರಿಹಾರವಂತೂ&lt;/span&gt; &lt;span&gt;ಆಗುವುದಿಲ್ಲ&lt;/span&gt;. &lt;span&gt;ಪರರನ್ನು&lt;/span&gt; &lt;span&gt;ಹಿಂಸಿಸುವುದರಿಂದ&lt;/span&gt; &lt;span&gt;ಅನಿಷ್ಟವೃದ್ಧಿಯಷ್ಟೇ&lt;/span&gt; &lt;span&gt;ಆಗುವುದು&lt;/span&gt;! &lt;span&gt;ಇಂಥ&lt;/span&gt; &lt;span&gt;ಸಮಾಜಘಾತಕ&lt;/span&gt; &lt;span&gt;ಕೃತ್ಯಗಳನ್ನು&lt;/span&gt; &lt;span&gt;ಎಸಗದಿರಬೇಕು&lt;/span&gt;. &lt;span&gt;ದೇವರಿಗೆ&lt;/span&gt; &lt;span&gt;ಪ್ರಾಣಿಗಳ&lt;/span&gt; &lt;span&gt;ಬಲಿ&lt;/span&gt; &lt;span&gt;ಕೊಡುವ&lt;/span&gt; &lt;span&gt;ಸಂಪ್ರದಾಯದಂತೆಯೇ&lt;/span&gt; &lt;span&gt;ಇದಕ್ಕೂ&lt;/span&gt; &lt;span&gt;ಅರ್ಥವಿಲ್ಲ&lt;/span&gt;. &lt;span&gt;ಆಗುವುದು&lt;/span&gt; &lt;span&gt;ಅನರ್ಥ&lt;/span&gt; &lt;span&gt;ಮಾತ್ರ&lt;/span&gt;.&lt;br /&gt;&lt;br /&gt;&lt;span&gt;ಪುರಾಣಗಳಲ್ಲಿ&lt;/span&gt; &lt;span&gt;ಹೇಳಿದೆ&lt;/span&gt;, &lt;span&gt;ವೇದದಲ್ಲಿ&lt;/span&gt; &lt;span&gt;ಹೇಳಿದೆ&lt;/span&gt;... &lt;span&gt;ಹಾಗಾಗಿ&lt;/span&gt; &lt;span&gt;ಇದೆಲ್ಲಾ&lt;/span&gt; &lt;span&gt;ಮಾಡಲೇಬೇಕು&lt;/span&gt; &lt;span&gt;ಎನ್ನುವರಿಗೆ&lt;/span&gt; &lt;span&gt;ಇಂದು&lt;/span&gt; &lt;span&gt;ನಮಗೆ&lt;/span&gt; &lt;span&gt;ಸಿಗುವ&lt;/span&gt; &lt;span&gt;ಪೌರಾಣಿಕ&lt;/span&gt; &lt;span&gt;ಗ್ರಂಥಗಳು&lt;/span&gt; &lt;span&gt;ಶುದ್ಧವಾದ್ದಲ್ಲ&lt;/span&gt; &lt;span&gt;ಎಂದು&lt;/span&gt; &lt;span&gt;ಗೊತ್ತಿರಲಿ&lt;/span&gt;. &lt;span&gt;ಗಣೇಶನ&lt;/span&gt; &lt;span&gt;ವಿಷಯದಲ್ಲೇ&lt;/span&gt; &lt;span&gt;ಈ&lt;/span&gt; &lt;span&gt;ಸಂಗತಿಗೊಂದು&lt;/span&gt; &lt;span&gt;ಪ್ರಸಿದ್ಧ&lt;/span&gt; &lt;span&gt;ಉದಾಹರಣೆ&lt;/span&gt; &lt;span&gt;ಇದೆ&lt;/span&gt;. &lt;span&gt;ಅದು&lt;/span&gt; &lt;span&gt;ಗಣೇಶನು&lt;/span&gt; &lt;span&gt;ಮಹಾಭಾರತವನ್ನು&lt;/span&gt; &lt;span&gt;ಬರೆದ&lt;/span&gt; &lt;span&gt;ಕಥೆ&lt;/span&gt;. &lt;span&gt;ವ್ಯಾಸರಿಗೆ&lt;/span&gt; &lt;span&gt;ಭಾರತ&lt;/span&gt; &lt;span&gt;ಬರೆಯಲು&lt;/span&gt; &lt;span&gt;ಲಿಪಿಕಾರರು&lt;/span&gt; &lt;span&gt;ಬೇಕಾಗಿತ್ತಂತೆ&lt;/span&gt;. &lt;span&gt;ಆಗ&lt;/span&gt; &lt;span&gt;ಗಣೇಶ&lt;/span&gt; &lt;span&gt;ಮುಂದೆ&lt;/span&gt; &lt;span&gt;ಬಂದು&lt;/span&gt; &lt;span&gt;ಒಂದು&lt;/span&gt; &lt;span&gt;ಶರತ್ತಿನ&lt;/span&gt; &lt;span&gt;ಮೇಲೆ&lt;/span&gt; &lt;span&gt;ಬರೆಯಲು&lt;/span&gt; &lt;span&gt;ಒಪ್ಪಿಕೊಂಡನಂತೆ&lt;/span&gt;. &lt;span&gt;ತಡೆಯಿಲ್ಲದೇ&lt;/span&gt; &lt;span&gt;ಎಲ್ಲಾ&lt;/span&gt; &lt;span&gt;ಶ್ಲೋಕಗಳನ್ನೂ&lt;/span&gt; &lt;span&gt;ಹೇಳಬೇಕು&lt;/span&gt; &lt;span&gt;ಎಂಬುದೇ&lt;/span&gt; &lt;span&gt;ಅವನ&lt;/span&gt; &lt;span&gt;ಶರತ್ತು&lt;/span&gt;. &lt;span&gt;ಅದಕ್ಕೆ&lt;/span&gt; &lt;span&gt;ವ್ಯಾಸರು&lt;/span&gt; &lt;span&gt;ಒಪ್ಪಿಕೊಂಡರಂತೆ&lt;/span&gt;. &lt;span&gt;ವ್ಯಾಸರಿಗೆ&lt;/span&gt; &lt;span&gt;ವಿಶ್ರಾಂತಿ&lt;/span&gt; &lt;span&gt;ಬೇಕೆನ್ನಿಸಿದಾಗೆಲ್ಲಾ&lt;/span&gt; &lt;span&gt;ಬಹಳ&lt;/span&gt; &lt;span&gt;ಕಷ್ಟಕರವಾದ&lt;/span&gt; &lt;span&gt;ಶ್ಲೋಕಗಳನ್ನು&lt;/span&gt; &lt;span&gt;ಹೇಳಿ&lt;/span&gt; &lt;span&gt;ಗಣೇಶ&lt;/span&gt; &lt;span&gt;ಹೆಚ್ಚು&lt;/span&gt; &lt;span&gt;ಸಮಯ&lt;/span&gt; &lt;span&gt;ತೆಗೆದುಕೊಳ್ಳುವಂತೆ&lt;/span&gt; &lt;span&gt;ಮಾಡುತ್ತಿದ್ದರಂತೆ&lt;/span&gt;. &lt;span&gt;ಈ&lt;/span&gt; &lt;span&gt;ಕಥೆಯೂ&lt;/span&gt; &lt;span&gt;ಅಷ್ಟೇ&lt;/span&gt;, &lt;span&gt;ಮಹಾಭಾರತದ&lt;/span&gt; &lt;span&gt;ಜೊತೆಗೆ&lt;/span&gt; &lt;span&gt;ಬಂದಿದ್ದಲ್ಲ&lt;/span&gt;. &lt;span&gt;ನಂತರ&lt;/span&gt; &lt;span&gt;ಯಾರೋ&lt;/span&gt; &lt;span&gt;ಯಾವಾಗಲೋ&lt;/span&gt; &lt;span&gt;ಸೇರಿಸಿದ&lt;/span&gt; &lt;span&gt;ಕಥೆ&lt;/span&gt; &lt;span&gt;ಇದು&lt;/span&gt;. &lt;span&gt;ಎಷ್ಟೋ&lt;/span&gt; &lt;span&gt;ಜನ&lt;/span&gt; &lt;span&gt;ತಿಳಿದವರು&lt;/span&gt; &lt;span&gt;ಇದು&lt;/span&gt; &lt;span&gt;ಮೂಲ&lt;/span&gt; &lt;span&gt;ಭಾರತದಲ್ಲಿಲ್ಲ&lt;/span&gt;, &lt;span&gt;ಅನಂತರ&lt;/span&gt; &lt;span&gt;ಬಂದದ್ದು&lt;/span&gt; &lt;span&gt;ಎಂದು&lt;/span&gt; &lt;span&gt;ಈ&lt;/span&gt; &lt;span&gt;ಭಾಗವನ್ನು&lt;/span&gt; '&lt;span&gt;ಪರಿಶಿಷ್ಟ&lt;/span&gt;' &lt;span&gt;ಎಂದಿದ್ದಾರೆ&lt;/span&gt;. &lt;span&gt;ಈ&lt;/span&gt; &lt;span&gt;ಕಥೆಯನ್ನು&lt;/span&gt; &lt;span&gt;ನಂಬುವುದೂ&lt;/span&gt; &lt;span&gt;ಕಷ್ಟ&lt;/span&gt;. &lt;span&gt;ವ್ಯಾಸರನ್ನು&lt;/span&gt; &lt;span&gt;ನಾರಾಯಣನ&lt;/span&gt; &lt;span&gt;ಅವತಾರ&lt;/span&gt; &lt;span&gt;ಎಂದೇ&lt;/span&gt; &lt;span&gt;ಪರಿಗಣಿಸುತ್ತಾರೆ&lt;/span&gt;. &lt;span&gt;ಅಂಥವರಿಗೆ&lt;/span&gt; &lt;span&gt;ತಾನೇ&lt;/span&gt; &lt;span&gt;ಮಹಾಭಾರತ&lt;/span&gt; &lt;span&gt;ಬರೆಯಲು&lt;/span&gt; &lt;span&gt;ಆಗುತ್ತಿರಲಿಲ್ಲವೇ&lt;/span&gt;? &lt;span&gt;ಅಥವಾ&lt;/span&gt; &lt;span&gt;ಇಷ್ಟೊಂದು&lt;/span&gt; &lt;span&gt;ಬರೆಯುವ&lt;/span&gt; &lt;span&gt;ಶಕ್ತಿ&lt;/span&gt; &lt;span&gt;ಇರಲಿಲ್ಲವೇ&lt;/span&gt;? &lt;span&gt;ಮಹಾಭಾರತ&lt;/span&gt; &lt;span&gt;ಐದು&lt;/span&gt; &lt;span&gt;ಸಾವಿರ&lt;/span&gt; &lt;span&gt;ವರ್ಷಕ್ಕೂ&lt;/span&gt; &lt;span&gt;ಹಿಂದೆ&lt;/span&gt; &lt;span&gt;ರಚಿಸಿದ&lt;/span&gt; &lt;span&gt;ಗ್ರಂಥ&lt;/span&gt;. &lt;span&gt;ತಿಳಿದವರೊಬ್ಬರ&lt;/span&gt; &lt;span&gt;ಅಭಿಪ್ರಾಯದ&lt;/span&gt; &lt;span&gt;ಪ್ರಕಾರ&lt;/span&gt; &lt;span&gt;ಆಗ&lt;/span&gt; &lt;span&gt;ಗ್ರಂಥಗಳನ್ನು&lt;/span&gt; &lt;span&gt;ಬರೆಯುವ&lt;/span&gt; &lt;span&gt;ಅಭ್ಯಾಸವೇ&lt;/span&gt; &lt;span&gt;ಇರಲಿಲ್ಲ&lt;/span&gt;. &lt;span&gt;ಒಬ್ಬರು&lt;/span&gt; &lt;span&gt;ಮತ್ತೊಬ್ಬರಿಗೆ&lt;/span&gt; &lt;span&gt;ಒಂದು&lt;/span&gt; &lt;span&gt;ಬಾರಿ&lt;/span&gt; &lt;span&gt;ಹೇಳಿಕೊಟ್ಟರೆ&lt;/span&gt; &lt;span&gt;ಅದು&lt;/span&gt; &lt;span&gt;ಅವರಿಗೆ&lt;/span&gt; &lt;span&gt;ನೆನಪಿರುತ್ತಿತ್ತು&lt;/span&gt;. &lt;span&gt;ಮನುಷ್ಯ&lt;/span&gt; &lt;span&gt;ನೆನಪಿಟ್ಟುಕೊಳ್ಳಲು&lt;/span&gt; &lt;span&gt;ಮೊದಲು&lt;/span&gt; &lt;span&gt;ಬರೆಯುವುದು&lt;/span&gt;, &lt;span&gt;ನಂತರ&lt;/span&gt; &lt;span&gt;ಭಾವಚಿತ್ರ&lt;/span&gt; &lt;span&gt;ಇಟ್ಟುಕೊಳ್ಳುವುದು&lt;/span&gt;, &lt;span&gt;ನಂತರ&lt;/span&gt; &lt;span&gt;ಧ್ವನಿಸುರುಳಿಗಳನ್ನು&lt;/span&gt; &lt;span&gt;ಮಾಡಿಕೊಳ್ಳುವುದು&lt;/span&gt;, &lt;span&gt;ನಂತರ&lt;/span&gt; &lt;span&gt;ಕಂಪ್ಯೂಟರ್&lt;/span&gt; &lt;span&gt;ಮೊದಲಾದ&lt;/span&gt; &lt;span&gt;ಸೋಪಾನಗಳನ್ನು&lt;/span&gt; &lt;span&gt;ಉಪಯೋಸಿವುದು&lt;/span&gt;... &lt;span&gt;ಹೀಗೇ&lt;/span&gt; &lt;span&gt;ಮಾಡಿ&lt;/span&gt; &lt;span&gt;ತನ್ನ&lt;/span&gt; &lt;span&gt;ಸ್ಮರಣಶಕ್ತಿಯ&lt;/span&gt; &lt;span&gt;ಬಳಕೆಯನ್ನು&lt;/span&gt; &lt;span&gt;ಕಡೆಮೆ&lt;/span&gt; &lt;span&gt;ಮಾಡಿಕೊಂಡು&lt;/span&gt; &lt;span&gt;ಕ್ರಮೇಣ&lt;/span&gt; &lt;span&gt;ಸ್ಮರಣ&lt;/span&gt; &lt;span&gt;ಶಕ್ತಿಯನ್ನೇ&lt;/span&gt; &lt;span&gt;ಕಳೆದುಕೊಂಡ&lt;/span&gt;. &lt;span&gt;ಆದರೆ&lt;/span&gt; &lt;span&gt;ಹಿಂದಿನ&lt;/span&gt; &lt;span&gt;ಕಾಲದಲ್ಲಿ&lt;/span&gt; &lt;span&gt;ಒಮ್ಮೆ&lt;/span&gt; &lt;span&gt;ಕೇಳಿದ್ದನ್ನು&lt;/span&gt; &lt;span&gt;ಸಾಯುವ&lt;/span&gt; &lt;span&gt;ತನಕ&lt;/span&gt; &lt;span&gt;ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರು&lt;/span&gt; &lt;span&gt;ಎನ್ನುವುದಕ್ಕೆ&lt;/span&gt; &lt;span&gt;ಸಾಕ್ಷಿಯಾಗಿ&lt;/span&gt; &lt;span&gt;ಹಾಗೆಯೇ&lt;/span&gt; &lt;span&gt;ಇಂದೂ&lt;/span&gt; &lt;span&gt;ನೆನಪಿಟ್ಟುಕೊಳ್ಳುವ&lt;/span&gt; &lt;span&gt;ಕೆಲವರು&lt;/span&gt; &lt;span&gt;ಇದ್ದಾರೆ&lt;/span&gt;. &lt;span&gt;ಇದನ್ನು&lt;/span&gt; &lt;span&gt;ಗಮನಿಸಿದರೆ&lt;/span&gt; &lt;span&gt;ಭಾರತವನ್ನು&lt;/span&gt; &lt;span&gt;ಇತ್ತೀಚಿನ&lt;/span&gt; &lt;span&gt;ಕೆಲವು&lt;/span&gt; &lt;span&gt;ನೂರು&lt;/span&gt; &lt;span&gt;ವರ್ಷಗಳಲ್ಲೋ&lt;/span&gt; &lt;span&gt;ಅಥವಾ&lt;/span&gt; &lt;span&gt;ಒಂದೆರಡು&lt;/span&gt; &lt;span&gt;ಸಾವಿರ&lt;/span&gt; &lt;span&gt;ವರ್ಷಗಳಲ್ಲೋ&lt;/span&gt; &lt;span&gt;ಲಿಪಿಯ&lt;/span&gt; &lt;span&gt;ಬಳಕೆ&lt;/span&gt; &lt;span&gt;ಬಂದಮೇಲೆ&lt;/span&gt; &lt;span&gt;ಬರೆದಿಟ್ಟ&lt;/span&gt; &lt;span&gt;ಸಂಭವವೇ&lt;/span&gt; &lt;span&gt;ಹೆಚ್ಚು&lt;/span&gt;. &lt;span&gt;ಹಾಗಾಗಿ&lt;/span&gt; &lt;span&gt;ಮಹಾಭಾರತವನ್ನು&lt;/span&gt; &lt;span&gt;ಬರೆದಿದ್ದು&lt;/span&gt; &lt;span&gt;ಗಣಪತಿಯಲ್ಲ&lt;/span&gt;. &lt;span&gt;ಇದೆಲ್ಲಾ&lt;/span&gt; &lt;span&gt;ಯಾರೋ&lt;/span&gt; &lt;span&gt;ಸೇರಿಸಿದ&lt;/span&gt; &lt;span&gt;ಕಥೆಯಷ್ಟೇ&lt;/span&gt;. &lt;span&gt;ಮಹಾಭಾರತದಂಥ&lt;/span&gt; &lt;span&gt;ಗ್ರಂಥಕ್ಕೇ&lt;/span&gt; &lt;span&gt;ಈ&lt;/span&gt; &lt;span&gt;ರೀತಿ&lt;/span&gt; &lt;span&gt;ಕಥೆ&lt;/span&gt; &lt;span&gt;ಸೇರಿಸಿರುವವರು&lt;/span&gt; &lt;span&gt;ಪುರಾಣಗಳನ್ನು&lt;/span&gt; &lt;span&gt;ಬಿಟ್ಟಿರುತ್ತಾರೇ&lt;/span&gt;? &lt;span&gt;ಖಂಡಿತ&lt;/span&gt; &lt;span&gt;ಇಲ್ಲ&lt;/span&gt;. &lt;span&gt;ಎಲ್ಲಾ&lt;/span&gt; &lt;span&gt;ಪುರಾಣಗಳೂ&lt;/span&gt; &lt;span&gt;ಸತ್ಯವಲ್ಲ&lt;/span&gt;. &lt;span&gt;ಸತ್ಯವಾದ&lt;/span&gt; &lt;span&gt;ಪುರಾಣಗಳ&lt;/span&gt; &lt;span&gt;ಶುದ್ಧ&lt;/span&gt; &lt;span&gt;ಪಾಠ&lt;/span&gt; &lt;span&gt;ನಮಗೆ&lt;/span&gt; &lt;span&gt;ದೊರೆತಿರುವುದೂ&lt;/span&gt; &lt;span&gt;ಸಂಶಯವೇ&lt;/span&gt;.&lt;br /&gt;&lt;br /&gt;&lt;span&gt;ಇಷ್ಟೆಲ್ಲಾ&lt;/span&gt; &lt;span&gt;ತಲೆ&lt;/span&gt; &lt;span&gt;ಕೆಡಿಸುವ&lt;/span&gt; &lt;span&gt;ವಿಚಾರಗಳಿದ್ದರೆ&lt;/span&gt; &lt;span&gt;ನಾವೀಗ&lt;/span&gt; &lt;span&gt;ಗಣೇಶನ&lt;/span&gt; &lt;span&gt;ಪೂಜೆ&lt;/span&gt; &lt;span&gt;ಮಾಡಬೇಕೋ&lt;/span&gt; &lt;span&gt;ಬೇಡವೋ&lt;/span&gt;?&lt;br /&gt;&lt;br /&gt;&lt;span&gt;ನನ್ನ&lt;/span&gt; &lt;span&gt;ಪ್ರಕಾರ&lt;/span&gt;, &lt;span&gt;ದೇವರಲ್ಲಿ&lt;/span&gt;, &lt;span&gt;ಗಣೇಶನಲ್ಲಿ&lt;/span&gt; &lt;span&gt;ನಂಬಿಕೆಯಿದ್ದರೆ&lt;/span&gt; &lt;span&gt;ಮಾಡಬೇಕು&lt;/span&gt;. &lt;span&gt;ನೂರು&lt;/span&gt; &lt;span&gt;ಪುರಾಣಗಳು&lt;/span&gt; &lt;span&gt;ನೂರು&lt;/span&gt; &lt;span&gt;ಕಥೆ&lt;/span&gt; &lt;span&gt;ಹೇಳಿದರೂ&lt;/span&gt; &lt;span&gt;ಗಣೇಶ&lt;/span&gt; &lt;span&gt;ಎನ್ನುವ&lt;/span&gt; &lt;span&gt;ಜೀವ&lt;/span&gt;/&lt;span&gt;ದೈವ&lt;/span&gt;/&lt;span&gt;ವಸ್ತು&lt;/span&gt;/&lt;span&gt;ವಿಚಾರವೇ&lt;/span&gt; &lt;span&gt;ಇಲ್ಲ&lt;/span&gt; &lt;span&gt;ಎಂದು&lt;/span&gt; &lt;span&gt;ಎಲ್ಲೂ&lt;/span&gt; &lt;span&gt;ಹೇಳಿಲ್ಲ&lt;/span&gt;. &lt;span&gt;ನಿರಾಕಾರ&lt;/span&gt; &lt;span&gt;ಗಣೇಶನನ್ನು&lt;/span&gt; &lt;span&gt;ಪೂಜಿಸುವುದು&lt;/span&gt; &lt;span&gt;ಕಷ್ಟ&lt;/span&gt;. &lt;span&gt;ಹಾಗಾಗಿ&lt;/span&gt;, &lt;span&gt;ಆಸ್ತಿಕರಿಗೆ&lt;/span&gt; &lt;span&gt;ಗಣೇಶನ&lt;/span&gt; &lt;span&gt;ಬಗ್ಗೆ&lt;/span&gt; &lt;span&gt;ಭೇದವಿಲ್ಲದ&lt;/span&gt; &lt;span&gt;ಕೆಲವು&lt;/span&gt; &lt;span&gt;ವಿಚಾರಗಳಿವೆ&lt;/span&gt;. &lt;span&gt;ಈಗಿರುವಂತೆಯೇ&lt;/span&gt; &lt;span&gt;ಆನೆಯ&lt;/span&gt; &lt;span&gt;ಮುಖ&lt;/span&gt;, &lt;span&gt;ಹೊಟ್ಟೆಗೊಂದು&lt;/span&gt; &lt;span&gt;ಹಾವು&lt;/span&gt;, &lt;span&gt;ಇಲಿಯ&lt;/span&gt; &lt;span&gt;ವಾಹನ&lt;/span&gt;, &lt;span&gt;ಕೈಯ್ಯಲ್ಲೊಂದು&lt;/span&gt; &lt;span&gt;ಕಡುಬು&lt;/span&gt; &lt;span&gt;ಇತ್ಯಾದಿಯೇ&lt;/span&gt; &lt;span&gt;ಅವನ&lt;/span&gt; &lt;span&gt;ಆಕಾರವಾಗಿಟ್ಟುಕೊಳ್ಳೋಣ&lt;/span&gt;. &lt;span&gt;ಆದರೆ&lt;/span&gt; &lt;span&gt;ಗಣೇಶನ&lt;/span&gt; &lt;span&gt;ಬಗ್ಗೆ&lt;/span&gt; &lt;span&gt;ಇರುವ&lt;/span&gt; &lt;span&gt;ಗೊಂದಲದ&lt;/span&gt; &lt;span&gt;ಕಥೆಗಳನ್ನು&lt;/span&gt; &lt;span&gt;ನಂಬುವ&lt;/span&gt; &lt;span&gt;ಮುಂಚೆ&lt;/span&gt; &lt;span&gt;ಯೋಚಿಸೋಣ&lt;/span&gt;. &lt;span&gt;ಗಣೇಶನ&lt;/span&gt; &lt;span&gt;ಬಗ್ಗೆ&lt;/span&gt; &lt;span&gt;ಎಲ್ಲರೂ&lt;/span&gt; &lt;span&gt;ಒಪ್ಪುವ&lt;/span&gt; &lt;span&gt;ಅಂಶಗಳು&lt;/span&gt; &lt;span&gt;ಕೆಲವು&lt;/span&gt; &lt;span&gt;ಇವೆ&lt;/span&gt; -&lt;br /&gt;&lt;br /&gt;- &lt;span&gt;ಗಣೇಶ&lt;/span&gt; (&lt;span&gt;ಅಥವಾ&lt;/span&gt; &lt;span&gt;ಗಣಪತಿ&lt;/span&gt;) &lt;span&gt;ಎಂದರೆ&lt;/span&gt; &lt;span&gt;ಗಣಗಳ&lt;/span&gt; &lt;span&gt;ಈಶ&lt;/span&gt;. &lt;span&gt;ಗಣಗಳು&lt;/span&gt; &lt;span&gt;ಎಂದರೆ&lt;/span&gt; &lt;span&gt;ಜೀವಗಣಗಳಾಗಬಹುದು&lt;/span&gt;, &lt;span&gt;ಜಡಗಣಗಳಾಬಹುದು&lt;/span&gt;, &lt;span&gt;ದೇವಗಣಗಳಾಗಬಹುದು&lt;/span&gt;, &lt;span&gt;ಇಂದ್ರಿಯಗಣಗಳಾಗಬಹುದು&lt;/span&gt;, &lt;span&gt;ಚಿತ್ತಗಣಗಳಾಗಬಹುದು&lt;/span&gt;, &lt;span&gt;ಇತ್ಯಾದಿ&lt;/span&gt;. &lt;span&gt;ಇದಕ್ಕೆಲ್ಲಾ&lt;/span&gt; &lt;span&gt;ಒಬ್ಬ&lt;/span&gt; &lt;span&gt;ಒಡೆಯನಿದ್ದಾನಲ್ಲ&lt;/span&gt;, &lt;span&gt;ಅವನನ್ನು&lt;/span&gt; &lt;span&gt;ಗಣೇಶ&lt;/span&gt; &lt;span&gt;ಎಂದು&lt;/span&gt; &lt;span&gt;ಆರಾಧಿಸಬಹುದು&lt;/span&gt;&lt;br /&gt;- &lt;span&gt;ಭಾರತೀಯ&lt;/span&gt; &lt;span&gt;ಸಮಾಜದಲ್ಲಿ&lt;/span&gt; &lt;span&gt;ಹೆಚ್ಚಿನವರು&lt;/span&gt; &lt;span&gt;ದೇವರನ್ನು&lt;/span&gt; &lt;span&gt;ನಂಬಿ&lt;/span&gt; &lt;span&gt;ಬದುಕುವವರು&lt;/span&gt;. &lt;span&gt;ಗಣೇಶನಿಗೆ&lt;/span&gt; &lt;span&gt;ಮೊದಲ&lt;/span&gt; &lt;span&gt;ಪೂಜೆಯಾಗಬೇಕು&lt;/span&gt;, &lt;span&gt;ಅವನು&lt;/span&gt; &lt;span&gt;ವಿಘ್ನ&lt;/span&gt;-&lt;span&gt;ವಿನಾಯಕ&lt;/span&gt; &lt;span&gt;ಮತ್ತು&lt;/span&gt; &lt;span&gt;ವಿಘ್ನ&lt;/span&gt;-&lt;span&gt;ವಿನಾಶಕ&lt;/span&gt; &lt;span&gt;ಎನ್ನುವ&lt;/span&gt; &lt;span&gt;ನಂಬಿಕೆಗಳಲ್ಲಿ&lt;/span&gt; &lt;span&gt;ಭೇದವಿಲ್ಲ&lt;/span&gt;. &lt;span&gt;ಆ&lt;/span&gt; &lt;span&gt;ವಿಘ್ನ&lt;/span&gt;-&lt;span&gt;ವಿನಾಯಕ&lt;/span&gt; &lt;span&gt;ಮತ್ತು&lt;/span&gt; &lt;span&gt;ವಿಘ್ನ&lt;/span&gt;-&lt;span&gt;ವಿನಾಶಕ&lt;/span&gt; &lt;span&gt;ಶಕ್ತಿಗೆ&lt;/span&gt; &lt;span&gt;ಇಂದು&lt;/span&gt; &lt;span&gt;ನಾವು&lt;/span&gt; &lt;span&gt;ನೋಡುವ&lt;/span&gt; &lt;span&gt;ಗಣೇಶನ&lt;/span&gt; &lt;span&gt;ರೂಪ&lt;/span&gt; &lt;span&gt;ಕೊಟ್ಟು&lt;/span&gt; &lt;span&gt;ಆರಾಧಿಸೋಣ&lt;/span&gt;. (&lt;span&gt;ಆರಾಧಿಸಿ&lt;/span&gt; &lt;span&gt;ನಮ್ಮ&lt;/span&gt; &lt;span&gt;ಕೆಲಸ&lt;/span&gt; &lt;span&gt;ಪ್ರಾರಂಭಿಸೋಣ&lt;/span&gt;; &lt;span&gt;ಕೆಲಸ&lt;/span&gt; &lt;span&gt;ಮಾಡದೇ&lt;/span&gt; &lt;span&gt;ಕೇವಲ&lt;/span&gt; &lt;span&gt;ಗಣೇಶನನ್ನು&lt;/span&gt; &lt;span&gt;ಆರಾಧಿಸಿದರೆ&lt;/span&gt; &lt;span&gt;ಏನೂ&lt;/span&gt; &lt;span&gt;ಪ್ರಯೋಜನವಿಲ್ಲ&lt;/span&gt;!)&lt;br /&gt;- &lt;span&gt;ಕಡುಬು&lt;/span&gt; &lt;span&gt;ಇತ್ಯಾದಿ&lt;/span&gt; &lt;span&gt;ಸಿಹಿಗಳನ್ನು&lt;/span&gt; &lt;span&gt;ತಿಂದು&lt;/span&gt; &lt;span&gt;ಎಲ್ಲರೂ&lt;/span&gt; &lt;span&gt;ಸಂತೋಷವಾಗಿರಲು&lt;/span&gt; &lt;span&gt;ಗಣೇಶ&lt;/span&gt; &lt;span&gt;ಕಾರಣನಾಗಿದ್ದಾರೆ&lt;/span&gt;. &lt;span&gt;ಹೀಗೇ&lt;/span&gt; &lt;span&gt;ಎಲ್ಲರೂ&lt;/span&gt; &lt;span&gt;ಸಂತೋಷವಾಗಿರಲೆಂದು&lt;/span&gt; &lt;span&gt;ಇಷ್ಟು&lt;/span&gt; &lt;span&gt;ದಿನ&lt;/span&gt; &lt;span&gt;ನಮ್ಮೆಲ್ಲರ&lt;/span&gt; &lt;span&gt;ಸಂತೋಷಕ್ಕೆ&lt;/span&gt; &lt;span&gt;ಕಾರಣನಾದವನಿಗೆ&lt;/span&gt; &lt;span&gt;ವಂದಿಸೋಣ&lt;/span&gt;.&lt;br /&gt;&lt;br /&gt;&lt;span&gt;ಹೀಗೆ&lt;/span&gt; &lt;span&gt;ಹಲವು&lt;/span&gt; &lt;span&gt;ಅಭಿಪ್ರಾಯಭೇದಗಳಿಲ್ಲದ&lt;/span&gt; &lt;span&gt;ವಿಚಾರಗಳಿವೆ&lt;/span&gt; &lt;span&gt;ಗಣಪತಿಯ&lt;/span&gt; &lt;span&gt;ಬಗ್ಗೆ&lt;/span&gt;. &lt;span&gt;ಇವೆಲ್ಲಾ&lt;/span&gt; &lt;span&gt;ಸಮಾಜಕ್ಕೆ&lt;/span&gt; &lt;span&gt;ಚೂರೂ&lt;/span&gt; &lt;span&gt;ಅಹಿತ&lt;/span&gt; &lt;span&gt;ಉಂಟುಮಾಡುವ&lt;/span&gt; &lt;span&gt;ವಿಚಾರಗಳಲ್ಲ&lt;/span&gt;. &lt;span&gt;ಅಂಥ&lt;/span&gt; &lt;span&gt;ವಿಚಾರಗಳನ್ನು&lt;/span&gt; &lt;span&gt;ಆಧಾರವಾಗಿಟ್ಟುಕೊಂಡು&lt;/span&gt; &lt;span&gt;ಗಣೇಶ&lt;/span&gt; &lt;span&gt;ಚತುರ್ಥಿಯ&lt;/span&gt; &lt;span&gt;ಪೂಜೆ&lt;/span&gt; &lt;span&gt;ನಡೆಯಬೇಕು&lt;/span&gt; &lt;span&gt;ಎಂಬುದು&lt;/span&gt; &lt;span&gt;ನನ್ನ&lt;/span&gt; &lt;span&gt;ಅಭಿಪ್ರಾಯ&lt;/span&gt;. &lt;span&gt;ಮತ್ತೆ&lt;/span&gt;, &lt;span&gt;ಈ&lt;/span&gt; &lt;span&gt;ಅಭಿಪ್ರಾಯವನ್ನು&lt;/span&gt; &lt;span&gt;ನನ್ನದೆಂದೆ&lt;/span&gt; &lt;span&gt;ಅಷ್ಟೇ&lt;/span&gt;. &lt;span&gt;ಇದರಿಂದ&lt;/span&gt; &lt;span&gt;ಯಾರಿಗಾದರೂ&lt;/span&gt; &lt;span&gt;ಉಪಯೋಗವಾದರೆ&lt;/span&gt; &lt;span&gt;ಸಂತೋಷ&lt;/span&gt;. &lt;span&gt;ಆದರೆ&lt;/span&gt;, &lt;span&gt;ಯಾರ&lt;/span&gt; &lt;span&gt;ಮೇಲೂ&lt;/span&gt; &lt;span&gt;ಇದನ್ನು&lt;/span&gt; &lt;span&gt;ಹೇರುತ್ತಿಲ್ಲ&lt;/span&gt;; &lt;span&gt;ಹೇರುವ&lt;/span&gt; &lt;span&gt;ಅಧಿಕಾರವೂ&lt;/span&gt; &lt;span&gt;ನನಗಿಲ್ಲ&lt;/span&gt;. &lt;span&gt;ಎಲ್ಲರಿಗೂ&lt;/span&gt; &lt;span&gt;ಬುದ್ಧಿ&lt;/span&gt; &lt;span&gt;ಇದೆ&lt;/span&gt;. &lt;span&gt;ಹಲವರಿಗೆ&lt;/span&gt; &lt;span&gt;ನನಗಿಂತ&lt;/span&gt; &lt;span&gt;ಹೆಚ್ಚು&lt;/span&gt; &lt;span&gt;ಬುದ್ಧಿ&lt;/span&gt; &lt;span&gt;ಇದೆ&lt;/span&gt;. &lt;span&gt;ಹಾಗಾಗಿ&lt;/span&gt;, &lt;span&gt;ಅವರವರ&lt;/span&gt; &lt;span&gt;ಆರಾಧನೆಯ&lt;/span&gt; &lt;span&gt;ರೀತಿಯನ್ನು&lt;/span&gt; &lt;span&gt;ರೂಪಿಸಿಕೊಳ್ಳುವುದು&lt;/span&gt; &lt;span&gt;ಅವರವರಿಗೆ&lt;/span&gt; &lt;span&gt;ಬಿಟ್ಟಿದ್ದು&lt;/span&gt;.&lt;br /&gt;&lt;br /&gt;&lt;span&gt;ಮತ್ತೊಂದು&lt;/span&gt; &lt;span&gt;ಮುಖ್ಯವಾದ&lt;/span&gt; &lt;span&gt;ವಿಚಾರವೆಂದರೆ&lt;/span&gt; &lt;span&gt;ಗಣೇಶನ&lt;/span&gt; &lt;span&gt;ವಿಗ್ರಹಗಳ&lt;/span&gt; &lt;span&gt;ವಿಸರ್ಜನೆ&lt;/span&gt;. &lt;span&gt;ನೀರಿನಲ್ಲಿ&lt;/span&gt; &lt;span&gt;ಸುಲಭವಾಗಿ&lt;/span&gt; &lt;span&gt;ಕರಗುವ&lt;/span&gt; &lt;span&gt;ವಿಗ್ರಹಗಳನ್ನೇ&lt;/span&gt; &lt;span&gt;ಬಳಸೋಣ&lt;/span&gt;. &lt;span&gt;ಮನೆಯಲ್ಲಿ&lt;/span&gt; &lt;span&gt;ಲೋಹದ&lt;/span&gt; &lt;span&gt;ವಿಗ್ರಹವಿದ್ದರೆ&lt;/span&gt; &lt;span&gt;ಅದಕ್ಕೆ&lt;/span&gt; &lt;span&gt;ಪೂಜೆ&lt;/span&gt; &lt;span&gt;ಮಾಡುವುದು&lt;/span&gt; &lt;span&gt;ಮತ್ತೂ&lt;/span&gt; &lt;span&gt;ಒಳಿತು&lt;/span&gt;. &lt;span&gt;ಸುಣ್ಣ&lt;/span&gt;-&lt;span&gt;ಬಣ್ಣ&lt;/span&gt; &lt;span&gt;ಬಳೆದುಕೊಂಡ&lt;/span&gt; &lt;span&gt;ಗಣೇಶನನ್ನು&lt;/span&gt; &lt;span&gt;ಆರಾಧಿಸಿ&lt;/span&gt; &lt;span&gt;ನಂತರ&lt;/span&gt; &lt;span&gt;ಆ&lt;/span&gt; &lt;span&gt;ವಿಗ್ರಹವನ್ನು&lt;/span&gt; &lt;span&gt;ಕೆರೆ&lt;/span&gt;-&lt;span&gt;ನದಿ&lt;/span&gt;-&lt;span&gt;ಸಮುದ್ರಗಳಲ್ಲಿ&lt;/span&gt; &lt;span&gt;ವಿಸರ್ಜಿಸುವ&lt;/span&gt; &lt;span&gt;ಮೂಲಕ&lt;/span&gt; &lt;span&gt;ಪ್ರಕೃತಿಗೆ&lt;/span&gt; &lt;span&gt;ಅಪಚಾರ&lt;/span&gt; &lt;span&gt;ಮಾಡುವುದು&lt;/span&gt; &lt;span&gt;ಬೇಡ&lt;/span&gt;. &lt;span&gt;ನಮ್ಮ&lt;/span&gt; &lt;span&gt;ಪರಿಸರವನ್ನು&lt;/span&gt; &lt;span&gt;ಚೆನ್ನಾಗಿಟ್ಟುಕೊಂಡರೆ&lt;/span&gt; &lt;span&gt;ಗಣೇಶನಿಗೂ&lt;/span&gt; &lt;span&gt;ಸಂತೋಷವಾಗುತ್ತದೆ&lt;/span&gt;. &lt;span&gt;ಗಣೇಶ&lt;/span&gt; &lt;span&gt;ಎಲ್ಲರಿಗೂ&lt;/span&gt; &lt;span&gt;ಮಂಗಳವನ್ನುಂಟುಮಾಡಲಿ&lt;/span&gt;. &lt;span&gt;ಎಲ್ಲರಿಗೂ&lt;/span&gt; &lt;span&gt;ಗಣೇಶ&lt;/span&gt; &lt;span&gt;ಹಬ್ಬದ&lt;/span&gt; &lt;span&gt;ಶುಭಾಶಯಗಳು&lt;/span&gt;.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-2798140125153964640?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/2798140125153964640/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=2798140125153964640' title='7 Comments'/><link rel='edit' type='application/atom+xml' href='http://www.blogger.com/feeds/34886019/posts/default/2798140125153964640'/><link rel='self' type='application/atom+xml' href='http://www.blogger.com/feeds/34886019/posts/default/2798140125153964640'/><link rel='alternate' type='text/html' href='http://manasinaputagalanaduve.blogspot.com/2008/09/blog-post_03.html' title='ಮಹಾಗಣಪತಿಂ ಮನಸಾ ಸ್ಮರಾಮಿ'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_JaSAEbMHNYk/SL5PZPsYuLI/AAAAAAAADfY/CYLp2UrglLI/s72-c/ganapati.jpg' height='72' width='72'/><thr:total>7</thr:total></entry><entry><id>tag:blogger.com,1999:blog-34886019.post-2721075839239556700</id><published>2008-09-01T14:05:00.005+05:30</published><updated>2008-09-01T14:55:15.208+05:30</updated><title type='text'>ದೂಧ್-ಸಾಗರ್ ಜಲಪಾತ</title><content type='html'>ಮಳೆಗಾಲ ಮಳೆ ಸುರಿಸದೇ ಬಂದ ಹಾಗೇ ಹೋಗುತ್ತಿದೆ. ಹೀಗಿರುವಾಗ ನನ್ನಂಥ ಚಾರಣಾಸಕ್ತರಿಗೆ ಸ್ವಲ್ಪ ನಿರಾಸೆ. ಸಕಾಲದಲ್ಲಿ ಮಳೆಯಾಗದಿದ್ದರೆ ಬೆಟ್ಟಗಳ ಮೇಲಿನ ಹಸಿರು ಹೊದಿಗೆ ಸೂರ್ಯನ ತಾಪಕ್ಕೆ ಹೆದರಿ ಬೇಗ ಮಾಯವಾಗುತ್ತದೆ, ಜಲಪಾತಗಳ ಸೊಗಸು ಕಡಿಮೆ, ಚಾರಣದಲ್ಲಿ ಮಳೆಯ ಅನುಭವ ಕಡಿಮೆ, ಇತ್ಯಾದಿ ನಿರಾಸೆ ಹುಟ್ಟಿಸುವ ವಿಷಯಗಳಿರುತ್ತವೆ. ಆದರೆ ಇಷ್ಟೆಲ್ಲಾ ಇದ್ದರೂ ಜಾಗಗಳನ್ನು, ಕಾಣಸಿಗುವ ಅಲ್ಪ ಸೌಂದರ್ಯವನ್ನು ನೋಡಲು ಅವಕಾಶ ಸಿಕ್ಕಿದಾಗ ಅದನ್ನು ತೊರೆಯಲು ಮನಸ್ಸಾಗುವುದಿಲ್ಲ! ಏನು ಮಾಡುವುದು? ಚಾರಣ ಮತ್ತು ಪ್ರವಾಸ - ಎರಡೂ ಹವ್ಯಾಸವಾಗಿ ಶುರುವಾಗಿ ಈಗ ಚಟ ಎನ್ನುವಷ್ಟು ಹಚ್ಚಾಗಿಬಿಟ್ಟಿದೆ!&lt;br /&gt;&lt;br /&gt;ಉಡುಪಿ ಯೂತ್ ಹಾಸ್ಟೆಲ್ ಗುಂಪಿನೊಡನೆ ದೂಧ್-ಸಾಗರ್ ಜಲಪಾತಕ್ಕೆ ಹೋಗುವ ಅವಕಾಶ ಸಿಕ್ಕಿತು. ಒಮ್ಮೆ ಅಲ್ಲಿಗೆ ಹೋಗಲು ಪ್ರಯತ್ನಿಸಿ ಕಾರಣಾಂತರಗಳಿಂದ ಅಲ್ಲಿಗೆ ಹೋಗಲಾಗದೇ ಹಿಂದಿರುಗಬೇಕಾಯಿತು. ಈಗ ಸಿಕ್ಕ ಅವಕಾಶ ಉಪಯೋಗಿಸಿಕೊಳ್ಳಬೇಕು ಅಂತ ಹೊರಟೆ. ಸರಿಯಾಗಿ ಮಳೆಯಾಗದಿರುವುದರಿಂದ ಕ್ಷೀರಾಂಬುಧಿಯನ್ನೇ ಅಲ್ಲಿ ಕಾಣುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೂ, ದಾಖಲೆಯ ಪ್ರಕಾರ ಮಾಂಡೋವಿ ನದಿ ಸೃಷ್ಟಿಸುವ ಈ ಜಲಪಾತ ಭಾರತದ ಐದನೇ ಎತ್ತರದ ಜಲಪಾತ; ಸುಮ್ಮನೆ ಒಮ್ಮೆ ನೋಡಿ ಬರೋಣ ಎಂದು ಹೊರಟಿದ್ದು ಅಷ್ಟೇ. ಆದರೆ ಅಲ್ಲಿ ಕ್ಷೀರಾಂಬುಧಿಯಿಲ್ಲದಿದ್ದರೂ ನಾನು ಊಹಿಸಿದ್ದಕ್ಕೂ ಹೆಚ್ಚಿನ ಪ್ರಮಾಣದ 'ಕ್ಷೀರ'ಧಾರೆ! ಸಧ್ಯಕ್ಕೇನೋ ಸಂತೋಷವಾಗಿದೆ. ಮುಂದೊಮ್ಮೆ ಚೆನ್ನಾಗಿ ಮಳೆಯಾದಾಗ ಕ್ಷೀರಾಂಬುಧಿಯನ್ನು ನೋಡಲೂ ಹೋಗಬೇಕು.&lt;br /&gt;&lt;br /&gt;ಜಲಪಾತದ ಬಗ್ಗೆ ಹೆಚ್ಚು ಬರೆಯುವುದಿಲ್ಲ. ಏನು ಹೇಳುವುದಿದೆಯೋ ಅದನ್ನು ಈ ಚಿತ್ರಗಳೇ ಹೇಳಲಿ...&lt;br /&gt;&lt;br /&gt;&lt;a href="http://picasaweb.google.co.in/srikanth000/Doodhsagar/photo#5240974916902602386"&gt;&lt;img src="http://lh5.ggpht.com/srikanth000/SLuu60a2RpI/AAAAAAAADSc/vE9pmaYeXmw/s400/P8310137.JPG" /&gt;&lt;/a&gt;&lt;br /&gt;&lt;br /&gt;&lt;a href="http://picasaweb.google.co.in/srikanth000/Doodhsagar/photo#5240975217743875026"&gt;&lt;img src="http://lh4.ggpht.com/srikanth000/SLuvMVI_y9I/AAAAAAAADTM/_TD0RC_IlOs/s400/P8310143.JPG" /&gt;&lt;/a&gt;&lt;br /&gt;&lt;br /&gt;&lt;a href="http://picasaweb.google.co.in/srikanth000/Doodhsagar/photo#5240975252618519826"&gt;&lt;img src="http://lh5.ggpht.com/srikanth000/SLuvOXDwpRI/AAAAAAAADTU/ywC17aiQJ74/s400/P8310144.JPG" /&gt;&lt;/a&gt;&lt;br /&gt;&lt;br /&gt;&lt;a href="http://picasaweb.google.co.in/srikanth000/Doodhsagar/photo#5240975192080451874"&gt;&lt;img src="http://lh6.ggpht.com/srikanth000/SLuvK1iXCSI/AAAAAAAADTE/8QF_Q76shOs/s400/P8310142.JPG" /&gt;&lt;/a&gt;&lt;br /&gt;&lt;br /&gt;&lt;a href="http://picasaweb.google.co.in/srikanth000/Doodhsagar/photo#5240975286855636386"&gt;&lt;img src="http://lh6.ggpht.com/srikanth000/SLuvQWmhlaI/AAAAAAAADTc/qRUjcbF2XUg/s400/P8310145.JPG" /&gt;&lt;/a&gt;&lt;br /&gt;&lt;br /&gt;&lt;a href="http://picasaweb.google.co.in/srikanth000/Doodhsagar/photo#5240975523644117698"&gt;&lt;img src="http://lh3.ggpht.com/srikanth000/SLuveItTEsI/AAAAAAAADUU/0n87V8SCnWM/s400/P8310152.JPG" /&gt;&lt;/a&gt;&lt;br /&gt;&lt;br /&gt;&lt;a href="http://picasaweb.google.co.in/srikanth000/Doodhsagar/photo#5240975635487483554"&gt;&lt;img src="http://lh3.ggpht.com/srikanth000/SLuvkpW1ZqI/AAAAAAAADUw/Dw2tqhy6MNQ/s400/P8310168.JPG" /&gt;&lt;/a&gt;&lt;br /&gt;&lt;br /&gt;&lt;a href="http://picasaweb.google.co.in/srikanth000/Doodhsagar/photo#5240976129466462066"&gt;&lt;img src="http://lh3.ggpht.com/srikanth000/SLuwBZkmb3I/AAAAAAAADWY/kkdrZTExS9E/s400/P8310167.JPG" /&gt;&lt;/a&gt;&lt;br /&gt;&lt;br /&gt;&lt;a href="http://picasaweb.google.co.in/srikanth000/Doodhsagar/photo#5240975965585687202"&gt;&lt;img src="http://lh3.ggpht.com/srikanth000/SLuv33EYQqI/AAAAAAAADV4/EtWUEBRJDgM/s400/P8310163.JPG" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-2721075839239556700?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/2721075839239556700/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=2721075839239556700' title='2 Comments'/><link rel='edit' type='application/atom+xml' href='http://www.blogger.com/feeds/34886019/posts/default/2721075839239556700'/><link rel='self' type='application/atom+xml' href='http://www.blogger.com/feeds/34886019/posts/default/2721075839239556700'/><link rel='alternate' type='text/html' href='http://manasinaputagalanaduve.blogspot.com/2008/09/blog-post.html' title='ದೂಧ್-ಸಾಗರ್ ಜಲಪಾತ'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><media:thumbnail xmlns:media='http://search.yahoo.com/mrss/' url='http://lh5.ggpht.com/srikanth000/SLuu60a2RpI/AAAAAAAADSc/vE9pmaYeXmw/s72-c/P8310137.JPG' height='72' width='72'/><thr:total>2</thr:total></entry><entry><id>tag:blogger.com,1999:blog-34886019.post-7786196212631958175</id><published>2008-08-28T20:16:00.003+05:30</published><updated>2008-08-28T20:32:41.289+05:30</updated><title type='text'>ಇತಿಹಾಸಕ್ಕೆ ಬೇಡದ ಸೇರ್ಪಡೆಗಳು</title><content type='html'>ಭಾರತೀಯರಿಗೆ ಬೇಟೆಯ ಹುಚ್ಚಿರುವ ದಾಖಲೆ ರಾಮಾಯಣ-ಮಹಾಭಾರತಗಳಿಂದ ಹಿಡಿದು ನಮ್ಮ ದೇಶದ ಇತಿಹಾಸದುದ್ದಕ್ಕೂ ಇದೆ. ರಾಮಾಯಣ ಮತ್ತು ಮಹಾಭಾರತ - ಎರಡರಲ್ಲೂ ಒಳ್ಳೆಯ ಮತ್ತು ಕೆಟ್ಟ ವಿಚಾರಗಳು ಬೇಕಾದಷ್ಟಿವೆ. ಅಲ್ಲಿಯ ಒಳ್ಳೆಯ ನೀತಿಯನ್ನು ಮಾತ್ರ ಹೀರಿಕೊಂಡು ನಮ್ಮ ಬದುಕಿಗೆ ಅಳವಡಿಸಿಕೊಳ್ಳದೇ ಬೇಟೆಯಾಡುವುದು ಇತ್ಯಾದಿ ಕೆಟ್ಟ ವಿಷಯಗಳನ್ನು ಮಾತ್ರ ಕಲೆತು ಕೆಲವರು ಶಿರಸಾ ಪಾಲಿಸುತ್ತಿರುವುದು ದುರದೃಷ್ಟ.&lt;br /&gt;&lt;br /&gt;ರಾಮಾಯಣದಲ್ಲಿ ಸಾಕ್ಷಾತ್ ದೇವರಾದ ರಾಮನೇ ಜಿಂಕೆಯ ಬೇಟೆಯಾಡಲಿಲ್ಲವೇ ಎಂದು ಕೆಲವರ ಪ್ರಶ್ನೆ. ಈ ಸಂಗತಿಯ ವಿಚಾರವಾಗಿ ನಮ್ಮಲ್ಲಿ ಹೆಚ್ಚಿನವರು ಗಮನಿಸದ ವಿಚಾರವೊಂದಿದೆ. ರಾಮ ಕೊಂದಿದ್ದು ಚಿನ್ನದ ಜಿಂಕೆಯ ರೂಪದಲ್ಲಿದ್ದ ರಾಕ್ಷಸನನ್ನು. ಯಾವ ವಾಲ್ಮೀಕಿ ರಾಮಾಯಣದಲ್ಲಿ ರಾಮ ಜಿಂಕೆಯನ್ನು ಕೊಂದ ಎಂದು ಹೇಳುತ್ತಾರೋ ಅದೇ ವಾಲ್ಮೀಕಿ ಅದೇ ರಾಮಾಯಣದಲ್ಲಿ ಮತ್ತೊಂದು ವಿಷಯ ಹೇಳುತ್ತಾರೆ:&lt;br /&gt;&lt;br /&gt;"ಇದು (ಚಿನ್ನದ ಜಿಂಕೆಯು) ರಾಕ್ಷಸನ ಮಾಯೆ ಎಂದು ಹೇಳುವುದಾದರೆ, ಆ ರಾಕ್ಷಸನನ್ನು ಕೊಲ್ಲುವುದು ನನ್ನ ಕರ್ತವ್ಯ. ಇದು ಏನಾದರೂ ಮಾರೀಚ ಆಗಿದ್ದರೆ ಈ ರಾಕ್ಷಸನು ಅನೇಕ ಮುನಿಗಳನ್ನು, ರಾಜರನ್ನು ಹಿಂಸೆ ಮಾಡಿ ಕೊಂದಿದ್ದಾನೆ... ಆದ್ದರಿಂದ ಇವನನ್ನು ಕೊಲ್ಲಲೇಬೇಕು" (ಎಂದು ರಾಮ ಲಕ್ಷಣನಿಗೆ ಜಿಂಕೆಯನ್ನು ಹಿಂಬಾಲಿಸಲು ಮುಂಚೆಯೇ ಹೇಳುತ್ತಾನೆ) - [ಅರಣ್ಯ ಕಾಂಡ, ನಲವತ್ಮೂರನೇ ಸರ್ಗ, ಶ್ಲೋಕ ೩೮-೪೦]&lt;br /&gt;&lt;br /&gt;ಇದರಿಂದ ರಾಮ ಕೊಲ್ಲಲು ಹೊರಟಿದ್ದು ಜಿಂಕೆಯನ್ನಲ್ಲ, ಜಿಂಕೆಯ ರೂಪದಲ್ಲಿದ್ದ ರಾಕ್ಷಸನನ್ನು ಎಂಬುದು ಸ್ಪಷ್ಟ. ಇಪ್ಪತ್ನಾಲ್ಕು ಸಾವಿರ ಶ್ಲೋಕಗಳ ರಾಮಾಯಣವನ್ನು ಸಂಕ್ಷೇಪವಾಗಿ ಕೆಲವು ಘಂಟೆಯಲ್ಲಿ ಮುಗಿಯುವ ಕಥೆಯಾಗಿ ಹೇಳುವಾಗ ಅನೇಕರು ಇಂತಹ ವಿಷಯಗಳನ್ನು ಹೇಳುವುದೇ ಇಲ್ಲ. "ನಮ್ಮ ದೇವರಾದ ರಾಮನೇ ಜಿಂಕೆ ಬೇಟೆಯಾಡಿದ್ದಾನೆ, ನಾವೂ ಹಾಗೇ ಮಾಡಬಹುದು" ಎಂದು ಜನ ಹಿಂದೆ-ಮುಂದೆ ಯೋಚಿಸದೇ ತಿಳಿಯುತ್ತಾರೆ. ಮತ್ತೊಂದು ವಿಷಯವೆಂದರೆ ರಾಮಾಯಣದಂಥ ಗ್ರಂಥಗಳಲ್ಲಿ ಪ್ರತಿಯೊಂದು ಸಂಗತಿಯ ಹಿಂದೆಯೂ ಒಂದು ನೀತಿ ಇರುತ್ತದೆ. ಹಾಗೇ ಚಿನ್ನದ ಜಿಂಕೆಯನ್ನು ರಾಮ ಹಿಂಬಾಲಿಸಿದ ಸಂಗತಿಯ ಹಿಂದೆಯೂ ಒಂದು ನೀತಿ ಇದೆ. ಇದಕ್ಕೆ ಸಂಬಂಧಪಟ್ಟಂತೆ ಒಂದು ಸುಭಾಷಿತ ಇದೆ.&lt;br /&gt;&lt;br /&gt;&lt;span style="font-style: italic;"&gt;ಅಸಂಭವಂ&lt;/span&gt;&lt;span style="font-style: italic;"&gt; &lt;/span&gt;&lt;span style="font-style: italic;"&gt;ಹೇಮಮೃಗಸ್ಯ&lt;/span&gt;&lt;span style="font-style: italic;"&gt; &lt;/span&gt;&lt;span style="font-style: italic;"&gt;ಜನ್ಮ&lt;/span&gt;&lt;span style="font-style: italic;"&gt; &lt;/span&gt;&lt;span style="font-style: italic;"&gt;ತಥಾಽಪಿ&lt;/span&gt;&lt;span style="font-style: italic;"&gt; &lt;/span&gt;&lt;span style="font-style: italic;"&gt;ರಾಮೋ&lt;/span&gt;&lt;span style="font-style: italic;"&gt; &lt;/span&gt;&lt;span style="font-style: italic;"&gt;ಲುಲುಭೇ&lt;/span&gt;&lt;span style="font-style: italic;"&gt; &lt;/span&gt;&lt;span style="font-style: italic;"&gt;ಮೃಗಾಯ&lt;/span&gt;&lt;span style="font-style: italic;"&gt; | &lt;/span&gt;&lt;br /&gt;&lt;span style="font-style: italic;"&gt;ಪ್ರಾಯಃ&lt;/span&gt;&lt;span style="font-style: italic;"&gt; &lt;/span&gt;&lt;span style="font-style: italic;"&gt;ಸಮಾಪನ್ನ&lt;/span&gt;&lt;span style="font-style: italic;"&gt; &lt;/span&gt;&lt;span style="font-style: italic;"&gt;ವಿಪತ್ತಿ&lt;/span&gt;&lt;span style="font-style: italic;"&gt; &lt;/span&gt;&lt;span style="font-style: italic;"&gt;ಕಾಲೇ&lt;/span&gt;&lt;span style="font-style: italic;"&gt; &lt;/span&gt;&lt;span style="font-style: italic;"&gt;ಧಿಯೋಽಪಿ&lt;/span&gt;&lt;span style="font-style: italic;"&gt; &lt;/span&gt;&lt;span style="font-style: italic;"&gt;ಪುಂಸಾಂ&lt;/span&gt;&lt;span style="font-style: italic;"&gt; &lt;/span&gt;&lt;span style="font-style: italic;"&gt;ಮಲಿನಾ&lt;/span&gt;&lt;span style="font-style: italic;"&gt; &lt;/span&gt;&lt;span style="font-style: italic;"&gt;ಭವಂತಿ&lt;/span&gt;&lt;span style="font-style: italic;"&gt; ||&lt;/span&gt;&lt;br /&gt;&lt;br /&gt;ರಾಮನಿಗೆ ಚಿನ್ನದ ಜಿಂಕೆಯ ಜನ್ಮ ಅಸಂಭವ ಎಂದು ಗೊತ್ತಿದ್ದರೂ ಅದನ್ನು ಹಿಂಬಾಲಿಸಿದ; ಪ್ರಾಯಃ ವಿಪತ್ತಿನ ಕಾಲದಲ್ಲಿ ಒಳ್ಳೆಯವರ ಬುದ್ಧಿಯೂ ಕೆಡುತ್ತದೆ ಎಂದು ಮೇಲಿನ ಶ್ಲೋಕದ ಸಾರಾಂಶ.&lt;br /&gt;&lt;br /&gt;ಇನ್ನು ಮಹಾಭಾರತದಲ್ಲೂ ಪಾಂಡು ರಾಜ ಜಿಂಕೆಯನ್ನು ಕೊಂದ ವಿಚಾರ ಇದೆ. ಅವನು ಮಾಡಿದ್ದು ಸರಿಯಲ್ಲ. ಅವನು ಮಾಡಿದ್ದಕ್ಕೆ ಅವನಿಗೆ ಶಾಪ ದೊರಕಿ ತಕ್ಕ ಶಾಸ್ತಿಯೂ ಆಯಿತು. ಮೇಲಾಗಿ ಜಿಂಕೆ ಕೊಲ್ಲುವುದು ಅಪರಾಧವಲ್ಲ ಎಂದು ಮಹಾಭಾರತದಲ್ಲಿ ಹೇಳಿರುವ ಬಗ್ಗೆ ನಾನು ಎಲ್ಲೂ ಕೇಳಿಲ್ಲ.&lt;br /&gt;&lt;br /&gt;ರಾಮಾಯಣ ಮತ್ತು ಮಹಾಭಾರತವನ್ನು ಬದಿಗಿಡೋಣ. ಇಂದಿನ ಪ್ರಪಂಚಕ್ಕೆ ಬರೋಣ. ಇಂದಿನ ಪ್ರಪಂಚದಲ್ಲಿ ಜಿಂಕೆಯನ್ನು ಹೊಡೆಯಬಾರದು ಎಂದು ಕಾನೂನಿದೆ. ಆದರೆ ಇಂದು ಮೋಜಿಗಾಗಿ ಅರಣ್ಯಾಧಿಕಾರಿಗಳನ್ನು ಕೊಂಡುಕೊಂಡೋ, ಅಥವಾ ಅವರ ಕೈಗೆ ಸಿಗದಂತೆಯೋ ನವಭಾರತದ ಕುಬೇರರು ಜಿಂಕೆಯ ಬೇಟೆಗೆ ಮುಂದಾಗಿದ್ದಾರೆ. ಇವರೆಲ್ಲಾ ಬರೀ ಮೋಜಿನ ಜೀವನ ನೆಡೆಸಿಕೊಂಡಿದ್ದು, ಇವರು ಧಾರ್ಮಿಕ ಕಾರಣದಿಂದಾಗಲಿ ಇತಿಹಾಸ ತಿಳಿಯುವ ಕಾರಣದಿಂದಾಗಲಿ ಮಹಾಭಾರತ-ರಾಮಾಯಣದ ಬಗ್ಗೆ ತಿಳಿದು ಅದರಿಂದ ಪ್ರಚೋದಿತರಾಗಿದ್ದಂತಿಲ್ಲ. ಇಂಥ ಅಪರಾಧಿಗಳಲ್ಲಿ ಇಡೀ ಭಾರತದಲ್ಲೇ ಹೆಸರುವಾಸಿಯಾದ ಒಬ್ಬರು ಸಿಕ್ಕಿಬಿದ್ದಿದ್ದಾರೆ. ಅವರು ಯಾರು ಎಂದು ನಾನು ಹೇಳುವುದಿಲ್ಲ; ಆ ಹೆಸರೇ ನನಗೆ ಅಸಹ್ಯ. ಒಂದು ಕಡೆ ಇದರಿಂದ ಜಿಂಕೆಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಮತ್ತೊಂದು ಕಡೆ ತಮ್ಮ ಪ್ರಾಕೃತಿಕ ಆಹಾರವಾದ ಜಿಂಕೆಯಂಥ ಪ್ರಾಣಿಗಳಿಲ್ಲದೇ ಮಾಂಸಾಹಾರಿ ಪ್ರಾಣಿಗಳಾದ ಹುಲಿ, ಚಿರತೆ ಇತ್ಯಾದಿಗಳು ಹಸಿವಿನಿಂದ ಪ್ರಾಣ ಬಿಡುತ್ತಿವೆ. ಹುಲಿಯನ್ನು, ಚಿರತೆಯನ್ನು ಬೇಟೆಯಾಡಿದವರಿಲ್ಲ ಎಂತಲ್ಲ. ಈಗ ನೂರಿನ್ನರು ವರ್ಷಗಳ ಇತಿಹಾಸ ನೋಡಿದರೂ ಹುಲಿ-ಚಿರತೆಗಳನ್ನು ಬೇಟೆಯಾಡಿರುವ ದಾಖಲೆಗಳೂ ಬೇಕಾದಷ್ಟಿವೆ. ಬೇಟೆಯಾಡಿರುವುದರಿಂದಲೂ ಹಲವು ಹುಲಿ-ಚಿರತೆಗಳು ಸತ್ತಿವೆ. ಈಗ ಜಿಂಕೆಗಳಿಲ್ಲದೇ ಅಳಿದುಳಿದ ಕೆಲವು ಹುಲಿ-ಚರತೆಗಳು ಸಾಯುತ್ತಿವೆ. ಇದು ಸಾಲದೆಂದು ಕಾಡನ್ನು ಕ್ರಮೇಣವಾಗಿ ನಾಡಾಗಿ ಪರಿವರ್ತಿಸುತ್ತಿರುವ ನಾವು ಅವುಗಳಿಗೆ ಇರಲು ಜಾಗವಿಲ್ಲದೇ ಮಾಡಿದ್ದೇವೆ. ತಮ್ಮ ಸ್ವಾಭಾವಿಕ ನೆಲೆಯಾದ ಕಾಡು ಮಾಯವಾಗುತ್ತಿದೆ, ನಾಡಿಗೆ ಬಂದರೆ ನಾವೇ ಹೊಡೆಯುತ್ತೇವೆ! ಪಾಪ! ಆ ಪ್ರಾಣಿಗಳ ಪ್ರಾರಬ್ಧ!&lt;br /&gt;&lt;br /&gt;ನಾನು ಚಿಕ್ಕವನಾಗಿದ್ದಾಗ ಲಾಲ್-ಬಾಗಿನಲ್ಲಾದರೂ ಜಿಂಕೆ ಇತ್ತು. ಈಗ ಅಲ್ಲೂ ಇಲ್ಲ. ಕೇವಲ ಕೆಲವು 'ರಾಷ್ಟ್ರೀಯ ಉದ್ಯಾನವನ'ಗಳೆಂಬ ಸೆರೆಮನೆಗಳಲ್ಲಿ ಮಾತ್ರ ಕಾಣಸಿಗುತ್ತವೆ. ಈಗ ಹುಲಿ, ಚಿರತೆ, ಜಿಂಕೆಗಳನ್ನು ಕಾಡಿನಲ್ಲಿ ಹುಡುಕಿದರೂ ಕಾಣಿಸುವುದಿಲ್ಲ. ಯೂ-ಟ್ಯೂಬ್ ವೆಬ್-ಸೈಟಿನಲ್ಲಂತೂ ತಾವು ಜಿಂಕೆಗಳನ್ನು ಹೊಡೆದ ವಿಡಿಯೋಗಳನ್ನು ಕೆಲವು ಪೆದ್ದರು ರಾಜಾರೋಷವಾಗಿ ಹಾಕಿದ್ದಾರೆ. ಅವರ ಪಾಪದ ಕೊಡ ಬೇಗ ತುಂಬಲಿ!&lt;br /&gt;&lt;br /&gt;ಇಂದು "ಟೈಮ್ಸ್ ಆಫ್ ಇಂಡಿಯಾ" ವೆಬ್ ಸೈಟನಲ್ಲಿ ಐದೇ ದಿನಗಳ ಅಂತರದಲ್ಲಿ ಮೂವತ್ತು ನವಿಲು ಸತ್ತಿರುವ &lt;a href="http://timesofindia.indiatimes.com/Earth/Pune_30_peacocks_dead/articleshow/3411501.cms"&gt;&lt;span&gt;ವರದಿ&lt;/span&gt;&lt;/a&gt; ಇದೆ. ಓದಿ ಬೇಜಾರಾಯಿತು. "ನವಿಲೆಂಬ ಪ್ರಾಣಿಯೊಂದಿತ್ತು... ಅದು ರೆಕ್ಕೆ ಬಿಚ್ಚಿ ಕುಣಿದರೆ ಸೊಗಸೋ ಸೊಗಸು... 'ಆಡು ಬಾ ನವಿಲೇ' ಎಂದು ಒಂದು ಸುಂದರವಾದ ಹಾಡಿತ್ತು... ಎಷ್ಟು ಚೆನ್ನಾಗತ್ತು ಗೊತ್ತಾ" ಎಂದು ನಮ್ಮ ಮುಂದಿನ ಪೀಳಿಗೆಗೆ 'ಇತಿಹಾಸ' ಹೇಳಬೇಕಾದ ಪರಿಸ್ಥಿತಿ ಎಲ್ಲಿ ಬರುತ್ತದೋ ಎಂದು ಕಳವಳವಾಗುತ್ತದೆ. ಮನಷ್ಯನ ಆರ್ಭಟದಿಂದ ಉಳಿದ ಪ್ರಾಣಿ-ಪಕ್ಷಿಗಳನ್ನು ಈಶ್ವರನೇ ರಕ್ಷಿಸಬೇಕು!&lt;br /&gt;&lt;br /&gt;ಆದರೆ ಮನುಷ್ಯನ ಆಟ ಯಾವಾಗಲೂ ನಡೆಯುವುದಿಲ್ಲ. ಬೇಟೆಯಾಡಲು ಹೋದರೆ ಹೀಗೂ ಆಗಬಹುದೆಂದು ಗೊತ್ತಿರಲಿ...&lt;br /&gt;&lt;br /&gt;&lt;object height="344" width="425"&gt;&lt;param name="movie" value="http://www.youtube.com/v/LNGGbozilko&amp;amp;hl=en&amp;amp;fs=1"&gt;&lt;param name="allowFullScreen" value="true"&gt;&lt;embed src="http://www.youtube.com/v/LNGGbozilko&amp;amp;hl=en&amp;amp;fs=1" type="application/x-shockwave-flash" allowfullscreen="true" height="344" width="425"&gt;&lt;/embed&gt;&lt;/object&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-7786196212631958175?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/7786196212631958175/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=7786196212631958175' title='3 Comments'/><link rel='edit' type='application/atom+xml' href='http://www.blogger.com/feeds/34886019/posts/default/7786196212631958175'/><link rel='self' type='application/atom+xml' href='http://www.blogger.com/feeds/34886019/posts/default/7786196212631958175'/><link rel='alternate' type='text/html' href='http://manasinaputagalanaduve.blogspot.com/2008/08/blog-post_28.html' title='ಇತಿಹಾಸಕ್ಕೆ ಬೇಡದ ಸೇರ್ಪಡೆಗಳು'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>3</thr:total></entry><entry><id>tag:blogger.com,1999:blog-34886019.post-1529353428136090308</id><published>2008-07-19T08:46:00.001+05:30</published><updated>2008-07-19T08:49:54.016+05:30</updated><title type='text'>ದೀಪವು ನಿನ್ನದೇ</title><content type='html'>ನೆಲದ ಮೇಲೆ ಹಾಸಿಗೆ ಹಾಸಿಕೊಂದು ದೀಪ ಆರಿಸಿ ಮಲಗಿದೆ. ಮುಸುಕು ಹಾಕಿಕೊಂಡು ಮಲಗುವ ಅಭ್ಯಾಸ ನನಗೆ. ಅಂದು ಇನ್ನೇನು ಮುಸುಕು ಹಾಕಿಕೊಂಡೆ ಎನ್ನುವಷ್ಟರಲ್ಲಿ ನನ್ನ ಕಾಲಿನಿಂದ ಒಂದು ಅಡಿ ದೂರದಲ್ಲಿ ತಿಳಿಹಳದಿ ಬಣ್ಣದ ಪ್ರಕಾಶ ಕಂಡಂತಾಯಿತು. 'ಭ್ರಮೆ' ಎಂದುಕೊಂಡು ಮುಸುಕು ಹಾಕಿಕೊಂಡು ಮಲಗಿದೆ. ಆದರೆ ಮನಸ್ಸು ಕೇಳಲಿಲ್ಲ. ಎರಡು ನಿಮಿಷ ಆದಮೇಲೆ ಮತ್ತು ಮುಸುಕು ಸರಿಸಿ ನೋಡಿದೆ. ಅದೇ ರೀತಿಯ ಪ್ರಕಾಶ ಕಾಣುತ್ತಿತ್ತು. ಕೆಲವು ಕ್ಷಣಗಳು ದಿಟ್ಟಿಸಿ ನೋಡುತ್ತಿದ್ದೆ. ತಿಳಿಹಳದಿ ಬಣ್ಣದ ದೀಪ ಹತ್ತುವುದು, ಆರುವುದು, ಹತ್ತುವುದು, ಆರುವುದು... ಹೀಗೇ ಆಗುತ್ತಿತ್ತು. ಯಾವುದೋ ಹುಳ ಇರಬಹುದು ಎಂದು ಊಹಿಸಿದೆ. ಟ್ಯೂಬ್ ದೀಪ ಹಾಕಿದರೆ ಆ ಹುಳ ಎಲ್ಲಿ ಹಾರಿ ಹೋದೀತೋ ಎಂದು ಕತ್ತಲಲ್ಲೇ ಟಾರ್ಚ್ ಹುಡುಕಿದೆ. ಟ್ಯೂಬ್ ದೀಪದ ಪ್ರಕಾಶದ ಮುಂದೆ ಆ ಹುಳದ ಸಣ್ಣ ಪ್ರಕಾಶ ಕಾಣುತ್ತಿರಲಿಲ್ಲ ಎಂಬ ಮತ್ತೊಂದು ಕಾರಣವಿತ್ತು. ಟಾರ್ಚ್ ಸಿಕ್ಕಿದ ಮೇಲೆ ಬಹಳ ನಿಧಾನವಾಗಿ ಆ ಪ್ರಕಾಶ ಬರುತ್ತಿದ್ದ ಜಾಗದ ಹತ್ತಿರ ಹೋಗಿ ಟಾರ್ಚ್ ಬಿಟ್ಟು ನೋಡಿದೆ. ನನ್ನ ಊಹೆ ಸ್ವಲ್ಪ ಮಟ್ಟಿಗೆ ಸರಿಯಾಗಿತ್ತು. ಅದೊಂದು ಹುಳವೇ ಆಗಿತ್ತು. ದೀಪದ ಹುಳ (ಅಥವಾ ಮಿಂಚು ಹುಳ) ನೋಡಿದ್ದೆ. ಆದರೆ ಈ ಹುಳ ಯಾವುದೋ ಬೇರೆ. ಯಾವುದು ಇದು?&lt;br /&gt;&lt;br /&gt;ಪ್ರಾಯಶಃ ನನ್ನ ಬುದ್ಧಿ ಬೆಳೆದ ಮೇಲೆ ನನಗೆ 'ವಿಸ್ಮಯ' ಎನ್ನಿಸಿದ್ದು ದೀಪದ ಹುಳವೇ. ಸುಮಾರು ಹನ್ನೆರಡು ವರ್ಷಗಳ ಹಿಂದೆ ಅಪ್ಪ ಕಲ್ಕತ್ತಕ್ಕೆ ವರ್ಗವಾಗಿದ್ದಾಗ ರಜೆಗೆಂದು ಅಲ್ಲಿಗೆ ಹೋಗಿದ್ದೆ. ಸುಮಾರು ಒಂದು ತಿಂಗಳಷ್ಟು ಕಾಲ ಅಲ್ಲಿದ್ದ ನೆನಪು. ಕೆಲವು ದಿನ ಸಂಜೆಯ ಹೊತ್ತು ಅಲ್ಲಿಯೇ ಹತ್ತಿರದಲ್ಲಿದ್ದ ಒಂದು ಉದ್ಯಾನವನಕ್ಕೆ ಹೋಗುತ್ತಿದ್ದೆವು. ಸಂಜೆ ಐದಕ್ಕೇ ಕತ್ತಲಾಗಿಬಿಡುತ್ತಿತ್ತು. ಸುಮಾರು ಆರು ಘಂಟೆಯ ಹೊತ್ತಿಗೆ ಕಗ್ಗತ್ತಲು. ಆ ಕಗ್ಗತ್ತಲಿನಲ್ಲೂ ನನಗೆ ಉದ್ಯಾನವನದಲ್ಲಿ ಎರಡು ಆಕರ್ಶಣೆ. ಒಂದು ಉಪ್ಪು ಹಚ್ಚಿದ ಕಡಲೇಕಾಯಿ, ಮತ್ತೊಂದು ದೀಪದ ಹುಳ! ದೀಪದ ಹುಳವನ್ನು ಅದಕ್ಕೆ ಮುಂಚೆ ನಾನು ನೋಡಿಯೇ ಇರಲಿಲ್ಲ. ಈಗ ನೋಡಿ ರೋಮಾಂಚನಗೊಳ್ಳುತ್ತಿದ್ದೆ, ಆದರೆ ಎಲ್ಲಿಂದ ಬರುತ್ತಿದೆ ಈ ದೀಪ ಎಂದು ಮಾತ್ರ ಅರ್ಥವಾಗುತ್ತಿರಲಿಲ್ಲ. ಅದನ್ನು ಪ್ರಶ್ನೆಯಾಗಿಯೇ ಉಳಿಸಿಕೊಂದು ಇಲ್ಲಿಯವರೆಗೂ ಬಂದಿದ್ದೇನೆ. ಆಗ ಸೂರ್ಯ ಮತ್ತು ನಕ್ಷತ್ರಗಳು ಬಿಟ್ಟರೆ ತನ್ನಷ್ಟಕ್ಕೆ ತಾನೇ ಬೆಳಗುವ ವಸ್ತು ಎಂದರೆ ದೀಪದ ಹುಳ ಮಾತ್ರ ಎಂದುಕೊಂಡಿದ್ದೆ. ಈಗ ಅದರಂತೆಯೇ ಮತ್ತೊಂದು ಹುಳ ಸಿಕ್ಕಿತು!&lt;br /&gt;&lt;br /&gt;ಈ ಹೊಸ 'ವಿಸ್ಮಯ'ವನ್ನು ಮುಟ್ಟಲು ಮನಸ್ಸಾಗಲಿಲ್ಲ. ನಾನು ಮುಟ್ಟಿದ ಕಾರಣಕ್ಕಾಗಿ ಅದರಿಂದ ದೀಪ ಬರುವುದು ನಿಂತುಹೋದರೆ ಎಂಬ ಕಳವಳ! ಯಾರಿಗೆ ಗೊತ್ತು? ಯಾವ ಜೀವಿ ಹೇಗೋ! ಆದರೆ ಬಹಳ ಹತ್ತಿರ ಹೋದರೂ ಆ ಹುಳ ಹಾರಲಿಲ್ಲ. ಮತ್ತೆ ನಿದ್ರೆ ಹತ್ತುವ ತನಕ ಆ ಹುಳವನ್ನೇ ನೋಡುತ್ತಿದ್ದೆ. ಹುಳವೂ ಅಲ್ಲಾಡಲಿಲ್ಲ, ದೀಪವೂ ಆರಲಿಲ್ಲ! ಯಾವಾಗ ನಿದ್ರೆ ಹತ್ತಿತೋ ಗೊತ್ತಿಲ್ಲ. ಬೆಳಗ್ಗೆ ಏಳುವಷ್ಟರಲ್ಲಿ ನಾನು ಕಂಡಿದ್ದ ಹೊಸ ವಿಸ್ಮಯ ಅಗೋಚರವಾಗಿತ್ತು. ಎಲ್ಲಿ ಹೋಗಿತ್ತೋ ಗೊತ್ತಿಲ್ಲ. ಮನೆಯಲ್ಲಿ ಎರಡು-ಮೂರು ಹಲ್ಲಿಗಳು ಓಡಾಡುತ್ತಿದ್ದವು. ಯಾವುದೋ ಒಂದು ಹಲ್ಲಿ ಆ ಹುಳವನ್ನು ನುಂಗಿಹಾಕಿರಬಹುದೇ ಎಂದು ಯೋಚಿಸಿದೆ. ಐದು ನಿಮಿಷದ ನಂತರ ಈ ರೀತಿ ಯೋಚನೆ ಮಾಡುವುದು ವ್ಯರ್ಥ ಎನ್ನಿಸಿತು. ಎದ್ದು, ಹಾಸಿಗೆ ಸುತ್ತಿಟ್ಟು ಅಂದಿನ ಕೆಲಸ ನೋಡಿದೆ.&lt;br /&gt;&lt;br /&gt;ಮರು ದಿನ ಮತ್ತೊಮ್ಮೆ ಅದೇ ಅನುಭವ! ರಾತ್ರಿ ಮಲಗಲೆಂದು ಹಾಸಿಗೆ ಹಾಸಿಕೊಂಡು ದೀಪ ಆರಿಸಿದ ಕೂಡಲೇ ತಿಳಿಹಳದಿ ಬಣ್ಣದ ದೀಪವನ್ನು ಮಿಣಕಿಸುತ್ತಾ ನನ್ನ ಹಾಸಿಗೆಯ ಪಕ್ಕವೇ ಅದೇ ಹುಳ ಹೋಗುತ್ತಿತ್ತು. ಈ ಬಾರಿ ಬಹಳ ಹತ್ತಿರದಿಂದ ನೋಡಿದೆ. ಆ ಹುಳ ಇರುವೆಯ ಆಕಾರದಲ್ಲಿ ಇತ್ತು. ಆದರೆ ಅದರ ಗಾತ್ರ ಸ್ವಲ್ಪ ದೊಡ್ಡದು; ಸುಮಾರು ಗೊದ್ದದಷ್ಟು ಎನ್ನಬಹುದೇನೋ. ಹಾರಲು ಬರದ ಆ ಹುಳವನ್ನು ಇರುವೆಯ ಜಾತಿಗೇ ಸೇರಿಸಿದರೂ ತಪ್ಪಿಲ್ಲವೇನೋ! ಹಿಂದಿನ ದಿನ ಕಂಡದ್ದೂ ಇಂಥದೇ ಒಂದು, ಅಥವಾ ಇದೇ ಹುಳ. ಅದರ ಉದ್ದನೆಯ ಆಕಾರವನ್ನು ಮೂರು ಭಾಗವಾಗಿ ವಿಂಗಡಿಸಿದರೆ ಸುಮಾರು ಮಧ್ಯಭಾಗದಿಂದ ತಿಳಿಹಳದಿ ಬೆಳಕು (ಆಂಗ್ಲದಲ್ಲಿ ಫ್ಲೋರೊಸೆಂಟ್ ಅತಿ ಹತ್ತಿರದ ಬಣ್ಣ) ವಿರಾಮವಿಲ್ಲದೇ, ಒಂದೇ ಸಮನೆ ಆರುವುದು-ಹತ್ತುವುದು-ಆರುವುದು-ಹತ್ತುವುದು, ಹೀಗೇ ಆಗುತ್ತಿತ್ತು. ಆ ಹುಳದ ಮೈಬಣ್ಣವೂ ತಿಳಿಹಸಿರಿಗೂ ತಿಳಿಹಳದಿಗೂ ಮಧ್ಯದ್ದೆನ್ನಬಹುದು. ಈ ಎರಡು ವ್ಯತ್ಯಾಸಗಳು ಬಿಟ್ಟು, ಉಳಿದ ಚಲನವಲನ ಗಮನಿಸಿದರೆ ಅದಕ್ಕೂ ಗೊದ್ದಕ್ಕೂ ವ್ಯತ್ಯಾಸವೇನೂ ಗೋಚರಿಸಲಿಲ್ಲ. ಈ ಬಾರಿ ಅದನ್ನು ಮುಟ್ಟಿಯೇ ನೋಡಿದೆ; ಆದರೂ ಹಾರಲಿಲ್ಲ. ಆಗ ಹೊಳೆಯಲಿಲ್ಲ, ಆದರೆ ಗೊದ್ದದಂತೆ ಆ ಹುಳವೂ ಕಚ್ಚುತ್ತದೆಯೇ ಎಂದು ಪರೀಕ್ಷಿಸಬೇಕಾಗಿತ್ತು ಎಂದು ನಂತರ ಅನ್ನಿಸಿತು! ಅಂದು ಮತ್ತೆ ತಲೆದಿಂಬಿನ ಪಕ್ಕದಲ್ಲೇ ಓಡಾಡುತ್ತಿದ್ದ ಆ ಹುಳವನ್ನು ನೋಡುತ್ತಿದ್ದಾಗಲೇ ಯಾವಗಲೋ ನಿದ್ದೆ ಹತ್ತಿತು. ಬೆಳಗ್ಗೆ ಎದ್ದಾಗ ಮತ್ತೆ ಅದು ಕಾಣಲಿಲ್ಲ.&lt;br /&gt;&lt;br /&gt;ಇದರ ಬಗ್ಗೆ ಈಗ ವಿಪರೀತ ಕುತೂಹಲ ಉಂಟಾಗಿತ್ತು. ಗೂಗಲ್ ನಲ್ಲಿ ಇದರ ಬಗ್ಗೆ ಏನಾದರೂ ಸಿಗುತ್ತದೆಯೇ ನೋಡೋಣ ಎನ್ನಿಸಿತು. ಆದರೆ ಏನೆಂದು ಹುಡುಕುವುದು ಎಂದು ಮಾತ್ರ ಗೊತ್ತಾಗಲಿಲ್ಲ. ಮಿಂಚು ಹುಳದ ಬಗ್ಗೆ ಹುಡುಕಿ ಆಮೇಲೆ ವಿಕಿಪೀಡಿಯಾದಲ್ಲಿ ಅದರಂತೇ ತನ್ನಷ್ಟಕ್ಕೆ ತಾನೇ ದೀಪ ಬೀರಬಲ್ಲ ಹುಳುಗಳ ಪಟ್ಟಿಯಿದ್ದರೆ ನನಗೆ ಬೇಕಾದ ಮಾಹಿತಿ ಸಿಕ್ಕೀತೇ ಎಂದು ಯೋಚಿಸಿದೆ. ಕನ್ನಡದಲ್ಲಿ 'ಮಿಂಚು ಹುಳ', 'ದೀಪದ ಹುಳ', 'ಮಿಣುಕು ಹುಳ' - ಹೀಗೆ ಎಲ್ಲಾ ರೀತಿಯ ಸರ್ಚ್ ಪ್ರಯತ್ನಿಸಿದೆ; ಬೇಕಾದ ಮಾಹಿತಿ ಸಿಗಲಿಲ್ಲ. ಆಂಗ್ಲದಲ್ಲಿ ಮಿಂಚು ಹುಳಕ್ಕೆ ಏನೆನ್ನುತ್ತಾರೋ ಗೊತ್ತಾಗಲಿಲ್ಲ. ಸ್ವಲ್ಪ ಹೊತ್ತು ನೆನಪಿಸಿಕೊಳ್ಳಲು ಪ್ರಯತ್ನಿಸಿದ ನಂತರ ಮೂರು ಆಂಗ್ಲ ಹೆಸರುಗಳು ಹೊಳೆದವು. ತನ್ನಷ್ಟಕ್ಕೆ ತಾನೇ ಬೆಳಕು ಬೀರುವ ಜೀವಿಗಳ ಪಟ್ಟಿಯೊಂದೂ ಸಿಕ್ಕಿತು - ಅದರಲ್ಲಿ 'ಫೈರ್-ಫ್ಲೈ (fire-fly)' ಮತ್ತು 'ಗ್ಲೋ-ವರ್ಮ್ (glow-worm)' ಎರಡರ ಬಗ್ಗೆಯೂ ಮಾಹಿತಿ ಸಿಕ್ಕಿತು. 'ಲೈಟ್-ಫ್ಲೈ (light-fly)' ನನಗೆ ಹೊಳೆದ ಮೂರನೆಯ ಹೆಸರು. ಈ ಹೆಸರನ್ನೂ ಕೆಲವರಿಂದ ಕೇಳಿದಂತಿದೆ; ಆದರೆ ಈ ಬಗ್ಗೆ ಏನೂ ಸಿಗಲಿಲ್ಲ.&lt;br /&gt;&lt;br /&gt;ಫೈರ್-ಫ್ಲೈ ಎಂದರೆ ನಮ್ಮ ಮಿಂಚಿನ ಹುಳವೇ. ಆದರೆ ಇದರಲ್ಲಿ ಪ್ರಪಂಚದಾದ್ಯಂತ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿಧಗಳಿವೆಯಂತೆ. ಇದರಲ್ಲಿ ಭಾರತದಲ್ಲಿ ಕಾಣಸಿಗುವ ವಿಧಗಳು ಎಷ್ಟು ಮತ್ತು ಯಾವುವು ಎಂದು ತಿಳಿಯಲಿಲ್ಲ. ಆದರೆ ನಾನ ನೋಡಿದ ಹುಳ ಹಾರುತ್ತಿರಲಿಲ್ಲ. ಅದನ್ನು ತಪ್ಪಿ ಕೂಡ 'ಫ್ಲೈ' ಎಂದು ಕರೆಯುವ ದುಸ್ಸಾಹಸ ಯಾರೂ ಮಾಡಲಾರರು ಎನ್ನಿಸಿತು. ಈ ಕಾರಣದಿಂದ ಅದು ಗ್ಲೋ-ವರ್ಮ್ ಇರಬಹುದು ಎನ್ನಿಸಿತು. ಗ್ಲೋ-ವರ್ಮ್ ಅನ್ನು ಮೂರು ವಿಧದಲ್ಲಿ ವಿಂಗಡಿಸುತ್ತಾರೆ. ಅದರಲ್ಲಿ ಒಂದು ವಿಧದ್ದು ಕೇವಲ ಅಮೆರಿಕಾ ಖಂಡಗಳಲ್ಲಿ ಮಾತ್ರ ಕಾಣಸಿಕ್ಕರೆ ಮತ್ತೊಂದು ವಿಧ ಅಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ರಾಷ್ಟ್ರಗಳಲ್ಲಿ ಮಾತ್ರ ಕಾಣಸಿಗುತ್ತವೆ. ಮೂರನೆಯ ವಿಧವೆಂದು ಮಿಂಚು ಹುಳವನ್ನೇ ಹೆಸರಿಸುತ್ತಾರೆ. ಆದರೆ ಇದರೊಂದಿಗೆ ಒಂದು ಸ್ವಾರಸ್ಯಕರವಾದ ಮಾಹಿತಿಯೂ ಸಿಕ್ಕಿತು. ಫೈರ್-ಪ್ಲೈ ಗಳಲ್ಲಿ ಗಂಡಿಗೆ ಮಾತ್ರ ರೆಕ್ಕೆಯಿದ್ದು, ಹಾರಲು ಬರುತ್ತದೆ; ಹೆಣ್ಣಿಗೆ ರೆಕ್ಕೆಯಿಲ್ಲದಿರುವುದರಿಂದ ಹಾರಲು ಬರುವುದಿಲ್ಲ. ಆದರೆ ಈ ಹಾರದಿರುವ ಹೆಣ್ಣು ಜಾತಿ ಪ್ರಮುಖವಾಗಿ ಬ್ರಿಟೆನ್ ನಲ್ಲಿ ಮಾತ್ರ ಇದೆಯಂತೆ. ಕೆಲವು ವಿಧದ ಹಾರಲು ಬರದ ಹೆಣ್ಣು ಹುಳಗಳು ಭಾರತದಲ್ಲೂ ಇರಬಹುದು; ಆದರೆ ನನಗೆ ಆ ಬಗ್ಗೆ ಮಾಹಿತಿ ಸಿಗಲಿಲ್ಲ. &lt;br /&gt;&lt;br /&gt;ಈ ಮೊದಲು ನಾನು ಹಾರದಿರುವ ಮಿಂಚು ಹುಳಗಳನ್ನು ನೋಡಿರಲಿಲ್ಲ. ಚಿಕ್ಕವನಾದಾಗಿಂದ ನನಗೆ ಎಲ್ಲರೂ 'ಮಿಂಚು ಹುಳ', 'ದೀಪದ ಹುಳ' ಅಥವಾ 'ಮಿಣುಕು ಹುಳ' ಎಂದು ಹೆಸರಿಸಿ ತೋರಿಸಿರುವುದೆಲ್ಲಾ ಹಾರುವ ಹುಳಗಳನ್ನೇ. ಎರಡು ಸಾವಿರಕ್ಕೂ ಹೆಚ್ಚು ವಿಧದ ಫೈರ್-ಫ್ಲೈ ಗಳು ಇವೆ ಎನ್ನುತ್ತಾರೆ. ಅದರಲ್ಲಿ ಯಾವುದೋ ಒಂದು ವಿಧದ ಹೆಣ್ಣು ಭಾರತದಲ್ಲೂ ಇದ್ದು, ಅಂಥದೇ ಒಂದು ನನಗೂ ಕಂಡಿರಬಹುದು. ಅದನ್ನು ವಿಜ್ಞಾನಿಗಳು ದಾಖಲಿಸದಷ್ಟು ಸಣ್ಣ ಪ್ರಮಾಣವೋ, ಅಥವಾ ದಾಖಲಿಸಿದ್ದು ನನಗೆ ತಿಳಿಯುತ್ತಿಲ್ಲವೋ ಗೊತ್ತಿಲ್ಲ. ಆಂಗ್ಲದಲ್ಲೇನೋ ಹಾರದ ಹುಳುಗಳಿಗೂ 'fly' ಎಂದೇ ಕರೆದುಬಿಟ್ಟರು. ಆದರೆ ಕನ್ನಡದಲ್ಲಿ ಅದನ್ನು ಏನೆಂದು ಕರೆಯಬೇಕು ಗೊತ್ತಾಗುತ್ತಿಲ್ಲ. ಅವರು ಎಲ್ಲಾ ಎರಡು ಸಾವಿರಕ್ಕೂ ಹೆಚ್ಚಾದ ವಿಧದ ಹುಳುಗಳನ್ನು 'ಫೈರ್ ಫ್ಲೈ' ಎಂದೇ ಕರೆಯುತ್ತಾರೆ. ಆದರೆ ಕನ್ನಡದಲ್ಲಿ ನಾವು 'ಮಿಂಚು ಹುಳ', 'ದೀಪದ ಹುಳ' ಅಥವಾ 'ಮಿಣುಕು ಹುಳ' ಎಂದು ಕರೆಯುವುದು ಕೇವಲ ಒಂದು ಅಥವಾ ಕೆಲವು ವಿಧದ ಹುಳುಗಳನ್ನು ಮಾತ್ರ ಇರಬೇಕು ಎನ್ನಿಸುತ್ತದೆ. ಇರುವೆ ಅಥವಾ ಗೊದ್ದದಂತಿದ್ದ ನಾನು ಕಂಡ ಹೊಸ ಹುಳಕ್ಕೆ ಕನ್ನಡದಲ್ಲಿ ನಾಮಕರಣವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಈ ತನಕ ಆಗದಿದ್ದರೆ ಅದನ್ನು 'ಮಿಂಚು ಇರುವೆ', 'ದೀಪದ ಇರುವೆ' ಅಥವಾ 'ಮಿಣುಕು ಇರುವೆ' ಎನ್ನಬಹುದೇ? ನನಗೇಕೋ 'ಮಿಣುಕು ಇರುವೆ' ಬಹಳ ಸುಂದರವಾದ ಹೆಸರು ಎನ್ನಿಸುತ್ತಿದೆ. ಏನೋ, ನನಗೆ ತೋಚಿದ್ದು ಬರೆಯುತ್ತಿದ್ದೇನೆ; ಇದರ ಬಗ್ಗೆ ತಿಳಿದವರಿಗೆ ನಗೆಪಾಟಲಾದರೂ ಆಗಬಹುದು!&lt;br /&gt;&lt;br /&gt;ನಾನು ಕಂಡ ಮಿಣುಕು ಇರುವೆಯ ಫೋಟೋ ಇಂಟರ್ನೆಟ್ ನಲ್ಲಿ ಸಿಗಲಿಲ್ಲ. ಕಂಡಾಗ ನಾನೇ ಒಂದು ಫೋಟೋ ತೆಗೆಯಲು ಪ್ರಯತ್ನಿಸಬಹುದಿತ್ತೇನೋ, ಆದರೆ ನನಗೆ ಯಾಕೋ ಆಗ ಇದು ತೋಚಲೇ ಇಲ್ಲ. ಮತ್ತೊಮ್ಮೆ ಯಾವಾಗಲಾದರೂ ಅದು ಕಾಣಸಿಕ್ಕರೆ ಫೋಟೋ ತೆಗೆಯಲು ಪ್ರಯತ್ನಿಸಬೇಕು. ಸಧ್ಯಕ್ಕೆ, ಇಂಟರ್ನೆಟ್ ನಲ್ಲಿ ಸಿಕ್ಕ ಕೆಲವು 'ಫೈರ್ ಫ್ಲೈ'ಗಳ ಚಿತ್ರಗಳನ್ನು ಇಲ್ಲಿ ಹಾಕುತ್ತಿದ್ದೇನೆ.&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_JaSAEbMHNYk/SIFczKCJrCI/AAAAAAAADLU/3cv16D30_j4/s1600-h/firefly1.jpg"&gt;&lt;img style="margin: 0px auto 10px; display: block; text-align: center; cursor: pointer;" src="http://1.bp.blogspot.com/_JaSAEbMHNYk/SIFczKCJrCI/AAAAAAAADLU/3cv16D30_j4/s320/firefly1.jpg" alt="" id="BLOGGER_PHOTO_ID_5224559076662946850" border="0" /&gt;&lt;/a&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_JaSAEbMHNYk/SIFczfOjAmI/AAAAAAAADLc/ENB8jGJecJw/s1600-h/firefly2.jpg"&gt;&lt;img style="margin: 0px auto 10px; display: block; text-align: center; cursor: pointer;" src="http://4.bp.blogspot.com/_JaSAEbMHNYk/SIFczfOjAmI/AAAAAAAADLc/ENB8jGJecJw/s320/firefly2.jpg" alt="" id="BLOGGER_PHOTO_ID_5224559082352083554" border="0" /&gt;&lt;/a&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_JaSAEbMHNYk/SIFczQU6WHI/AAAAAAAADLk/ju6kokBgskE/s1600-h/firefly3.jpg"&gt;&lt;img style="margin: 0px auto 10px; display: block; text-align: center; cursor: pointer;" src="http://3.bp.blogspot.com/_JaSAEbMHNYk/SIFczQU6WHI/AAAAAAAADLk/ju6kokBgskE/s320/firefly3.jpg" alt="" id="BLOGGER_PHOTO_ID_5224559078352246898" border="0" /&gt;&lt;/a&gt;&lt;br /&gt;ಇದರ ಬಗ್ಗೆ ಯೋಚಿಸುತ್ತಿದ್ದಾಗ ಒಂದು ಜಿಜ್ಞಾಸೆ ಶುರುವಾಯಿತು. ಸ್ವಲ್ಪ ವೇದಾಂತಕ್ಕೆ ಸಂಬಂಧಿಸಿದ್ದರೂ, ಸ್ವಲ್ಪ ಅಸಂಬದ್ಧ ಎನ್ನಿಸಿದರೂ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಶಬರಿಮಲೆಯಲ್ಲಿ ಮಕರ ಸಂಕ್ರಮಣಕ್ಕೆ ಕಾಣುವ ಜ್ಯೋತಿ (ಮಕರ-ಜ್ಯೋತಿ) ಅಯ್ಯಪ್ಪನನ್ನು ಜನ ಹಾಡಿ ಹೊಗಳುವಂತೆ ಮಾಡುತ್ತಿದ್ದರೆ, ತಮ್ಮಷ್ಟಕ್ಕೆ ತಾವೇ ನಿರಂತರವಾಗಿ ಬೆಳಕು ಬೀರಬಲ್ಲ ಇಂತಹ ಲಕ್ಷಾಂತರ ಅಥವಾ ಕೋಟ್ಯಂತರ ಜೀವಿಗಳನ್ನು ಕಂಡು ಏಕೆ ಜನಕ್ಕೆ ಅದರ ಸ್ರಷ್ಟಾರನನ್ನು ಹಾಡಿ ಹೊಗಳಬೇಕು ಎನ್ನಿಸುತ್ತಿಲ್ಲ? ಅಥವಾ ಮಕರ ಜ್ಯೋತಿಗೆ ಕೈ ಮುಗಿಯುವಂತೆ ಈ ಹುಳುಗಳ ಬೆಳಕಗೂ ಜನ ಏಕೆ ಕೈ ಮುಗಿಯುವುದಿಲ್ಲ? ಸ್ವಲ್ಪ ಯೋಚಿಸೋಣ; ನಾವು ನೋಡುತ್ತಿರುವುದು ಪ್ರಪಂಚದ ಅತಿದೊಡ್ಡ ವಿಸ್ಮಯಗಳಲ್ಲಿ ಒಂದಲ್ಲವೇ? ಎಲ್ಲಾ ಜೀವಿಗಳಲ್ಲೂ ಇಂಥ 'ವಿಸ್ಮಯ' ಎನ್ನಬಹುದಾದ ಅಂಶಗಳಿರುತ್ತವೆ. ಅದನ್ನು ಗುರುತಿಸಿ ಅದರಲ್ಲಿ ದೇವರನ್ನು ಕಂಡು, ಗೌರವಿಸಬೇಕು. ಆಗಲೇ ಈ ಸುಂದರವಾದ ಸೃಷ್ಟಿ ಸುಂದರವಾಗೇ ಉಳಿಯುವುದು. ಅದನ್ನು ಬಿಟ್ಟು "ಎಲ್ಲಾ ಜೀವಿಗಳ ಮೇಲೆ ದಯೆ ತೋರಿಸಿ" ಎಂದು ಮನುಷ್ಯನ 'ದಯೆ'ಯನ್ನು ಕೋರುವ ತಲೆಬಡಗಳಿಲ್ಲದ ತರ್ಕ / ಸೂತ್ರ / ಉಪದೇಶಗಳನ್ನು ನಮ್ಮ ಇಂದಿನ ಪರಿಸರವಾದಿಗಳು ಮುಂದಿಡುತ್ತಿದ್ದಾರೆ. ಯಾವ ಜೀವಿಗೂ ಇನ್ಯಾವ ಜೀವಿಯ ದಯೆಯೂ ಬೇಕಿಲ್ಲ. ಬೇಕಾದ್ದು ಪ್ರೀತಿ ಮತ್ತು ಗೌರವ. ದೇವರನ್ನು ಗೌರವಿಸುವಂತೆಯೇ ಎಲ್ಲ ಜೀವಿಗಳನ್ನೂ ಪ್ರೀತಿಸಬೇಕು ಮತ್ತು ಗೌರವಿಸಬೇಕು. ಈ ರೀತಿ ಪ್ರೀತಿಸುವುದು ಮತ್ತು ಗೌರವಿಸುವುದು ಮನುಷ್ಯನ ಉದಾರತನವೂ ಆಗುವುದಿಲ್ಲ; ಅದು ನಮ್ಮೆಲ್ಲಾರ ಕರ್ತವ್ಯ. ಸುಮ್ಮನೆ, ಕಾರಣವಿಲ್ಲದೇ ನಾವು ಯಾವ ಜೀವಿಯನ್ನೂ ಗೌರವಿಸುತ್ತಿಲ್ಲ. ಪ್ರತಿಯೊಂದಕ್ಕೂ ತನ್ನ ವಿಶಿಷ್ಟ ಗುಣಗಳಿರುತ್ತವೆ. ನಮ್ಮಂತೆಯೇ ಅದೂ ಒಂದು ಜೀವ, ಅವಕ್ಕೂ ನಮ್ಮಷ್ಟೇ ಭೂಮಿಯಲ್ಲಿ ವಾಸಿಸುವ ಹಕ್ಕಿರುತ್ತದೆ. ಆ ವಿಶಿಷ್ಟ ಗುಣಗಳನ್ನು ಪ್ರೀತಿಸಿ, ಪ್ರತಿಯೊಂದು ಜೀವಿಯ ಹಕ್ಕನ್ನೂ ಗೌರವಿಸಿ, ಆ ಮೂಲಕ ಎಲ್ಲ ಜೀವಿಗಳನ್ನೂ ಪ್ರೀತಿಸಿ ಗೌರವಿಸೋಣ. &lt;br /&gt;&lt;br /&gt;ಈ ಸುಂದರ ಜಗತ್ತಿನ ಸ್ರಷ್ಟಾರನಿಗೆ ಪ್ರೀತಿಪೂರ್ವಕವಾದ, ಭಕ್ತಿಪೂರ್ವಕವಾದ ನಮನ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-1529353428136090308?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/1529353428136090308/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=1529353428136090308' title='2 Comments'/><link rel='edit' type='application/atom+xml' href='http://www.blogger.com/feeds/34886019/posts/default/1529353428136090308'/><link rel='self' type='application/atom+xml' href='http://www.blogger.com/feeds/34886019/posts/default/1529353428136090308'/><link rel='alternate' type='text/html' href='http://manasinaputagalanaduve.blogspot.com/2008/07/blog-post.html' title='ದೀಪವು ನಿನ್ನದೇ'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_JaSAEbMHNYk/SIFczKCJrCI/AAAAAAAADLU/3cv16D30_j4/s72-c/firefly1.jpg' height='72' width='72'/><thr:total>2</thr:total></entry><entry><id>tag:blogger.com,1999:blog-34886019.post-8856658983830103436</id><published>2008-06-24T22:09:00.006+05:30</published><updated>2008-06-25T13:51:16.962+05:30</updated><title type='text'>ತರ್ಜುಮೆ ಪ್ರವೀಣರು!</title><content type='html'>ಇತ್ತೀಚೆಗೆ ನಮ್ಮಲ್ಲಿ ಹೊಸ ಹವ್ಯಾಸವೊಂದು ಹುಟ್ಟಿಕೊಂಡಿದೆ - ಸಂಸ್ಕೃತ ಶ್ಲೋಕಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವುದು; ಅದೂ ಕವಿತೆಯ ರೂಪದಲ್ಲಿ.&lt;br /&gt;&lt;br /&gt;ನೆನ್ನೆ ಅರುಣ ಒಂದು ಶ್ಲೋಕ ಕಳುಹಿಸಿದ್ದ.&lt;br /&gt;&lt;br /&gt;&lt;div style="text-align: center;"&gt;ಕುರ್ವನ್ನೇವೇಹ ಕರ್ಮಾಣಿ&lt;br /&gt;ಜಿಜೀವಿಷೇಚ್ಛತಂ ಸಮಾಃ&lt;br /&gt;ಏವಂ ತ್ವಯಿ ನಾನ್ಯಥೇತೋಸ್ತಿ&lt;br /&gt;ನ ಕರ್ಮ ಲಿಪ್ಯತೇ ನರೇ&lt;br /&gt;&lt;/div&gt;&lt;br /&gt;ಈಶಾವಾಸ್ಯೋಪನಿಷತ್ತಿನ ಪ್ರಸಿದ್ಧವಾದ ಶ್ಲೋಕವಿದು. ಇದರ ನಾಲ್ಕು ತರ್ಜುಮೆಗಳು ಕೆಳಗಿವೆ&lt;br /&gt;&lt;br /&gt;ಶ್ರೀನಿವಾಸ:&lt;br /&gt;&lt;br /&gt;&lt;div style="text-align: center;"&gt;ಕರ್ಮಗಳನಾಚರಿಪುದಿಂದಲೇ ಇಹದೊಳಗೆ&lt;br /&gt;ನೂರ್ಕಾಲ ಜೀವಿಸುವ ಹಂಬಲವು ಬಹುದು&lt;br /&gt;ಬೇರಿಲ್ಲವಾವ ಹಿತ ಮಾರ್ಗವೀ ಮಾರ್ಗದಲಿ&lt;br /&gt;ಕರುಮವಂಟದು ನರನ - ಶ್ರೀನಿವಾಸ&lt;br /&gt;&lt;/div&gt;&lt;br /&gt;ಅರುಣ:&lt;br /&gt;&lt;br /&gt;&lt;div style="text-align: center;"&gt;ನೀನು ಮಾಳ್ಪ ಹಲವು ಕರ್ಮ&lt;br /&gt;ಅದುವೆ ನಿನಗೆ ಬದುಕ ಧರ್ಮ&lt;br /&gt;ಬಯಸು ಬಾಳೆ ವರ್ಷ ನೂರು&lt;br /&gt;ತೀರಿಸಲ್ಕೆ ಇಹವೆ ಸೂರು&lt;br /&gt;ಕೇಡು ವೃಕ್ಷ ಬೆಳೆಸಿದಾಗ&lt;br /&gt;ಬಾಳ ನೆಲದಿ ತನ್ನ ಬೇರು&lt;br /&gt;&lt;/div&gt;&lt;br /&gt;ಶ್ರೀಕಾಂತ:&lt;br /&gt;&lt;br /&gt;&lt;div style="text-align: center;"&gt;ಇರುವ ನಿನ್ನಯ ಹೊಣೆಯ ಹೊತ್ತು&lt;br /&gt;ಇರಲು ಇಚ್ಛಿಸು ನೂರು ವರುಷ&lt;br /&gt;ಬಿರಿದು ಈ ನಿಷ್ಠೆಯನು ಬದುಕಲು&lt;br /&gt;ಬರುವುದಪಕೃತಿಕೀರ್ತಿ ನರಗೆ&lt;br /&gt;&lt;/div&gt;&lt;br /&gt;ಲಕ್ಷ್ಮೀ:&lt;br /&gt;&lt;br /&gt;&lt;div style="text-align: center;"&gt;ಇಹದಲ್ಲಿ ಹೊಂದಲು ಅತಿಶಯದ ಹರುಷ&lt;br /&gt;ಇರುವ ಕೆಲಸ ಮಾಡುತ್ತ ಬಾಳಲಿಚ್ಛಿಸು ನೂರ್ವರ್ಷ&lt;br /&gt;ಇಲ್ಲ ಕರ್ಮ ಸವೆಸಲು ಅನ್ಯ ಸುಲಭಾದರ್ಶ&lt;br /&gt;ಕರ್ಮವಂಟದು ಜೀವಕ್ಕೆ ಹೀಗಿರಲು ಪುರುಷ&lt;br /&gt;&lt;/div&gt;&lt;br /&gt;ಒಂದೇ ಶ್ಲೋಕ. ನಾಲ್ಕು ದೃಷ್ಟಿಕೋನಗಳು! ನಾನು ಎಲ್ಲರೂ 'ಕರ್ಮ' ಎಂಬ ಪದಕ್ಕೆ ಏನೆಂದು ಅನುವಾದಿಸುತ್ತಾರೆ ಎಂದು ಕುತೂಹಲದಿಂದ ಕಾದಿದ್ದೆ. ಲಕ್ಷ್ಮೀ 'ಕೆಲಸ' ಎಂದರೆ ನಾನು 'ಹೊಣೆ' ಎಂದೆ. ಅರುಣ ಮತ್ತು ಶ್ರೀನಿವಾಸ ಕರ್ಮವನ್ನು ಕರ್ಮವಾಗಿಯೇ ಉಳಿಸಿದರು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-8856658983830103436?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/8856658983830103436/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=8856658983830103436' title='4 Comments'/><link rel='edit' type='application/atom+xml' href='http://www.blogger.com/feeds/34886019/posts/default/8856658983830103436'/><link rel='self' type='application/atom+xml' href='http://www.blogger.com/feeds/34886019/posts/default/8856658983830103436'/><link rel='alternate' type='text/html' href='http://manasinaputagalanaduve.blogspot.com/2008/06/blog-post_24.html' title='ತರ್ಜುಮೆ ಪ್ರವೀಣರು!'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>4</thr:total></entry><entry><id>tag:blogger.com,1999:blog-34886019.post-840602233323555897</id><published>2008-06-09T18:36:00.011+05:30</published><updated>2008-06-11T17:08:23.989+05:30</updated><title type='text'>ನಿಶಾನಿ ಮೊಟ್ಟೆ</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_JaSAEbMHNYk/SE0uT50a87I/AAAAAAAACqw/1AWqtL8PjaU/s1600-h/P6010098.JPG"&gt;&lt;img style="margin: 0px auto 10px; display: block; text-align: center; cursor: pointer;" src="http://1.bp.blogspot.com/_JaSAEbMHNYk/SE0uT50a87I/AAAAAAAACqw/1AWqtL8PjaU/s320/P6010098.JPG" alt="" id="BLOGGER_PHOTO_ID_5209871263410615218" border="0" /&gt;&lt;/a&gt;&lt;br /&gt;ಕೊಡಗಿನ ನಿಶಾನಿ ಮೊಟ್ಟೆಗೆ ಚಾರಣ ಮಾಡಬೇಕು ಎಂಬುದು ನಮಗೆ ಎರಡು-ಮೂರು ವರ್ಷಗಳ ಹಳೆಯ ಪ್ರಾಜೆಕ್ಟ್. ಕೋಟೆಬೆಟ್ಟದ ಜೊತೆ ನಿಶಾನಿ ಮೊಟ್ಟೆಯ ಬಗ್ಗೆಯೂ ಗೊತ್ತಾಗಿತ್ತು. ಆದರೆ ನಿಶಾನಿ ಮೊಟ್ಟೆಗೆ ಹೋಗುವ ಕಾಲ ಕೂಡಿ ಬಂದಿರಲಿಲ್ಲ. ಜೂನ್ ಒಂದನೇ ತಾರೀಖಿನಂದು ಏನಾದರಾಗಲಿ ಎಂದು ನಾನು, ಅರುಣ ಮತ್ತು ಶ್ರೀನಿವಾಸ ಬಿಡುವು ಮಾಡಿಕೊಂಡು ನಿಶಾನಿ ಮೊಟ್ಟೆಗೆ ಹೊರಟೇ ಬಿಟ್ಟೆವು. ಯಾರೋ ನಿಶಾನಿ ಮೊಟ್ಟೆಗೆ ಚಾರಣ ಮಾಡಿದ ಹಳೆಯ ಲೇಖನವೊಂದು ಹಿಂದೆ ಅಂತರ್ಜಾಲದಲ್ಲಿ ಪ್ರಕಟವಾಗಿತ್ತು. ಅದನ್ನೋದಿದ್ದು ಬಿಟ್ಟರೆ ಬೇರೆ ಯಾವ ಮಾಹಿತಿಯೂ ನಮ್ಮಲ್ಲಿರಲಿಲ್ಲ. ಸಮಯವಿದ್ದಿದ್ದು ಒಂದು ಹಗಲು ಮಾತ್ರ. ಜೊತೆಗೆ ಈಗ ತಾನೆ ರಿಪೇರಿಯಾಗಿ ಚೇತರಿಸಿಕೊಂಡಂತಿರುವ ನನ್ನ ಕಾಲು ಈ ಚಾರಣ ಮಾಡುತ್ತದೋ ಇಲ್ಲವೋ ಎಂಬ ಚಿಂತೆ ಬೇರೆ. ಆದರೆ ಮೂವರ ಮನಸ್ಸುಗಳಲ್ಲೂ ಹೇಗಾದರಾಗಲಿ, ಈ ಚಾರಣ ಮಾಡಿಬಿಡಬೇಕೆಂಬ ಬಲವಾದ ಹಂಬಲ.&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_JaSAEbMHNYk/SE0uUZ0a88I/AAAAAAAACq4/SxMQ_cn_K2M/s1600-h/P6010088.JPG"&gt;&lt;img style="margin: 0px auto 10px; display: block; text-align: center; cursor: pointer;" src="http://3.bp.blogspot.com/_JaSAEbMHNYk/SE0uUZ0a88I/AAAAAAAACq4/SxMQ_cn_K2M/s320/P6010088.JPG" alt="" id="BLOGGER_PHOTO_ID_5209871272000549826" border="0" /&gt;&lt;/a&gt;&lt;br /&gt;ಮೂರು ತಿಂಗಳಿಗೂ ಹೆಚ್ಚು ಕಾಲ ಪೇಟೆಯ ಅಲೆದಾಟಗಳೇ ಆಗಿತ್ತು. ಅದಾದ ಬಳಿಕ ಕಾಡಿಗೆ ಕಾಲಿಟ್ಟರೆ ಅದು ಸ್ವರ್ಗವೇ. ಗಿಡ-ಮರಗಳೊಂದು ಕಡೆ. ಶುದ್ಧ ನೀರೊಂದು ಕಡೆ. ಶುದ್ಧ ಗಾಳಿ ಮತ್ತೊಂದು ಕಡೆ. ರಮಣೀಯವಾದ ನೋಟಗಳು ಎಲ್ಲೆಡೆ. ಎಲ್ಲವನ್ನೂ ಮೀರಿ ಬರುತ್ತಿದ್ದ ಜೀರುಂಡೆಗಳ ಅರಣ್ಯರಾಗ. ಹಿತವಾವುದು ಈ ಐದರೊಳಗೆ? ಗೊತ್ತಿಲ್ಲ. ಯಾಕೆಂದರೆ ಆರಿಸುವಷ್ಟರಲ್ಲಿ ಆರನೆಯ ಅಭ್ಯರ್ಥಿ ಸಿಗುತ್ತದೆ! ಹಾಗೇ ಏಳನೆಯದು, ಎಂಟನೆಯದು...! ಒಮ್ಮೊಮ್ಮೆ ನನ್ನೊಡನೆ ಇರುವ ಗೆಳೆಯರೂ ಈ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಬಹುದಲ್ಲ ಎನ್ನಿಸುತ್ತದೆ. ದಾರಿ ತೋಚದಾಗುತ್ತದೆ. ಕೊನೆಗೆ ಕಾಣುವುದೊಂದೇ ದಾರಿ - ಮುಂದಿರುವ ಕಾಡು ದಾರಿ; ಈ ಬಾರಿ ಅದು ಹೋಗುವುದು ನಿಶಾನಿ ಮೊಟ್ಟೆಯ ತುದಿಗೆ.&lt;br /&gt;&lt;br /&gt;ಜೀಪು ರಸ್ತೆಯೊಂದನ್ನು ಹಿಡಿದು ಏರಿಳಿತದ ದಾರಿಯಲ್ಲಿ ಸುಮಾರು ಎರಡು ತಾಸು ನಡೆದಮೇಲೆ ದಾರಿ ಮೂರಾಗಿ ಕವಲೊಡೆವ ಜಾಗವೊಂದಕ್ಕೆ ಬಂದು ಕುಳಿತೆವು. ಅಲ್ಲಿಯ ತನಕ  ಅಕ್ಕಪಕ್ಕದ ಎಸ್ಟೇಟುಗಳಲ್ಲಿ ಅವರಿವರನ್ನು ಕೇಳಿಕೊಂಡು ಬಂದಿದ್ದೆವು. ಆದರೆ ಈ ಮೂರು ಕವಲೊಡೆವ ದಾರಿಗಳಲ್ಲಿ ಯಾವುದನ್ನು ಹಿಡಿಯಬೇಕು ಎಂದು ತಕ್ಷಣ ಹೊಳೆಯಲಿಲ್ಲ. ನಮಗೂ ವಿಶ್ರಾಂತಿ ಬೇಕಾಗಿತ್ತು. ಸ್ವಲ್ಪ ಹೊತ್ತು ಹರಟೆ ಹೊಡೆದೆವು. ನಂತರ ಅರುಣನ "ಸಿರಿಗೆರೆಯ ನೀರಲ್ಲಿ" ಹಾಡುಗಾರಿಕೆ. ಚೆನ್ನಾಗಿ ಹಾಡಿದ. ಆಮೇಲೆ ನನಗೆ ಹಾಡಲು ಹೇಳಿದರು. ನಾನು ಹಾಡಿದರೆ ಓಡಿಹೋಗ್ತಾರೆ ಎಂದು ಹೇಳಿದರೆ "ನಾನಂತೂ ಹೋಗಲ್ಲ" ಎಂದು ಶ್ರೀನಿವಾಸ ಪ್ರತ್ಯುತ್ತರ ನೀಡಿದ. ಒಂದು ಪೂರ್ತಿಯಾಗಿ ಬರುವ ಹಾಡು ನೆನಪಿಸಿಕೊಳ್ಳಲು ಸ್ವಲ್ಪ ಹೊತ್ತು ಬೇಕಾಯಿತು. ಕೊನೆಗೆ ಅರುಣನನ್ನೂ ನನ್ನ ಜೊತೆ ಹಾಡಲು ಹೇಳಿ "ಅಳುವ ಕಡಲೊಳು" ಹಾಡಿದೆ. ಇಷ್ಟರ ನಡುವೆಯೇ ಒಂದು ಫೋಟೋ ಸೆಶನ್ ಕೂಡ ಮುಗಿದಿತ್ತು. ವಿಶ್ರಾಂತಿಗೆಂದು ಕುಳಿತು ಇಪ್ಪತ್ತು  ನಿಮಿಷವಾಗಿತ್ತು. ನಮ್ಮ ವಿಶ್ರಾಂತಿ ಅತಿಯಾಯಿತೆಂದು ಶ್ರೀನಿವಾಸನ ಹಾಡುಗಾರಿಕೆಯನ್ನು ಮುಂದೂಡಿ ಮುಂದೆ ಹೊರಟೆವು.&lt;br /&gt;&lt;br /&gt;ಮೂರು ಕವಲೊಡೆವ ದಾರಿಯಲ್ಲಿ ಒಂದು ಇಳಿಜಾರಿನ ದಾರಿ. ಏನೋ ಲೆಕ್ಕಾಚಾರದ ಮೇಲೆ ಆ ದಾರಿ ಬೆಟ್ಟದ ಕಡೆಗಿನ ದಾರಿ ಇರಲಾರದೆಂದು ಉಳಿದ ಎರಡು ದಾರಿಗಳಲ್ಲಿ ಯಾವುದನ್ನು ಆರಿಸಿಕೊಳ್ಳುವುದು ಎಂದು ಯೋಚಿಸಿದೆವು. ಎರಡೂ ದಾರಿಗಳೂ ನಾವು ನೋಡಿದಷ್ಟು ದೂರಕ್ಕೂ ಪಕ್ಕ-ಪಕ್ಕದಲ್ಲೇ ಸಾಗುತ್ತಿದ್ದರಿಂದ ಅರುಣ ಎರಡೂ ದಾರಿ ಒಂದೇ ಕಡೆಗೆ ಹೋಗುವುದೆಂದು ಊಹಿಸಿದ. ಈ ಊಹೆಯ ಆಧಾರದ ಮೇಲೇ ಒಂದು ದಾರಿಯನ್ನು ಹಿಡಿದು ಮುಂದೆ ಹೋದೆವು. ಸ್ವಲ್ಪ ದೂರದ ತನಕ ಮತ್ತೊಂದು ದಾರಿಯೂ ಪಕ್ಕದಲ್ಲೇ ಇರುವುದನ್ನು ನೋಡುತ್ತಿದ್ದೆ. ಆದರೆ, ಸ್ವಲ್ಪ ದೂರ ಹೋದಮೇಲೆ ಕ್ರಮೇಣವಾಗಿ ಆ ದಾರಿ ಕಣ್ಮರೆಯಾಯಿತು. ಆದರೆ ನಾವು ಹೋಗುತ್ತಿದ್ದ ದಾರಿ ತಪ್ಪಿರಬಹುದೆಂದು ಅನ್ನಿಸಲಿಲ್ಲ. ಹಾಗಾಗಿ ಆ ದಾರಿಯಲ್ಲೇ ಮುಂದುವರಿದೆವು. ಮುಂದೆ ನಾವು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ನಮ್ಮ ದಾರಿಯಲ್ಲಿ ಸಿಕ್ಕ ಕೊನೆಯ ಎಸ್ಟೇಟಿನಲ್ಲಿ ವಿಚಾರಿಸಿದೆವು. ದಾರಿ ಸರಿಯಾಗೇ ಇತ್ತು. ಹಾಗೇ ಮುಂದೆ ಹೋದರೆ ನಿಶಾನಿ ಮೊಟ್ಟೆ ಸಿಗುವುದೆಂದು ಹೇಳಿದರು. ನಾನು "ಇನ್ನೆಷ್ಟು ದೂರ" ಎಂದು ಕೇಳಿದ್ದಕ್ಕೆ "ದೂರ..." ಎಂದು ಉತ್ತರಿಸಿದರಷ್ಟೇ. ಅಷ್ಟರಲ್ಲಿ ಆ ಎಸ್ಟೇಟಿನ ನಾಯಿಗಳ ಬಾಯಿಗೆ ಹೆದರಿ ಬೇಗ ಹೊರಬಂದುಬಿಟ್ಟೆವು.&lt;br /&gt;&lt;br /&gt;ಆ ಎಸ್ಟೇಟ್ ದಾಟಿದ ಮೇಲೆ ದಾರಿ ಇದ್ದಿಕ್ಕಿದ್ದಂತೆ ಸಣ್ಣದಾಯಿತು. ಕಾಡು ದಟ್ಟವಾಗಿತ್ತು. ಹತ್ತು ಹೆಜ್ಜೆ ಇಡುವಷ್ಟರಲ್ಲೇ ಜಿಗಣೆಗಳ ಸೈನ್ಯ ನಮ್ಮನ್ನು ಸುತ್ತುವರಿದವು. ಒಂದೊಂದು ಹೆಜ್ಜೆಗೂ ಒಂದಷ್ಟು ಜಿಗಣೆಗಳು  ಹತ್ತುತ್ತಿದ್ದವು. ಜಿಗಣೆಗಳನ್ನು ತೆಗೆದುಹಾಕಲು ನಿಂತರೆ ನಿಂತಲ್ಲೇ ಐದಾರು ಜಿಗಣೆಗಳು ಕಾಲಿಗೆ ಹತ್ತುತ್ತಿದ್ದವು. ಎಲ್ಲರೂ ಸ್ವಲ್ಪ ಪ್ರಯತ್ನದ ನಂತರ ಜಿಗಣೆಗಳನ್ನು ತೆಗೆದುಹಾಕುವುದರಲ್ಲಿ ಪ್ರಯೋಜನವಿಲ್ಲ ಎಂದು ನಿರ್ಧರಿಸಿ ಮುಂದೆ ಹೊರಟೆವು. ಶ್ರೀನಿವಾಸ ಎಂದೂ ಇಷ್ಟೊಂದು ಜಿಗಣೆಗಳನ್ನು ನೋಡಿರಲಿಲ್ಲ ಎನ್ನಿಸುತ್ತದೆ. ಆದರೆ ಅರುಣ ಮತ್ತು ನಾನು ಬ್ರಹ್ಮಗಿರಿಗೆ ಹೋದಾಗ ಲೆಕ್ಕವಿಲ್ಲದಷ್ಟು ಜಿಗಣೆಗಳಿಗೆ ಉಚಿತ ರಕ್ತಸಂತರ್ಪಣೆ ಮಾಡಿ ಬಂದಿದ್ದೆವು. ಜಿಗಣೆಗಳ ಹಾವಳಿ ಅಭ್ಯಾಸವಾಗಲು ಶ್ರೀನಿವಾಸನಿಗೆ ಸ್ವಲ್ಪ ಹೊತ್ತು ಬೇಕಾಯಿತು. ಆದರೆ ಅಭ್ಯಾಸ ಮಾಡಿಕೊಳ್ಳದೇ ಬೇರೆ ದಾರಿಯಿರಲಿಲ್ಲ! "ಅದನ್ನ ಕೇರ್ ಮಾಡ್ಬೇಡ್ವೋ" ಎಂದು ಹೇಳಿ ಮುಂದೆ ಹೊರಟೆವು. ಸ್ವಲ್ಪ ದೂರ ನಡೆದಮೇಲೆ ಒಂದು ಚಿಕ್ಕ ಜಾಗದಲ್ಲಿ ಮರಗಳ ಹೊದಿಗೆಯಿಲ್ಲದೇ ಬಿಸಿಲು ಚೆನ್ನಾಗಿ ಬೀಳುತ್ತಿತ್ತು. ಅಲ್ಲಿ ಜಿಗಣೆಗಳಿರುವುದಿಲ್ಲ ಎಂದು ಅಲ್ಲಿ ಎಷ್ಟಾಗುವುದೋ ಅಷ್ಟು ಜಿಗಣೆಗಳನ್ನು ನಮ್ಮ ಕಾಲಿಂದ ತೆಗೆದುಹಾಕಲು ನೋಡಿದೆವು. ಆದರೆ ಬೂಟ್ಸು ಮತ್ತು ಕಾಲುಚೀಲದೊಳಗೆ ಧಾರಾಳವಾಗಿ ತುಂಬಿಕೊಂಡಿದ್ದ ಅವನ್ನು ಪೂರ್ತಿಯಾಗಿ ತೆಗೆದುಹಾಕುವುದು ಸಾಧ್ಯವಿರಲಿಲ್ಲ. ಆಗಲೇ ನಮ್ಮ ಕಾಲಿನ ಕೆಲವು ಜಾಗಗಳಲ್ಲಿ ರಕ್ತದ ಕಿರುಹೊಳೆಗಳು ಉತ್ಪತ್ತಿಯಾಗಿದ್ದವು. "ಲೀಚ್ ತೆಕ್ಕೊಳೋದ್ರಲ್ಲಿ ಕಾಲ ಹಾಕೋದು ಬೇಡ. ಹೇಗಿದ್ರೂ ಮುಂದೆ ತಿರ್ಗಾ ಹತ್ತತ್ತೆ" ಎಂದು ಹೇಳಿ ಅರುಣ ಮತ್ತು ಶ್ರೀನಿವಾಸ - ಇಬ್ಬರನ್ನೂ ಮುಂದೆ ಹೊರಡಿಸಿದೆ.&lt;br /&gt;&lt;br /&gt;ಅಲ್ಲಿಂದ ಹತ್ತೇ ಹೆಜ್ಜೆ ಹಾಕಿದ್ದೆವಷ್ಟೇ. ಅಷ್ಟರಲ್ಲಿ ಯಾವುದೋ ಪ್ರಾಣಿಯ ಸದ್ದು ಕೇಳಿಸಿತು. ತಕ್ಷಣ ಅರುಣ ಅದು ಆನೆ ಎಂದು ಪಿಸುಮಾತಿನಲ್ಲಿ ಘೋಷಿಸಿಬಿಟ್ಟ! ಆ ಶಬ್ದ ಬರುತ್ತಿದ್ದು ನಾವು ಹೋಗುತ್ತಿದ್ದ ದಾರಿಯ ಎಡಕ್ಕಿದ್ದ ಸಣ್ಣ ಪ್ರಪಾತದ ಕಡೆಯಿಂದ. ಪ್ರಪಾತವಿದ್ದರೂ ಅಲ್ಲಿ ಮರಗಳು ದಟ್ಟವಾಗಿ ಬೆಳೆದಿದ್ದರಿಂದ ನಮಗೆ ಯಾವ ಪ್ರಾಣಿಯೂ ಸರಿಯಾಗಿ ಕಾಣುತ್ತಿರಲಿಲ್ಲ. ಐದು ನಿಮಿಷ ಅಲ್ಲೇ ನಿಂತು ಗಮನಿಸಿದೆವು. ಏನೂ ಗೊತ್ತಾಗಲಿಲ್ಲ. ಅದು ಆನೆ ಇರಲಾರದು ಎಂದು ನನಗೂ ಶ್ರೀನಿವಾಸನಿಗೂ ಅನ್ನಿಸಿತು. ಏನಾದರಾಗಲಿ, ಮೊದಲು ಈ ಜಾಗದಿಂದ ಹೊರಡೋಣ ಎಂದು ಬೇಗನೆ ಮುಂದೆ ಹೊರಟೆವು. ಮುಂದೆ ಒಂದು ಹೊಲವೂ, ಅದರಾಚೆಗೆ ಒಂದು ಹೆಂಚಿನ ಹೊದಿಗೆಯಿದ್ದ ಸಣ್ಣ ಮನೆ. ಅದರ ಮೇಲೆ ಮತ್ತೊಂದು ಮನೆ. ಅದಕ್ಕೂ ಐವತ್ತು ಅಡಿ ಮೇಲೆ ಕಾಣುತ್ತಿದೆ ಶಿಖರ! "ಆಹ್! ಅದೇ ನಿಶಾನಿ ಮೊಟ್ಟೆ" ಎಂಬ ಉದ್ಗಾರ ನಿರಾಯಾಸವಾಗಿ ಬಂತು. "ಹ್ಮ್... ಇನ್ನರ್ಧ ಘಂಟೆ ಅಷ್ಟೇ. ಪೀಕ್ ಮೇಲಿರ್ತೀವಿ" ಎಂದು ಅರುಣ ಹೇಳಿಬಿಟ್ಟ. ಸ್ವಲ್ಪ ದೂರ ನಡೆದಮೇಲೆ ನಮ್ಮ ದಾರಿ ಬಲಕ್ಕೆ ತಿರುಗಿತು. ನಮ್ಮ ಊಹೆಯ ಪ್ರಕಾರ ನಾವು ನೇರವಾಗಿ ಹೋಗಬೇಕಾಗಿತ್ತು. ಬಲಕ್ಕೆ ಹೋದ ದಾರಿಯಲ್ಲಿ ಹತ್ತು ಹೆಜ್ಜೆ ಹಾಕಿ ತಲೆಯೆತ್ತಿ ನೋಡಿದರೆ ಬಲದಲ್ಲಿ ನಾವಂದುಕೊಂಡಿದ್ದಕ್ಕಿಂತಲೂ ಬಹಳ ಎತ್ತರವಾದ ಮತ್ತೊಂದು ಶಿಖರ! ಆ ಶಿಖರದ ಮೇಲ್ಭಾಗ ಮಾತ್ರ ಬೋಳುಗುಡ್ಡವಾಗಿದ್ದು, ಕೆಳಭಾಗವೆಲ್ಲಾ ದಟ್ಟವಾದ ಕಾಡಿತ್ತು. ಹೊಸದಾಗಿ ಕಂಡ 'ಹೊಸ' ನಿಶಾನಿಮೊಟ್ಟೆಯ ಕಡೆ ಹೆಜ್ಜೆ ಹಾಕುತ್ತಿರುವಾಗ ಅರುಣ ಇದ್ದಕ್ಕಿದ್ದಂತೆ ನಿಂತು ಹಿಂದಿರುಗಿ ಪಿಸುಮಾತಲ್ಲಿ ಹೇಳಿದ.&lt;br /&gt;&lt;br /&gt;ಅರುಣ: "ಶ್....!!!"&lt;br /&gt;&lt;br /&gt;ಅರುಣ: "ಶ್... ಅಲ್ಲಿ ನೋಡ್ರೋ ಆನೆ!"&lt;br /&gt;&lt;br /&gt;ನಾನು: "ಎಲ್ಲೋ?"&lt;br /&gt;&lt;br /&gt;ಶ್ರೀನಿವಾಸ: "ಹೂ... ಅಲ್ಲಿ ಕಾಣ್ತಿದ್ಯಲ್ಲೋ ಬೆಟ್ಟದ ಮೇಲೆ"&lt;br /&gt;&lt;br /&gt;ನಾನು: "ಎಲ್ಲೋ?"&lt;br /&gt;&lt;br /&gt;ಅರುಣ್: "ಅಲ್ಲಿ ನೋಡೋ... ಪೀಕ್ ಹತ್ರ. ನಂಗ್ಯಾಕೋ ಡೌಟು... ಅದು ಆನೇನಾ?"&lt;br /&gt;&lt;br /&gt;ನಾನು: "ಹಾ!! ಅಲ್ಲಿ ಕ್ಲಿಯರ್ ಆಗಿ ಕಾಣ್ತಿದಿಯಲ್ಲೋ ಸೊಂಡಿಲು ಅಲ್ಲಾಡಿಸೋದು... ನೋಡು ನೋಡು! ಈಗ ನೋಡು ಮುಖ ಈ ಕಡೆ ತಿರುಗಿಸ್ತು ಆ ದೊಡ್ಡ ಆನೆ... ಅದರ ಪಕ್ಕ ಚಿಕ್ಕ ಆನೆ ಮುಂದೆ ಹೋಯ್ತು ನೋಡು... ಡೆಫ್ನೆಟ್ಟಾಗಿ ಅದು ಆನೇನೇ"&lt;br /&gt;&lt;br /&gt;ಅರುಣ: "ಅದು ಮರಾನೋ, ಆನೇನೋ ಅಂತ ಡೌಟು. ಇಲ್ಲ ಬಂಡೆ ಇರ್ಬೋದಾ? ಆನೆ ಅನ್ನೋದು ನಮ್ಮ ಭ್ರಮೆ ಕಣ್ರೋ"&lt;br /&gt;&lt;br /&gt;ನಾನು: "ನಂಗೆ ಆನೆ ಅನ್ಸತ್ತೆ, ಆದ್ರೆ ಯಾಕೋ ಡೌಟು"&lt;br /&gt;&lt;br /&gt;ಶ್ರೀನಿವಾಸ: "ಅದು ಆನೇನೇ ಮಾರಾಯ! ಅಷ್ಟು ಕ್ಲಿಯರ್ ಆಗಿ ಕಾಣ್ತಿದಿಯಲ್ಲೋ"&lt;br /&gt;&lt;br /&gt;ಅರುಣ: "ಅದು ಆನೆ ಆಗಿದ್ರೆ ನಾನು ಇಲ್ಲೀಗೇ ಸ್ಟಾಪ್. ಸಾರಿ, ನಾನು ಮುಂದೆ ಬರಲ್ಲ... ಆದ್ರೆ ಅದು ಆನೇನೇ ಅಂತ ಕನ್ಫರ್ಮ್ ಮಾಡ್ಕೋಬೇಕು"&lt;br /&gt;&lt;br /&gt;ಶ್ರೀನಿವಾಸ: "ನಂಗಂತೂ ತುಂಬಾ ಚೆನ್ನಾಗಿ ಕಾಣ್ತಿದೆ. ಸೊಂಡಿಲು ಅಲ್ಲಾಡೋದು, ತಲೆ ಈ ಕಡೆ ತಿರುಗಿಸೋದು... ಅಷ್ಟು ಚೆನ್ನಾಗಿ ಕಾಣ್ತಿದ್ಯಲ್ಲೋ!"&lt;br /&gt;&lt;br /&gt;ನಾನು: "ನಂಗೂ ಅದು ಆನೇನೇ ಅನ್ಸ್ತಿದೆ. ಆನೆ ಕಣೋ ಅದು. ಒಂದು ದೊಡ್ಡ ಆನೆ, ಪಕ್ಕದಲ್ಲಿ ಐದು ಚಿಕ್ಕ ಆನೆಗಳು ನೋಡು"&lt;br /&gt;&lt;br /&gt;ಅರುಣ: "ಹೌದು ಹೌದು... ಈಗ ನಂಗೂ ಗ್ಯಾರಂಟೀ ಆಯ್ತು. ಅದು ಆನೇನೇ... ಆ ಕಾಡು ಶುರು ಆಗೋ ವರ್ಗು ಹೋಗಿ ಬಂದುಬಿಡೋಣ. ಇನ್ಯಾವಾಗ್ಲಾದ್ರೂ ಬರೋಣ"&lt;br /&gt;&lt;br /&gt;ಶ್ರೀನಿವಾಸ: "ಹ್ಮ್ಮ್... ಏನ್ಮಾಡೋದು?"&lt;br /&gt;&lt;br /&gt;ನಾನು: "ನಮಗಿಂತ ಆನೆಗೆ ಕಾಡಲ್ಲಿ ಇರಕ್ಕೆ ಹಕ್ಕು ಜಾಸ್ತಿ ಇದೆ. ಅದನ್ನ ಗೌರವಿಸಲೇ ಬೇಕು"&lt;br /&gt;&lt;br /&gt;ಅರುಣ: "ಹೇಯ್! ಕೇಳ್ದ್ಯಾ? ನಂಗೆ ಟ್ರಂಪೆಟ್ ಕ್ಲಿಯರ್ ಆಗಿ ಕೇಳ್ಸ್ತು!"&lt;br /&gt;&lt;br /&gt;ಶ್ರೀನಿವಾಸ: "ಅದು ಆನೆದಲ್ಲ ಮಾರಾಯ..."&lt;br /&gt;&lt;br /&gt;ನಾನು: "ಆನೆ ಹಿಂಗೆ ಕೂಗತ್ತೇನೋ? ಅವತ್ತು ಬ್ರಹ್ಮಗಿರಿಗೆ ಹೋದಾಗ ಆನೆ ಕೂಗಿದ್ದು ನೋಡ್ಲಿಲ್ವಾ?"&lt;br /&gt;&lt;br /&gt;ಅರುಣ: "ಆನೆ ಒಂದು ಥರ ವಿಚಿತ್ರ ಪ್ರಾಣಿ. ಎಂತೆಂಥದ್ದೋ ಸೌಂಡ್ ಮಾಡತ್ತೆ. ಬೇಕಾದಷ್ಟು ಥರ. ನಮ್ಮನ್ನ ಕನ್ಫ್ಯೂಸ್ ಮಾಡಕ್ಕೆ!"&lt;br /&gt;&lt;br /&gt;&lt;br /&gt;ಗುರಿ ಮುಟ್ಟದೇ ಹಿಂದಿರುಗಲು ಯಾರಿಗೂ ಇಷ್ಟವಿರಲಿಲ್ಲ. ಆದರೆ ಬೇರೆ ಗತಿಯಿರಲಿಲ್ಲ. ಆನೆಗಳ ಹತ್ತಿರ ನಮ್ಮಾಟ ನಡೆಯುವುದಿಲ್ಲವಲ್ಲ! ಆದರೆ ನಾವು ನೋಡಿದ್ದು ಆನೆಯೇ ಎಂದು ನಿಸ್ಸಂಶಯವಾಗಿ ಯಾರಿಗೂ ಹೇಳಲಾಗುತ್ತಿರಲಿಲ್ಲ. ಮೂವರಿಗೂ ಇದು ಆನೆ ಅಲ್ಲದಿರಬಹುದು ಎಂದು ಕಿಂಚಿತ್ ಸಂದೇಹವಿತ್ತಲ್ಲ! ಆ ಸಂದೇಹ ಪರಿಹರಿಸಿಕೊಳ್ಳುವ ತನಕ ಹಿಂದಿರುಗುವ ಮನಸ್ಸು ಮಾಡಲಾಗುತ್ತದೆಯೇ?&lt;br /&gt;&lt;br /&gt;ನಾವು ನೋಡಿದ್ದು ಆನೆಯೇ ಎಂದು ಖಚಿತಪಡಿಸಿಕೊಂಡು ನಂತರ ಹಿಂದಿರುಗೋಣ ಎನ್ನಿಸಿತು. ಕಾಡಿನಲ್ಲಿ ಅಷ್ಟು ದೂರ ನಡೆದುಬಂದಿದ್ದರೂ ಆಶ್ಚರ್ಯಕರವಾಗಿ ಒಂದು ಮನೆ ಇತ್ತು. ಆ ಮನೆಗೂ ನಮಗೂ ಮಧ್ಯೆಯಿದ್ದಿದ್ದು ತಗ್ಗಿನಲ್ಲಿರುವ ಬಯಲು. ಹಾಗಾಗಿ ಜೋರಾಗಿ ಕೂಗಿದರೆ ನಮ್ಮ ಧ್ವನಿ ಅಲ್ಲಿಯ ತನಕ ಕೇಳುವ ಸಾಧ್ಯತೆಯಿತ್ತು. ಆ ಮನೆಯಾತನೊಬ್ಬ ಹೊರಬರಲು ಅರುಣ "ಅಲ್ಲಿ ಕಾಣ್ತಿರೋದು ಆನೆಗಳಾ?" ಎಂದು ಕೂಗಿ ಕೇಳಿದ. ಆತನಿಗೆ ಮೊದಲಿಗೆ ಅರ್ಥವಾಗಲಿಲ್ಲ ಎನ್ನಿಸುತ್ತದೆ. ಮತ್ತೆ ಅರುಣ ಕೇಳಿದ "ಇಲ್ಲಿ ಆನೆಗಳಿವೆಯಾ?" ಎಂದು. ಆನೆಗಳಿವೆ ಎಂಬ ಉತ್ತರ ಬಂತು. ಮುಂದಿನ ಪ್ರಶ್ನೆಯನ್ನು ಅರುಣ ನಾವು ನೋಡುತ್ತಿದ್ದ ಆನೆಯಂತಿದ್ದ ಆಕಾರದ ಕಡೆಗೆ ಬೆರಳು ತೋರಿಸಿ ಕೇಳಿದ - "ಆಲ್ಲಿ ಕಾಣ್ತಿರೋದು ಆನೆಗಳಾ?" ಎಂದು. ದುರದೃಷ್ಟವಶಾತ್ ಆ ಆನೆಯಂತಿದ್ದ ಆಕಾರಗಳು ಅವರಿಗೆ ಕಾಣಿಸುತ್ತಿರಲಿಲ್ಲ. ನಾವಿರುವಲ್ಲಿ ಮಾತ್ರ ಕಾಣಿಸುತ್ತಿದ್ದವು. ಅವರ ಮನೆ ಹಿಂದಿದ್ದ, ನಾವು ಮೊದಲು ನಿಶಾನಿ ಮೊಟ್ಟೆ ಶಿಖರ ಎಂದುಕೊಂಡಿದ್ದ ಗುಡ್ಡವನ್ನು ಹತ್ತಿ ನೋಡಲು ಹೊರಟರು.&lt;br /&gt;&lt;br /&gt;ಸ್ವಲ್ಪ ಹೊತ್ತು ಕಾದರೂ ಗುಡ್ಡದ ಮೇಲೇರುತ್ತೇನೆಂದವರು ಮತ್ತೆ ಕಾಣಲಿಲ್ಲ. ಏನೂ ತೋಚದೇ ಕೊನೆಗೆ ನಾವು ಹಿಂದಿರುಗುವುದೆಂದು ನಿರ್ಧರಿಸಿದೆವು. ಅರುಣನಿಗದೇನನ್ನಿಸಿತೋ ಏನೋ; ಸುಮಾರು ಇನ್ನೂರು ಮೀಟರ್ ದೂರದಲ್ಲಿ ಕಾಣುತ್ತಿದ್ದ ಬಯಲು ಪ್ರದೇಶದ ಕೊನೆಯ ತನಕ ಹೋಗಿ ಬರೋಣವೆಂದು ಹೇಳಿದ. ನಾನು ಅದಕ್ಕೆ ಮೊದಲು ಒಪ್ಪಲಿಲ್ಲ. ಒಪ್ಪಲು ಕಾರಣವಿಲ್ಲ ಎನ್ನಿಸಿತು. ಆದರೂ ಉಳಿದಿಬ್ಬರ ಬಹುಮತವನ್ನು ಗೌರವಿಸಿ ಅವರ ಜೊತೆಗೆ ಹೊರಟೆ. ಇನ್ನೂರು ಮೀಟರ್ ನಡೆದ ಕೂಡಲೇ ಆಗ ನಾವು ನಿಶಾನಿ ಮೊಟ್ಟೆ ಎಂದುಕೊಂಡಿದ್ದ ಶಿಖರದ ಪಕ್ಕದಲ್ಲಿ ಮತ್ತೊಂದು ಎತ್ತರದ ಶಿಖರ ಕಾಣಿಸಿತು! ಮತ್ತೊಂದು ಹೊಸ ನಿಶಾನಿ ಮೊಟ್ಟೆ! ಆದರೆ ಆನೆಗಳ ದಾರಿಯಲ್ಲೇ ಆ ಶಿಖರಕ್ಕೂ ಹೋಗಬೇಕೆಂಬಂತೆ ನಮಗೆ ಕಂಡ ಕಾರಣ ಅಲ್ಲಿಗೆ ಹೋಗುವ ಆಸೆಯನ್ನು ಕೈಬಿಡಬೇಕಾಯಿತು. ಅಲ್ಲಿದ್ದ ಒಂದು ಹೊಳೆಯ ಬಳಿ ಕುಳಿತು ಬೆನ್ನುಚೀಲದಲ್ಲಿದ್ದ ಮೂಸಂಬಿ ತಿಂದು ಸ್ವಲ್ಪ ಉದರೋಪಚಾರ ಮಾಡಿಕೊಳ್ಳಲು ಯೋಚಿಸಿದೆವು. ಅದಕ್ಕೆ ಮುಂಚೆ ನಮ್ಮ ಕಾಲುಗಳಲ್ಲಿದ್ದ ಜಿಗಣೆಗಳನ್ನು ತೆಗೆದುಹಾಕುವ ಕಾರ್ಯಕ್ರಮ ಇಟ್ಟುಕೊಂಡೆವು.&lt;br /&gt;&lt;br /&gt;ಪ್ಯಾಂಟಿನ ಕೆಳಭಾಗವನ್ನು ಸ್ವಲ್ಪ ಮೇಲೇರಿಸಿದಾಗಲೇ ಯಥೇಚ್ಚವಾಗಿ ರಕ್ತದೂಟ ಮಾಡುತ್ತಿದ್ದ ಅನೇಕ ಜಿಗಣೆಗಳನ್ನು ಕಂಡೆವು! ಕಾಲುಚೀಲದಲ್ಲಿ ಇನ್ನಷ್ಟು, ಬೂಟ್ಸಿನೊಳಗೆ ಮತ್ತಷ್ಟು! ಬೂಟ್ಸಿನೊಳಗಿಂದಲೂ ಚೆನ್ನಾಗಿ ರಕ್ತ ಹೀರಿದ ಜಿಗಣೆಗಳು ಉಂಡೆಗಳಂತೆ ಕೆಳಗೆ ಬಿದ್ದವು. ಕೆಲವಂತೂ ಕೈ ಮೇಲೆ ಬಿದ್ದ ಕೂಡಲೇ ರಕ್ತವನ್ನೆಲ್ಲಾ ವಾಂತಿ ಮಾಡಿಕೊಳ್ಳುತ್ತಿದ್ದವು. ಅಂತೂ ಜಿಗಣೆಗಳನ್ನೆಲ್ಲಾ ತೆಗೆದು ಹಾಕುವುದರಲ್ಲಿ ಸುಸ್ತಾಗಿ ಹೋಯಿತು. ನಾವು ಎಷ್ಟು ಜಿಗಣೆಗಳಿದ್ದವೆಂದು ಎಣಿಸಲು ಹೋಗಲಿಲ್ಲ. ಆ ಪ್ರಯತ್ನವೇನಾದರೂ ಮಾಡಿದ್ದರೆ ಮೂವರಿಗೂ ಬರುವ ಅಲ್ಪ-ಸ್ವಲ್ಪ ಲೆಕ್ಕವೂ ಮರೆತುಹೋಗುತ್ತಿತ್ತೇನೋ! ರಕ್ತಮಯವಾಗಿದ್ದ ನಮ್ಮ ಕೈಗಳನ್ನು ಹೊಳೆಯ ನೀರಲ್ಲಿ ತೊಳೆದುಕೊಂಡು ಮೂಸಂಬಿ ತಿನ್ನುತ್ತಾ ಕುಳಿತೆವು. ಚಾರಣ ಶುರುವಾದಾಗಿನಿಂದಲೂ ಕನ್ನಡ ಹಾಡುಗಳನ್ನೆಲ್ಲಾ ಆಂಗ್ಲೀಕರಿಸುವ ಪ್ರಯತ್ನ ಮಾಡುತ್ತಿದ್ದೆವು. ಅದನ್ನು ಮುಂದುವರಿಸಿದೆವು. ಆದರೆ ಕೆಲವು ನಿಮಿಷಗಳಲ್ಲೇ ಹೊಳೆಯ ಹಿಂಭಾಗದಲ್ಲಿ, ಸ್ವಲ್ಪ ಮೇಲೆ ಯಾವುದೋ ಪ್ರಾಣಿ ಓಡಾಡಿದಂತಾಯಿತು. ಅದು ಆನೆಯಿರಬೇಕೆಂದು ನಾನು ತಕ್ಷಣ ಹೇಳಿಬಿಟ್ಟೆ. ಆದರೆ ಅದು ದೊಡ್ಡ ಗಾತ್ರದ ಒಂದು ಎತ್ತು. ಅದರ ಕೊಂಬುಗಳು ಭೀಕರವಾಗಿದ್ದವು. ಅದು ಹೊಳೆಯ ಹತ್ತಿರವೇ ನಡೆದು ಬರುತ್ತಿದ್ದು ಕಂಡುಬಂತು. ಸರಿ, ಅದೇನು ಮಾಡುತ್ತದೆಂದು ಕಾದು ನೋಡೋಣ ಎಂದು ಸ್ವಲ್ಪ ಹಿಂದೆ ಸರಿದು ನಿಂತೆವು. ತನ್ನ ಪಾಡಿಗೆ ಅದು ಶಾಂತವಾಗಿ ನೀರು ಕುಡಿದು ಹೋಯಿತು. ಅಷ್ಟರಲ್ಲಿ ಅದರ ಹಿಂದಿಂದ ಮತ್ತೆರಡು ಎತ್ತುಗಳು ಕಂಡವು. ಈಗ ಸ್ವಲ್ಪ ಹುಷಾರಾದೆವು. ಅಗತ್ಯ ಬಂದಲ್ಲಿ ಬೆನ್ನುಚೀಲಗಳನ್ನು ಎತ್ತಿಕೊಂಡು ಬೇಗನೆ ಆ ಜಾಗದಿಂದ ಪರಾರಿಯಾಗಲು ತಯಾರಾಗೇ ಎತ್ತುಗಳನ್ನು ನೋಡುತ್ತಾ ನಿಂತೆವು. ನಮ್ಮ ಊಹೆಯಂತೆಯೇ ಒಂದು ಎತ್ತು ಹೊಳೆ ದಾಟಿಕೊಂಡು ನಮ್ಮತ್ತ ಬಂತು. "ಎಸ್ಕೇಪ್" ಎಂದು ಬೆನ್ನುಚೀಲಗಳನ್ನೆತ್ತಿಕೊಂಡು ನಾವು ಬಂದ ದಾರಿಯಲ್ಲೇ ಸ್ವಲ್ಪ ದೂರ ಬೇಗ ನಡೆದು ಹೋದೆವು. ಸ್ವಲ್ಪ ದೂರ ಹೋದಮೇಲೆ ಎತ್ತು ನಮ್ಮ ಹಿಂದೆ ಬರುತ್ತಿಲ್ಲವೆಂದು ಗೊತ್ತಾದಮೇಲೆ ನಿಧಾನವಾಗಿ ನಡೆದೆವು. ಶಿಖರಕ್ಕೆ ಹೋಗುವ ಕಾರ್ಯಕ್ರಮ ಹೇಗಿದ್ದರೂ ಕೈಬಿಟ್ಟಾಗಿತ್ತು. ಇನ್ನು ನಮ್ಮ ಬಳಿ ಬೇಕಾದಷ್ಟು ಸಮಯವಿತ್ತು.&lt;br /&gt;&lt;br /&gt;ಆದರೆ ವಿಧಿಯ ಇಚ್ಛೆ ಮತ್ತೇನೋ ಇತ್ತು. ಹಿಂದಿರುಗುವಾಗ ಸ್ವಲ್ಪ ದೂರದಲ್ಲಿದ್ದ ಮನೆಯಲ್ಲಿ ಗುಡ್ಡ ಹತ್ತಿ ಆನೆಗಳಿವೆಯೇ ಎಂದು ನೋಡಿಕೊಂಡು ಬರಲು ಹೋಗಿದ್ದಾತ ನಮ್ಮನ್ನು ನೋಡಿದರು. "ಅದು ಆನೆಯಲ್ಲ, ಬಂಡೆ" ಎಂದು ಕೂಗಿ ಹೇಳಿದರು. ಈ ಸುದ್ದಿ ನಮಗೆ ಸುಮಾರು ಒಂದು ಘಂಟೆಯ ಮುಂಚೆಯೇ ಗೊತ್ತಾಗಿದ್ದರೆ ಸಿಹಿ ಸುದ್ದಿಯಾಗಿರುತ್ತಿತ್ತೇನೋ. ಈಗಂತೂ ಅದು ಕಹಿ ಸುದ್ದಿಯಂತಿತ್ತು. ಏಕೆಂದರೆ ಶಿಖರಕ್ಕೆ ಹೇಗಿದ್ದರೂ ಹೋಗುವುದಕ್ಕಾಗುವುದಿಲ್ಲ ಎಂದು ಯೋಚಿಸಿ ಆರಾಮಾಗಿ ಹರಟೆ ಹೊಡೆದುಕೊಂಡು ಬಹಳಷ್ಟು ಸಮಯ ಕಳೆದುಕೊಂಡಿದ್ದೆವು. ಆದರೆ ಅದೇಕೋ ನನಗೆ ಈಗಲೂ ಹೊರಟರೆ, ಸ್ವಲ್ಪ ವೇಗವಾಗಿ ನಡೆದರೆ, ಹೇಗಾದರೂ ಶಿಖರ ತಲುಪಬಹುದೆನ್ನಿಸಿತು. ಸ್ವಲ್ಪ ಹಿಂದೆ-ಮುಂದೆ ಯೋಚಿಸಿದರೂ ಅರುಣ ಮತ್ತು ಶ್ರೀನಿವಾಸ ನಂತರ ಸಮ್ಮತಿಸಿದರು. ಏನು ಮಾಡುವುದೆಂದು ಯೋಚಿಸುತ್ತಾ ಗೊಂದಲದಲ್ಲಿದ್ದ ನಮ್ಮನ್ನು ನೋಡಿ ಆ ಮನೆಯಲ್ಲಿನ ಸ್ಥಳೀಯರು "ಬೇಕಾದರೆ ನಾನೂ ಬರುತ್ತೀನಿ" ಎಂದು ಕೂಗಿ ಹೇಳಿದರು. ಇಷ್ಟು ಆಸರೆ ಸಿಕ್ಕಿದ್ದು ಪುಣ್ಯ ಎಂದುಕೊಂಡು ಒಮ್ಮತದಿಂದ ನಾವು ಮೂವರೂ ಮತ್ತೆ ಶಿಖರಕ್ಕೆ ಹೋಗುವ ದಾರಿಯಲ್ಲಿ ಹೆಜ್ಜೆ ಹಾಕಿದವು.&lt;br /&gt;&lt;br /&gt;ಮತ್ತೆ ಆ ಹೊಳೆಯನ್ನು ಸಮೀಪಿಸಲು ಸೆಕ್ಯೂರಿಟಿ ಗಾರ್ಡ್ ಇದ್ದಂತೆ ಎತ್ತುಗಳು ಕಾಯುತ್ತಿದ್ದವು. ಆದರೆ ಸಮಯಕ್ಕೆ ಸರಿಯಾಗಿ ನಮ್ಮ ಜೊತೆ ಬರುತ್ತೀನೆಂದಿದ್ದ ಸ್ಥಳೀಯರು ಹೊಳೆ ತಲುಪಿ ಎತ್ತುಗಳನ್ನು ಸ್ವಲ್ಪ ದೂರ ಸರಿಸಿ ನಮಗೆ ದಾರಿ ಮಾಡಿಕೊಟ್ಟರು. ಅವರಿಲ್ಲದಿದ್ದರೆ ನಮ್ಮ ಲೆಕ್ಕಾಚಾರ ತಲೆಕೆಳಗಾಗುತ್ತಿತ್ತು. ಶಿಖರಕ್ಕೆ ಹೊಳೆ ದಾಟಿ ಒಂದಷ್ಟು ಬಳಸಿಕೊಂಡು ಹೋದರೆ ದಟ್ಟ ಅಡವಿಯ ಹಾದಿ ತಪ್ಪಿಸಿಕೊಂಡು ಸುಲಭವಾಗಿ ಚಾರಣ ಮಾಡಬಹುದಾದ ದಾರಿಯೊಂದಿತ್ತು. ಆದರೆ ಅದು ಸುಲಭವಾಗಿ ಗೋಚರಿಸುವ ದಾರಿಯಾಗಿರಲಿಲ್ಲ. ನಮ್ಮನ್ನೇ ಬಿಟ್ಟಿದ್ದರೆ ಲಕ್ಷಗಟ್ಟಲೆ ಜಿಗಣೆಗಳನ್ನು ಎದುರಿಸಿಕೊಂಡು ದಟ್ಟವಾದ ಕಾಡಿನಲ್ಲಿ ಕಷ್ಟಪಟ್ಟುಕೊಂಡು ಹೋಗುತ್ತಿದ್ದೆವು. ಇವರು ಸಿಕ್ಕಿದ್ದು ಒಳ್ಳೆಯದೇ ಆಯಿತೆಂದು ಅವರ ಹಿಂದೆಯೇ ಸಾಧ್ಯವಾದಷ್ಟೂ ಬೇಗ ನಡೆದೆವು. ನಮಗೆ ಸಿಕ್ಕ ಸ್ಥಳೀಯರು ಜೇನು ಕೀಳುವುದಕ್ಕಾಗಿ ಹೋಗುತ್ತಿರುವುದಾಗಿ ಹೇಳಿದರು. ನನಗೆ ತಕ್ಷಣ ತೇಜಸ್ವಿಯ ಕರ್ವಾಲೋ ಕಥೆ ನೆನಪಾಯಿತು. ನಾನೂ ಜೇನು ಕೀಳುವುದನ್ನು ನೋಡಬೇಕೆನ್ನಿಸಿತು. ಅಗಲೇ ಅರುಣನೂ "ಮತ್ತೊಂದ್ ಸರ್ತಿ ಬಿಡುವು ಮಾಡಿಕೊಂಡು ಬರ್ತೀವಿ. ನಮಗೂ ಜೇನು ಕೀಳುವುದನ್ನು ತೋರಿಸಿ" ಎಂದು ಬಾಯಿ ಬಿಟ್ಟೇ ಹೇಳಿದ.&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_JaSAEbMHNYk/SE0uTJ0a86I/AAAAAAAACqo/8NJN2DVq2YY/s1600-h/P6010093.JPG"&gt;&lt;img style="margin: 0px auto 10px; display: block; text-align: center; cursor: pointer;" src="http://2.bp.blogspot.com/_JaSAEbMHNYk/SE0uTJ0a86I/AAAAAAAACqo/8NJN2DVq2YY/s320/P6010093.JPG" alt="" id="BLOGGER_PHOTO_ID_5209871250525713314" border="0" /&gt;&lt;/a&gt;&lt;br /&gt;ಆ ಸ್ಥಳೀಯರು ದಟ್ಟವಾದ ಕಾಡನ್ನು ದಾಟಿಸಿ ನಾವು ಹೋಗಬೇಕಾದ ದಾರಿಯನ್ನು ತೋರಿಸಿ ತಾನು ದಟ್ಟವಾದ ಕಾಡಿನೊಳಗೆ ಜೇನು ಕೀಳಲು ಹೋಗುವುದಾಗಿ ಹೇಳಿ ಹೊರಟರು. ಹೋಗುವುದಕ್ಕೆ ಮುಂಚೆ ಮತ್ತೆ ನಾವು ಹೋಗಬೇಕಾದ ದಾರಿಯ ಕಡೆಗೆ ಬೆರಳು ತೋರಿಸಿ "ಇಲ್ಲಿಂದ ಹೀಗೇ ಮೇಲೆ ಹೋಗಿ ಹಾಗೇ ಮುಂದೆ ಹೋದರೆ ಆಯ್ತು... ಒಂದೇ ಲೆವೆಲ್ಲು" ಎಂದು ಹೇಳಿದರು. ಅವರು ಹೊರಟಮೇಲೆ ಅರುಣ ಯಾಕೋ "ಇವತ್ತು ದಾರಿ ನೋಡ್ಕೊಂಡಿದೀವಲ್ಲ, ವಾಪಸ್ ಹೋಗಿ ಇನ್ನೊಂದು ದಿನ ಬರೋಣ" ಎಂದ. ಚಾರಣ ಪ್ರಾರಂಭಿಸುವಾಗ ಮಧ್ಯಾಹ್ನ ಒಂದು ಘಂಟೆಯ ತನಕ ಚಾರಣ ಮಾಡಿ ಎಲ್ಲಿದ್ದರೂ ಹಿಂದಿರುಗುವುದು ಎಂದುಕೊಂಡಿದ್ದೆವು. ಆ ಸಮಯ ಸಮೀಪಿಸುತ್ತಿತ್ತು. ಸಾಮಾನ್ಯವಾಗಿ ಹೀಗೆ ಹಿಂದಿರುಗುವ ಸಮಯ ನಿಗದಿಪಡಿಸುವುದು ಸಮಯಕ್ಕೆ ಸರಿಯಾಗಿ ಹಿಂದಿರುಗಬೇಕು ಎಂಬ ಕಾರಣಕ್ಕೆ. ಆದರೆ ನಾವು ಸ್ವಲ್ಪ ದೂರ ಬಂದು, ಮತ್ತೆ ಸ್ವಲ್ಪ ದೂರ ಹಿನ್ನಡೆದು ಮತ್ತೆ ಅದೇ ದಾರಿಯಲ್ಲಿ ಮುಂದೆ ಬಂದಿದ್ದೆವು. ವಿಶ್ರಾಂತಿ ಮತ್ತು ತಿನ್ನಲು ಬೇಕಾದ ಸಮಯ ಬಿಟ್ಟರೂ ಒಂದು ತಾಸಾದರೂ ನಷ್ಟವಾಗಿತ್ತು. ಈ ಲೆಕ್ಕಾಚಾರದ ಮೇಲೆ ನಾವು ಎರಡು ಘಂಟೆಗೆ ಹಿಂದಿರುಗಿದರೂ  ನಾಲ್ಕು ತಾಸಿನಲ್ಲಿ, ಅಂದರೆ ಸಂಜೆ ಆರು ಘಂಟೆಗೆ ಚಾರಣ ಮುಗಿಸಬಹುದು ಎಂದು ಹೇಳಿದೆ. ಶ್ರೀನಿವಾಸ ನಿರ್ದಿಷ್ಟವಾಗಿ ತನ್ನ ಅನಿಸಿಕೆಯನ್ನು ಹೇಳದೇ "ರೆಡೀ ಫಾರ್ ಎನಿಥಿಂಗ್" ಎಂದು ಸುಮ್ಮನಿದ್ದುಬಿಟ್ಟ. ನಿರ್ಧಾರ ಮಾಡಲು ಉಳಿದಿದ್ದು ನಾನು ಮತ್ತು ಅರುಣ - ಇಬ್ಬರೇ.&lt;br /&gt;&lt;br /&gt;ನಾವಿದ್ದ ಜಾಗವೋ, ಹಸಿರುಮಯ! ಮೋಡಗಳು ಮೆಲ್ಲಗೆ ಇಡಿಯ ಪ್ರದೇಶವನ್ನಾವರಿಸುತ್ತಿತ್ತು. ಎಷ್ಟು ಬೆಳಕಿದ್ದರೆ ನಮ್ಮ ಮುಂದಿದ್ದ ಬೆಟ್ಟದ ಹಸಿರು ಹಾಸು ಉತ್ಕೃಷ್ಟ ಸೌಂದರ್ಯ ಪ್ರದರ್ಶಿಸುತ್ತದೋ ಅಷ್ಟು ಮಾತ್ರ ಬೆಳಕಿತ್ತು. ಆ 'ಲೆವೆಲ್' ದಾರಿಯಲ್ಲಿ ನಡೆದುಹೋಗಿ ಮುಂದಿದ್ದ ಬೆಟ್ಟ ಹತ್ತಿಬಿಟ್ಟರೆ ಮುಗಿಯಿತು; ನಾವು ನೋಡುತ್ತಿದ್ದ ಬೆಟ್ಟವೇ ನಿಶಾನಿ ಮೊಟ್ಟೆ ಎಂದು ಅರುಣ ಮತ್ತು ಶ್ರೀನಿವಾಸ ನಿರ್ಧರಿಸಿಬಿಟ್ಟಿದ್ದರು. ಅದರ ಬಲಭಾಗದಲ್ಲಿ ಮತ್ತೊಂದು ಎತ್ತರದ ಶಿಖರವನ್ನು ನಾನು ತೋರಿಸಿದರೂ "ಅದು ಎತ್ತರ ಕಾಣತ್ತೆ ಅಷ್ಟೇ ಕಣೋ, ಆಕ್ಚುಅಲೀ, ಅಷ್ಟು ಎತ್ತರ ಇಲ್ಲ, ಅದು ಭ್ರಮೆ ಅಷ್ಟೇ" ಎಂದು ಅರುಣ ದಬಾಯಿಸಿಬಿಟ್ಟ. ಆದರೆ ನನ್ನ ಕಣ್ಣು ನನಗೆ ಅಷ್ಟು ಮೋಸ ಮಾಡುತ್ತದೆ ಎಂದು ನನಗೆ ನಂಬಿಕೆ ಬರಲಿಲ್ಲ. ನನ್ನ ಪ್ರಕಾರ ಬಲಭಾಗದಲ್ಲಿ ಕಾಣುತ್ತಿದ್ದ ಎತ್ತರದ ಶಿಖರವೂ ನಿಶಾನಿ ಮೊಟ್ಟೆ ಆಗಿರಲಿಲ್ಲ. ಅದರ ಬಲಕ್ಕೆ ಹೋದರೆ ಮತ್ತೊಂದು ಶಿಖರವಿದ್ದು, ಅದು ನಿಶಾನಿ ಮೊಟ್ಟೆ ಇರಬೇಕು ಎನ್ನಿಸುತ್ತಿತ್ತು. ನಿಶಾನಿ ಮೊಟ್ಟೆ ಶಿಖರ ಯಾವುದು ಎಂಬ ವಿಚಾರದಲ್ಲೇ ಸ್ಪಷ್ಟತೆಯಿಲ್ಲದೇ ಮುಂದೆ ಹೋಗುವುದೋ ಬೇಡವೋ ಎಂದು ಯೋಚಿಸುತ್ತಿದ್ದೆವು. ಅರುಣನಿಗೆ ಹಿಂದಿರುಗಬೇಕು ಎನ್ನಿಸುತ್ತಿದ್ದರೂ ನನ್ನಂತೆಯೇ ಹಸಿರಿನ ಆಮಂತ್ರಣವನ್ನು ಕಡೆಗಣಿಸಲಾಗಲಿಲ್ಲ ಎನ್ನಿಸುತ್ತದೆ; ಕೊನೆಗೂ ಮುಂದೆ ಹೋಗಲು ಒಪ್ಪಿದ. ಬೆನ್ನುಚೀಲಗಳನ್ನು ಅಲ್ಲೇ ಒಂದು ಬಂಡೆಯ ಮೇಲಿಟ್ಟು ಮುಂದೆ ಹೊರಟೆವು.&lt;br /&gt;&lt;br /&gt;ಹಾ, ಆ ಬಂಡೆ ಯಾವುದು ಗೊತ್ತೇ? ಶ್ರೀನಿವಾಸನ ಪ್ರಕಾರ ನಾವು ಕೆಳಗೆ ನಿಂತು ಆನೆ ಎಂದುಕೊಂಡಿದ್ದೆವಲ್ಲ, ಅದೇ ಬಂಡೆ! "ಆನೆ ಮೇಲೆ ಕೂತು ಫೋಟೋ ತೆಗೆಸಿಕೊಳ್ಳೋಣ?" ಎಂದು ಶ್ರೀನಿವಾಸ ಕೇಳುತ್ತಿದ್ದ. ನನ್ನ ಯೋಚನೆ ಮಾತ್ರ ಬೇರೆಯಿತ್ತು. ಬಂಡೆ ಆನೆಯಂತೆ ಕಂಡಿರಬಹುದು; ಅದರ ಸಾಧ್ಯತೆ ಇದೆ. ಆದರೆ ಆನೆ ಸೊಂಡಿಲು ಅಲ್ಲಾಡಿಸಿದ್ದು, ಮುಖ ತಿರುಗಿಸಿದ್ದು... ಇವೆಲ್ಲಾ? ಬಂಡೆ ಅಲ್ಲಾಡುವುದಿಲ್ಲವಲ್ಲ! ನನ್ನ ಪ್ರಶ್ನೆಗೆ ಮುಂದೆ ಆ 'ಲೆವೆಲ್' ದರಿಯಲ್ಲಿ ಹೋಗುತ್ತಿದ್ದಾಗ ಉತ್ತರ ಸಿಕ್ಕಿತು. ಮುಂದೆಯೂ ಹೀಗೆಯೇ ಒಂದಷ್ಟು ಬಂಡೆಗಳಿದ್ದವು. ಆ ಬಂಡೆಯಿಂದ ನಾವು ಬಂದ ದಾರಿ ಚೆನ್ನಾಗಿ ಗೋಚರಿಸುತ್ತಿತ್ತು ಕೂಡ. ಆ ಬಂಡೆ ಆನೆಯಂತೆ ಕಂಡರೆ ನಮಗೆ ಸೊಂಡಿಲು, ಮುಖ ಅಲ್ಲಾಡುವಂತೆ ಭ್ರಮೆಯುಂಟುಮಾಡಿದ್ದು ಅದರ ಹಿಂದಿದ್ದ ಮರ! ಮರ ಅಲ್ಲಾಡಿದಾಗೆಲ್ಲಾ ನಮಗೆ ಆನೆ ಅಲಾಡಿದಂತೆ ಕಾಣಿಸಿರಬಹುದು ಎಂದುಕೊಂಡೆ. ಶ್ರೀಧರ ಕೆಲವು ದಿನಗಳ ಮುಂದೆ ನನ್ನನ್ನು 'ಭ್ರಮಾಧೀನ' ಎಂದು ಕರೆದಿದ್ದ, ಕಾರಣವಿಲ್ಲದೇ! ಈಗ ನಾವು ಮೂರು ಜನರೂ ಭ್ರಮೆಯ ಜಾಲದಲ್ಲಿ ಕಳೆದುಹೋಗಿದ್ದು ಗೊತ್ತಾದಾಗ ನಮಗೆಲ್ಲಾ ಏನನ್ನುತ್ತಾನೋ ಗೊತ್ತಿಲ್ಲ ಎಂದು ಹೇಳಿದೆ. ಎಲ್ಲರೂ ನಕ್ಕೆವು, ನಮ್ಮ ಪಾಡನ್ನು ನಾವೇ ನೆನೆದು!&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_JaSAEbMHNYk/SE0uU50a8-I/AAAAAAAACrI/XwFgVSPsFCc/s1600-h/P6010106.JPG"&gt;&lt;img style="margin: 0px auto 10px; display: block; text-align: center; cursor: pointer;" src="http://1.bp.blogspot.com/_JaSAEbMHNYk/SE0uU50a8-I/AAAAAAAACrI/XwFgVSPsFCc/s320/P6010106.JPG" alt="" id="BLOGGER_PHOTO_ID_5209871280590484450" border="0" /&gt;&lt;/a&gt;&lt;br /&gt;ಆ 'ಲೆವೆಲ್' ಗುಡ್ಡ ಹತ್ತಿ, ಹತ್ತಿ ಸಾಕಾಯಿತು. "ಯಾವನೋ ಅವ್ನು 'ಲೆವೆಲ್' ಅಂತ ಅಷ್ಟು ಸಲೀಸಾಗಿ ಹೇಳ್ಬಿಟ್ಟ! ಇದನ್ನ ಲೆವೆಲ್ ಅಂದ್ರೆ ಗೋವಿಂದ! ಅರವತ್ತು ಡಿಗ್ರೀ ಆಂಗಲ್ ಅಲ್ಲಿ ಇದೆ ಇದು! ಇದನ್ನ ಲೆವೆಲ್ ಅಂತಾರಾ ಯಾರಾದ್ರೂ? ಲೆವೆಲ್ ಅಂತೆ ಲೆವೆಲ್ಲು!" ಎಂದು ಅರುಣ ಹೇಳಿದ್ದು ಕೇಳಿ ನನಗೂ, ಶ್ರೀನಿವಾಸನಿಗೂ ತಡೆಯಲಾಗದಷ್ಟು ನಗು ಬಂತು. "ಬಿಟ್ಟರೆ ಇವನು ಎವರೆಸ್ಟನ್ನೂ ಲೆವೆಲ್ ಅಂದುಬಿಡ್ತಾನೆ" ಎಂದು ಅರುಣ ಮುಂದುವರೆಸಿದ. ಆ ಲೆವೆಲ್ ಗುಡ್ಡದಲ್ಲೋ, ನಾವು ಮಾಡಿಕೊಂಡಿದ್ದೇ ದಾರಿ. ಬೋಳುಗುಡ್ದವಾದ್ದರಿಂದ ಎಲ್ಲಿಗೆ ಹೋಗಬೇಕು ಎಂದು ಸ್ಪಷ್ಟವಾಗಿ ಗೊತ್ತಿತ್ತು. ಆ ಜಾಗದ ತನಕ ಯಾರು ಯಾವ ದಾರಿಯಲ್ಲಿ ಬೇಕಾದರೂ ಹೋಗಬಹುದು. ಆ ಲೆವೆಲ್ ಗುಡ್ಡ ಹತ್ತಿದಮೇಲೂ ಬಲಭಾಗದಲ್ಲಿದ್ದ ಗುಡ್ದ ಬಲಗಡೆಗೆ ದೊಡ್ಡದಾಗಿ ಕಂಡಿತು. ಅಲ್ಲಿಯ ತನಕ ಆ ಲೆವೆಲ್ ಗುಡ್ಡವೇ ನಿಶಾನಿ ಮೊಟ್ಟೆಯಿರಬೇಕು ಎಂದುಕೊಂಡು ನಾನು ಎತ್ತರವಿದೆ ಎಂದಿದ್ದ ಬಲದಲ್ಲಿದ್ದ ದೊಡ್ಡ ಗುಡ್ಡ ನೋಡಿ ನನಗೆ ಭ್ರಮೆ ಎಂದಿದ್ದ ಅರುಣನಿಗೆ "ಇದೇ ಪೀಕು ಅಂತ ಹೇಳ್ತಿದ್ರಲ್ಲ ತಾವು, ಈಗ ಹತ್ತಿ" ಎಂದು ಹೇಳಿದೆ. ನನ್ನ ಕಣ್ಣು ನನಗೆ ಮೋಸ ಮಾಡಿಲ್ಲ ಎಂದು ಸಂತೋಷವಾಯಿತು.&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_JaSAEbMHNYk/SE0vDZ0a8_I/AAAAAAAACrQ/7nr9jqe1v9o/s1600-h/P6010107.JPG"&gt;&lt;img style="margin: 0px auto 10px; display: block; text-align: center; cursor: pointer;" src="http://3.bp.blogspot.com/_JaSAEbMHNYk/SE0vDZ0a8_I/AAAAAAAACrQ/7nr9jqe1v9o/s320/P6010107.JPG" alt="" id="BLOGGER_PHOTO_ID_5209872079454401522" border="0" /&gt;&lt;/a&gt;&lt;br /&gt;ಆ ಲೆವೆಲ್ ಗುಡ್ಡ ಹತ್ತಿದ ಮೇಲೆ ಗುಡ್ಡದ ಹಿಂದಿನ ನೋಟವಿದೆಯಲ್ಲ - ಅದು ಪರಮಾಧ್ಭುತ! ಎಲ್ಲೆಲ್ಲಿ ನೋಡಿದರೂ ದಿಗಂತಪರ್ಯಂತ ಕಾಣುತ್ತಿದ್ದು ಹಸಿರನುಟ್ಟ ಮಲೆಗಳದೇ ಸಾಲುಗಳು, ಅದರ ಮೇಲೆ ಪರದೆಯಂತೆ ಕ್ರಮೇಣವಾಗಿ ಆವರಿಸುತ್ತಿದ್ದ ಕಾರ್ಮುಗಿಲು! ಅದನ್ನು ಐದು ನಿಮಿಷ ಮೌನವಾಗಿ ನಿಂತು ಕಣ್ತುಂಬ ನೋಡಿದೆ. ಎಷ್ಟು ನೋಡಿದರೂ ಸಾಲದೆನ್ನಿಸಿತು. ಫೋಟೋ ತೆಗೆಯಲು ಹೋದರೆ ಕ್ಯಾಮರಾದ ಬ್ಯಾಟರಿ ಕೈಕೊಟ್ಟಿತು. ಕಣ್ಣಲ್ಲೇ ಫೋಟೋ ತೆಗೆದು ಮನಸ್ಸಿನಲ್ಲಿ 'ಸೇವ್' ಮಾಡಿಕೊಂಡೆ - 'ಭಾವ'ಚಿತ್ರ, ಹಸಿರುಗಿರಿಪಂಕ್ತಿಗಳ 'ಸ್ಥಿರ'ಚಿತ್ರ, ಚಲಿಸುತ್ತಿದ್ದ ಮೋಡಗಳ 'ಚಲನ'ಚಿತ್ರ, ಎಲ್ಲವನ್ನೂ. ಇಷ್ಟೆಲ್ಲಾ ಆದಮೇಲೆ ಈ ಆನಂದಲೋಕದ ಸೃಷ್ಟಿಕರ್ತನ ಚಿತ್ರವನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಅದು ಮಾತ್ರ ಕಲ್ಪನೆಗೂ ಸಿಗಲಿಲ್ಲ!&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_JaSAEbMHNYk/SE0uUp0a89I/AAAAAAAACrA/9GS37GeT3SY/s1600-h/P6010104.JPG"&gt;&lt;img style="margin: 0px auto 10px; display: block; text-align: center; cursor: pointer;" src="http://4.bp.blogspot.com/_JaSAEbMHNYk/SE0uUp0a89I/AAAAAAAACrA/9GS37GeT3SY/s320/P6010104.JPG" alt="" id="BLOGGER_PHOTO_ID_5209871276295517138" border="0" /&gt;&lt;/a&gt;&lt;br /&gt;ಶ್ರೀನಿವಾಸ ತನ್ನ ಮೊಬೈಲ್ ಕ್ಯಾಮರಾದಲ್ಲಿ ಒಂದಷ್ಟು ಫೋಟೋ ತೆಗೆದ. ಆಮೇಲೆ ಬೇಗ ನಮ್ಮ ಬಲಭಾಗದಲ್ಲಿದ್ದ ಶಿಖರ ಹತ್ತಿದೆವು. ನಾನು ಉತ್ಸಾಹದಲ್ಲಿ ಬಹಳ ಬೇಗ ಹತ್ತಿದೆ. ಅರುಣ ಮತ್ತು ಶ್ರೀನಿವಾಸ ಫೋಟೋ ತೆಗೆದುಕೊಂಡು ನನಗಿಂತ ನಿಧಾನವಾಗಿ ಹತ್ತಿದರು. ಮತ್ತೊಂದು ಶಿಖರ ಹತ್ತಿದಮೇಲೂ ಮತ್ತೊಂದು ಆಶ್ಚರ್ಯ - ಪಕ್ಕದಲ್ಲಿ ಮತ್ತೊಂದು ಗಿರಿಶೃಂಗ ಎತ್ತರದಲ್ಲಿ ರಾರಾಜಿಸುತ್ತಿತ್ತು. ಅದಕ್ಕೆ ನಡೆದುಹೋಗಲು ಅರ್ಧ ತಾಸಾದರೂ ಬೇಕು ಎನ್ನಿಸಿತು. ಮುಂದೆ ಹೋಗುವುದೋ, ಇಲ್ಲವೋ ಎಂದು ನಿರ್ಧರಿಸಲಾಗಲಿಲ್ಲ. ಅರುಣ ಮತ್ತು ಶ್ರೀನಿವಾಸ ಬರುವ ತನಕ ಪ್ರಕೃತಿಸೌಂದರ್ಯ ನೋಡುತ್ತಾ ನಿಂತುಬಿಟ್ಟೆ. ಅವರು ಬಂದ ತಕ್ಷಣ ಅವರಿಗೂ ಆಶ್ಚರ್ಯವಾಗಿರಬೇಕು - ಬಿಟ್ಟ ಕಣ್ಣು ಮಿಟುಕಿಸದೇ ಆ ಶಿಖರವನ್ನೇ ದಿಟ್ಟಿಸುತ್ತಿದ್ದರು. ಚೂಪಾಗಿದ್ದ ಆ ಶಿಖರ ತನ್ನ ಹಿಂದೆ ಹೆಚ್ಚೇನೂ ಬಚ್ಚಿಟ್ಟಿರಲಾರದು. ಆದ್ದರಿಂದ ಸಧ್ಯಕ್ಕೆ ಆ ಶ್ರೇಣಿಯಲ್ಲಿ ಅತ್ಯುನ್ನತ ಶಿಖರವಾದ ಅದೇ ನಿಶಾನಿ ಮೊಟ್ಟೆ ಎಂದುಕೊಂಡೆವು. ಸಮಯ ಕಡಿಮೆಯಿದ್ದರೂ ಆ ಶಿಖರ ಏರದೇ ಹಿಂದಿರುಗಲು ನನ್ನ ಮನಸ್ಸು ಒಪ್ಪಲಿಲ್ಲ. ಈ ಶಿಖರ ಏರಿಯೂ ನಾವು ಸಮಯದಲ್ಲಿ ವಾಪಸಾಗಬಹುದು ಎಂದು ಅನ್ನಿಸುತ್ತಿತ್ತು, ಆದರೆ ಖಚಿತವಾಗಿ ಹೇಳುವುದು ಕಷ್ಟವಾಗಿತ್ತು. ನಾನು ಬೇಗೆ ನಡೆದರೆ ಆ ಶಿಖರಕ್ಕೆ ಹೋಗಲು ಅರ್ಧ ತಾಸು ಬೇಕಾಗಬಹುದೆಂದು ಹೇಳಿದೆ. ಶ್ರೀನಿವಾಸ ಮತ್ತು ಅರುಣ ಮುಕ್ಕಾಲು ತಾಸು ಬೇಕೆಂದರು. ಅವರಿಬ್ಬರೂ ಇನ್ನು ಮುಂದೆ ಹೋಗುವುದು ಕಷ್ಟ ಎನ್ನುತ್ತಿದ್ದರು. ಅದಲ್ಲದೇ, ನಿಶಾನಿ ಮೊಟ್ಟೆಗೆ ಆಗಾಗ ಮಳೆಯ ಮೋಡಗಳು ಬೇರೆ ಚುಂಬಿಸುತ್ತಿದ್ದವು. ಇದೆಲ್ಲಾ ಗಮನದಲ್ಲಿಟ್ಟುಕೊಂಡು ಹಿಂದಿರುಗಬೇಕೆಂಬ ಬಹುಮತದ ನಿರ್ಧಾರಕ್ಕೆ ಮಣಿದು ಹಿಂದಿರುಗಲು ಮನಸ್ಸಿಲ್ಲದೇ ಸಮ್ಮತಿಸಿದೆ. ನಾವಿದ್ದ ಶಿಖರದ ಮೇಲೆ ಐದು ನಿಮಿಷ ಕಣ್ಮುಚ್ಚಿ ಮಲಗಿದೆ. ಅರುಣನೂ ಮಲಗಿದ್ದ. ಶ್ರೀನಿವಾಸ ಫೋಟೋ ತೆಗೆಯುತ್ತಾ ನಿಂತಿದ್ದ ಎನ್ನಿಸುತ್ತದೆ, ಅವನು ಮಲಗಿದ್ದು ನೋಡಲಿಲ್ಲ.&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_JaSAEbMHNYk/SE0vDZ0a9AI/AAAAAAAACrY/JrSRbHFuHcQ/s1600-h/Image018.jpg"&gt;&lt;img style="margin: 0px auto 10px; display: block; text-align: center; cursor: pointer;" src="http://3.bp.blogspot.com/_JaSAEbMHNYk/SE0vDZ0a9AI/AAAAAAAACrY/JrSRbHFuHcQ/s320/Image018.jpg" alt="" id="BLOGGER_PHOTO_ID_5209872079454401538" border="0" /&gt;&lt;/a&gt;&lt;br /&gt;ನಿಶಾನಿ ಮೊಟ್ಟೆ ಏರದೇ ಹಿಂದಿರುಗಲು ಬೇಸರವೇ ಆಯಿತು. ಆದರೆ ಈ ಹಿಂದಿರುಗುವಿಕೆಯಿಂದ ಮುಂದೆ ಮತ್ತೊಂದು ಬಾರಿ ಈ ಚಾರಣಕ್ಕೆ ಬಂದಾಗ ಶಿಖರ ಏರುವ ಹುಮ್ಮಸ್ಸು ಹೆಚ್ಚಾಗಿರುತ್ತದೆ ಎಂಬ ಸಮಾಧಾನವೂ ಇತ್ತು. ಹಿಂದಿರುಗಬೇಕೆಂದು ನಿರ್ಧರಿಸಿದ್ದಾಯಿತು. ಬೇರೇನೂ ಯೋಚಿಸದೇ ನಮ್ಮ ಬೆನ್ನುಚೀಲಗಳನ್ನಿಟ್ಟಲ್ಲಿಗೆ ಇಲ್ಲದ ದಾರಿಯನ್ನು ನಾವೇ ಮಾಡಿಕೊಂಡು ಬೇಗ ಹಿಂದಿರುಗಿದೆವು. ಕನ್ನಡ ಹಾಡುಗಳನ್ನು ಆಂಗ್ಲೀಕರಿಸುವ ತರಲೆಯನ್ನು ಮುಂದುವರೆಸಿಕೊಂಡು ಊಟದ ಹೆಸರಿನಲ್ಲಿ ತಿಂಡಿ ತಿಂದೆವು. ಹೆಚ್ಚು ಸಮಯ ವ್ಯಯಿಸದೇ, ಮತ್ತೊಂದು ಬಾರಿ ನಿಶಾನಿ ಮೊಟ್ಟೆ ಹತ್ತಲು ಬರಬೇಕೆಂದು ಸಂಕಲ್ಪಿಸಿ, ದಟ್ಟವಾದ ಮೇಘಗಳಿಂದ ಆವರಿಸಲ್ಪಡುತ್ತಿದ್ದ ಹಸಿರೂರಿಗೆ ಬೆನ್ನು ಮಾಡಿ ನಡೆದೆವು. ಅರ್ಧ ದಾರಿ ನಡೆದಮೇಲೆ ನಾವು ಬಂದ ದಾರಿಯ ಬದಲು ಬೇರೊಂದು ದಾರಿ ಹಿಡಿದು ಪೇಟೆಗೆ ಹಿಂದಿರುಗಿದೆವು.&lt;br /&gt;&lt;br /&gt;ನನಗೂ, ಅರುಣನಿಗೂ ಇದು ಬ್ರಹ್ಮಗಿರಿಯಾದಮೇಲೆ ಬಹಳ ತೃಪ್ತಿ ನೀಡಿದ ಚಾರಣವಾಯಿತು. ಶ್ರೀನಿವಾಸನಿಗೂ ಈ ಚಾರಣ ಇಷ್ಟವಾಗಿರುವುದು ನಿಸ್ಸಂಶಯ. ನನ್ನ ಬಹಳ ತೃಪ್ತಿನೀಡಿದ ಚಾರಣಗಳ ಪಟ್ಟಿಯಲ್ಲಿ ಮೇಲಿದ್ದ ಕುಮಾರಪರ್ವತ, ಕೊಡಚಾದ್ರಿ, ತಡಿಯಂಡಮೋಳ್ ಇತ್ಯಾದಿ ಗಿರಿರಾಜರು ಬ್ರಹ್ಮಗಿರಿ, ನಿಶಾನಿಮೊಟ್ಟೆ, ಚೆಂಬ್ರದಂಥ ಮನಮೋಹಿನಿಯರಿಗೆ ತಮ್ಮ ಅಗ್ರಸ್ಥಾನವನ್ನು ಕ್ರಮೇಣ ಬಿಟ್ಟುಕೊಡುತ್ತಿದ್ದಾರೆ! ಏನೇ ಇರಲಿ, ಈ  ಸ್ಪರ್ಧೆಯಲ್ಲಿ ಗೆಲ್ಲುವುದು ಈ ಯಾವ ಜಾಗವೂ ಅಲ್ಲ - ಇವೆಲ್ಲದರ ಸೃಷ್ಟಿಗೆ ಕಾರಣನಾದ ಸೃಷ್ಟಿಕರ್ತನೊಬ್ಬನೇ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-840602233323555897?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/840602233323555897/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=840602233323555897' title='11 Comments'/><link rel='edit' type='application/atom+xml' href='http://www.blogger.com/feeds/34886019/posts/default/840602233323555897'/><link rel='self' type='application/atom+xml' href='http://www.blogger.com/feeds/34886019/posts/default/840602233323555897'/><link rel='alternate' type='text/html' href='http://manasinaputagalanaduve.blogspot.com/2008/06/blog-post_09.html' title='ನಿಶಾನಿ ಮೊಟ್ಟೆ'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_JaSAEbMHNYk/SE0uT50a87I/AAAAAAAACqw/1AWqtL8PjaU/s72-c/P6010098.JPG' height='72' width='72'/><thr:total>11</thr:total></entry><entry><id>tag:blogger.com,1999:blog-34886019.post-4047555169556106740</id><published>2008-06-05T18:56:00.003+05:30</published><updated>2008-06-05T19:08:38.311+05:30</updated><title type='text'>ವಿಶ್ವ ಪರಿಸರ ದಿನದ ಶುಭಾಶಯಗಳು!</title><content type='html'>ಅರಿವಿದ್ದೋ, ಅರಿವಿಲ್ಲದೆಯೋ, ನಾವು ಪ್ರತಿದಿನವೂ, ಪ್ರತಿಕ್ಷಣವೂ, ನಮ್ಮ ಪರಿಸರದ ಕಣಕಣವನ್ನೂ ಅನುಭವಿಸುತ್ತಿದ್ದೇವೆ, ಸುಖ ಪಡುತ್ತಿದ್ದೇವೆ. ಇದೇ ಸುಖ, ಸಂತೋಷ ನಮ್ಮ&lt;span class=""&gt; ಮುಂದಿನ ಪೀಳಿಗೆಗಳಿಗೂ ಸಿಗಬೇಕು. ಹಾಗಾಗಿ, ನಮ್ಮ ಪರಿಸರವನ್ನು ನಮ್ಮ ಮನೆಯ ಮಕ್ಕಳಂತೆಯೇ ಜವಾಬ್ದಾರಿಯಿಂದಲೂ, ಪ್ರೀತಿಯಿಂದಲೂ ನೋಡಿಕೊಳ್ಳೋಣ.&lt;/span&gt;&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು!&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-4047555169556106740?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/4047555169556106740/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=4047555169556106740' title='2 Comments'/><link rel='edit' type='application/atom+xml' href='http://www.blogger.com/feeds/34886019/posts/default/4047555169556106740'/><link rel='self' type='application/atom+xml' href='http://www.blogger.com/feeds/34886019/posts/default/4047555169556106740'/><link rel='alternate' type='text/html' href='http://manasinaputagalanaduve.blogspot.com/2008/06/blog-post.html' title='ವಿಶ್ವ ಪರಿಸರ ದಿನದ ಶುಭಾಶಯಗಳು!'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>2</thr:total></entry><entry><id>tag:blogger.com,1999:blog-34886019.post-5529418846799786927</id><published>2008-05-26T16:17:00.015+05:30</published><updated>2008-05-26T23:31:15.373+05:30</updated><title type='text'>ಶ್ರೀಧರನ ಹುಟ್ಟುಹಬ್ಬ</title><content type='html'>&lt;a href="http://2.bp.blogspot.com/_JaSAEbMHNYk/SDqvP8Smn5I/AAAAAAAACqc/1y0w0hd4pMo/s1600-h/P6030143.JPG"&gt;&lt;img id="BLOGGER_PHOTO_ID_5204665007797084050" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://2.bp.blogspot.com/_JaSAEbMHNYk/SDqvP8Smn5I/AAAAAAAACqc/1y0w0hd4pMo/s400/P6030143.JPG" border="0" /&gt;&lt;/a&gt;&lt;br /&gt;&lt;div&gt;ಇಂದು ಶ್ರೀಧರನ ಹುಟ್ಟುಹಬ್ಬ. ಫೋನಿನ ಮೂಲಕ ಶುಭಾಶಯ ಹೇಳಿದ್ದು ಆಯಿತು, ಆದರೆ ಭೇಟಿ ಮಾಡಲಾಗಲಿಲ್ಲ. ಅದೇಕೋ ಇಂದು ನಾನು ಶ್ರೀಧರನನ್ನು ಮೊನ್ನೆಯಷ್ಟೇ ಭೇಟಿ ಮಾಡಿದೆ ಎನ್ನಿಸುತ್ತಿದೆ. ವರ್ಷಗಳು ದಿನಗಳಂತೆ ಉರುಳಿಹೋಗುತ್ತಿವೆ. ನಾನು ಹೇಗೆ ಶ್ರೀಧರನ್ನು ಭೇಟಿಯಾದೆ, ನಮ್ಮ ಆಪ್ತತೆ ಹೇಗೆ ಬೆಳೆಯಿತು... ಇತ್ಯಾದಿ ಯೋಚನೆಗಳು ನನ್ನ ಮನಸ್ಸಿಗೆ ಬಂದವು. ಮನಸ್ಸಿನಲ್ಲಿರುವ ಕೆಲವು ವಿಷಯಗಳನ್ನು ಇಲ್ಲಿ ಬರೆದಿಡುತ್ತಿದ್ದೇನೆ.&lt;/div&gt;&lt;div&gt;&lt;/div&gt;&lt;br /&gt;&lt;div align="center"&gt;*****&lt;/div&gt;&lt;br /&gt;&lt;div&gt;&lt;/div&gt;&lt;div&gt;ಎಷ್ಟು ಸಮಯದ ಹಿಂದಿನ ಮಾತೋ, ನೆನಪಿಲ್ಲ. ಒಂದು ದಿನ ಸಂಜೆ ಕೆಲಸ ಮುಗಿದ ತಕ್ಷಣ ಅರುಣನನ್ನು ಭೇಟಿ ಮಾಡಲು ಗಾಂಧೀಬಜ಼ಾರಿನ ಮಹಾಲಕ್ಷ್ಮೀ ಟಿಫಿನ್ ರೂಮಿಗೆ ಹೋಗಿದ್ದೆ. ತಿಂಡಿ ಆರ್ಡರ್ ಮಾಡದೇ ನನಗಾಗಿ ಕಾದು ಕುಳಿತಿದ್ದ ಅರುಣನ ಪಕ್ಕ ಅಪರಿಚಿತನೊಬ್ಬನನ್ನು ಕಂಡೆ. ನನ್ನ ವಯಸ್ಸೇ ಇರಬೇಕು ಎನ್ನಿಸಿತು. ಅರುಣನ ಎದುರಿಗೆ ಹೋಗಿ ಕುಳಿತು ಒಂದೆರಡು ಕ್ಷಣ ಆ ಅಪರಿಚಿತನನ್ನೇ ನೋಡುತ್ತಿದ್ದೆ. ನಂತರ ಅರುಣ "Introduce ಮಾಡ್ಸೋದು ಮರ್ತ್ಬಿಟ್ಟೆ; ಇವನು ಶ್ರೀಧರ ಅಂತ... ಒಂದು ಗುಂಪು friends ಸಿಕ್ಕಿದಾರೆ ಅಂತ ಹೇಳ್ತಿದ್ನಲ್ಲ, ಅವರಲ್ಲಿ ಇವನೂ ಒಬ್ಬ" ಎಂದು ಪರಿಚಯ ಮಾಡಿಕೊಟ್ಟ. ಔಪಚಾರಿಕವಾಗಿಯೇ "ನಮಸ್ಕಾರ" ಎಂದು ಹೇಳಿ, ಕೈ ಕುಲುಕಿ, "ನೀವು ಏನ್ಮಾಡ್..." ಎಂದು ಕೇಳವಷ್ಟರಲ್ಲೇ ಅರುಣ ಬಾಯಿ ಹಾಕಿ "ನೀವು-ಗೀವು ಅಂತೆಲ್ಲಾ ಕರೀಬೇಡ್ರಪ್ಪ. ನಂಗೆ ಸಂಕೋಚ ಆಗತ್ತೆ ಹಾಗೆಲ್ಲ ಅಂದ್ರೆ! ನೀವಿಬ್ರೂ ಒಬ್ಬರನ್ನೊಬ್ಬರು ನೀನು-ಹೋಗು-ಬಾ ಅಂತ ಕರೀಬೋದು. ಆ ಸ್ವಾತಂತ್ರ್ಯ ನಾನು ನಿಮಗೆ ಕೊಡ್ತೀನಿ" ಎಂದ. ಹಾಗಾಗಿ ಭೇಟಿಯಾದ ಮೊದಲ ನಿಮಿಷದಲ್ಲೇ ಶ್ರೀಧರ ನನಗೆ ಹೋಗು-ಬಾ ಸ್ನೇಹಿತ ಆದ. ಆಮೇಲೆ ಕಾಲಿ ದೋಸೆ ತಿನ್ನುತ್ತಾ ನಮ್ಮ ಕುಲ-ಗೋತ್ರ-ನಕ್ಷತ್ರ ಇತ್ಯಾದಿಗಳನ್ನು ಹೇಳಿಕೊಂಡು ತಕ್ಕ ಮಟ್ಟಿಗೆ ಪರಿಚಯ ಮಾಡಿಕೊಂಡೆವು. ಶ್ರೀಧರ ಇರುವುದು ಟಾಟಾ ಸಿಲ್ಕ್ ಫಾರ್ಮ್ನಲ್ಲಿ ಎಂದು ತಿಳಿಯಿತು. ಮನೆಯ ಹತ್ತಿರವೇ ಒಬ್ಬ ಗೆಳೆಯ ಸಿಕ್ಕಿದ ಎಂದು ಸಂತೋಷಪಟ್ಟೆ. ಕಾಲಿ ದೋಸೆ ತಿಂದಮೇಲೆ ಕಾಫಿ ಆರ್ಡರ್ ಮಾಡಿದಾಗ "ಸಿಕ್ಕಾಪಟ್ಟೆ ಕಾಫಿ ಕುಡೀತಾರೆ ಅಂತ ಮಾತಾಡ್ಕೋತಿದ್ವಲ್ಲ. ಅವರಲ್ಲಿ ಇವನೂ ಒಬ್ಬ" ಎಂದು ಅರುಣ ಹೇಳಿದ. ಶ್ರೀಧರನ ಮುಖದಲ್ಲಿ ನಾಚಿಕೆಯ ನಗುವಿತ್ತು.&lt;/div&gt;&lt;br /&gt;&lt;div&gt;&lt;/div&gt;&lt;div&gt;ಆ ದಿನಗಳಲ್ಲಿ ಶ್ರೀಧರ-ಶ್ರೀನಿವಾಸ-ಅರುಣ ರಾತ್ರಿ ಹೊತ್ತು &lt;a href="http://karmakaanda.blogspot.com/2007/05/blog-post_26.html"&gt;ವೆಂಕ&lt;/a&gt;-&lt;a href="http://gandabherunda.blogspot.com/2007/05/blog-post_26.html"&gt;ಸೀನ&lt;/a&gt;-&lt;a href="http://speaktonature.blogspot.com/2007/05/blog-post_25.html"&gt;ನೊಣ&lt;/a&gt; ಎಂದು ತಾವೇ 'ದೂತ'ನಾಮಗಳನ್ನು ತಮಗೇ ಕೊಟ್ಟುಕೊಂಡು ಪ್ರತಿದಿನ ಚಾಟ್ ಮಾಡುತ್ತಿದ್ದರು. ಇದರ ಬಗ್ಗೆ ಅರುಣ, ಶ್ರೀಧರ ಮತ್ತು ಶ್ರೀನಿವಾಸನ ಬ್ಲಾಗುಗಳಲ್ಲಿ ಓದಿದ್ದೆ. ಶ್ರೀಧರನನ್ನು ಭೇಟಿಯಾದ ನಂತರ ರಾತ್ರಿ ಹೊತ್ತು ಬಿಡುವಿದ್ದಾಗ ಯಾಹೂ ದೂತಕ್ಕೆ (yahoo messenger) ಲಾಗಿನ್ ಆದಾಗ ನಾನೂ ಅವರ ಕಾನ್ಫರೆನ್ಸ್ ಸೇರಿಕೊಳ್ಳುತ್ತಿದ್ದೆ. ಬಿಡುವಿಲ್ಲದೇ, ಮಿತಿಯಿಲ್ಲದೇ, ಕೆಲವೊಮ್ಮೆ ವಿಷಯವಿಲ್ಲದೆಯೂ ನಿದ್ದೆ ಬರುವ ತನಕ ಚಾಟ್ ಮಾಡುತ್ತಿದ್ದೆವು. ಯಾಹೂ ದೂತದ ಕೃಪೆಯಿಂದ ಶ್ರೀಧರ ಮತ್ತು ಶ್ರೀನಿವಾಸ ಇಬ್ಬರೂ ನನ್ನ ಆಪ್ತ ಗೆಳೆಯರಾದರು. ಮೈಸೂರಿನಲ್ಲಿದ್ದ ಶ್ರೀನಿವಾಸನನ್ನು ಭೇಟಿ ಮಾಡಲು ಬಹಳ ದಿನ ಆಗಿರಲಿಲ್ಲ. ಆದರೆ ಶ್ರೀಧರ ನನಗೆ ಆಗಾಗ ಗಾಂಧೀಬಜ಼ಾರಿನಲ್ಲಿ ಸಿಕ್ಕುತ್ತಿದ್ದ; ಅರುಣನನ್ನು ಭೇಟಿ ಮಾಡಲು ಹೋದಾಗೆಲ್ಲಾ.&lt;/div&gt;&lt;br /&gt;&lt;div&gt;&lt;/div&gt;&lt;div&gt;ಇವನೊಡನೆ ಜಮಲಾಬಾದ್ ಮತ್ತು ಆನಡ್ಕಾ ಜಲಪಾತಕ್ಕೆ ಚಾರಣಕ್ಕೆ ಹೋಗಿದ್ದು ಬಿಟ್ಟರೆ ಇನ್ನೆಲ್ಲೂ ಹೆಚ್ಚು ತಿರುಗಿಲ್ಲ. ಆದರೆ ಹೆಚ್ಚು-ಕಡಿಮೆ ಪ್ರತಿದಿನವೂ ಚಾಟ್ ಮೂಲಕವೋ, ಫೋನ್ ಕರೆಯಲ್ಲೋ, ಎಸ್.ಎಮ್.ಎಸ್ ಸಂದೇಶಗಳ ಮೂಲಕವೋ... ಹೇಗೋ ಒಂದು ರೀತಿಯಲ್ಲಿ ನಮ್ಮ ಪರಿಚಯ ಉಳಿದು, ಸ್ನೇಹ ಬೆಳೆಯುತ್ತಿದೆ. ಬೆಂಗಳೂರಿಗೆ ಹೋದಾಗ ಕಾಪಿಯ ನೆಪದಲ್ಲಾದರೂ ಇವನನ್ನೊಮ್ಮೆಯಾದರೂ ಭೇಟಿ ಮಾಡುತ್ತೇನೆ; ಸಾಧ್ಯವಾದಷ್ಟೂ. 'ಹೋಗು-ಬಾ' ಸ್ನೇಹಿತನಾಗಿಯೇ ಪರಿಚಯವಾದ ಇವನು ಇಂದು 'ಹೋಗೋ-ಬಾರೋ' ಸ್ನೇಹಿತ ನನಗೆ. ಹೀಗೇ ನಮ್ಮ ಸ್ನೇಹ ಬೆಳೆಯುತ್ತಾ ಹೋಗಲಿ ಎಂದು ಆಶಿಸುತ್ತೇನೆ.&lt;/div&gt;&lt;div&gt;&lt;/div&gt;&lt;br /&gt;&lt;div&gt;ಈಗ ನಾವೆಲ್ಲೆಲ್ಲಿ ಸೇರಿದೆವು, ಏನೇನು ಮಾತಾಡಿದೆವು ಎಂಬುದರ ಸಂಪೂರ್ಣ ವಾರ್ತಾಪ್ರಸಾರ ಮಾಡುವ ಸಮಯವಿಲ್ಲ; ಈ ಬ್ಲಾಗ್ ಅದಕ್ಕೆ ಸಾಲದು ಕೂಡ. ಆದ್ದರಿಂದ ಶ್ರೀಧರನ ಬಗ್ಗೆ ಕೆಲವು ಮುಖ್ಯಾಂಶಗಳನ್ನು ಮಾತ್ರ ಬರೆಯುತ್ತೇನೆ.&lt;/div&gt;&lt;div&gt;&lt;/div&gt;&lt;br /&gt;&lt;p&gt;&lt;strong&gt;&gt;&gt;&lt;/strong&gt; 'ಶ್ರೀಧರ' ಎಂದರೆ ಕೆಲವು ದಿನ ತಕ್ಷಣ ನೆನಪಾಗುತ್ತಿದ್ದು ಕಾಫಿ; ನಮ್ಮ ಭಾಷೆಯಲ್ಲಿ ಮಹಾಪ್ರಾಣರಹಿತ 'ಕಾಪಿ'! ಶ್ರೀಧರನಿಗಿಂತ ಹೆಚ್ಚು ಕಾಪಿ ಕುಡಿಯುವ ಜನರನ್ನೂ ನೋಡಿದ್ದರೂ ಇವನು ಹೋಗ್ತಾ-ಬರ್ತಾ ಒಂದೊಂದು ಲೋಟ ಕಾಪಿ ಕುಡಿಯುವುದು ಅದೇಕೋ 'ಮುಖ್ಯಾಂಶ'ವಾಯಿತು. ಈಗಲೂ ಇವನಿಗೆ ಕಾಪಿ ಎಂದರೆ ಲಕ್ಷಪ್ರಾಣ! ಕಾಪಿ ಇಲ್ಲದಿದ್ದರೆ ಇವನು ತ್ಯಕ್ತಪ್ರಾಣ (ಸಂಸ್ಕೃತ ಪದ; ಬಹುವ್ರೀಹಿ ಸಮಾಸ ಉಪಯೋಗಿಸಿ ಅರ್ಥೈಸಿಕೊಳ್ಳುವುದು).&lt;/p&gt;&lt;p&gt;&lt;br /&gt;&gt;&gt; ಇವನು ಸದಾ ಸಂತೋಷವಾಗಿರಬೇಕು ಎಂದು ನನ್ನಾಸೆ. ಆದರೆ ಇವನು ತನ್ನ ಪಲ್ಸರ್ ಬೈಕ್ ಓಡಿಸುವ ಪರಿಯನ್ನು ನೋಡಿದರೆ ಯಾಕೋ ಭಯವಾಗುತ್ತದೆ. ಶ್ರೀಧರ, ನೀನು ಸಂತೋಷವಾಗಿರುವುದು ನಿನಗೂ, ನಿನ್ನ ಗೆಳೆಯರರಾದ ನಮಗೂ ಮುಖ್ಯ. ಸಾವಕಾಶವಾಗಿ, ರಸ್ತೆ ನಿಯಮಗಳನ್ನು ಪಾಲಿಸಿಕೊಂಡು ಗಾಡಿ ಓಡ್ಸಪ್ಪ.&lt;/p&gt;&lt;p&gt;&lt;/p&gt;&lt;p&gt;&lt;strong&gt;&lt;/strong&gt;&lt;/p&gt;&lt;p&gt;&lt;strong&gt;&lt;/strong&gt;&lt;/p&gt;&lt;p&gt;&lt;strong&gt;&gt;&gt;&lt;/strong&gt; ಈಗೀಗ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳ ಹಾಡುಗಳಲ್ಲಿ ನನಗಿಷ್ಟವಾಗದ ಹಾಡುಗಳೆಲ್ಲಾ ಇವನಿಗೆ ಇಷ್ಟವಾಗಿರುತ್ತೆ. ಅದೇಕೋ ನಾನರಿಯೆ. ಈ ವಿಚಾರದಲ್ಲಿ ನಮ್ಮಿಬ್ಬರ ರುಚಿ ಬಹಳ ವಿಭಿನ್ನ.&lt;/p&gt;&lt;p&gt;&lt;/p&gt;&lt;p&gt;&lt;strong&gt;&lt;/strong&gt;&lt;/p&gt;&lt;p&gt;&lt;strong&gt;&lt;/strong&gt;&lt;/p&gt;&lt;p&gt;&lt;strong&gt;&gt;&gt;&lt;/strong&gt; ನಾನು-ಶ್ರೀನಿವಾಸ ಹೊಸ ಜಾಗಗಳನ್ನು ನೋಡಲು ಹೋದಾಗೆಲ್ಲಾ ಇವನಿಗೆ ಫೋನ್ ಮಾಡಿ ಸೌಂದರ್ಯ ವರ್ಣಿಸಿ 'ಉರಿಸುವುದು' ವಾಡಿಕೆಯಾಗಿಬಿಟ್ಟಿದೆ. ಶ್ರೀನಿವಾಸ ಅಂತೂ ಇವನಿಗೆ "ಬಿಟ್ಟಿ-ಬಕ್ರಾ" ಎಂದು ನಾಮಕರಣ ಮಾಡಿದ್ದಾನೆ. ಈ ವಿಷಯದಲ್ಲಿ ನಾನು ಶ್ರೀಧರನಿಗೆ ಹೇಳುವುದು ಇಷ್ಟೇ - "ಉರ್ಕೊಳೋರು ಇರೋ ವರ್ಗು ಉರ್ಸೋರೂ ಇರ್ತಾರೆ". ಇದನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತಾನೋ ಅವನಿಗೆ ಬಿಟ್ಟಿದ್ದು.&lt;/p&gt;&lt;p&gt;&lt;/p&gt;&lt;p&gt;&lt;strong&gt;&lt;/strong&gt;&lt;/p&gt;&lt;p&gt;&lt;strong&gt;&lt;/strong&gt;&lt;/p&gt;&lt;p&gt;&lt;strong&gt;&gt;&gt;&lt;/strong&gt; ಫೆಬ್ರುವರಿಯಲ್ಲಿ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಎಲ್ಲರನ್ನೂ ಮರ ಹತ್ತಿಸುವ ಯೋಜನೆ ಹಾಕಿಕೊಂಡು ನಾನು, ಶ್ರೀನಿವಾಸ ಪ್ರೇಮ ಕವಿತೆಗಳು ಬರೆದುಬಿಟ್ಟಿದ್ದೆವು. ನಾನಂತೂ ಕಲ್ಪಿಸಿಕೊಳ್ಳಲೂ ಏನೂ ಸಿಗದೇ ಬಹಳ ಕಷ್ಟಪಟ್ಟು ಹೇಗೋ ಬರೆದು ಮುಗಿಸಿದೆ. ಆದರೆ ನಮ್ಮ ಪ್ರಾಜೆಕ್ಟ್ (VDHUL 1.0 - ಶ್ರೀನಿವಾಸನಿಗೆ ಮಾತ್ರ ಅರ್ಥವಾಗೋದು ಇದು; ಬೇರೆಯವರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಡಿ) ಚೆನ್ನಾಗೇ ನಡೆಯಿತು. ಆಗ ಶ್ರೀಧರ ಮರ ಹತ್ತುವುದಲ್ಲದೇ ನಮ್ಮಿಂದ ಸ್ಫೂರ್ತಿ ಪಡೆದು "ನಾನು ಕವಿಯಲ್ಲ" ಎಂದು ಘೋಷಿಸಿ ಒಂದಲ್ಲ, ಎರಡೆರಡು ಪ್ರೇಮಕವಿತೆಗಳನ್ನು (ಕವಿತೆ &lt;a href="http://karmakaanda.blogspot.com/2008/02/blog-post_14.html"&gt;೧&lt;/a&gt;, &lt;a href="http://karmakaanda.blogspot.com/2008/02/blog-post_5676.html"&gt;೨&lt;/a&gt; : ಈ ಲಿಂಕಿನಲ್ಲಿ ಕಮೆಂಟ್ ನೋಡಲು ಹೋದವರು ಹುಚ್ಚಾಸ್ಪತ್ರೆ ಸೇರಬೇಕಾದೀತು, ಜೋಕೇ!) ತನ್ನವಳಿಗೆ ಅರ್ಪಿಸಿಬಿಟ್ಟಿದ್ದ. ಕವಿತೆಗೆಳು ಚೆನ್ನಾಗಿದ್ದವು. ಆದರೆ ಅವನಿಗೆ "ಇದೇನಪ್ಪ, ಶ್ರೀನಿವಾಸ, ಶ್ರೀಕಾಂತ ಇಬ್ಬರೂ ತಮ್ಮವರಿಗೆ ಕವಿತೆ ಬರೆದು ಅರ್ಪಿಸಿಬಿಟ್ಟಿದ್ದಾರೆ. ನಾನು ನನ್ನವಳಿಗೆ ಕವಿತೆ ಅರ್ಪಿಸದಿದ್ದರೆ ಹೇಗೆ?" ಎನ್ನಿಸಿರಬೇಕು. "ಹೇಗ್ರೋ ಕವಿತೆ ಬರ್ದ್ರೀ? ನನಗೆ ತಲೆ ಕೆರ್ಕೊಂಡ್ರೂ ಏನೋ ಹೊಳೀತಿಲ್ಲ" ಎಂದು ಸಂದೇಶ ಕಳುಹಿಸಿದ್ದ ಎಂದೂ ನೆನಪು.&lt;/p&gt;&lt;p&gt;&lt;/p&gt;&lt;p&gt;&lt;strong&gt;&lt;/strong&gt;&lt;/p&gt;&lt;p&gt;&lt;strong&gt;&lt;/strong&gt;&lt;/p&gt;&lt;p&gt;&lt;strong&gt;&gt;&gt;&lt;/strong&gt; ತನ್ನವಳ ಜೊತೆ ಸೇರಿಕೊಂಡು ಮಕ್ಕಳಂತೆ ಆಗೋಗಿದ್ದಾನೆ; ಸಹವಾಸ ದೋಷ! ಕೋತಿ-ಪಾರಿವಾಳ ಇರುವ 'ಹಾಡು' ನೋಡಿ (ಕೇಳಿ?) 'ರಿಲೀಫ್' ಸಿಗತ್ತೆ ಅವನಿಗೆ. ಅದು ಹೇಗೆಂದು ನನಗೆ ತಿಳಿದಿಲ್ಲ. ಆದರೆ ಈ ಹಾಡು ಮತ್ತು ರಿಲೀಫ್ - ಎರಡೂ ನನ್ನನ್ನೂ, ಅರುಣನನ್ನೂ ಹುಚ್ಚುನಗೆಯ ಸಮುದ್ರಕ್ಕೆ ತಳ್ಳಿದೆ. ಇಷ್ಟರ ಮಧ್ಯೆ ಮದುವೆ, ಮಕ್ಕಳು-ಮರಿ ಇತ್ಯಾದಿ ಅನೇಕ ಕನಸುಗಳನ್ನೂ ಪ್ರತಿದಿನ ಪೋಣಿಸುತ್ತಿರಬೇಕು. ಇಬ್ಬರ ಜೀವನವೂ ಚೆನ್ನಾಗಿರಲಿ.&lt;/p&gt;&lt;p&gt;&lt;/p&gt;&lt;p&gt;&lt;strong&gt;&lt;/strong&gt;&lt;/p&gt;&lt;p&gt;&lt;strong&gt;&lt;/strong&gt;&lt;/p&gt;&lt;p&gt;&lt;strong&gt;&gt;&gt;&lt;/strong&gt; ತನ್ನವಳು ಹೇಳಿದರೆ ಸಾಕು, ಯಾರನ್ನು ಬೇಕಾದರೂ ಹೊಡೆಯಲು, ಒದೆಯಲು ಹಿಂದೆ-ಮುಂದೆ ನೋಡುವುದಿಲ್ಲ. ಪ್ರೇಮ ಕುರುಡು ಎಂದು ಕೆಲವರು ಸರಿಯಾಗೇ ಹೇಳುತ್ತಾರೆ. ತಮಾಷಿ ಎಂದರೆ ಇವನಿಗೆ ಈ-ಮೈಲಿನಲ್ಲಿ, ಚಾಟ್ನಲ್ಲಿ, ಫೋನಿನಲ್ಲಿ - ಹೇಗೆ ಬೇಕಾದರೂ ಹೊಡೆಯಲು, ಒದೆಯಲು ಬರುತ್ತದೆ. ಇವನು ಹೊಡೆದರೆ "ಡಮಾರ್" ಎಂದು ಶಬ್ದ ಬೇರೆ ಬರುತ್ತದಂತೆ.&lt;/p&gt;&lt;p&gt;&lt;/p&gt;&lt;p&gt;&lt;strong&gt;&lt;/strong&gt;&lt;/p&gt;&lt;p&gt;&lt;strong&gt;&lt;/strong&gt;&lt;/p&gt;&lt;p&gt;&lt;strong&gt;&gt;&gt;&lt;/strong&gt; ಇನ್ನೂ ಅನೇಕ ವಿಚಾರಗಳಿರುತ್ತವೆ. ತಕ್ಷಣಕ್ಕೆ ಹೊಳೆಯುತ್ತಿಲ್ಲ. ಕೊನೆಯದಾಗಿ ಬರೆಯುತ್ತಿದ್ದೇನೆ; ಆದರೆ ಇದು ಎಲ್ಲಕ್ಕಿಂತ ಮುಖ್ಯವಾದ ವಿಚಾರ - ಇವನು ನನ್ನ ಗೆಳೆಯ ಎಂದು ಯಾವುದೇ ಬೇಜಾರಿಲ್ಲದೇ, ಸಂತೋಷವಾಗಿ ಹೇಳಿಕೊಳ್ಳುತ್ತೇನೆ. ನಮ್ಮ ಗೆಳೆತನ ಹೀಗೇ, ಚೆನ್ನಾಗಿರಲಿ.&lt;/p&gt;&lt;p&gt;&lt;/p&gt;&lt;p&gt;&lt;/p&gt;&lt;div align="center"&gt;*****&lt;/div&gt;&lt;div&gt;&lt;/div&gt;&lt;br /&gt;&lt;div&gt;ಹುಟ್ಟುಹಬ್ಬದ ಪ್ರಯುಕ್ತ ಶ್ರೀಧರನಿಗೆ ಏನಾದರೂ ಉಡುಗೊರೆ ಕೊಡಬೇಕೆಂದಿದ್ದೆ. ಆದರೆ ನನಗೆ ಸಧ್ಯಕ್ಕೆ ಅವನಿಗೆ ಕೊಡಲು ಸಾಧ್ಯವಾಗುತ್ತಿರುವ ಉಡುಗೊರೆ ಇದೊಂದೇ...&lt;/div&gt;&lt;div&gt;&lt;/div&gt;&lt;br /&gt;&lt;div align="center"&gt;ನಗು ನಗುತ ಸಾಗುತಿರು ಬಾಳ ಪಯಣದಿ ನೀನು&lt;/div&gt;&lt;div align="center"&gt;ಸಿರಿಯಿರಲಿ, ಸುಖವಿರಲಿ, ನಲಿವಿರಲಿ ಬದುಕಿನಲಿ&lt;/div&gt;&lt;div align="center"&gt;ಪ್ರತಿದಿನವೂ, ಪ್ರತಿಕ್ಷಣವೂ, ಬೆಳೆಯಲೆಮ್ಮಾಪ್ತತೆಯು&lt;/div&gt;&lt;div align="center"&gt;ಜಗದೊಡೆಯನ ಕರುಣೆ ಚಿರಕಾಲ ನಿನಗಿರಲಿ&lt;/div&gt;&lt;br /&gt;&lt;div&gt;&lt;/div&gt;&lt;div&gt;ಮತ್ತೊಮ್ಮೆ, ಶ್ರೀಧರನಿಗೆ ಹುಟ್ಟುಹಬ್ಬದ ಶುಭಾಶಯಗಳು!&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-5529418846799786927?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/5529418846799786927/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=5529418846799786927' title='7 Comments'/><link rel='edit' type='application/atom+xml' href='http://www.blogger.com/feeds/34886019/posts/default/5529418846799786927'/><link rel='self' type='application/atom+xml' href='http://www.blogger.com/feeds/34886019/posts/default/5529418846799786927'/><link rel='alternate' type='text/html' href='http://manasinaputagalanaduve.blogspot.com/2008/05/blog-post_26.html' title='ಶ್ರೀಧರನ ಹುಟ್ಟುಹಬ್ಬ'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_JaSAEbMHNYk/SDqvP8Smn5I/AAAAAAAACqc/1y0w0hd4pMo/s72-c/P6030143.JPG' height='72' width='72'/><thr:total>7</thr:total></entry><entry><id>tag:blogger.com,1999:blog-34886019.post-3367612830695102844</id><published>2008-05-23T16:42:00.003+05:30</published><updated>2008-05-23T17:00:43.601+05:30</updated><title type='text'>ದೇವರೆಂಬುದದೇನು?</title><content type='html'>ಇಲ್ಲಿಯ ತನಕ ಗೆಳೆಯರೊಡನೆ ದೇವರ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿದೆ. ಬ್ಲಾಗುಗಳಲ್ಲಿ ಊರುದ್ದದ ಕಮೆಂಟುಗಳೂ ಮಾಡಿಬಿಟ್ಟೆ. ಆದರೆ ನಾನು ಹೇಳಿದ  ವಿಷಯಗಳ ಬಗ್ಗೆ ಒಂದಲ್ಲ, ಅನೇಕ ಬಾರಿ ಯೋಚಿಸುವಂತಾಗಿದೆ. ಕಾರಣ - ಕೆಲವು ವಿಷಯಗಳು ನನಗಿನ್ನೂ ಸರಿಯಾಗಿ ಅರ್ಥವಾಗಿಲ್ಲ ಎನ್ನಿಸುತ್ತಿದೆ. ಕೆಲವು ದಿನಗಳ ಹಿಂದೆ ಲಕ್ಷ್ಮೀ ಬ್ಲಾಗಿನಲ್ಲಿ ಮಾಡಿದ ಒಂದೇ ಕಮೆಂಟಿನಲ್ಲಿ ನಾನೇ ಬರೆದ ಎರಡು ಸಾಲುಗಳು ಒಂದಕ್ಕೊಂದು ಸರಿತೋರದು ಎನ್ನಿಸುತ್ತಿದೆ (ಕೆಲವು ವಿಷಯಗಳನ್ನು ಬ್ಲಾಗುಗಳಲ್ಲಿ ಚರ್ಚಿಸಿದ್ದೇವೆ, ಆದರೆ ನನ್ನನ್ನು ಕಾಡುತ್ತಿರುವುದು ಇಲ್ಲಿಯ ತನಕ ನಾವ್ಯಾರೂ ಸೂಚಿಸದ, ಚರ್ಚಿಸದ ವಿಷಯಗಳು).&lt;br /&gt;&lt;br /&gt;ಒಂದು ವಿಚಾರ ಮಾತ್ರ ಸ್ಪಷ್ಟ. ದೇವರು ಎನ್ನುವುದು ಕಲ್ಪನೆಗೆ ಮೀರಿದ ವಿಷಯ, ಆದರೂ ಸತ್ಯ! ನನ್ನ ಬುದ್ಧಿಗೆ ಎಷ್ಟು ಸಾಧ್ಯವೋ ಅಷ್ಟು ಸ್ಪಷ್ಟವಾಗಿ ಅದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.&lt;br /&gt;&lt;br /&gt;ನಾನು ತಿಳಿದುಕೊಂಡಿರುವುದು 'ಪರವಾಗಿಲ್ಲ' ಎನ್ನುವ ಹಂತದ ತನಕ ದೇವರ ಬಗ್ಗೆ ಚರ್ಚಿಸುವುದು ಬೇಡ ಎನ್ನಿಸುತ್ತಿದೆ. ಯಾಕೆಂದರೆ ನಾನು ಒಂದು ತಪ್ಪು ವಿಷಯ ಹೇಳಿದರೆ ಅದು ಓದಿದವರಿಗೆ ನಿಜ ಎನ್ನಿಸಿ ಅವರನ್ನು ತಪ್ಪು ಅರಿವಿನ ದಾರಿಗೆ  ಎಳೆಯಬಾರದು. (ನಾನು ತಪ್ಪು ಹೇಳಿದೆ ಎಂದಲ್ಲ. ನಾನು ಹೇಳಿದ್ದು ತಪ್ಪೋ ಸರಿಯೋ ಎಂದು ನಾನೇ ಹೇಳುವ ಸ್ಥಿತಿಯಲ್ಲಿಲ್ಲ!)&lt;br /&gt;ಆದ್ದರಿಂದ ಬ್ಲಾಗಿನಲ್ಲಿ ನಾನು ದೇವರ ವಿಷಯವನ್ನು ಸಧ್ಯದಲ್ಲಿ ಚರ್ಚಿಸುವುದಿಲ್ಲ. ಫೋನಿನಲ್ಲಿ, ಅಥವಾ ಮುಂದೆ ಕೂತು ಚರ್ಚಿಸಬಹುದು, ಆದರೆ ಮಿತವಾಗಿ. ಈ ವಿಷಯದಲ್ಲಿ ನನ್ನದಲ್ಲದ ಅಭಿಪ್ರಾಯಗಳನ್ನು ಕೇಳಲು ಮನಸ್ಸಿಗೆ ಸ್ವಲ್ಪ ಸಮಯ ಬೇಕು ಎನ್ನಿಸುತ್ತಿದೆ. (ಕೆಲವು ಆಯ್ದ ಅಭಿಪ್ರಾಯಗಳ ಸಹಾಯದಿಂದಲೇ ಈ ಯೋಚನೆ ಸಾಧ್ಯ. ಆದರೆ ಅಭಿಪ್ರಾಯಗಳ ಆಯ್ಕೆ ಮುಗಿದಿದೆ. ಹೊಸ ಅಭಿಪ್ರಾಯಗಳಿಗೆ ಈಗ ಅವಕಾಶವಿಲ್ಲ!).&lt;br /&gt;&lt;br /&gt;ಇದುವರೆಗೂ ನನ್ನ ಜೊತೆ ದೇವರ ಬಗ್ಗೆ ಚರ್ಚಿಸಿ, ಆ ಮೂಲಕ ನನ್ನನ್ನು ದೇವರ ವಿಷಯದಲ್ಲಿ ದೀರ್ಘವಾಗಿ ಯೋಚಿಸುವಂತೆ ಮಾಡಿದ ಎಲ್ಲರಿಗೂ ಧನ್ಯವಾದಗಳು!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-3367612830695102844?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/3367612830695102844/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=3367612830695102844' title='2 Comments'/><link rel='edit' type='application/atom+xml' href='http://www.blogger.com/feeds/34886019/posts/default/3367612830695102844'/><link rel='self' type='application/atom+xml' href='http://www.blogger.com/feeds/34886019/posts/default/3367612830695102844'/><link rel='alternate' type='text/html' href='http://manasinaputagalanaduve.blogspot.com/2008/05/blog-post_23.html' title='ದೇವರೆಂಬುದದೇನು?'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>2</thr:total></entry><entry><id>tag:blogger.com,1999:blog-34886019.post-3785201069236533340</id><published>2008-05-06T00:02:00.006+05:30</published><updated>2008-05-06T00:17:22.386+05:30</updated><title type='text'>ಜಿಂಕೆ ಮರೀನಾ...</title><content type='html'>"ಜಿಂಕೆ ಮರೀನಾ... ಜಿಂಕೆ ಮರೀನಾ..." ಎಂದು 'ನಂದ ಲವ್ಸ್ ನಂದಿತಾ' ಎಂಬ ಚಿತ್ರದಲ್ಲಿ ಒಂದು ಹಾಡಿದೆ. ಕನ್ನಡಾಂಬೆ ಹೆಮ್ಮೆ ಪಡುವಂಥ ಸಾಹಿತ್ಯವಲ್ಲ; ಯಾರೂ ಸೂಪರ್-ಹಿಟ್ ಹಾಡುಗಾರರಿಲ್ಲ; ಹಾಡು ಚೆನ್ನಾಗೂ ಹೇಳಿಲ್ಲ. ಆದರೂ ಎಫ್. ಎಮ್ ಚಾನಲ್ ಗಳಲ್ಲಿ ಮತ್ತು ಟಿ.ವಿ. ಚಾನಲ್ ಗಳಲ್ಲಿ ಈ ಹಾಡು ಸದಾ ಬರುತ್ತಿರುತ್ತದೆ.&lt;br /&gt;&lt;br /&gt;ಯಾರೋ ನಾಲಿಗೆ ತಿರುಗದ ಕೆಲವರು ವಾಕರಿಕೆ ಬರುವಂಥ ರೀತಿಯಲ್ಲಿ ಹಾಡಿದ್ದಾರೆ ಎಂದು ನನ್ನ ಅಭಿಪ್ರಾಯ. ಆ ಹಾಡಿನ ಲಿಂಕ್ &lt;a href="http://www.kannadaaudio.com/Songs/Moviewise/N/NandaLovesNanditha/Jinke.ram"&gt;ಇಲ್ಲಿದೆ&lt;/a&gt;. ಕೇಳಿ, ಕೇಳಿಸಿ, ಕಿವಿಗಳಿಗೆ ಚಿತ್ರಹಿಂಸೆ ಕೊಟ್ಟುಕೊಳ್ಳಿ!&lt;br /&gt;&lt;br /&gt;ಹಾ! ಹೇಳೋದು ಮರೆತೆ... ಈ ಹಾಡು ಕನ್ನಡ ಆಡಿಯೋ ವೆಬ್ಸೈಟಿನ ಸಧ್ಯದ ಟಾಪ್-೧೦ ಹಾಡುಗಳಲ್ಲಿದೆ!&lt;br /&gt;&lt;br /&gt;&lt;br /&gt;&lt;img id="BLOGGER_PHOTO_ID_5196966864457943938" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://3.bp.blogspot.com/_JaSAEbMHNYk/SB9V1Bl9y4I/AAAAAAAACow/q-xHIbhuUbM/s400/JinkeMarinaTop10.jpg" border="0" /&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-3785201069236533340?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/3785201069236533340/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=3785201069236533340' title='5 Comments'/><link rel='edit' type='application/atom+xml' href='http://www.blogger.com/feeds/34886019/posts/default/3785201069236533340'/><link rel='self' type='application/atom+xml' href='http://www.blogger.com/feeds/34886019/posts/default/3785201069236533340'/><link rel='alternate' type='text/html' href='http://manasinaputagalanaduve.blogspot.com/2008/05/blog-post_06.html' title='ಜಿಂಕೆ ಮರೀನಾ...'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_JaSAEbMHNYk/SB9V1Bl9y4I/AAAAAAAACow/q-xHIbhuUbM/s72-c/JinkeMarinaTop10.jpg' height='72' width='72'/><thr:total>5</thr:total></entry><entry><id>tag:blogger.com,1999:blog-34886019.post-2876870475071963533</id><published>2008-05-02T23:57:00.003+05:30</published><updated>2008-05-03T00:27:52.024+05:30</updated><title type='text'>ಬೀಳು-ಏಳು</title><content type='html'>ನಾನೀಗ ಬಿದ್ದಿದ್ದೇನೆ, ಪೆಟ್ಟು ಮಾಡಿಕೊಂಡಿದ್ದೇನೆ, ನೋವನನುಭವಿಸಿದ್ದೇನೆ, ಮತ್ತೆಲ್ಲೋ ಕೈಲಾಗದವನಂತೆ ಸೋತಿದ್ದೇನೆ... ಏಕೋ ಏನೋ ನನ್ನ ಅದೃಷ್ಟ ಎಲ್ಲೆಡೆ ಕೈ ಕೊಡುತ್ತಿದೆ.&lt;br /&gt;&lt;br /&gt;ಸ್ವಲ್ಪ ದಿನಗಳಲ್ಲೇ ಏಳುತ್ತೇನೆ, ಮೈಕೈಯ್ಯಲ್ಲಿ ಹೊಸ ಹುರುಪನ್ನು ಪಡೆಯುತ್ತೇನೆ, ನೋವನ್ನು ಗೆದ್ದು ನಗುತ್ತೇನೆ, ಸೋತಿರುವುದಕ್ಕಿಂತ ಎರಡರಷ್ಟು ಗೆಲ್ಲುತ್ತೇನೆ... ಇದಕ್ಕೆಲ್ಲಾ ಭಗವಂತನ ಸಹಾಯ ಬೇಕು. ಅದು ಇರುತ್ತದೆಂದೂ ನಂಬಿದ್ದೇನೆ.&lt;br /&gt;&lt;br /&gt;"ಈ ಸುಖ-ದುಃಖವೂ, ಅಳುವೂ ನಗುವೂ, ಎಲ್ಲಾ ಆ ದೇವನ ಕೊಡುಗೆ"&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-2876870475071963533?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/2876870475071963533/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=2876870475071963533' title='7 Comments'/><link rel='edit' type='application/atom+xml' href='http://www.blogger.com/feeds/34886019/posts/default/2876870475071963533'/><link rel='self' type='application/atom+xml' href='http://www.blogger.com/feeds/34886019/posts/default/2876870475071963533'/><link rel='alternate' type='text/html' href='http://manasinaputagalanaduve.blogspot.com/2008/05/blog-post.html' title='ಬೀಳು-ಏಳು'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>7</thr:total></entry><entry><id>tag:blogger.com,1999:blog-34886019.post-8779707760083568517</id><published>2008-04-16T12:36:00.005+05:30</published><updated>2008-04-16T15:12:39.707+05:30</updated><category scheme='http://www.blogger.com/atom/ns#' term='sonu nigam'/><category scheme='http://www.blogger.com/atom/ns#' term='lakshmana rao'/><category scheme='http://www.blogger.com/atom/ns#' term='ashwath'/><category scheme='http://www.blogger.com/atom/ns#' term='ricky kej'/><category scheme='http://www.blogger.com/atom/ns#' term='mysore ananthaswamy'/><category scheme='http://www.blogger.com/atom/ns#' term='accident'/><category scheme='http://www.blogger.com/atom/ns#' term='baa maleye baa'/><category scheme='http://www.blogger.com/atom/ns#' term='ba maleye ba'/><title type='text'>"ಬಾ ಮಳೆಯೇ ಬಾ" ಗೆ 'accident' ಆಗೋಗಿದೆ!</title><content type='html'>ಸೋನು ನಿಗಮ್ accident ಚಿತ್ರದಲ್ಲಿ ಹಾಡಿರುವ "ಬಾ ಮಳೆಯೇ ಬಾ" ಚೆನ್ನಾಗಿಲ್ಲ ಎಂದು ಎಷ್ಟೋ ಜನಕ್ಕೆ ಹೇಳಿ ಅರುಣನೊಬ್ಬಬನ್ನು ಬಿಟ್ಟರೆ ಮತ್ತೆಲ್ಲರಿಂದ ಉಗಿಸಿಕೊಳ್ಳುತ್ತಿದ್ದೀನಿ. ಆದರೂ ನನಗನ್ನಿಸಿದ್ದು ಇಲ್ಲಿ ಬರೆದುಬಿಡುತ್ತೀನಿ. ಅಶ್ವಥ್ ಅವರ ವಿಶಿಷ್ಟವಾದ ನಡುಗುವ ಧ್ವನಿಯಲ್ಲಿ ಈ ಹಾಡನ್ನು ಕೇಳಿದಮೇಲೆ ನನಗಂತೂ ಈ ಹೊಸ ರಾಗ 'ಯಾವ ಮೂಲೆಗೆ' ಎನ್ನಿಸುತ್ತದೆ. ಈ ಹಾಡು ಒಮ್ಮೆ ಸಂತಸ ಸೂಚಿಸುವ ಹಾಗೆ ಕೇಳಿಸಿದರೆ ಮತ್ತೊಮ್ಮೆ ದುಃಖ ಬಿಂಬಿಸುವಂತೆ ಕೇಳಿಸುತ್ತಿದೆ. ಬೇಡದ ಸಂದರ್ಭದಲ್ಲಿ ಸುಮ್ಮನೆ ನೇರವಾಗಿ ಹಾಡುವುದು ಬಿಟ್ಟು ಹಾಡಿಗೆ special effects ಕೊಡಲು ಹೋಗಿ ಹಾಡು ಗಬ್ಬೆದ್ದುಹೋಗಿದೆ. ಮುಂಗಾರು ಮಳೆ, ಗಾಳಿಪಟ, ಈ ಬಂಧನ, ಮಿಲನ, ಗೆಳಯ ಮೊದಲಾದ ಚಿತ್ರಗಳಲ್ಲಿ ಚೆನ್ನಾಗಿ ಹಾಡಿ ಕನ್ನಡದಲ್ಲಿ ಒಳ್ಳೆಯ ಗಾಯಕರಾಗಿರುವುದರಿಂದ ಎಲ್ಲಾ ಚಿತ್ರಗಳಿಗೂ, ಎಲ್ಲಾ ಸಂದರ್ಭದಲ್ಲೂ ಸೋನು ನಿಗಮ್ ಕೈಲಿ ಹಾಡಿಸಿಬಿಡಬೇಕು ಎನ್ನುವ ಹುಚ್ಚು ಚಿತ್ರ ಮಾಡುವವರಲ್ಲಿ ಬಂದಿದೆ ಎನ್ನಿಸುತ್ತದೆ. ಸೋನು ಹಾಡಿದ್ದೆಲ್ಲಾ ಚೆನ್ನಾಗಿರುತ್ತದೆ ಎಂದು ಅವರ ತರ್ಕ. ಈ ಹುಚ್ಚು ಎಲ್ಲಿಯ ತನಕ ಹೋಗಿದೆಯೆಂದರೆ ಕೇಳುವವರಿಗೂ ಸೋನು ನಿಗಮ್ ಹಾಡಿದ್ದೆಲ್ಲಾ ಚೆನ್ನಾಗಿರುತ್ತದೆ ಎನ್ನಿಸುತ್ತಿರುವುದು.&lt;br /&gt;&lt;br /&gt;ಆದರೆ ಚಿತ್ರದ ನಿರ್ದೇಶಕರು, ಸಂಗೀತ ನಿರ್ದೇಶಕರು ಸ್ವಲ್ಪ ಯೋಚಿಸಬೇಕು. ಎಮ್. ಎಸ್. ಸುಬ್ಬುಲಕ್ಷ್ಮಿ ಅದ್ಭುತ ಗಾಯಕರೆಂದು ಅವರನ್ನು ಕರೆದು "ರವಿ ನೀನು ಆಗಸದಿಂದ... ಮರೆಯಾಗಿ ಹೋಗದೆ ನಿಲ್ಲು... ಬಾಳಲ್ಲಿ ಕತ್ತಲೆ ತುಂಬಿ... ನೀ ಓಡದೇ..." ಎಂದು ಹಾಡಿಸಿದ್ದರೆ ಅನಾಹುತವಾಗುತ್ತಿತ್ತು! ಹಾಗೆಯೇ ಕುನಾಲ್ ಗಾಂಜಾವಾಲ ಅವರಿಂದ "ನಾದಮಯ... ಈ ಲೋಕವೆಲ್ಲಾ... ನಾದಮಯ... ಕೊಳಲಿಂದ ಗೋವಿಂದ ಆನಂದ ತಂದಿರಲು... ನದಿಯ ನೀರು... ಮುಗಿಲ ಸಾಲು... ಮುರಳಿಯ ಸ್ವರದಿ ಬೆರೆತು, ಚಲನೆ ಮರೆತು ನಿಂತಿರಲು..." ಎಂದು ಹಾಡಿಸಿದರೆ ಜನ ಕಲ್ಲೆಸೆಯುತ್ತಾರೆ. ಅಷ್ಟು ಪ್ರಮಾಣದ್ದಲ್ಲದಿರಬಹುದು, ಆದರೆ ಸೋನು ನಿಗಮ್ ರಿಂದ "ಬಾ ಮಳೆಯೇ ಬಾ" ಹಾಡಿಸಿರುವುದು ಅಂತಹದೇ ಒಂದು ಮೂರ್ಖತನವೆನ್ನಿಸುತ್ತದೆ ನನಗೆ. ಪ್ರತಿಯೊಬ್ಬ ಗಾಯಕನಿಗೂ ಒಂದೊಂದು ರೀತಿಯ ಹಾಡು ಹಿಡಿಸುತ್ತದೆ. ಅಂತಹ ಹಾಡನ್ನೇ ಅವರಿಂದ ಹಾಡಿಸಿದರೆ ಒಳಿತು. ಸೋನು ನಿಗಮ್ ಬದಲು ಮತ್ಯಾರಾದರೂ ಹೊಸ ಗಾಯಕರನ್ನು ಕರೆಸಿ, ಅಥವಾ ಅಶ್ವಥ್ ಅವರನ್ನೇ ಕರೆಸಿ ಹಾಡಿಸಬಹುದಿತ್ತು. ಮತದಾನ ಚಿತ್ರದಲ್ಲೂ ಭಾವಗೀತೆಯೊಂದಿತ್ತು. ಆದರೆ ಅಲ್ಲಿ ಹಾಡಿನ ಭಾವ ಕೆಡಿಸದೇ ಹಾಡಿಸಿದ್ದರು. ಅದೇ ರೀತಿ ಅಮೆರಿಕಾ ಅಮೆರಿಕಾ ಚಿತ್ರದಲ್ಲೂ "ಯಾವ ಮೋಹನ ಮುರಳಿ ಕರೆಯಿತು" ಹಾಡನ್ನು ದುಃಖದ ಸಂಗತಿಗೆ ಹೊಂದಿಸಿದ್ದರೂ ಹಾಡಿನ ಭಾವ ಕೆಟ್ಟಿರಲಿಲ್ಲ. ಇದನ್ನೆಲ್ಲಾ ನೋಡಿ accident ತಂಡ ಕಲಿಯುವುದು ಬೇಕಾದಷ್ಟಿದೆ.&lt;br /&gt;&lt;br /&gt;ಬಿ. ಆರ್. ಲಕ್ಷಣರಾಯರು ಬರೆದ ಬಾ ಮಳೆಯೇ ಬಾ ಹಾಡನ್ನು ಅಶ್ವಥ್ ಎಂದೋ ಹಾಡಿದ್ದಾರೆ. ಆದರೆ ಅದು ಭಾವಗೀತೆಯಾಗಿ ಮಾತ್ರ ಪ್ರಸಿದ್ಧವಾಗಿದೆಯಷ್ಟೇ. ಅನುರಾಗ ಬಿಂಬಿಸುವ ಪ್ರಸಂಗಕ್ಕೆ ಈ ಹಾಡು ಒಳ್ಳೆಯ ಹಾಡೇ, ಆದರೆ ರಾಗ ಯಾವುದು ಎಂಬುದೂ ಮುಖ್ಯ. Accident ಚಿತ್ರದಲ್ಲಿ ಸಂಗೀತ ನಿರ್ದೇಶಕರಾಗಿ ರಿಕಿ ಕೆಜ್ ಅವರು ಅಷ್ಟೇನೂ ಹೇಳಿಕೊಳ್ಳುವಂಥ ಕೆಲಸ ಮಾಡಿಲ್ಲ. ಆ ಚಿತ್ರದ ಯಾವುದೇ ಹಾಡು ನನಗೆ ಇಷ್ಟವಾಗಿಲ್ಲ. ಹೆಚ್ಚಿನವರಿಗೆ "ಬಾ ಮಳೆಯೆ ಬಾ" ಬಿಟ್ಟರೆ ಮತ್ಯಾವ ಹಾಡೂ ಇಷ್ಟಾವಾಗಿಲ್ಲ.&lt;br /&gt;&lt;br /&gt;ನನ್ನ ಅಭಿಪ್ರಾಯವನ್ನು ಇಲ್ಲಿ ಬರೆದಿದ್ದೀನಿ. ನನ್ನ ಸಮಾಧಾನಕ್ಕೆ, ನನ್ನ ಖುಷಿಗೆ ನಾನಿದನ್ನು ಬರೆದುಕೊಂಡೆ. ಓದುಗರಿಗಾಗಿ - ಸೋನು ನಿಗಮ್ ಮತ್ತು ಅಶ್ವಥ್ ಹಾಡಿರುವ ಹಾಡುಗಳ ಲಿಂಕುಗಳು ಮತ್ತು ಬಿ. ಆರ್. ಲಕ್ಷ್ಮಣರಾಯರು ಬರೆದಿರುವ ಪೂರ್ತಿ ಸಾಹಿತ್ಯವೂ ಇಲ್ಲಿದೆ (&lt;a href="http://www.wikiupload.com/download_page.php?id=28508"&gt;ಅಶ್ವಥ್ ಹಾಡಿರುವುದು&lt;/a&gt; [mp3] ಮತ್ತು &lt;a href="http://www.kannadaaudio.com/Songs/Moviewise/A/Accident/Baa.ram"&gt;ಸೋನು ಹಾಡಿರುವುದು&lt;/a&gt; - ಎರಡರಲ್ಲೂ ಪೂರ್ತಿ ಸಾಹಿತ್ಯ ಬಳಸಿಲ್ಲ); ನಿಮ್ಮ ಅಭಿಪ್ರಾಯ ತಿಳಿಸಬೇಕೆಂದರೆ ಒಂದು ಕಮೆಂಟ್ ಮಾಡಿ ತಿಳಿಸಿ.&lt;br /&gt;&lt;br /&gt;ಅರುಣ ತನ್ನ ಬ್ಲಾಗಿನಲ್ಲಿ ಕೂಡ ಇದರ ಬಗ್ಗೆ &lt;a href="http://parisarapremi.blogspot.com/2008/04/blog-post_16.html"&gt;ಬರೆದಿದ್ದಾನೆ&lt;/a&gt;. ಕೊನೆಯ ಕ್ಷಣದಲ್ಲಿ ಅದನ್ನೋದುವಾಗ ಈ ಹಾಡನ್ನು ಮೈಸೂರು ಅನಂತಸ್ವಾಮಿಯವರೂ ಹಾಡಿರುವುದು ತಿಳಿಯಿತು. ಅದರ ಲಿಂಕ್ &lt;a href="http://www.kannadaaudio.com/Songs/Bhaavageethe/HrudayavaNinageNeedide/BaaMaleyeBaa.ram"&gt;ಇಲ್ಲಿದೆ&lt;/a&gt;.&lt;br /&gt;&lt;br /&gt;&lt;strong&gt;ಬಿ. ಆರ್. ಲಕ್ಷಣರಾಯರು ಬರೆದಿರುವ ಪೂರ್ತಿ ಸಾಹಿತ್ಯ&lt;/strong&gt;&lt;br /&gt;&lt;br /&gt;ಬಾ, ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು&lt;br /&gt;ನಲ್ಲೆ ಬರಲಾಗದಂತೆ&lt;br /&gt;ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ&lt;br /&gt;ಹಿಂತಿರುಗಿ ಹೋಗದಂತೆ&lt;br /&gt;ನಲ್ಲೆ, ಹಿಂತಿರುಗಿ ಹೋಗ ದಂತೆ&lt;br /&gt;&lt;br /&gt;ಓಡು, ಕಾಲವೇ, ಓಡು, ಬೇಗ ಕವಿಯಲಿ ಇರುಳು&lt;br /&gt;ಕಾದಿಹಳು ಅಭಿಸಾರಿಕೆ&lt;br /&gt;ಅವಳಿಲ್ಲಿ ಬಂದೊಡನೆ ನಿಲ್ಲು, ಕಾಲವೇ ನಿಲ್ಲು&lt;br /&gt;ತೆಕ್ಕೆ ಸಡಿಲಾಗದಂತೆ&lt;br /&gt;ನಮ್ಮ ತೆಕ್ಕೆ ಸಡಿಲಾಗದಂತೆ&lt;br /&gt;&lt;br /&gt;ಬೀಸು, ಗಾಳಿಯೇ, ಬೀಸು, ನನ್ನದೆಯ ಆಸೆಗಳ&lt;br /&gt;ನಲ್ಲೆ ಹೃದಯಕೆ ತಲುಪಿಸು&lt;br /&gt;ಹಾಸು, ಹೂಗಳ ಹಾಸು, ಸಖಿ ಬರುವ ದಾರಿಯಲಿ&lt;br /&gt;ಕಲ್ಲುಗಳ ತಾಗದಂತೆ&lt;br /&gt;ಪಾದ ಕಲ್ಲುಗಳ ತಾಗದಂತೆ&lt;br /&gt;&lt;br /&gt;ಬೀರು, ದೀಪವೇ, ಬೀರು, ನಿನ್ನ ಹೊಂಬಳಕಲ್ಲಿ&lt;br /&gt;ನೋಡುವೆನು ನಲ್ಲೆ ರೂಪ&lt;br /&gt;ಆರು, ಬೇಗನೆ ಆರು, ಶೃಂಗಾರ ಶಯ್ಯೆಯಲಿ&lt;br /&gt;ನಾಚಿ ನೀರಾಗದಂತೆ&lt;br /&gt;ನಲ್ಲೆ ನಾಚಿ ನೀರಾಗದಂತೆ&lt;br /&gt;&lt;br /&gt;ಹೋಗು, ನಿದ್ದೆಯೇ, ಹೋಗು, ನಿನಗಿಲ್ಲಿ ಎಡೆಯಿಲ್ಲಿ&lt;br /&gt;ಪ್ರೇಮಿಗಳ ಸೀಮೆಯಲ್ಲಿ;&lt;br /&gt;ನಾವೀಗ ಅನಿಮಿಷರು, ನಮ್ಮ ಈ ಮಿಲನ&lt;br /&gt;ಗಂಧರ್ವ ವೈಭೋಗದಂತೆ&lt;br /&gt;ಮಿಲನ, ಗಂಧರ್ವ ವೈಭೋಗದಂತೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-8779707760083568517?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/8779707760083568517/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=8779707760083568517' title='3 Comments'/><link rel='edit' type='application/atom+xml' href='http://www.blogger.com/feeds/34886019/posts/default/8779707760083568517'/><link rel='self' type='application/atom+xml' href='http://www.blogger.com/feeds/34886019/posts/default/8779707760083568517'/><link rel='alternate' type='text/html' href='http://manasinaputagalanaduve.blogspot.com/2008/04/accident.html' title='&quot;ಬಾ ಮಳೆಯೇ ಬಾ&quot; ಗೆ &apos;accident&apos; ಆಗೋಗಿದೆ!'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>3</thr:total></entry><entry><id>tag:blogger.com,1999:blog-34886019.post-1495717675442807983</id><published>2008-04-14T01:00:00.004+05:30</published><updated>2008-04-14T01:14:43.595+05:30</updated><title type='text'>ಸಂಸ್ಕೃತಾಧೀತಿನಃ!</title><content type='html'>ಆಸ್ಟ್ರೇಲಿಯಾದವರೊಬ್ಬರು ಸಂಸ್ಕೃತದಲ್ಲಿ ಮಾತನಾಡುತ್ತಿರುವುದನ್ನು ನೋಡಿ, ಕೇಳಿ!&lt;br /&gt;&lt;br /&gt;&lt;br /&gt;&lt;object height="355" width="425"&gt;&lt;param name="movie" value="http://www.youtube.com/v/rvI_yTVdSeQ&amp;amp;hl=en"&gt;&lt;param name="wmode" value="transparent"&gt;&lt;embed src="http://www.youtube.com/v/rvI_yTVdSeQ&amp;amp;hl=en" type="application/x-shockwave-flash" wmode="transparent" height="355" width="425"&gt;&lt;/embed&gt;&lt;/object&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-1495717675442807983?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/1495717675442807983/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=1495717675442807983' title='4 Comments'/><link rel='edit' type='application/atom+xml' href='http://www.blogger.com/feeds/34886019/posts/default/1495717675442807983'/><link rel='self' type='application/atom+xml' href='http://www.blogger.com/feeds/34886019/posts/default/1495717675442807983'/><link rel='alternate' type='text/html' href='http://manasinaputagalanaduve.blogspot.com/2008/04/blog-post_14.html' title='ಸಂಸ್ಕೃತಾಧೀತಿನಃ!'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>4</thr:total></entry><entry><id>tag:blogger.com,1999:blog-34886019.post-6498475203021473931</id><published>2008-04-11T17:45:00.001+05:30</published><updated>2008-04-11T17:58:52.959+05:30</updated><title type='text'>ವೈದ್ಯೋ ನಾರಾಯಣೋ ಹರಿಃ?</title><content type='html'>"ಔಷಧಂ ಜಾಹ್ನವೀ ತೋಯಂ, ವೈದ್ಯೋ ನಾರಾಯಣೋ ಹರಿಃ" ಎಂದು ಸಂಸ್ಕೃತದಲ್ಲಿ ಒಂದು ಸಾಲು ಇದೆ. "ಔಷಧ ಗಂಗಾ ಜಲ, ವೈದ್ಯನು ನಾರಾಯಣ" ಎಂದು ಇದರ ಅರ್ಥ. ಎಷ್ಟೋ ಜನ ಔಷಧಿ ತೆಗೆದುಕೊಳ್ಳುವಾಗ ಈ ಸಾಲನ್ನು ಹೇಳುವುದು ಕೇಳಿದ್ದೀನಿ. ನಾನೂ ಹೇಳಿದ್ದೀನಿ. ಆದರೆ ಈ ಮಾತುಗಳು ಇಂದು ಎಷ್ಟು ಸತ್ಯ?&lt;br /&gt;&lt;br /&gt;ಒಂದು ಕಾಲದಲ್ಲಿ ಗಂಗಾ ನದಿಯಲ್ಲಿ ಒಮ್ಮೆ ಮುಳುಗಿ ಎದ್ದರೆ ಎಷ್ಟೆಷ್ಟೋ ರೋಗಗಳು ಗುಣವಾಗುತ್ತಿದ್ದವೆಂದು ಹಿರಿಯರನ್ನು ಕೇಳಿದರೆ ತಿಳಿಯುತ್ತದೆ. ಎಷ್ಟೋ ಜನ ಹಿರಿಯರು ಹೀಗೆ ಹೇಳುವುದು ನೋಡಿದರೆ ಗಂಗೆಯ ನೀರಿಗೆ ಅಂತಹ ಔಷಧೀಯ ಗುಣವಿದ್ದದ್ದು ಸತ್ಯವಿರಲೇಬೇಕು. ಆದರೆ ಇಂದು? ಕಾರ್ಖಾನೆಗಳ ತ್ಯಾಜ್ಯ, ನೂರಾರು ಬಗೆಯ ಸಾಬೂನು, ಶಾಂಪೂಗಳಲ್ಲಿರುವ ಪರಿಸರಕ್ಕೆ ಹಾನಿಕಾರಕ ರಾಸಾಯನಿಕ ವಸ್ತುಗಳು, ಜೊತೆಗೆ ಪ್ಲಾಸ್ಟಿಕ್ ನಂತಹ 'ಅಮರ' ವಸ್ತುಗಳು ಸೇರಿಸಿದ ತ್ಯಾಜ್ಯ ನೀರನ್ನು ನದಿಗಳಿಗೆ ಶುದ್ಧೀಕರಿಸದೇ ಬಿಡುವುದರಿಂದ ಗಂಗಾ ನದಿಯ ಜೊತೆ ಭಾರತದ ಎಲ್ಲಾ ನದಿಗಳು ಗಬ್ಬೆದ್ದು ಹೋಗುತ್ತಿವೆ. ಪಶ್ಚಿಮ ಘಟ್ಟದಲ್ಲಿ ಆಗ ತಾನೆ ಹುಟ್ಟಿ ಬರುವ ತೊರೆಯ ಅಮಲತೆಗೂ, ಮುಂದೆ ನೂರಾರು ತೊರೆಗಳನ್ನು ಸೇರಿ ಸಾಗರವನ್ನು ಸೇರಿಕೊಳ್ಳುವ ಕೊಳಕು ತುಂಬಿದ ಅದೇ ತೊರೆಗೂ ಎಷ್ಟು ಅಂತರ! ಹೀಗಿರುವಾಗ ಗಂಗೆಯ ನೀರನ್ನು ಔಷಧ ಎನ್ನುವುದು ಈಗ ಬಹಳ ಕಷ್ಟ.&lt;br /&gt;&lt;br /&gt;ಇನ್ನು ವೈದ್ಯನನ್ನು ದೇವರು ಎನ್ನುವುದು! ಇಂದಿನ ಸ್ಥಿತಿಯಲ್ಲಿ ಇದು ಅಪರಾಧ ಎನ್ನುವುದು ಸೂಕ್ತ ಎನ್ನಿಸುತ್ತದೆ. ನಾನೂ ಎಷ್ಟೋ ವೈದ್ಯರನ್ನು ನೋಡಿದ್ದೀನಿ. ದೇವರು ಎನ್ನಿಸಿಕೊಳ್ಳುವಷ್ಟು ಸರಿಯಾಗಿ ರೋಗಗಳನ್ನು ಗುರುತಿಸಿ ರಾಮಬಾಣದಂತಹ ಔಷಧಿಗಳನ್ನು ಕೊಡುವವರನ್ನೂ ನೋಡಿದ್ದೀನಿ. ಆದರೆ ಅಂತಹ ವೈದ್ಯರು ಒಬ್ಬರಾದಮೇಲೊಬ್ಬರು ನಾರಾಯಣನಲ್ಲಿ ಲೀನವಾಗುತ್ತಿದ್ದಾರೇ ಹೊರತು ಹೊಸ 'ವೈದ್ಯನಾರಾಯಣ'ರು ಹುಟ್ಟಿ ಬರುತ್ತಿಲ್ಲ.&lt;br /&gt;&lt;br /&gt;ಮೊನ್ನೆ ಒಬ್ಬ ವೈದ್ಯರನ್ನು ನೋಡಿದೆ. ಏಟು ಬಿದ್ದಾಗ ರಕ್ತ ಕಟ್ಟಿ ಕೆಂಪಾಗಿದ್ದಕ್ಕೆ ಟೆಟನಸ್ ಇಂಜೆಕ್ಷನ್ ಕೊಡಲು ಹೊರಟಿದ್ದರು. "ರಕ್ತ ಬರದಿದ್ದರೆ ಟೆಟನಸ್ ಇಂಜೆಕ್ಷನ್ ಬೇಡ ಅಲ್ವಾ ಡಾಕ್ಟ್ರೇ? ಇದು ಬರೀ ರಕ್ತ ಕಟ್ಟಿರೋದು ಅಷ್ಟೇ" ಎಂದು ಹೇಳಿದ್ದಕ್ಕೆ ಹತ್ತು ನಿಮಿಷ ಯೋಚಿಸಿ "ಆದರೂ ತೊಗೊಂಡುಬಿಡೋದು ಒಳ್ಳೇದು" ಎಂದರು. ಆವರಿಗೆ ಕೇವಲ ರಕ್ತ ಕಟ್ಟಿದ್ದರೆ ಟೆಟನಸ್ ಇಂಜೆಕ್ಷನ್ ಬೇಡ ಎಂದು ವೈದ್ಯ ಪದವಿಯಲ್ಲಿ ಓದಿದ್ದ ನೆನಪಿದೆ. ಆದರೆ ಖಡಾಖಂಡಿತವಾಗಿ ಬೇಡ ಎಂದು ಹೇಳಲು ಭಯ. "ಯಾಕೆ ರಿಸ್ಕು? ಚುಚ್ಚಿಬಿಡೋಣ!" ಎನ್ನುವ ಮನೋಭಾವ. ಏನೇ ಆದರೂ ಅವರು ಚುಚ್ಚುವವರು. ಚುಚ್ಚಿಸಿಕೊಳ್ಳುವವರು ಅವರಲ್ಲವಲ್ಲ! ಬರಿಯ ಚುಚ್ಚುವ ಕೆಲಸಕ್ಕೆ ವೈದ್ಯರೇ ಬೇಕಾ?&lt;br /&gt;&lt;br /&gt;ಕೆಲವು ದಿನಗಳ ಹಿಂದೆ ಗೆಳೆಯನೊಬ್ಬನಿಗೆ ಕಾಲಿಗೆ ಏಟಾಗಿತ್ತು. ಯಾರೋ ಭಾರೀ ವೈದ್ಯರು ಅದಕ್ಕೆ ಹಿಂದೆ ಮುಂದೆ ನೋಡದೇ ಕಾಸ್ಟ್ ಹಾಕಿ ಮೂರು ವಾರ ಅಲ್ಲಾಡಬಾರದು ಎಂದು ಹೇಳಿಬಿಟ್ಟಿದ್ದರು. ನನ್ನ ಗೆಳೆಯನಿಗೆ ವೈದ್ಯರು ಹೇಳಿದ್ದರ ಬಗ್ಗೆ ಸಂಶಯವುಂಟಾಗಿ ಒಂದು ವಾರದ ನಂತರ ಮತ್ತೊಬ್ಬ ವೈದ್ಯರನ್ನು ಕಂಡಾಗ ಆ ಕಾಸ್ಟನ್ನು ತೆಗೆದು "ಈಗ ನಡಿ..." ಎಂದರಂತೆ. ನೋಡಿದರೆ ನಡೆಯಲು ಸಾಧ್ಯ - ಎಂದಿನಂತೆ! ಆ ಭಾರೀ ವೈದ್ಯರಿಗೆ ಯೋಚಿಸಲು ಸಮಯವಿಲ್ಲ ಪಾಪ. ಅಥವಾ ಸೋಮಾರಿತನ. "ಮೂರು ವಾರ ಕೂಡಿಸಿಬಿಟ್ಟರೆ ಹೇಗೂ ಸರಿಹೋಗತ್ತೆ" ಎನ್ನುವ ಮನೋಭಾವ. ಓಡಾಡುವುದಿರಲಿ, ಪಾಯಿಖಾನೆಗೆ ಹೋಗಲೂ ಮೂರು ವಾರ ಕಷ್ಟ ಪಡಬೇಕಾದ ರೋಗಿಯ ಸ್ಥಿತಿ ಅವರಿಗೆ ಹೇಗೆ ಅರ್ಥವಾಗಬೇಕು?&lt;br /&gt;&lt;br /&gt;ಮತ್ತೊಂದು ಘಟನೆ. ಎರಡು ವರ್ಷದ ಹಿಂದಿನ ಮಾತು. ನಾನು ಮೂರು ದಿನದಿಂದ ಜ್ವರ ಬಂದು ಮಲಗಿಬಿಟ್ಟಿದ್ದೆ. ಇಬ್ಬರು ವೈದ್ಯರನ್ನು ಕಂಡದ್ದಾಯಿತು. ಜ್ವರ ಗುಣವಾಗುವ ಹಾಗೆ ಕಾಣಲಿಲ್ಲ. ಈಗ ಮೂರನೆಯ ವೈದ್ಯರನ್ನು ಕಾಣುವ ಸರದಿ. ಐದು ನಿಮಿಷದಲ್ಲಿ ನನ್ನನ್ನು ಹದಿನೈದಿಪ್ಪತ್ತು ಪ್ರಶ್ನೆ ಕೇಳಿ ಅದೆಂಥದ್ದೋ ರೋಗ ನನಗೆ ಎಂದು ಹೇಳಿದರು. ರೋಗದ ಲಕ್ಷಣ ಹೇಳಲಿಲ್ಲ. ರೋಗ ಹೇಗೆ ಬರುತ್ತದೆ ಎಂದು ಹೇಳಲಿಲ್ಲ. ರೋಗದ ಹೆಸರು ಮಾತ್ರ 'ವೈದ್ಯಕೀಯ' ಭಾಷೆಯಲ್ಲಿ ಹೇಳಿದರು ಅಷ್ಟೇ. ನನಗೆ ಏನೂ ಅರ್ಥವಾಗಲಿಲ್ಲ. ಒಂದು ಮಾತ್ರೆ ಬರೆದುಕೊಟ್ಟರು. ಆ ಮಾತ್ರೆ ಎರಡು ಬಾರಿ ತೆಗೆದುಕೊಂಡೆ. ಮೂರನೆಯ ಬಾರಿ ತೆಗೆದುಕೊಳ್ಳುವಷ್ಟರಲ್ಲಿ ಜ್ವರ ವಿಪರೀತ ಹೆಚ್ಚಾಗಿ ಆಸ್ಪತ್ರೆಯಲ್ಲಿ ಪ್ರಜ್ಞೆಯಿಲ್ಲದೇ ಬಿದ್ದಿದ್ದೆ. ಆಸ್ಪತ್ರೆಗೆ ಹೋದಾಗ ತಿಳಿದ ವಿಷಯವೇನೆಂದರೆ ನನಗಿದ್ದ ರೋಗವೇ ಬೇರೆ, ಹಿಂದಿನ ದಿನವಷ್ಟೇ ವೈದ್ಯ ಮಹಾಶಯರು ಗುರುತಿಸಿದ ರೋಗವೇ ಬೇರೆ! ಕಷ್ಟ ಅನುಭವಿಸಿದ್ದು ನಾನು. ವೈದ್ಯರಿಗೇನಾಗಬೇಕು? ಮೋಸವಿಲ್ಲದೇ ದುಡ್ಡಂತೂ ಅವರ ಕಿಸೆ ಸೇರಿತಲ್ಲ! ವೈದ್ಯನ ಚೆಲ್ಲಾಟ ರೋಗಿಗೆ ಪ್ರಾಣಸಂಕಟ!&lt;br /&gt;&lt;br /&gt;ಹೀಗೇ ಬರಿಯುತ್ತಾ ಹೋದರೆ ದಿನಗಟ್ಟಲೆ ಬರಿಯಬೇಕಾಗುತ್ತದೆ. ಅಷ್ಟರಲ್ಲಿ ಮತ್ತೊಂದಷ್ಟು ಘಟನೆಗಳು ಸಿಕ್ಕಿರುತ್ತವೆ. ಇಂದಿನ ಯುವ ವೈದ್ಯರೆಲ್ಲಾ ಬುದ್ಧಿ ಉಪಯೋಗಿಸುವುದೇ ಕಡಿಮೆ. ಯಾರಾದರೂ ರೋಗ ಎಂದು ಬಂದರೆ ರಕ್ತ ಪರೀಕ್ಷೆ ಅಥವಾ ಇನ್ಯಾವುದೋ ಪರೀಕ್ಷೆ ಹೇಳಿ ಆ ಪರೀಕ್ಷೆಯ ವರದಿ ನೋಡಿ ರೋಗ ಗುರುತಿಸುತ್ತಾರಷ್ಟೇ. ಅದಕ್ಕೆ ತಕ್ಕ ಔಷಧಿ ಬರೆದುಕೊಟ್ಟರೆ ಅವರ ಕೆಲಸ ಮುಗಿಯಿತು! ಈ ಸ್ಥಿತಿಗೆ ಕಾರಣ ತಮ್ಮ ಮಕ್ಕಳನ್ನು "ಡಾಕ್ಟರ್ ಅಥವಾ ಇಂಜಿನಿಯರ್ ಮಾಡಿಬಿಡಬೇಕು" ಎನ್ನುವ ಪೋಷಕರ ಹುಚ್ಚು. ಈ ಹುಚ್ಚಿಗೆ ತಲೆಬಾಗಿ ಅಥವಾ ಸಮಾಜಕ್ಕೆ ಹೆದರಿ ಆಸಕ್ತಿಯಿಲ್ಲದಿದ್ದರೂ ವೈದ್ಯ ವೃತ್ತಿ ಆರಿಸಿಕೊಂಡು ಹೇಗೋ ಪದವಿ ಮುಗಿಸಿ ವೈದ್ಯರೆನ್ನಿಸಿಕೊಂಡುಬಿಡುತ್ತಾರೆ. ಇಂತಹ ವೈದ್ಯರೇ ಹೆಚ್ಚಾಗಿಬಿಟ್ಟಿದ್ದಾರೆ. ಇನ್ನುಳಿದ ವೈದ್ಯರಲ್ಲಿ ಕೆಲವರು ಏನೂ ರೋಗವಿಲ್ಲ ಎಂದು ಗೊತ್ತಿದ್ದರೂ ದುಡ್ಡು ಮಾಡಲು ಇರುವ ಸಣ್ಣ ವಿಷಯಗಳನ್ನು ದೊಡ್ಡದಾಗಿ ವರ್ಣಿಸಿ ರೋಗಿಯಲ್ಲಿ ಭಯ ಹುಟ್ಟಿಸಿ ಏನಾದರೂ ಔಷಧಿ ಕೊಟ್ಟು ಕಳುಹಿಸುವುದು. ಆ ಔಷಧಿ ಏನಾದರೂ ಹೆಚ್ಚು-ಕಡಿಮೆ ಮಾಡಿದರೆ ಮತ್ತೆ ರೋಗಿ ವೈದ್ಯರ ಬಳಿ ಬರುತ್ತಾನೆ. ವೈದ್ಯನಿಗೆ ಮತ್ತಷ್ಟು ಔಷಧಿ ಕೊಟ್ಟು ಮತ್ತಷ್ಟು ದುಡ್ಡು ಮಾಡುವ ಅವಕಾಶ! ವೈದ್ಯನಿಗಿರಬೇಕಾದ ಪ್ರಮುಖ ಗುಣ ಎಂದರೆ ರೋಗಿಗೆ ಧೈರ್ಯ ಹೇಳುವುದು. ಧೈರ್ಯ ಹೇಳುವುದರ ಬದಲು ಭಯ ಹುಟ್ಟಿಸುವ ವೈದ್ಯರು ಬರುತ್ತಿರುವುದು ವಿಪರ್ಯಾಸ.&lt;br /&gt;&lt;br /&gt;ಎಲ್ಲ ವೈದ್ಯರೂ ಹೀಗೇ ಎಂದು ಹೇಳುವುದಿಲ್ಲ. ಇಂದೂ ಒಳ್ಳೆಯ ವೈದ್ಯರಿದ್ದಾರೆ. ಆದರೆ ಬಹಳ ಕಡಿಮೆ. ಅಂತಹ ಒಳ್ಳೆಯ ವೈದ್ಯರಿಗೆ ನನ್ನ ಸಕಲ ಗೌರವವಿದೆ. ಆದರೆ ಯುವ ವೈದ್ಯರಲ್ಲಿ ಹೆಚ್ಚಿನವರು ಒಳ್ಳೆಯ ವೈದ್ಯರೆನ್ನಿಸಿಕೊಳ್ಳಲು ಯೋಗ್ಯವಾಗಿರುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಇನ್ನು ಕೆಲವು ಒಳ್ಳಯ ವೈದ್ಯರು ತಮಗೆ ತಿಳಿದ ವಿದ್ಯೆಯನ್ನು ಸಾಯುವ ತನಕ ತಮ್ಮಲ್ಲೇ ಇಟ್ಟುಕೊಂಡು ಕೊನೆಗೊಂದು ದಿನ ಯಾರಿಗೂ ಆ ವಿದ್ಯೆಯನ್ನು ಹೇಳಿಕೊಡದೇ ಕಣ್ಮುಚ್ಚುತ್ತಾರೆ. ಪ್ರಪಂಚ ಒಳ್ಳೆಯ ವೈದ್ಯನೊಬ್ಬನನ್ನು ಕಳೆದುಕೊಳ್ಳುತ್ತದೆ. ಅವರ ಬದಲಾಗಿ ಮತ್ತೊಬ್ಬ ಒಳ್ಳೆಯ ವೈದ್ಯ ಹುಟ್ಟಿಬರುವುದೇ ಇಲ್ಲ.&lt;br /&gt;&lt;br /&gt;"ವೈದ್ಯೋ ನಾರಾಯಣೋ ಹರಿಃ" - ಈ ಸಾಲು ಸತ್ಯವೋ ಸುಳ್ಳೋ ಎಂದು ಮುಂದಿನ ಪೀಳಿಗೆಯ ವೈದ್ಯರು ನಿರ್ಧರಿಸುತ್ತಾರೆ. ನನಗಂತೂ ಇದನ್ನೆಲ್ಲಾ ನೋಡಿದಾಗ ಒಂದು ದಿನ ಒಳ್ಳೆಯ ವೈದ್ಯರಿಗೆ ಬರ ಬಂದಾಗ ವೈದ್ಯಶಾಸ್ತ್ರದ ಬಗ್ಗೆ ಜನರಿಗೆ ನಂಬಿಕೆಯೇ ಹೋಗಿಬಿಡುತ್ತದೆ ಎನ್ನಿಸುತ್ತದೆ. ಹಾಗಾಗದಿರಲಿ ಎಂದೂ, ನಾರಾಯಣನ ಅಂಶ ವೈದ್ಯರಲ್ಲಿ ಮುಂದೆಯೂ ಇರುವಂತಾಗಲಿ ಎಂದು ನಾರಾಯಣನಲ್ಲಿ ಕೇಳಿಕೊಳ್ಳುತ್ತೇನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-6498475203021473931?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/6498475203021473931/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=6498475203021473931' title='11 Comments'/><link rel='edit' type='application/atom+xml' href='http://www.blogger.com/feeds/34886019/posts/default/6498475203021473931'/><link rel='self' type='application/atom+xml' href='http://www.blogger.com/feeds/34886019/posts/default/6498475203021473931'/><link rel='alternate' type='text/html' href='http://manasinaputagalanaduve.blogspot.com/2008/04/blog-post_11.html' title='ವೈದ್ಯೋ ನಾರಾಯಣೋ ಹರಿಃ?'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>11</thr:total></entry><entry><id>tag:blogger.com,1999:blog-34886019.post-3354068767275884653</id><published>2008-04-04T19:03:00.007+05:30</published><updated>2008-04-04T22:21:15.788+05:30</updated><title type='text'>ಮನಸನಪ್ಪಿದ ಪ್ರವಾಸದ ನೆನಪುಗಳು</title><content type='html'>ಬೇಸಿಗೆಯಲ್ಲೂ ಹೆಚ್ಚು-ಕಡಿಮೆ ಎರಡು ವಾರ ಮಿಂಚು-ಗುಡುಗುಗಳ ರಾಗ-ತಾಳಗಳೊಡನೆ ಮೂಡಿಬಂದ ಮಳೆಯ ಹಾಡಿನಲ್ಲಿ ನಗರವಾಸಿಗೆಳಿಗೆ ಮತ್ತು ನಗರದ ರಸ್ತೆಗಳಿಗೆ ಅಪಸ್ವರ ಮಾತ್ರವೇ ಕೇಳಿಸಿದರೆ ಅದೇ ಮಳೆಯ ಹಾಡು ಮಲೆನಾಡಿನ ಮಲೆಗಳ ಕಿವಿಗೆ ಇಂಪಾಗಿತ್ತು. ಬೋಳು-ಬೋಳಾಗಿರಬೇಕಾಗಿದ್ದ ಬೆಟ್ಟಗುಟ್ಟಗಳ ಮೇಲೂ ಹಸಿರು ಹರಿದಿತ್ತು. ಕೆನ್ನೀರ್ಭರಿತ ಝರಿಗಳು ಉಕ್ಕಿ ಹರಿಯುತ್ತಿದ್ದವು. ಜಿಗಣೆ-ಇಂಬಳಗಳಿಗೆ ಅಕಾಲದಲ್ಲಿ ಜೀವ ಬಂದಿತ್ತು. ರುದ್ರನಿಗೇ ಬೆರಗಾಗುವಂತಿತ್ತು ಜಲಪಾತಗಳ ನರ್ತನೆ. ಮಲೆನಾಡು ಮೇಘಗಳ ಬೀಡಾಗಿತ್ತು. ನನ್ನಂತಹ ಪ್ರಕೃತಿಪ್ರೇಮಿಗಳಿಗೆ ಅದು ಸಂತಸದ ಅರಮನೆಯಾಗಿತ್ತು.&lt;br /&gt;&lt;br /&gt;ಮಾರ್ಚ್ ೨೨ ಮತ್ತು ೨೩ ಬೈಕಿನಲ್ಲಿ ಎಲ್ಲಿಗಾದರೂ ಹೋಗಿ ಚಾರಣ ನಂತರ ಮಾಡುವ ವಿಚಾರವಾಗಿ ನಾನು ಮತ್ತು ಶ್ರೀನಿವಾಸ ಎಷ್ಟೋ ದಿನದಿಂದ ಯೋಚಿಸುತ್ತಿದ್ದೆವು. ಮಾರ್ಚ್ ೨೧ ರಾತ್ರಿಯ ತನಕ ಕಾದರೂ ಮಳೆ ನಿಲ್ಲಲಿಲ್ಲ. ಮಳೆಯಲ್ಲಿ ಬೈಕು ಸವಾರಿ ಸೂಕ್ತವಲ್ಲ ಎಂದುಕೊಂಡು ಬಸ್ಸಿನಲ್ಲೇ ಎಲ್ಲಾದರೂ ಹೋಗೋಣ ಎಂದು ನಿರ್ಧರಿಸಿದೆವು. ಎಲ್ಲಿಗೆ ಹೋಗುವುದೆಂದು ಯೋಚಿಸಿದಾಗ "ಚಾರಣವಿಲ್ಲದಿದ್ದರೂ ಪರವಾಗಿಲ್ಲ, ಒಳ್ಳೆಯ ಜಾಗಗಳು ಯಾವುದಾದರೂ ಇದ್ದರೆ ಹೇಳು ಹೋಗಿ ಬರೋಣ" ಎಂದು ಹೇಳಿದೆ. ತಕ್ಷಣ ಶ್ರೀನಿವಾಸನಿಗೆ ಹೊಳೆದದ್ದು ಶೃಂಗೇರಿ-ಹೊರನಾಡು-ಕಳಸ. ನಾನು ಮೂರೂ ಜಾಗಗಳನ್ನು ನೋಡಿರಲಿಲ್ಲ. ಅವನು ನೋಡಿದ್ದರೂ ಮತ್ತೆ ಹೋಗಬೇಕೆನ್ನುತ್ತಿದ್ದ. ಜಾಗಗಳ ಆಯ್ಕೆ ಮುಗಿಯಿತು. ಮಾರ್ಚ್ ೨೨ ರಂದು ಬೆಳಿಗ್ಗೆ ಹತ್ತಕ್ಕೆ ಇಬ್ಬರೂ ಕಾರ್ಕಳದಲ್ಲಿ ಭೇಟಿಯಾಗಿ ಬಸ್ ನಿಲ್ದಾಣದಲ್ಲೇ ತಿಂಡಿ ತಿಂದು ಸ್ವಲ್ಪ ತಡವಾಗಿ ಬಂದ ಕಳಸದ ಬಸ್ಸಿಗೆ ಹತ್ತಿ ಕುಳಿತೆವು.&lt;br /&gt;&lt;br /&gt;ಬಜಗೋಳಿ ತಲುಪುವ ತನಕ ಬಸ್ಸಿನಲ್ಲಿ ಹಾಕಿದ್ದ ಎಫ್-ಎಮ್ ರೇಡಿಯೋದಲ್ಲಿ ಬರುತ್ತಿದ್ದ ಹಾಡುಗಳ ಸಾಹಿತ್ಯದ ಮೇಲೆ ಚರ್ಚೆ ನಡೆಸುತ್ತಿದ್ದೆವು. ಬಜಗೋಳಿ ದಾಟಿ ಕುದುರೆಮುಖ ರಾಷ್ಟೀಯ ಉದ್ಯಾನವನದೊಳಗೆ ನುಗ್ಗಿದ ಕೂಡಲೇ ಮಾತು ನಿಲ್ಲಿಸಿ ಕಣ್ಣಿಗೆ ಕೆಲಸ ಕೊಟ್ಟೆವು. ಆ ಘಾಟಿಯಲ್ಲಿ ನಾನೆಂದೂ ಪ್ರಯಾಣಿಸಿರಲಿಲ್ಲ. ಹಾಗೊಮ್ಮೆ ಹೀಗೊಮ್ಮೆ ತಿರುಗುತ್ತಲೇ ಸಾಗುವ ರಸ್ತೆಯ ಮೇಲೆ ನಮ್ಮ ಬಸ್ಸು ಚಲಿಸುತ್ತಿತ್ತು. ರಸ್ತೆಯ ಎರಡು ಬದಿಯಲ್ಲೂ ಹಸಿರೇ ತುಂಬಿದ ಜಗತ್ತು! ಅಲ್ಲಲ್ಲಿ ಒಂದೊಂದು ಹೆಸರಿಲ್ಲದ ಜಲಪಾತಗಳು, ಮಧ್ಯದಲ್ಲೊಂದಷ್ಟು ತೊರೆಗಳು. ಅಷ್ಟೇ! ಮತ್ತೇನೂ ಇಲ್ಲ! ಸುಮಾರು ಎರಡು ಘಂಟೆ ಕಾಲ ಇದೇ ದೃಶ್ಯಗಳನ್ನು ನೋಡಿಕೊಂಡು ಹೋದೆವು. ದಾರಿಯುದ್ದಕ್ಕೂ ಪ್ರಕೃತಿಸೌಂದರ್ಯವನ್ನು ಹೊಗಳಲು ನನಗೆ ಪದಗಳು ಸಿಗಲಿಲ್ಲ! ಈಗ ಎರಡು ಘಂಟೆಯಷ್ಟು ಕಾಲ ನೋಡಿದ ಪ್ರಕೃತಿಸೌಂದರ್ಯವನ್ನು ವರ್ಣಿಸಿ ಎರಡು ವಾಕ್ಯ ಬರೆಯಲು ಆಗುತ್ತಿಲ್ಲ! ಆದರೆ ಆ ಸೌಂದರ್ಯ ಎಷ್ಟು ಉತ್ಕೃಷ್ಟ ಎಂದು ಅದನ್ನು ಕಂಡ ನನ್ನ ಕಣ್ಣಿಗೆ ಗೊತ್ತು, ಜಲಪಾತ ಮತ್ತು ತೊರೆಗಳ ಶಬ್ದ ಕೇಳಿದ ನನ್ನ ಕಿವಿಗೆ ಗೊತ್ತು, ಕಿಟಕಿಯಿಂದ ಒಳನುಗ್ಗುತ್ತಿದ್ದ ತಂಗಾಳಿಯನ್ನು ಅನುಭವಿಸಿದ ಮತ್ತು ಮಳೆಹನಿಗಳನ್ನು ಸ್ಪರ್ಶಿಸಿದ ನನ್ನ ಚರ್ಮಕ್ಕೆ ಗೊತ್ತು ಆ ಸೌಂದರ್ಯ ಎಂಥದ್ದು ಎಂದು. ಕುದುರೆಮುಖದಲ್ಲಿ ಇಳಿದು ಬಿಸಿ ಬಿಸಿ ಚಹಾ ಕುಡಿದು ಮತ್ತೆ ಬಸ್ಸು ಹತ್ತಿ ಕಳಸ ಸೇರಿದವು.&lt;br /&gt;&lt;br /&gt;ಕಳಸದಲ್ಲಿ ಕಳಶೇಶ್ವರನ ದರ್ಶನ ಮಾಡಿಕೊಂಡು ಹೊರಗೆ ಬಂದರೆ ಸುತ್ತಲೂ ಹಸಿರು ಬಟ್ಟೆಯುಟ್ಟು ಮಳೆನೀರಿನ ಸ್ನಾನ ಮಾಡುತ್ತಿದ್ದ ಬೆಟ್ಟಗಳೇ! ಕಳಸದ ಒಂದು ಅಂಗಡಿಯಿಂದ ಬೆಂಗಳೂರಿನ ಶ್ರೀನಿವಾಸನ ಮನೆಯಲ್ಲಿ ಅದೆಷ್ಟೋ ವರ್ಷದಿಂದ ಕಾಫಿ ಪುಡಿ ತರಿಸುತ್ತಾರಂತೆ. ಅಲ್ಲಿ ಕಾಫಿ ಬಹಳ ಚೆನ್ನಾಗಿರತ್ತೆ ಎಂದು ಹೇಳಿ ಆ ಅಂಗಡಿಗೆ ನನ್ನನ್ನು ಕರೆದೊಯ್ದು ಮಾಲೀಕನ ಬಳಿ ಪರಿಚಯ ಹೇಳಿಕೊಂಡು ಕಾಫಿ ತರಿಸಿದ. ಅವನು ಹೇಳಿದಂತೆಯೇ ಕಾಫಿ ಅದ್ಭುತವಾಗಿತ್ತು. ಇಬ್ಬರೂ ಒಂದೊಂದು ತೊಟ್ಟು ಕಾಫಿಯನ್ನೂ ಚಪ್ಪರಿಸಿಕೊಂಡೇ ಕುಡಿದೆವು. ಅಷ್ಟು ಹೊತ್ತಿಗಾಗಲೇ ಮಳೆಯಲ್ಲಿ ನೆಂದು ಚಳಿ ಎಂದು ನಡುಗುತ್ತಿದ್ದ ನಮಗೆ ಅ ಬಿಸಿ ಬಿಸಿ ಕಾಫಿ ಅಮೃತವೇ ಆಗಿತ್ತು. ಕಾಫಿ ಕುಡಿದ ಮೇಲೆ ಬಸ್ಸು ಹತ್ತಿ ಹೊರನಾಡಿಗೆ ಹೊರಟೆವು. ಬಸ್ಸಿಗೆ ಒಂದು ನಿಮಿಷವೂ ಕಾಯಲಿಲ್ಲ. ನಾವು ಹೊರಡಬೇಕೆನ್ನುತ್ತಿರುವಾಗಲೇ ಬಸ್ಸೊಂದು ನಮ್ಮ ಮುಂದೆ ಬಂದು ನಿಂತಿತು. "ನಮ್ಮ timing ಚೆನ್ನಾಗಿದೆ" ಎಂದ ಶ್ರೀನಿವಾಸ.&lt;br /&gt;&lt;br /&gt;ಹೊರನಾಡು ತಲುಪಿದಾಗ ಮಧ್ಯಾಹ್ನ ನಾಲ್ಕು ಘಂಟೆಯಾಗಿತ್ತು. ಅಂದು ರಾತ್ರಿ ಹೊರನಾಡಿನಲ್ಲಿಯೇ ತಂಗುವುದು ಎಂದು ನಮ್ಮ ಯೋಚನೆಯಾಗಿತ್ತು. ಆದರೆ ಹೊರನಾಡಿನಲ್ಲಿ ಅಂದು ಯಾವುದೋ ಜಾತ್ರೆಯಿತ್ತು. ಜನವೋ ಜನ. ಉಳಿಯಲು ಜಾಗವೇ ಸಿಗಲಿಲ್ಲ. ಕೊನೆಗೆ ಬಸ್ ನಿಲ್ದಾಣದ ಹತ್ತಿರವೇ ಒಂದೆರಡು ವಸತಿಗೃಹಗಳಲ್ಲಿ ಕೋಣೆ ಸಿಕ್ಕರೂ ಒಂದು ದಿನ ತಂಗುವುದಕ್ಕೆ ಒಂದು ಕಡೆ ೪೫೦ ರೂಪಾಯಿ ಮತ್ತೊಂದು ಕಡೆ ೫೦೦ ರೂಪಾಯಿ ಎಂದರು. ಬಹಳ ದುಬಾರಿ ಎನ್ನಿಸಿ ಕೊನೆಗೆ ಹೊರನಾಡಿನಲ್ಲಿ ರಾತ್ರಿ ಉಳಿದುಕೊಳ್ಳುವ ಕಾರ್ಯಕ್ರಮ ರದ್ದು ಮಾಡಿ ಶೃಂಗೇರಿಗೆ ಹೊರಡುವ ಯೋಚನೆ ಮಾಡಿದೆವು. "ಅನ್ನಪೂರ್ಣೇಶ್ವರಿಯ ದೇವಸ್ಥಾನದಲ್ಲಿ ಸಿಕ್ಕಾಪಟ್ಟೆ ಕ್ಯೂ ಇರತ್ತೆ. ತುಂಬಾ ಕಾಯಬೇಕಾಗುತ್ತೆ. ದರ್ಶನ ತಕ್ಷಣ ಆಗೋದಿಲ್ಲ, ಶೃಂಗೇರಿಗೆ ಕೊನೇ ಬಸ್ಸು ಆರಕ್ಕೆ..." ಎಂದ ಶ್ರೀನಿವಾಸ. "ನಂಗೆ ಈ ಜಾತ್ರೆಯ ಕಥೆ ಗೊತ್ತು ಬಿಡೋ. ಜಾತ್ರೆ ಅಂದ್ರೆ ಎಲ್ಲರೂ ಬೆಳಿಗ್ಗೆ ಸರಿಯಾಗಿ ಊಟದ ಟೈಮಿಗೇ ಬರೋದು. ಊಟ ಬಿಟ್ಟು ಜಾತ್ರೆ ನೋಡೋ ಜನ ಎಷ್ಟಿದಾರೆ ಹೇಳು? ಉಟಕ್ಕೆ ಮುಂಚೇನೇ ದೇವರ ದರ್ಶನ ಮಾಡ್ಬಿಟ್ಟಿರ್ತಾರೆ. ಈಗ ಇನ್ನೂ ಊರಿಗೆ ಹೊರಟಿರಲ್ಲ. ರಾತ್ರಿ ಊಟ ಮಾಡಿ ಹೊರಡುತ್ತಾರೆ. ಅದಿಕ್ಕೆ ರೂಮುಗಳು ಸಿಗ್ಲಿಲ್ಲ ಅಷ್ಟೇ. ದರ್ಶನ ೨೦ ನಿಮಿಷದಲ್ಲಿ ಆಗತ್ತೆ" ಎಂದೆ. ದೇವಸ್ಥಾನಕ್ಕೆ ಹೋದರೆ ದರ್ಶನಕ್ಕಾಗಿ ಕಾಯುತ್ತಿದ್ದವು ನಮ್ಮನ್ನು ಬಿಟ್ಟು ನಾಲ್ಕೇ ಜನ! ದರ್ಶನ ಮುಗಿಸಿಕೊಂಡು ಬಂದ ನಂತರ ಶ್ರೀನಿವಾಸ "ಮತ್ತೆ ನಮ್ಮ timing ಚೆನ್ನಾಗಿದೆ" ಎಂದ. ಬೇಗ ಬೇಗ ಬಸ್ ನಿಲ್ದಾಣಕ್ಕೆ ನಡೆದೆವು. ಐದು ಘಂಟೆಯ ಶೃಂಗೇರಿ ಬಸ್ಸು ಹೊರಡುವುದರಲ್ಲಿತ್ತು. "ನೋಡು ಮತ್ತೆ ನಮ್ಮ timing ಚೆನ್ನಾಗಿದೆ" ಎಂದು ಹೇಳಿದೆ. ಬಸ್ಸು ಹೊರಡುವಾಗ ಸೀಟು ಸಿಗಲಿಲ್ಲ. ಆದರೆ ನಾಲ್ಕು ಕಿಲೋಮೀಟರ್ ದಾಟುವುದರಲ್ಲಿ ಜನ ಇಳಿದುಕೊಂಡಮೇಲೆ ಸೀಟು ಸಿಕ್ಕಿತು.&lt;br /&gt;&lt;img id="BLOGGER_PHOTO_ID_5185388828853043026" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://3.bp.blogspot.com/_JaSAEbMHNYk/R_Yzqp4Qf1I/AAAAAAAACcg/30oVwql00_c/s400/horanadu.jpg" border="0" /&gt;ಹೊರನಾಡಿನಿಂದ ಶೃಂಗೇರಿಗೆ ಮೂರು ಘಂಟೆಯ ಪ್ರಯಾಣ. ಸುಮಾರು ಏಳು ಘಂಟೆಯ ತನಕ ಬೆಳಕಿತ್ತು. ದಾರಿಯುದ್ದಕ್ಕೂ ಮಲೆನಾಡಿನ ಮನಮೋಹಕ ನೋಟಗಳು! ಬೆಳಿಗ್ಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ನೋಟ, ಸಂಜೆ ಅದರ ಆಸುಪಾಸಿನ ಪರ್ವತಶ್ರೇಣಿಗಳ, ಅದರ ನಡುವಿರುವ ಕಣಿವೆಗಳ ನೋಟ. ಈಗಲೂ ಮನಸ್ಸಿನಲ್ಲಿ ಅದೇ ನೆನಪುಗಳು ತುಂಬಿ ತುಳುಕುತ್ತಿವೆ! ಪರ್ವತಶ್ರೇಣಿಗಳ ನಡುವಲ್ಲೇ ಸುಮಾರು ಒಂದು ಘಂಟೆಗೂ ಹೆಚ್ಚು ಕಾಲ ಅಡ್ಡಾಡಿದ ಮೇಲೆ ಬಸರಿಕಟ್ಟೆ ಎಂಬ ಗ್ರಾಮ ಸಿಕ್ಕಿತು. "ಬಸರಿಕಟ್ಟೆಯಲ್ಲಿ ಒಂದು ಚಿಕ್ಕ ಜಾಗ ಇರ್ಬೇಕೋ, ಬೇಜಾರಾದಾಗೆಲ್ಲಾ ಬಂದು ಉಳ್ಕೊಳಕ್ಕೆ. ಸ್ವರ್ಗದ ಮಧ್ಯ ಇದೆ ಇದು... ಪ್ರಾಪರ್ಟಿ ಮಾಡ್ಬೇಕಾದ್ರೆ ಇಲ್ಲೇ ಮಾಡ್ಬೇಕು" ಎಂದು ಕನಸೊಂದನ್ನು ಶ್ರೀನಿವಾಸನ ಮುಂದೆ ಬಿಚ್ಚಿಟ್ಟೆ. "ಜಾಯಿಂಟ್ ಪ್ರಾಪರ್ಟಿ ಮಾಡೋಣ್ವಾ" ಎಂದು ಅವನಿಗೂ ಆಸೆ ತೋರಿಸಿದೆ. ಶ್ರೀನಿವಾಸ ಮುಗುಳ್ನಕ್ಕು "ನಾನ್ ರೆಡೀ ಮ್ಯಾನ್, ನೀನೂ ರೆಡಿ ಆದಾಗ ಹೇಳು" ಎಂದ! ನಿಜವಾಗಲೂ ಬಸರಿಕಟ್ಟೆಯಲ್ಲಿ ಇರಬೇಕೆಂದು ಆಸೆ ಆಗುತ್ತಿದೆ. ಕೈಗೆ ದುಡ್ಡು ಬಂದ ಕಾಲದಲ್ಲಿ ಇದರ ಬಗ್ಗೆ ಯೋಚಿಸಬೇಕು. ಆದರೆ ಒಂದು ಮರವನ್ನೂ ಕಡಿಯದೇ, ಒಂದು ಗಿಡವನ್ನೂ ಕೆಡವದೇ, ಒಂದು ಎಲೆಯನ್ನೂ ಕಿತ್ತದೇ, ಯಾವುದೇ ಝರಿಯ ದಾರಿಗೂ ಅಡ್ಡವಾಗದೇ, ಒಂದು ಕಲ್ಲನ್ನೂ ಕದಲಿಸದೇ, ಗಾಳಿಯನ್ನು ಚೂರೂ ಮಲಿನಗೊಳಿಸದೇ, ಪ್ರಕೃತಿಸೌಂದರ್ಯವನ್ನು ಕೊಂಚವೂ ಕೆಡಿಸದೇ ಮನೆ ಕಟ್ಟಿಸಬೇಕು! ಸಾಧ್ಯವೇ?&lt;br /&gt;&lt;br /&gt;ಬಸರಿಕಟ್ಟೆ ದಾಟಿದಮೇಲೆ ಮತ್ತೆ ಕತ್ತಲಾಗುವ ತನಕ ಬಸ್ಸು ಮಲೆಗಳಲ್ಲಿ ಹಾವು-ಏಣಿ ಆಟವಾಡುತ್ತಿರುವುದನ್ನೇ ನೋಡಿಕೊಂಡು ಕೂತಿದ್ದೆವು. ಕತ್ತಲಾದಮೇಲೆ ಹೆಚ್ಚು ಕಾಣಿಸುತ್ತಿರಲಿಲ್ಲ. ಬಸ್ಸಿನ ದೀಪದಲ್ಲಿ ರಸ್ತೆಯ ಬದಿಯಲ್ಲಿ ಒಂದೊಂದು ಸಣ್ಣ ಜಲಪಾತಗಳು ಕಾಣುತ್ತಿದ್ದವು ಅಷ್ಟೇ. ಆಗ ಹೊತ್ತು ಕಳೆಯಲು ಹೆಡ್-ಸೆಟ್ ಹಾಕಿಕೊಂಡು ಮೊಬೈಲಿನಿಂದ ಪ್ರಸಿದ್ಧ ಸಿನಿಮಾ ಹಾಡುಗಳನ್ನು ಕೇಳುತ್ತಿದ್ದೆವು. ಸುಮಾರು ಏಳುವರೆ ಘಂಟೆಗೆ ಜಯಪುರ ಎಂಬ ಊರಿನ ಬಳಿ ರಸ್ತೆ ಕೆಟ್ಟುಕೋಗಿ ಬಸ್ಸು ಮುಂದೆ ಹೋಗದಂತಾಯಿತು. ಅಲ್ಲಿಂದ ಶೃಂಗೇರಿಗೆ ೧೯ ಕಿಲೋಮೀಟರ್ ಎಂದು ತಿಳಿಯಿತು. ನಾವಿಬ್ಬರೂ ಶೃಂಗೇರಿಗೆ ಚಾರಣ ಮಾಡಲು ಮಾನಸಿಕವಾಗಿ ಸಿದ್ಧರಾಗಿಬಿಟ್ಟಿದ್ದೆವು! ಅಷ್ಟರಲ್ಲಿ ಬೇರೆ ದಾರಿಯ ಮೂಲಕ ಶೃಂಗೇರಿಗೆ ನಮ್ಮನ್ನು ತಲುಪಿಸುತ್ತಾರೆಂದು ಗೊತ್ತಾಯಿತು. ರಾತ್ರಿ ಎಂಟಕ್ಕೆ ಶೃಂಗೇರಿ ತಲುಪಿದೆವು. ಆದರೆ ನಮಗೆ ವಸತಿ ಸಿಗುವುದಕ್ಕೆ ೨೦ ನಿಮಿಷ ಬೇಕಾಯಿತು.&lt;br /&gt;&lt;img id="BLOGGER_PHOTO_ID_5185386337772011330" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://3.bp.blogspot.com/_JaSAEbMHNYk/R_YxZp4Qf0I/AAAAAAAACcY/mq0V4gj7nsI/s400/800px-Shringeri-front-view.jpg" border="0" /&gt;&lt;br /&gt;&lt;div align="left"&gt;ವಸತಿಗೃಹದ ಮಾಲೀಕರು "ದೇವಸ್ಥಾನದಲ್ಲಿ ರಾತ್ರಿ ಎಂಟೂವರೆ ವರ್ಗೂ ಊಟ ಹಾಕ್ತಾರೆ. ಹೋಗೋದಾದ್ರೆ ಬೇಗ ಹೋಗಿ" ಎಂದರು. ನಾವು ಬೆಳಿಗ್ಗಿಂದ ಊಟ ಮಾಡಿರಲಿಲ್ಲ. ಬೆಳಿಗ್ಗೆ ಕಾರ್ಕಳದಲ್ಲಿ ತಿಂಡಿ ತಿಂದಿದ್ದೆವಷ್ಟೇ. ಗಡಿಬಿಡಿಯಲ್ಲಿ ಕೋಣೆಯಲ್ಲಿ ನಮ್ಮ ಬೆನ್ನುಚೀಲಗಳನ್ನು ಇಳಿಸಿ ದೇವಸ್ಥಾನಕ್ಕೆ ಹೊರಟೆವು. "ಇಲ್ಲೂ ನಮ್ಮ timing ಚೆನ್ನಾಗಿದೆ, ನೋಡು ಮ್ಯಾನ್" ಎನ್ನುತ್ತಲೇ ಶ್ರೀನಿವಾಸ ಓಡುತ್ತಿದ್ದ. "ಅಷ್ಟೊಂದು ಅರ್ಜೆಂಟ್ ಬೇಡ್ವೋ" ಎಂದುಕೊಂಡು ನಾನೂ ಅವನ ಜೊತೆಗೆ ಓಡುತ್ತಿದ್ದೆ. ರಸ್ತೆಯ ಮೇಲೆ ಹಾಗೆ ಓಡುತ್ತಿದ್ದವರನ್ನು ಕಂಡು ಜನ ಏನೆಂದುಕೊಂಡರೋ ಗೊತ್ತಿಲ್ಲ! ಆದರೆ ಇಲ್ಲಿ timing ನಮಗೆ ಕೈ ಕೊಟ್ಟಿತ್ತು. ಭೋಜನಶಾಲೆಗೆ ಹೋಗುವಾಗಲೇ ಸುರಕ್ಷತಾ ಮೇಲ್ವಿಚಾರಕರೊಬ್ಬರು ಹುಚ್ಚರಂತೆ ಓಡುತ್ತಿದ್ದ ನಮ್ಮನ್ನು ತಡೆದು "ಎಲ್ಲಿಗೆ? ಊಟಕ್ಕಾ?" ಎಂದು ಕೇಳಿದರು. "ಹೂ..." ಎಂದೆ. "ಊಟ ಬಂದ್ ಆಯ್ತು" ಎಂದು ಉತ್ತರ ಬಂದಿತು! ಶೃಂಗೇರಿಗೆ ಬಂದು ಶಾರದೆಯ ದರ್ಶನಕ್ಕೆ ಹೋಗದೇ ನೇರ ಊಟಕ್ಕೆ ನುಗ್ಗಿದ ಪರಿಗೆ ನಾವೇ ನಕ್ಕುತ್ತಿದ್ದೆವು. ನಮ್ಮನ್ನು ತಡೆದ ರೀತಿಯನ್ನು ನೆನೆಸಿಕೊಂಡರಂತೂ ಮತ್ತಷ್ಟು ನಗು ಬರುತ್ತಿತ್ತು. "ಹೋಗ್ಲಿ, ಬಾ ಮ್ಯಾನ್... ಶಾರದೆ ದರ್ಶನನಾದ್ರೂ ಮಾಡ್ಕೊಂಡು ಬರೋಣ" ಎಂದ ಶ್ರೀನಿವಾಸ. ನಾನು "ಬೆಳಗ್ಗಿಂದ ನೆಂದೂ ನೆಂದೂ ಬಟ್ಟೆಯೆಲ್ಲಾ ಒದ್ದೆ ಆಗಿದೆ. ಜೊತೆಗೆ ಬೆವರು ಬೇರೆ! ಈ ಅವತಾರದಲ್ಲಿ ನಾನು ಬರಲ್ಲ. ನೀನು ಬೇಕಾದರೆ ಹೋಗಿ ಬಾ." ಎಂದೆ. ಕೊನೆಗೆ ಶ್ರೀನಿವಾಸ "ಹೋಗ್ಲಿ, ಇಲ್ಲಿ ವರ್ಗು ಬಂದಿದೀವಿ. ಹೊರಗಿಂದನಾದ್ರೂ ದರ್ಶನ ಮಾಡೋಣ" ಎಂದ. "ದೇವಸ್ಥಾನದ ಮುಂದೆ ನಿಂತು ಕೈ ಮುಗಿದು ಬರ್ತೀನಿ ಅಷ್ಟೇ, ಕಾಣತ್ತೋ ಬಿಡತ್ತೋ" ಎಂದೆ. ದೇವಸ್ಥಾನದ ಹೊರಗಿಂದಲೇ ಶಾರದೆ ಕಾಣಿಸಿದಳು. ದರ್ಶನವೂ ಆಯಿತು, ಕೈ ಮುಗಿದಿದ್ದೂ ಆಯಿತು.&lt;br /&gt;&lt;br /&gt;ಶಾರದೆಗೆ ಕೈ ಮುಗಿದುಬಿಟ್ಟರೆ ಕೆಲಸವಾಗಿಹೋಯಿತಾ? ಶ್ರೀನಿವಾಸ ಹೇಳಿದ "ಆಕ್ಚಿಯಲೀ, ನಾವು ಮಾಡಿದ್ದು ಕರೆಕ್ಟು ಮ್ಯಾನ್. ಒಂದು ಕಗ್ಗ ಇದೆ, ಹೇಳ್ತೀನಿ ಕೇಳು" ಎಂದು. ಒಂದೆರಡು ಪದಗಳು ಅವನಿಗೆ ಮರೆತುಹೋಯಿತು. ತಕ್ಷಣ ಗೊತ್ತಿದ್ದಷ್ಟು ಹೇಳಿ, ಭಾವಾರ್ಥ ಹೇಳಿ ನಂತರ ಪೂರ್ತಿ ಕಗ್ಗ ತಿಳಿಸಿದ. ಆ ಕಗ್ಗ ಇಂತಿದೆ...&lt;br /&gt;&lt;br /&gt;&lt;em&gt;ಉದರದೈವಕೆ ಜಗದೊಳೆದುರು ದೈವವದೆಲ್ಲಿ?&lt;br /&gt;ಮೊದಲದರ ಪೂಜೆ; ಮಿಕ್ಕೆಲ್ಲವದರಿಂದ!&lt;br /&gt;ಮದಿಸುವುದದಾದರಿಸೆ, ಕುದಿವುದು ನಿರಾಕರಿಸೆ!&lt;br /&gt;ಹದದೊಳಿರಿಸುವುದೆಂತೊ? - ಮಂಕುತಿಮ್ಮ&lt;/em&gt;&lt;br /&gt;&lt;br /&gt;ಈ ಕಗ್ಗದ ಬಗ್ಗೆ ಮಾತಾಡಿಕೊಂಡೇ ಹೊತ್ತು ಮೀರಿದ್ದರೂ ತುತ್ತನ್ನು ಹುಡುಕಿಕೊಂಡು ಹೊರಟಿದ್ದೆವು. ವಸತಿಗೃಹದ ಹತ್ತಿರವೇ 'ಮಾರುತಿ ಟಿಫಿನ್ ರೂಮ್' ಕಾಣಿಸಿತು. "ಇಲ್ಲಿಗೆ ಹೋದ ಸರ್ತಿ ಬಂದಾಗ ಹೋಗಿದ್ದ ನೆನಪಿದೆ. ಇಲ್ಲಿ ಇಡ್ಲಿ-ಚಟ್ನಿ ಸೂಪರ್ ಆಗಿರತ್ತೆ. ಹೋಗಿ ಕೇಳೋಣ ಬಾ" ಎಂದು ಹೋಗಿ ವಿಚಾರಿಸಿದರೆ ಇಡ್ಲಿ, ವಡೆ, ಪೂರಿ ಮೂರು ಮಾತ್ರ ಇರುವುದು ಎಂದರು. ನಮ್ಮ ಬಳಿ ದುಡ್ಡಿರಲಿಲ್ಲ. ಬೇಗ ವಸತಿಗೃಹಕ್ಕೆ ಹೋಗಿ ಹಣ ತೆಗೆದುಕೊಂಡು 'ಮಾರುತಿ'ಯೊಳಗೆ ನುಗ್ಗಿದೆವು. ಬಾಳೆ ಎಲೆ ಹಾಕಿ ನಮ್ಮನ್ನು ಕುಳ್ಳಿರಿಸಿದರು. ನಾನು "ಇಲ್ಲಿ ಏನು ಬೇಕು ಅಂತ ಕೇಳ್ತಾರೋ ಅಥವಾ ನಿಮ್ಮ ಮೈಸೂರು ರೈಲ್ವೇ ಸ್ಟೇಶನ್ ಥರ ಎನಾದ್ರೂ ತಂದು ಹಾಕ್ಬಿಡ್ತಾರೋ?" ಎಂದು ಕೇಳಿದೆ. ಶ್ರೀನಿವಾಸ ಮೈಸೂರಿನ ಘಟನೆಯನ್ನು ನೆನೆಸಿಕೊಳ್ಳುತ್ತಾ ನಗುತ್ತಿದ್ದಾಗಲೇ ಹೇಳದೇ ಕೇಳದೇ ಪೂರಿ ತಂದು ಒಬ್ಬೊಬ್ಬರಿಗೆ ಎರಡು ಪೂರಿಯಂತೆ ಬಡಿಸಿದರು! ಅವರು ಏನೇ ಹಾಕಿದರೂ, ಎಷ್ಟು ಹಾಕಿದರೂ ಬೇಡ ಎನ್ನುವ ಸ್ಥಿತಿಯಲ್ಲಿ ನಾವಿರಲಿಲ್ಲ. ಬೆಳಿಗ್ಗಿಂದ ಹೊಟ್ಟೆಯನ್ನು ದಂಡಿಸಿಕೊಂಡೇ ಬಂದಿದ್ದೆವು. ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುತ್ತಾ ಪೆದ್ದು-ಪೆದ್ದಾಗಿ ನಗುತ್ತಾ ಪೂರಿ ತಿಂದೆವು. ಮುಂದೆ ಇಡ್ಲಿ-ವಡೆ ಕೂಡ ಬಡಿಸಿದರು. "ಇವರದ್ದೊಂಥರ ಕಂಪ್ಲೀಟ್ ಪ್ಯಾಕೇಜ್ ಇದ್ದಂಗಿರ್ಬೇಕು ಕಣೋ, ಇರೋದೆಲ್ಲಾ ಹಾಕ್ಬಿಟ್ರು" ಎಂದು ನಕ್ಕಿದೆ. ಅವರು ಹಾಕಿದಷ್ಟೂ ತಿಂದೆವು. ಆದರೆ ನಾವಾಗೇ ಹೆಚ್ಚು ಕೇಳಲಿಲ್ಲ. ತಿನ್ನುತ್ತಿದ್ದಾಗ ಒಮ್ಮೆ ಯಾರೋ ಬಂದು "ಏನಿದೆ" ಎಂದು 'ಮಾರುತಿ'ಯ ಮಾಲೀಕರನ್ನು ಕೇಳಿದಾಗ "ಇಡ್ಲಿ-ವಡೆ ಉಂಟು, ಪೂರಿ ಉಂಟು" ಎಂದಾಗ ಮುಖ ತಿರುಗಿಸಿಕೊಂಡು ಹೊರಟುಹೋದರು. ಅದನ್ನು ನೋಡಿ ನಾನು "ಅಯ್ಯೋ! ಇಡ್ಲಿ-ವಡೆ-ಪೂರಿ ಬೆಲೆ ಇವರಿಗೇನ್ ಗೊತ್ತು?" ಎಂದುಬಿಟ್ಟೆ. ಇದನ್ನು ಕೇಳಿದ ಶ್ರೀನಿವಾಸ ಸಿಕ್ಕಾಪಟ್ಟೆ ನಕ್ಕುಬಿಟ್ಟ. "ಈ ಡೈಲಾಗನ್ನ ಬ್ಲಾಗಲ್ಲಿ ಬರೀಲೇ ಬೇಕು ಮ್ಯಾನ್... ಸೀರಿಯಸ್ಲೀ! ಬರೀತೀನಿ..." ಎಂದ. ಎಷ್ಟೋ ಹೊತ್ತು ಈ ಮಾತನ್ನು ನೆನಪಿಸಿಕೊಂಡೇ ಅವನೂ ನಕ್ಕು ನನ್ನನ್ನೂ ನಗಿಸಿದ. ಆದರೆ ಅವನು ಇಲ್ಲಿಯ ತನಕ ತನ್ನ ಬ್ಲಾಗಲ್ಲಿ ಇದರ ಬಗ್ಗೆ ಬರೆದಿಲ್ಲ. ಅದಕ್ಕೆ ನಾನೇ ಬರೆದುಕೊಂಡುಬಿಟ್ಟೆ!&lt;br /&gt;&lt;br /&gt;'ಮಾರುತಿ'ಯ ಮಾಲೀಕರಿಗೆ ಹಣ ಕೊಟ್ಟು ಹೊರಬಿದ್ದೆವು. ತಿಂದಿದ್ದು ಕರಗಬೇಕೆಂದು ಸಣ್ಣ ಮಳೆಯಲ್ಲೇ ಹರಟೆ ಹೊಡೆದುಕೊಂಡು ಶೃಂಗೇರಿಯ ಬೀದಿಗಳಲ್ಲಿ ಒಂದಷ್ಟು ನಡೆದೆವು. ಮತ್ತೆ ಕೋಣೆಗೆ ವಾಪಸಾದಮೇಲೆ ಶ್ರೀನಿವಾಸ ನನಗೆ ಒಂದಷ್ಟು ಯೋಗಾಸನಗಳನ್ನು ಹೇಳಿಕೊಡುತ್ತಿದ್ದ. ನಂತರ ಶ್ರೀಧರನಿಗೆ ಫೋನು - ಬಿಟ್ಟಿ ಮಜಾ!! ಸಾಧ್ಯವಾದಷ್ಟೂ ರೇಗಿಸಿ ಅವನು ಕೆರಳಿಹೋದಮೇಲೇ ರೇಗಿಸುವುದು ನಿಲ್ಲಿಸಿದ್ದು! ಶ್ರೀಧರನಿಗೋ ನಾವಾಡಿದ ಒಂದೆರಡು ಮಾತು ಕೇಳುತ್ತಿರಲಿಲ್ಲ. ಮತ್ತೆ ಹೇಳು ಎಂದು ಹೇಳಿದಾಗ "ಗೋಲ್ಡನ್ ವರ್ಡ್ಸ್ ಕೆನಾಟ್ ಬೀ ರಿಪೀಟೆಡ್" ಎಂದು ಅವನ ಡೈಲಾಗನ್ನು ಅವನಿಗೇ ತಿರುಗಿಸುವುದು! ಕೊನೆಗೆ ಕರೆ ಮುಗಿಸುವ ಮುಂಚೆ "ನಮ್ಮಿಬ್ಬರಿಗೂ ಸುಸ್ತಾಗಿದೆ ಕಣೋ. ನಾವಿಬ್ಬರೂ ಅಲಾರ್ಮಿಗೆ ಏಳೋ ಮನುಷ್ಯರಲ್ಲ. ಬೆಳಿಗ್ಗೆ ಎಂಟು ಘಂಟೆಗೆ ಫೋನ್ ಮಾಡಿ ನಮ್ಮನ್ನ ಎಬ್ಸೋ... ಒಂದೇ ಫೋನಿಗೆ ನಾವು ಏಳೋದಿಲ್ಲ... ಏಳೋ ವರ್ಗು ಫೋನ್ ಮಾಡ್ತಿರೋ" ಎಂದೆ! "ಓಕೆ, ಆದ್ರೆ ನಿಂಗೇ ಫೋನ್ ಮಾಡ್ತೀನಿ, ಶ್ರೀನಿವಾಸ್ ಗೆ ಫೋನ್ ಮಾಡಿ ಪ್ರಯೋಜನ ಇಲ್ಲ. ಅವನನ್ನ ಎಬ್ಸಕ್ಕೆ ನನ್ನಿಂದ ಆಗಲ್ಲ" ಎಂದ. ನಾನದಕ್ಕೆ "ಲೋ, ನನ್ನನ್ನ ಎಬ್ಸೋದು ಅಷ್ಟೊಂದು ಸುಲಭ ಅಂದುಕೊಂಡುಬಿಟ್ಟೀಯ! ಸುಲಭ ಆಗಿದ್ರೆ ನಿಂಗೆ ಯಾಕೆ ಹೇಳ್ತಿದ್ವಿ? ಅಲಾರ್ಮ್ ಇತ್ತಲ್ಲ! ಶ್ರೀನಿವಾಸ ಹೇಗೆ ನಿದ್ದೆ ಮಾಡ್ತಾನೋ ಗೊತ್ತಿಲ್ಲ. ಆದ್ರೆ ನನ್ನ ಎಬ್ಸೋದೂ ಕಷ್ಟನೇ. ಮೇಲಾಗಿ ಹಚ್ ಸಿಗ್ನಲ್ ಇಲ್ಲ ಇಲ್ಲಿ. ಏರ್ಟೆಲ್ ಸಿಗ್ನಲ್ ಇದೆ. ಶ್ರೀನಿವಾಸಂಗೇ ಮಾಡೋ" ಎಂದೆ. "ಅವನ ಫೋನ್ ನಿನ್ನ ತಲೆ ಪಕ್ಕ ಇಟ್ಕೊಂಡು ಮಲ್ಗು. ಅವನನ್ನು ಎಬ್ಸಕ್ಕೆ ನನ್ನ ಕೈಲಿ ಸಾಧ್ಯವಿಲ್ಲ" ಎಂದು ಮತ್ತೆ ಹೇಳಿದ. "ಅವನ ಫೋನು ನಮ್ಮಿಬ್ಬರ ತಲೆ ಮಧ್ಯದಲ್ಲಿ ಇರತ್ತೆ. ಇಬ್ರಲ್ಲಿ ಯಾರು ಬೇಗ ಏಳ್ತೀವೋ ಅವ್ರೇ ರಿಸೀವ್ ಮಾಡ್ತೀವಿ. ನೀನು ಫೋನ್ ಮಾಡೋದ್ ಮಾತ್ರ ಮರೀಬೇಡ" ಎಂದೆ. "ನೋ ನೋ ನೋ!!! ಫೋನ್ ನಿನ್ನ ತಲೇ ಕಡೇಗೇ ಎಳ್ಕೋ, ಶ್ರೀನಿವಾಸ ಏಳಲ್ಲ. ನಿನ್ನ ಎಬ್ಬಿಸ್ತೀನಿ. ಆಮೇಲೆ ಅವನನ್ನ ಎಬ್ಸಕ್ಕೆ ನಿಂಗೆ ಬೆಸ್ಟ್ ಆಫ್ ಲಕ್" ಎಂದು ಕಿರುಚಿ ಕರೆ ಮುಗಿಸಿದ.&lt;br /&gt;&lt;br /&gt;ಬೆಳಗ್ಗೆ ಎಂಟಕ್ಕೆ ಸರಿಯಾಗಿ ಫೋನನ್ನು ಸೈಲೆಂಟ್ ಮಾಡಿಟ್ಟು ಸ್ನಾನಕ್ಕೆ ಹೊರಟುಬಿಡಬೇಕು ಎಂದು ಲೆಕ್ಕ ಹಾಕಿ ಮಲಗಿದೆವು. ನಾನು ಬೆಳಿಗ್ಗೆ ಎದ್ದಾಗ ೭:೩೫ ಆಗಿತ್ತು. ಶ್ರೀನಿವಾಸ ಏಳಕ್ಕೇ ಎದ್ದು ನಾನು ಏಳುವುದಕ್ಕೆ ಕಾಯುತ್ತಿದ್ದನಂತೆ! ಅವನ ನಿದ್ರೆ ಪೌರುಷ ಈ ಬಾರಿಯೂ ನಾನು ನೋಡಲಾಗಲಿಲ್ಲ! ಆಮೇಲೆ ಶ್ರೀಧರನನ್ನು ನೆನೆಸಿಕೊಂಡು "ಪಾಪ" ಎನ್ನಿಸಿ ಫೋನನ್ನು ಎಂಟು ಘಂಟೆಗೆ ಸೈಲೆಂಟ್ ಮಾಡಿಬಿಡುವ ಯೋಚನೆ ಕೈಬಿಟ್ಟೆವು. ೮:೧೦ ರ ತನಕ ಕಾದರೂ ಶ್ರೀಧರನ ಫೋನು ಬರಲಿಲ್ಲ. ಪ್ರಾತರ್ಕರ್ಮಗಳನ್ನು ಮುಗಿಸಿ ಶ್ರೀನಿವಾಸನ ಮೊಬೈಲನ್ನು ಕೋಣೆಯಲ್ಲೇ ಬಿಟ್ಟು ಹೊರಟೆವು. ಮನೆಗೆ ಫೋನ್ ಮಾಡಬೇಕೆಂದು ನಾನು ಮಾತ್ರ ಮೊಬೈಲನ್ನು ಜೊತೆಗೆ ಒಯ್ದೆ. ಶ್ರೀನಿವಾಸ ಒದ್ದೆ ಬಟ್ಟೆಗಳನ್ನು ಹಾಕಿಕೊಳ್ಳಲು ಒಂದು ಪ್ಲಾಸ್ಟಿಕ್ ಚೀಲ ಖರೀದಿಸುತ್ತೇನೆಂದ. ಬೇಡ, ನನ್ನ ಬಳಿಯುರುವ ಪ್ಲಾಸ್ಟಿಕ್ ಚೀಲವನ್ನೇ ಕೊಡುತ್ತೇನೆಂದರೂ ಕೇಳಲಿಲ್ಲ. ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಒಂದು ಅಂಗಡಿಗೆ ನುಗ್ಗಿ ಪ್ಲಾಸ್ಟಿಕ್ ಚೀಲ ವಿಚಾರಿಸಿದ. ಚಿಕ್ಕದಕ್ಕೆ ಮೂರು ರೂಪಾಯಿ ಮತ್ತು ದೊಡ್ಡದಕ್ಕೆ ಆರು ರೂಪಾಯಿ ಎಂದು ಅಂಗಡಿ ಮಾಲೀಕ ತಿಳಿಸಿದ. ಬಹಳ ಹೊತ್ತು ಯೋಚಿಸಿ ದೊಡ್ದದಾಗಿದ್ದ ಆರು ರೂಪಾಯಿಯ ಪ್ಲಾಸ್ಟಿಕ್ ಚೀಲವನ್ನೇ ಶ್ರೀನಿವಾಸ ಖರೀದಿಸಿದ. ಜೊತೆಗೆ ಮೂರು ರೂಪಾಯಿಗೆ ಕನ್ನಡಪ್ರಭ ಪತ್ರಿಕೆಯನ್ನೂ ಖರೀದಿಸಿದ. ನಾವು ಹತ್ತು ರೂಪಾಯಿ ಕೊಟ್ಟೆವು. ಒಂದು ರೂಪಾಯಿ ಚಿಲ್ಲರೆ ಇಲ್ಲವೆಂದು ಅಂಗಡಿ ಮಾಲೀಕ ಶ್ರೀನಿವಾಸನ ಕೈಗೆ ಐವತ್ತು ಪೈಸೆಯ ಎರಡು ಕ್ಯಾಂಡಿ ತುರುಕಿದ. ನಾವು ಕ್ಯಾಂಡಿ ಬೇಡ ಚಿಲ್ಲರೆಯೇ ಕೊಡಿ ಎಂದು ಎಷ್ಟು ಕೇಳಿದರೂ ಅಂಗಡಿ ಮಾಲೀಕ ಬಗ್ಗಲಿಲ್ಲ. ಶ್ರೀನಿವಾಸ "ನಾನು ಕ್ಯಾಂಡಿ ಎಲ್ಲ ತಿನ್ನಲ್ಲ ರೀ..." ಎಂದಿದ್ದಿಕ್ಕೆ ಅಂಗಡಿಯವನು "ಅಯ್ಯೋ ಪೆದ್ದುಗುಂಡಾ, ಕ್ಯಾಂಡಿ ತಿನ್ನಲ್ಲ ಅಂದ್ರೆ ಏನು? ತಿನ್ಬೇಕು!" ಎಂದುಬಿಟ್ಟ. ಒಂದು ನಿಮಿಷ ನಮಗೆ ಏನು ಪ್ರತಿಕ್ರಿಯೆ ನೀಡಬೇಕೆಂದೇ ಗೊತ್ತಾಗಲಿಲ್ಲ. ಮತ್ತೆ ಶ್ರೀನಿವಾಸ "ನಿಜವಾಗ್ಲೂ ನಾನು ಕ್ಯಾಂಡಿ ಎಲ್ಲ ತಿನ್ನಲ್ಲ ರೀ..." ಎಂದಿದ್ದಿಕ್ಕೆ ಮತ್ತೆ ಅಂಗಡಿ ಮಾಲೀಕ "ಅದಿಕ್ಕೆ ನೀನು ಪೆದ್ದುಗುಂಡ" ಎಂದುಬಿಟ್ಟ. ಮರು ಮಾತಾಡದೇ ಅಂಗಡಿಯಿಂದ ಹೊರಟುಬಿಟ್ಟೆವು. "ಪೆದ್ದುಗುಂಡ" ಎಂಬ ಡೈಲಾಗ್ ನೆನೆಸಿಕೊಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕೆವು! ಶ್ರೀನಿವಾಸ ಅಂಗಡಿಯವನಿಗೇ "ಪೆದ್ದುಗುಂಡ" ಎಂದು ಹೆಸರಿಟ್ಟುಬಿಟ್ಟ!&lt;br /&gt;&lt;br /&gt;ಸ್ನಾನಕ್ಕೆಂದು ನದಿಗೆ ಹೋದೆವು. ನದಿಯ ತುಂಬ ಮಣ್ಣು ನೀರು! ಏನು ಮಾಡುವುದೋ ಗೊತ್ತಾಗಲಿಲ್ಲ. ಆ ನೀರಿನಲ್ಲಿ ಸ್ನಾನ ಮಾಡಲು ಯಾಕೋ ಮನಸ್ಸಾಗಲಿಲ್ಲ. ಮತ್ತೆ ವಸತಿಗೃಹಕ್ಕೇ ಹೋಗಿ ಸ್ನಾನ ಮಾಡುವುದು ಒಳಿತೆಂದು ಒಂದು ನಿಮಿಷ ಯೋಚಿಸಿದೆವು. ಆದರೆ ವಸತಿಗೃಹದಲ್ಲಿದ್ದದ್ದು ಎಲ್ಲಾ ಕೋಣೆಯಲ್ಲಿ ಇಳಿದುಕೊಂಡವರೂ ಉಪಯೋಗಿಸುವ ಸಾಮಾನ್ಯ ಸ್ನಾನದಮನೆ. ಅಲ್ಲಿ ಸ್ನಾನ ಮಾಡಲು ಕೂಡ ಮನಸ್ಸಾಗಲಿಲ್ಲ. "ಇಲ್ಲಿ ದೇವಸ್ಥಾನದವರೆಲ್ಲಾ ಸ್ನಾನಕ್ಕೆ ಏನು ಮಾಡ್ತಾರೋ ನೋಡ್ಬೇಕು. ಅವರು ನದೀಲೇ ಮಾಡಿದ್ರೆ ನಾವೂ ಧಾರಾಳವಾಗಿ ಮಾಡ್ಬೋದು" ಎಂದೆ. ಸ್ನಾನದ ಘಟ್ಟದ ಹತ್ತಿರ ಬಂದ ಅರ್ಚಕರೊಬ್ಬರನ್ನು ಕೇಳಲೇ ಎಂದು ಶ್ರೀನಿವಾಸನನ್ನು ಕೇಳಿದಾಗ "ಹೂ" ಎಂದ. ಅವರ ಬಳಿ ಹೋಗಿ&lt;br /&gt;&lt;br /&gt;&lt;strong&gt;ನಾನು&lt;/strong&gt;: "ಇಲ್ಲಿ ಸ್ನಾನ ಮಾಡ್ಬೋದಾ? ಪೂರ್ತಿ ಮಣ್ಣು ನೀರಿದಿಯಲ್ಲ..."&lt;br /&gt;&lt;strong&gt;&lt;/strong&gt;&lt;/div&gt;&lt;div align="left"&gt;&lt;strong&gt;ಅರ್ಚಕರು&lt;/strong&gt;: "ಮಾಡಬೋದು ರೀ... ನಮ್ಮ ಜನ ಸಂಸ್ಕಾರ, ಭಕ್ತಿ ಎಲ್ಲಾ ಬಿಟ್ಟುಬಿಟ್ಟಿದಾರೆ... ಬರೀ ಪಾಪದ ಕೆಲ್ಸನೇ ಮಾಡ್ತಿದಾರೆ... ಅದಿಕ್ಕೆ ನದಿ ಹೀಗೆ ಹರೀತಿದೆ... ಇಲ್ದಿದ್ರೆ ಫಾಲ್ಗುಣ ಮಾಸದಲ್ಲಿ ಹಿಂಗೆಲ್ರೀ ಹರಿಯತ್ತೆ? ಶುದ್ಧವಾದ ಹೊನ್ನೀರು ಇದು" (ಸಾಕಾಯ್ತು ಭಾಷಣ!)&lt;br /&gt;&lt;strong&gt;&lt;/strong&gt;&lt;/div&gt;&lt;div align="left"&gt;&lt;strong&gt;ಅರ್ಚಕರು&lt;/strong&gt;: (ಒಂದು ಕ್ಷಣ ತಡೆದು) "ಯಾವ ಜನ ನೀವು?"&lt;br /&gt;(ತಕ್ಷಣ ಉತ್ತರಿಸಲು ನನಗೆ ಬಾಯಿ ಹೊರಡಲಿಲ್ಲ... ಕಿರೀಕ್ ಪಾರ್ಟಿ ಸಿಕ್ಕಿದಂಗೆ ಅನ್ನಿಸಿತು)&lt;br /&gt;&lt;strong&gt;&lt;/strong&gt;&lt;/div&gt;&lt;div align="left"&gt;&lt;strong&gt;ಶ್ರೀನಿವಾಸ&lt;/strong&gt;: "ನಾವೂ ಬ್ರಾಹ್ಮಣರೇ" (ಒಹ್! ಹೇಳೇ ಬಿಟ್ನಾ, ಈ ಪಾರ್ಟಿ ಈಗ ಭಾಷಣ ನಿಲ್ಸಲ್ಲ)&lt;br /&gt;&lt;strong&gt;&lt;/strong&gt;&lt;/div&gt;&lt;div align="left"&gt;&lt;strong&gt;ಅರ್ಚಕರು&lt;/strong&gt;: "ಸಂಧ್ಯಾವಂದನೆ ಮಾಡ್ತೀರಾ?"&lt;/div&gt;&lt;div align="left"&gt;&lt;strong&gt;&lt;/strong&gt;&lt;/div&gt;&lt;div align="left"&gt;&lt;strong&gt;ಶ್ರೀನಿವಾಸ&lt;/strong&gt;: "ಹೂ"&lt;/div&gt;&lt;div align="left"&gt;&lt;strong&gt;&lt;/strong&gt;&lt;/div&gt;&lt;div align="left"&gt;&lt;strong&gt;ಅರ್ಚಕರು&lt;/strong&gt;: "ಸುಳ್ಹೇಳ್ಬೇಡಿ!"&lt;br /&gt;&lt;strong&gt;&lt;/strong&gt;&lt;/div&gt;&lt;div align="left"&gt;&lt;strong&gt;ಶ್ರೀನಿವಾಸ&lt;/strong&gt;: "ಅಯ್ಯೋ ಸುಳ್ಳು ಯಾಕೆ ಹೇಳ್ತೀವಿ? ಸತ್ಯವಾಗ್ಲೂ ಮಾಡ್ತೀವಿ" (ಹ್ಮ್... ಜಾಸ್ತಿಯಾಗೋಯ್ತಲ್ಲಪ್ಪ ಬ್ಲೇಡು!)&lt;br /&gt;&lt;strong&gt;&lt;/strong&gt;&lt;/div&gt;&lt;div align="left"&gt;&lt;strong&gt;ಅರ್ಚಕರು&lt;/strong&gt;: "ಸಂಧ್ಯಾವಂದನೆ ಮಾಡ್ತೀರ ಅನ್ನೋದು ಕೇಳಿ ಸಂತೋಷ ಆಗತ್ತೆ. ಬಿಡಬೇಡಿ ಅದನ್ನ"... (ನನ್ನ ಕಡೆ ತಿರುಗಿ) "ಬ್ರಾಹ್ಮಣರೆಲ್ಲಾ ಸಂಧ್ಯಾವಂದನೆ ಬಿಟ್ಟು ಹಾಳಾಗ್ತಿದಾರೆ... ಸಾಬರೆಲ್ಲಾ ನಮಾಜ್ ಮಾಡಿ ಮಾಡಿ ಉದ್ಧಾರ ಆಗ್ತಿದಾರ್ರೀ. ನಮಾಜ್ ಮಾಡಿ ನಮಾಜ್ ಮಾಡಿ ಅಲ್ಲಾ ಅವರನ್ನೆಲ್ಲಾ ಚೆನ್ನಾಗಿಟ್ಬಿಡ್ತಾನೆ. ನಾವು ಎಲ್ಲಾ ಬಿಟ್ಟು ಹಾಳಾಗ್ತೀವಿ ನೋಡ್ರೀ"&lt;br /&gt;&lt;strong&gt;&lt;/strong&gt;&lt;/div&gt;&lt;div align="left"&gt;&lt;strong&gt;ನಾನು&lt;/strong&gt;: ಹ ಹ ಹಾ... (ನಗೋದು ಬಿಟ್ರೆ ಮತ್ತೇನು ಮಾಡ್ಲೀ? ಈ ಪಾಟಿ ಕೊರೆದರೆ!)&lt;br /&gt;&lt;br /&gt;ಇಷ್ಟು ಹೇಳಿದ ಅರ್ಚಕರು ಕೊಡದ ತುಂಬ ನೀರು ತುಂಬಿಸಿಕೊಂಡು ಹೊರಟರು. "ಎಂಥಾ ತರ್ಲೆ ಪಾರ್ಟಿ ಹತ್ರ ಮಾತಿಗಿಳಿದುಬಿಟ್ನೋ ಮಾರಾಯ! ಸ್ನಾನ ಮಾಡ್ಬೋದಾ ಅಂತ ಕೇಳಿದ್ದೇ ತಪ್ಪಾಯ್ತು! ನೀವು ಯಾವ್ ಜನ ಅಂತ ಕೇಳ್ದಾಗ ನಾನು ಸುಮ್ನಿದ್ದೆ. ನೀನು ಬ್ರಾಹ್ಮಣರು ಅಂತ ಹೇಳ್ಬಿಟ್ಟಿ... ಅವರಿಗೆ ಅಷ್ಟು ಸಾಕಾಗಿತ್ತು" ಎಂದು ಶ್ರೀನಿವಾಸನಿಗೆ ಹೇಳಿದೆ. ಅವನು ಇನ್ನೂ ಅರ್ಚಕರ ಕೊನೆಯ ಡೈಲಾಗನ್ನು ನೆನಪಿಸಿಕೊಂಡು ನಗುತ್ತಿದ್ದ. ನಾನೂ ಕೂಡ ನಗುತ್ತಿದ್ದೆ. ಅಷ್ಟರಲ್ಲಿ ನಾವು ಸ್ನಾನದ ಉಡುಗೆಯಲ್ಲಿದ್ದೆವು.&lt;br /&gt;&lt;br /&gt;ಇನ್ನೇನು ಸ್ನಾನಕ್ಕೆ ಇಳಿಯಬೇಕು ಎಂದಾಗ ಮತ್ತೆ ಬಂದರು ಅರ್ಚಕರು. ಬರುವಾಗಲೇ "ಆಹಾ... ಜನಿವಾರ ಇದೆ! ಇನ್ನೂ ಕಿತ್ತಾಕಿಲ್ಲ!!" ಎಂದರು. "ಅದನ್ನ ಕಿತ್ತಾಕ್ಕಲ್ಲ" ಎಂದು ಶ್ರೀನಿವಾಸ ಉತ್ತರಿಸಿದ. ಜನವಾರ ನೋಡಿ ಅವರಿಗೆ ನಾವು ಬ್ರಾಹ್ಮಣರೆಂದು ಖಚಿತವಾಯಿತೇನೋ! "ನೋಡಿ, ಮೂಗು ಹಿಂಗೆ ಹಿಡ್ಕೊಂಡು ಮೂರು ಮುಳುಗು ಹಾಕಿ. ಅಮ್ಮನೋರು ಈ ನದೀಲಿ ಸದಾ ಇರ್ತಾಳೆ. ನಿಮ್ಮ ಪಾಪ ಎಲ್ಲಾ ಕೊಚ್ಚಿಕೊಂಡು ಹೋಗತ್ತೆ... ಯಾವತ್ತೂ ಸಂಸ್ಕಾರ, ಸಂಧ್ಯಾವಂದನೆ ಬಿಡಬೇಡಿ" ಎಂದು ಹೇಳಿ ಹೊರಟರು. ಅವರು ಹೊರಟಮೇಲೆ ಮೂರು ಮುಳುಗು ಹಾಕಿ ಸಂಧ್ಯಾವಂದನೆ ಮತ್ತಿತರ ಆಹ್ನಿಕಪದ್ಧತಿಗಳನ್ನು ಮುಗಿಸಿದೆವು. ನಂತರ ಹೋಗಿ ಶಾರದೆ ಮತ್ತು ವಿದ್ಯಾಶಂಕರರ ದರ್ಶನ ಮಾಡಿ ನೇರ ಮಾರುತಿ ಟಿಫಿನ್ ರೂಮಿಗೆ ಹೊರಟೆವು.&lt;br /&gt;&lt;br /&gt;ಮಾರುತಿಯಲ್ಲಿ ಜನ ಹೆಚ್ಚು. ಹೊರಗೆ ಕಾಯುತ್ತಿದ್ದಾಗ ಶ್ರೀಧರನ ಸಂದೇಶ ಬಂತು. ಫೋನ್ ರೀಚ್ ಆಗ್ತಿಲ್ಲ ಎಂದು ಕಳುಹಿಸಿದ್ದ - ಎರಡನೆಯ ಬಾರಿಗೆ. "ಸಿಗ್ನಲ್ ಬೊಂಬಾಟಾಗಿದೆ ನೋಡು... ನಿನ್ನ ಫೋನೂ ರೂಮಲ್ಲಿದೆ. ಅಲ್ಲೂ ಏರ್ಟೆಲ್ ಸಿಗ್ನಲ್ ಇತ್ತು... ರೀಚ್ ಆಗ್ತಿಲ್ಲ ಅಂತ ಬಿಡ್ತಾನೆ" ಎಂದು ಶ್ರೀನಿವಾಸನಿಗೆ ಹೇಳಿದೆ. "ಬರೀ ಚೋಡ್ತಾನೆ. ಅವನನ್ನ ಎಬ್ಬಿಸು ಅಂತ ಹೇಳಿದ್ದು ಎಂಟು ಘಂಟೆಗೆ. ಈಗ ಹತ್ತು ಘಂಟೆಗೆ ಎಸ್ಸೆಮ್ಮೆಸ್ ಕಳ್ಸಿದಾನೆ ಹೋಪ್ಲೆಸ್ ಫೆಲೋ" ಎಂದ ಶ್ರೀನಿವಾಸ. "ಎಂಟೂವರೆಗೂ ಆ ಪೆದ್ದುಗುಂಡನ ಎಪಿಸೋಡ್ ಆಗ್ತಿದ್ದಾಗ ಇದೇ ಎಸ್ಸೆಮ್ಮೆಸ್ ಕಳ್ಸಿದ್ದ!" ಎಂದು ಹೇಳಿದೆ ಶ್ರೀನಿವಾಸನಿಗೆ. ನಾವೇ ಶ್ರೀಧರನಿಗೆ ಫೋನ್ ಮಾಡಿ ಚೆನ್ನಾಗಿ ಉಪ್ಪು ಖಾರ ಹಾಕಿ ಉಗಿದೆವು ನಾಟಕ ಆಡುತ್ತಿದ್ದೀಯ ಎಂದು. ಎಂದಿನಂತೆ ಮೊಂಡು ವಾದ ಮಾಡಿದ; ತಾನೇ ಸರಿ ಎಂದು ತೋರಿಸಿಕೊಳ್ಳಲು! ಅವನ ಪೆದ್ದು ಪೆದ್ದಾದ ಲಾಜಿಕ್ ನಮ್ಮನ್ನು ಹತ್ತು ನಿಮಿಷ ರಂಜಿಸಿತು. ಯಾವ ರೀತಿಯಲ್ಲಿ ಸಕಲ ಪುರಾವೆಗಳೊಂದಿಗೆ ವಾದಿಸಿದರೂ ತಲೆ ಬುಡ ಇರದ ಯಾವುದೋ ಒಂದು ಉತ್ತರ ಹಿಂದಿರುಗಿಸುತ್ತಿದ್ದ. ಇದನ್ನೆಲ್ಲಾ ನೋಡುತ್ತಿದ್ದರೆ ನಾವು ಎಂಟು ಘಂಟೆಗೆ ಫೋನ್ ಆಫ್ ಮಾಡಬೇಕಾಗಿತ್ತು, ಆಗ ಶ್ರೀಧರನಿಗೆ ಬುದ್ಧಿ ಬರುತ್ತಿತ್ತು ಎಂದುಕೊಂಡೆವು.&lt;br /&gt;&lt;br /&gt;ಅಷ್ಟರಲ್ಲಿ ಮಾರುತಿ ಟಿಫಿನ್ ರೂಮಿನಲ್ಲಿ ಜಾಗ ಖಾಲಿಯಾಯಿತು. ಹೊಟ್ಟೆ ಬರ್ತಿ ಇಡ್ಲಿ-ವಡೆ ತಿಂದು ಹಣ ಕೊಟ್ಟು ಹೊರಗೆ ಬಂದೆವು. ನಮ್ಮ ಬಳಿ ಬೇಕಾದಷ್ಟು ಸಮಯವಿತ್ತು. ಸುಮಾರು ಮೂರು ಘಂಟೆ ಕಾಲ ಏನೇನೂ ಕೆಲಸವಿರಲಿಲ್ಲ. ಶೃಂಗೇರಿಯ ಹತ್ತಿರವೇ ಸಿರಿಮಣೆ ಎಂಬ ಜಲಪಾತವಿದೆ ಎಂದು ಕೇಳಿದ್ದೆ. "ಸಿರಿಮಣೆ ಜಲಪಾತಕ್ಕೆ ಹೋಗೋಣ?" ಎಂದು ಶ್ರೀನಿವಾಸನಿಗೆ ಕೇಳಿದೆ. ತಕ್ಷಣ ಒಪ್ಪಿದ. ಅಲ್ಲೇ ಒಬ್ಬ ಆಟೋದವನನ್ನು ಹಿಡಿದು ಸಿರಿಮಣೆ ಜಲಪಾತಕ್ಕೆ ಹೋಗಬಹುದೇ ಎಂದು ಕೇಳಿದಾಗ ಅದು ಶೃಂಗೇರಿಯಿಂದ ಹದಿನೈದು ಕಿಲೋಮೀಟರ್ ದೂರವಿದೆ ಎಂದು ಗೊತ್ತಾಯಿತು. ಅದೇ ಆಟೋದಲ್ಲಿ ಕುಳಿತು ವಸತಿಗೃಹಕ್ಕೆ ಹೋಗಿ ಹಣ ತೆಗೆದುಕೊಂಡು ಸಿರಿಮಣೆ ಜಲಪಾತಕ್ಕೆ ಹೊರಟೆವು.&lt;br /&gt;&lt;/div&gt;&lt;p align="center"&gt;&lt;a href="http://picasaweb.google.co.in/srikanth000/SirimaneFalls/photo#5182097921831632594"&gt;&lt;img src="http://lh5.google.co.in/srikanth000/R-qCmp4QftI/AAAAAAAACaM/k8G_HzCVAhI/s400/Image109.jpg" /&gt;&lt;/a&gt;&lt;/p&gt;ದಾರಿಯಲ್ಲಿ ನಾಮಫಲಕಗಳನ್ನು ನೋಡಿ 'ಸಿರಿಮಣೆ' ಅಲ್ಲ, 'ಸಿರಿಮನೆ' ಅದರ ಹೆಸರು ಎಂದು ಗೊತ್ತಾಯಿತು. ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿರುವ ಕಿಗ್ಗ ಎಂಬ ಸ್ಥಳ ತಲುಪಿ ನಂತರ ಐದು ಕಿಲೋಮೀಟರ್ ಮಣ್ಣುರಸ್ತೆಯಲ್ಲೇ ಹೋದೆವು. ದಾರಿಯಲ್ಲೊಂದು ಕಡೆ ಆಟೋದ ಚಕ್ರ ಮಣ್ಣಿನಲ್ಲಿ ಹೂತುಹೋಗಿ ನಾವಿಬ್ಬರೂ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲಿ ಇಳಿದು ತುಸು ದೂರ ತಳ್ಳಬೇಕಾಯಿತು. ಹೇಗೋ ಮಾಡಿ ಸಿರಿಮನೆ ಜಲಪಾತ ತಲುಪಿದೆವು.&lt;br /&gt;&lt;br /&gt;ಅಲ್ಲಿನ ಭೋರ್ಗರೆತವೇ ನಮ್ಮನ್ನು ಬಹಳಷ್ಟು ಸಂತೋಷ ಪಡುವಂತೆ ಮಾಡಿತ್ತು. ಇನ್ನು ಜಲಪಾತದ ಮುಂದೆ ಹೋಗಿ ನಿಂತರಂತೂ ಮಾತೇ ಹೊರಡಲಿಲ್ಲ. ಎಲ್ಲೋ ದೇವಲೋಕದಲ್ಲಿರಬೇಕಾದ ಜಲಧಾರೆ ಅಪ್ಪಿ-ತಪ್ಪಿ ಭೂಮಿಗೆ ಬಂದುಬಿಟ್ಟಿದಿಯೇನೋ! ಮಳೆಯಲ್ಲೂ ತೃಪ್ತಿಯಾಗುವಷ್ಟು ಫೋಟೋ ತೆಗೆದೆವು. ಫೋಟೋಗಳು ತೆಗೆಯುವಷ್ಟರಲ್ಲೇ ಮೈಯ್ಯೆಲ್ಲಾ ತೊಪ್ಪೆಯಾಗಿತ್ತು! ಅಷ್ಟರಲ್ಲಿ ಮರದ ರೆಂಬೆಗಳ ಮರೆಯಲ್ಲಿ ತುಸು ದೂರದಲ್ಲಿ ಮತ್ತೊಂದು ಜಲಪಾತ ಕಂಡಿತು. ಸಿರಿಮನೆ ಜಲಪಾತದ ಹೊಳೆಯನ್ನು ಕಾಲ್ನಡಿಗೆಯಲ್ಲಿ ದಾಟಿ ಆ ಹೆಸರಿಲ್ಲದ ಜಲಪಾತದ ಹತ್ತಿರ ಹೋಗಿ ಜಲಪಾತವನ್ನು ನೋಡುತ್ತಾ ಸುಖದಲೆಯಲ್ಲಿ ತೇಲಾಡಿದೆವು. ಮತ್ತೆ ಹಿಂದಿರುಗಿ ಬಂದು ಸಿರಿಮನೆ ಜಲಪಾತದ ಮುಂದೆ ಐದು ನಿಮಿಷ ಕಳೆದು ಆಟೋ ಇರುವಲ್ಲಿಗೆ ವಾಪಸಾದೆವು.&lt;br /&gt;&lt;br /&gt;&lt;p align="center"&gt;&lt;a href="http://picasaweb.google.co.in/srikanth000/SirimaneFalls/photo#5182098480177381170"&gt;&lt;img src="http://lh3.google.co.in/srikanth000/R-qDHJ4QfzI/AAAAAAAACbA/u2ifhqIdd4Y/s400/Image126.jpg" /&gt;&lt;/a&gt;&lt;/p&gt;ನಮ್ಮ ಮೈಕೈಯ್ಯಿಂದೆಲ್ಲಾ ಆಟೋದಲ್ಲಿ ನೀರು ತೊಟ್ಟಿಸಿಕೊಂಡು, ಚಳಿಯಲ್ಲಿ ನಡುಗುತ್ತಾ ಶೃಂಗೇರಿಗೆ ಹೊರಟೆವು. ದಾರಿಯಲ್ಲಿ ಕಿಗ್ಗದ ಋಷ್ಯಶೃಂಗೇಶ್ವರನ ದರ್ಶನವೂ ಆಯಿತು. ಶೃಂಗೇರಿಗೆ ಬಂದ ಕೂಡಲೆ ದೇವಸ್ಥಾನಕ್ಕೆ ಹೋಗಿ ಊಟ ಮುಗಿಸಿದೆವು. ಬೆಳಗ್ಗಿನ ಕಾರ್ಯಕ್ರಮವೆಲ್ಲಾ ನಾವೆಂದುಕೊಂಡ ಸಮಯದಲ್ಲೇ ಸರಿಯಾಗಿ ನಡೆದಿತ್ತು, ಅದನ್ನು ಗಮನಿಸಿದ ಶ್ರೀನಿವಾಸ "ಮತ್ತೆ timing factor ನೋಡು... timing ಸೂಪರ್ ಆಗಿದೆ" ಎಂದ. ಊಟದ ನಂತರ ವಸತಿಗೃಹಕ್ಕೆ ಬಂದು ನಮ್ಮ ವಸ್ತುಗಳನ್ನೆಲ್ಲಾ ಬೆನ್ನುಚೀಲಕ್ಕೆ ತುರುಕಿ ವಸತಿಗೃಹ ಬಿಟ್ಟು ಹೊರಗೆ ಹೊರಟರೆ ಮುಂದೆಯೇ ಕಾರ್ಕಳದ ಬಸ್ಸು! ಮತ್ತೆ ಬೊಂಬಾಟ್ timing! ಶ್ರೀನಿವಾಸ ಬಸ್ಸನ್ನು ತಡೆದ. ಬಸ್ಸು ಹತ್ತಿದಾಗ ಸೀಟು ಖಾಲಿಯಿರಲಿಲ್ಲ. ಆದರೆ ಸ್ವಲ್ಪ ದೂರ ಹೋದಮೇಲೆ ಕುಳಿತುಕೊಳ್ಳಲು ಆಸನಗಳು ಸಿಕ್ಕಿದವು. ಪ್ರಯಾಣದುದ್ದಕ್ಕೂ ನಿದ್ರೆ ನಮ್ಮ ಜೊತೆಗಿತ್ತು. ಕಾರ್ಕಳಕ್ಕೆ ಬಂದಮೇಲೆ ಪ್ರವಾಸದಲ್ಲಿ ನಡೆದಿದ್ದನ್ನೆಲ್ಲಾ ನೆನೆಸಿಕೊಂಡು, ಮುಂದಿನ ಪ್ರವಾಸ ಎಲ್ಲಿಗೆ ಎಂದು ಯೋಚಿಸುತ್ತಾ ಚಹಾ ಕುಡಿದೆವು. ನಂತರ ನಾನು ಉಡುಪಿಗೆ ಬಂದರೆ ಶ್ರೀನಿವಾಸ ಮಂಗಳೂರಿಗೆ ಹೊರಟ.&lt;br /&gt;&lt;br /&gt;ಒಟ್ಟಿನಲ್ಲಿ ಪ್ರವಾಸ ಬಹಳ ಚೆನ್ನಾಗಿತ್ತು. ಪ್ರವಾಸದ ಮಧ್ಯದಲ್ಲಿ ಕಹಿ ಸುದ್ದಿಯೊಂದು ತಿಳಿದು ಬೇಸರವಾಗಿದ್ದು ಬಿಟ್ಟರೆ ಮಿಕ್ಕ ವಿಷಯಗಳೆಲ್ಲಾ ಸಂತಸ ನೀಡುವ ಶ್ರೇಷ್ಠ ಅನುಭವಗಳೇ! ಈ ಪ್ರವಾಸವಾದಮೇಲೆ ಪ್ರಕೃತಿಯ ವೈವಿಧ್ಯ ಮತ್ತು ಸೌಂದರ್ಯ ನೋಡಿ ನಾನು ಮತ್ತಷ್ಟು ಬೆರಗಾಗಿದ್ದೇನೆ. ಇನ್ನೆಷ್ಟು ಬೆರಗಾಗುವುದು ಎಂದು ಕಾದಿದಿಯೋ... ಯಾರಿಗೆ ಗೊತ್ತು?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-3354068767275884653?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/3354068767275884653/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=3354068767275884653' title='8 Comments'/><link rel='edit' type='application/atom+xml' href='http://www.blogger.com/feeds/34886019/posts/default/3354068767275884653'/><link rel='self' type='application/atom+xml' href='http://www.blogger.com/feeds/34886019/posts/default/3354068767275884653'/><link rel='alternate' type='text/html' href='http://manasinaputagalanaduve.blogspot.com/2008/04/blog-post.html' title='ಮನಸನಪ್ಪಿದ ಪ್ರವಾಸದ ನೆನಪುಗಳು'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_JaSAEbMHNYk/R_Yzqp4Qf1I/AAAAAAAACcg/30oVwql00_c/s72-c/horanadu.jpg' height='72' width='72'/><thr:total>8</thr:total></entry><entry><id>tag:blogger.com,1999:blog-34886019.post-1415712219032599943</id><published>2008-03-25T23:08:00.003+05:30</published><updated>2008-03-25T23:42:42.394+05:30</updated><title type='text'>ವನಕೆ ಅಬ್ಬಿ ಜಲಪಾತ</title><content type='html'>&lt;p align="center"&gt;&lt;a href="http://picasaweb.google.co.in/srikanth000/VanakeAbbi/photo#5181740782416067874"&gt;&lt;img src="http://lh3.google.co.in/srikanth000/R-k9yZ4QfSI/AAAAAAAACWA/UVT9qXwn0BI/s400/Image095.jpg" /&gt;&lt;/a&gt;&lt;/p&gt;&lt;br /&gt;&lt;p align="center"&gt;&lt;a href="http://picasaweb.google.co.in/srikanth000/VanakeAbbi/photo#5181741847567957458"&gt;&lt;img src="http://lh3.google.co.in/srikanth000/R-k-wZ4QfdI/AAAAAAAACXc/gWtQadQdMXc/s400/Image106.jpg" /&gt;&lt;/a&gt;&lt;/p&gt;&lt;br /&gt;ಅದೇ ಸುಂದರ ಮಲೆನಾಡು. ದಾರಿಯುದ್ದಕ್ಕೂ ಹಸಿರೇ ತುಂಬಿರುವ ದಟ್ಟದಡವಿ. ಹಿಂದಿನ ದಿನವಷ್ಟೇ ಬಂದ ಮಳೆಯಿಂದ ತೊಯ್ದು ತೊಪ್ಪೆಯಾದ ಎಲೆಗಳ ದಾರಿ. ಸುಳಿವಿಲ್ಲದೇ ಬಂದು ರಕ್ತದೂಟ ಮುಗಿಸಿ ಹೋಗುವ ಇಂಬಳಗಳು. ಇಷ್ಟರ ಮಧ್ಯೆ ಒಂದಷ್ಟು ದೂರ ನಡೆದುಹೋದರೆ ಇದ್ದಕ್ಕಿದ್ದಂತೆ ಸಿಗುವ ಹೆಬ್ಬಂಡೆಗಳು. ಅದರ ಕೆಳಗೆ ಸದ್ದಿಲ್ಲದೇ ಹರಿವ ಹೊಳೆ. ಸದ್ದೆಲ್ಲಾ ಅತ್ತ ತಿರುಗಿದರೆ ಕಾಣುವ ಸ್ವಲ್ಪ ದೂರದಲ್ಲಿ ಉತ್ತರ ದಿಗಂತದಿಂದ ಬೆಳ್ಳಗೆ ಬೀಳುತ್ತಿರುವ ಜಲಪಾತದ್ದೇ. ಸ್ವಲ್ಪ ಕಷ್ಟಪಟ್ಟು ಬಂಡೆಗಳನ್ನು ಹತ್ತಿಳಿದು, ಹೊಳೆ ದಾಟಿ ಹೋದರೆ ಮುಂದೆಯೇ ಬರುವ ಜಲಪಾತ. ಸುತ್ತಲೂ ಹಸಿರು. ಮೇಲೆ ನೀಲಾಕಾಶ. ಅದರಲ್ಲಿ ಅಲ್ಲಲ್ಲಿ ತೇಲುವ ಶ್ವೇತವರ್ಣದ ಮುಗಿಲುರಾಶಿ. ಶುದ್ಧ ಗಾಳಿ, ಹೊಳೆಯ ಸಿಹಿಯಾದ ತಿಳಿನೀರು. ಎಲ್ಲವೂ ಮಾಯೆಯೇ ಎನ್ನುವಷ್ಟು ಆಶ್ಚರ್ಯ, ಪರಮಾನಂದ! ಜಲಪಾತದ ಮುಂದೆ ಒಂದು ಘಂಟೆಗೂ ಹೆಚ್ಚು ಕಾಲ ಕುಳಿತು ಸಂತುಷ್ಟ ಮನಸ್ಸಿನೊಂದಿಗೆ ಹಿಂದಿರುಗುವಾಗ ಪ್ರಚಂಡ ಮಳೆ. ಪ್ರಚಂಡ ಮಳೆ ಬಂದರೂ, ಪ್ರಳಯವೇ ಬಂದರೂ ಮನಸ್ಸಿನಿಂದ ಕೊಚ್ಚಿಹೋಗದ ಚಾರಣದ ಮತ್ತು ಜಲಪಾತದ ನೆನೆಪು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-1415712219032599943?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/1415712219032599943/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=1415712219032599943' title='4 Comments'/><link rel='edit' type='application/atom+xml' href='http://www.blogger.com/feeds/34886019/posts/default/1415712219032599943'/><link rel='self' type='application/atom+xml' href='http://www.blogger.com/feeds/34886019/posts/default/1415712219032599943'/><link rel='alternate' type='text/html' href='http://manasinaputagalanaduve.blogspot.com/2008/03/blog-post_25.html' title='ವನಕೆ ಅಬ್ಬಿ ಜಲಪಾತ'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>4</thr:total></entry><entry><id>tag:blogger.com,1999:blog-34886019.post-3732438688120390671</id><published>2008-03-17T22:51:00.006+05:30</published><updated>2008-03-17T23:27:27.178+05:30</updated><title type='text'>ಮನಸ್ಸಿನ ಪುಟದಲ್ಲಿಂದು...</title><content type='html'>&lt;p&gt;&lt;strong&gt;ಅಂತರ್ಜಾಲದ ಕನ್ನಡಿಗರ ಸಮಾವೇಶ&lt;/strong&gt;&lt;/p&gt;&lt;p&gt;ಅಂತರ್ಜಾಲದ ಕನ್ನಡಿಗರ ಸಮಾವೇಶ ನಿನ್ನೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ನಡೆಯಿತು. ಆಯೋಜಕರಿಗೇ ಆಶ್ಚರ್ಯವಾಗುವಷ್ಟು ಜನ ಭಾಗವಹಿಸಿದ್ದು ನೋಡಿ ಸಂತೋಷವಾಯಿತು. ಅಂತರ್ಜಾಲದಲ್ಲಿ ವರ್ಷಗಳಿಂದ ಕನ್ನಡ ಬಳಸುತ್ತಿರುವವರೂ, ಈಗಷ್ಟೇ ಅಂತರ್ಜಾಲದಲ್ಲೂ ಕನ್ನಡವೂ ಇದೆ ಎಂದು ತಿಳಿದುಕೊಂಡವರೂ ಮತ್ತು ತಮ್ಮದೊಂದು ಕನ್ನಡ ಬ್ಲಾಗ್ ಶುರು ಮಾಡುವುದು ಹೇಗೆಂದು ತಿಳಿದುಕೊಳ್ಳಬಹಸಿದವರೂ ಒಂದೇ ಕಡೆ ಸೇರಿದ್ದು ಈ ಕಾರ್ಯಕ್ರಮದ ವಿಶೇಷ. ಅಲ್ಲಿಗೆ ಬಂದ ಎಲ್ಲರ ಪರಿಚಯ ಎಲ್ಲರಿಗೂ ಆಗದಿದ್ದರೂ ಅನೇಕರ ಪರಿಚಯವಾಯಿತು. ಅಂತರ್ಜಾಲದಲ್ಲಿ ಕನ್ನಡ ಬಳಸುವಾಗ ಎದುರಿಸುವ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಎಲ್ಲವೂ ಅತ್ಯುಪಯುಕ್ತ! ಹೀಗೇ ಇನ್ನಷ್ಟು ಸಮಾವೇಶಗಳು ನಡೆಯಲಿ ಎಂದು ಆಸೆಯಾಗುತ್ತಿದೆ. ಕಾರ್ಯಕ್ರಮಕ್ಕೆ ಬಂದವರಿಗೂ, ಕಾರ್ಯಕ್ರಮಕ್ಕೆ ಬರಲಾಗದಿದ್ದರೂ ಅಂತರ್ಜಾಲದ ಮೂಲಕ ಕನ್ನಡಕ್ಕೆ ತಮ್ಮ ಕೊಡುಗೆ ನೀಡುತ್ತಿರುವವರಿಗೆಲ್ಲಾ ಧನ್ಯವಾದಗಳು!&lt;/p&gt;&lt;p&gt;'ಪ್ರಣತಿ' ಇದನ್ನಾಯೋಜಿಸಲು ಅನೇಕ ದಿನಗಳಿಂದ ಪಟ್ಟ ಶ್ರಮ ಸಾರ್ಥಕವಾಗಿದೆ. ಪ್ರಣತಿ ತಂಡದವರಿಗೆಲ್ಲಾ ಶುಭಾಶಯಗಳು!!&lt;/p&gt;&lt;p&gt;&lt;strong&gt;ಡಿ. ವಿ. ಜಿ ಹುಟ್ಟುಹಬ್ಬ&lt;/strong&gt;&lt;/p&gt;&lt;p&gt;ಇಂದು ಡಿ. ವಿ. ಗುಂಡಪ್ಪನವರ ಹುಟ್ಟುಹಬ್ಬವಂತೆ. ಸಂಜೆ ಶ್ರೀನಿವಾಸ ಮತು ಅರುಣ್ ಜೊತೆ ಮಾತನಾಡುತ್ತಿರುವಾಗ ತಿಳಿಯಿತು. ನನಗೆ ಇದು ಅವರನ್ನು ನೆನಪಿಸಿಕೊಳ್ಳುವ ನೆಪ.&lt;/p&gt;&lt;p&gt;ನಾನೇನು ಅರುಣನಷ್ಟು ಅಥವಾ ಶ್ರೀನಿವಾಸನಷ್ಟು ಡಿ.ವಿ.ಜಿ ಅವರ ಕೃತಿಗಳನ್ನೋದಿಲ್ಲ. ಶ್ರೀನಿವಾಸನಂತೆ ನಾನು 'ಕಗ್ಗದ ಹುಚ್ಚ'ನಲ್ಲದಿದ್ದರೂ ಕೆಲವು ಕಗ್ಗಗಳನ್ನೋದಿದ್ದೇನೆ. ಕನ್ನಡದ ಭಗವದ್ಗೀತೆ ಎಂದು ಮಂಕುತಿಮ್ಮನ ಕಗ್ಗವನ್ನು ಜನ ಸುಮ್ಮನೆ ಕರೆಯುವುದಿಲ್ಲ. ಬಹಳ ಕುತೂಹಲಕಾರಿಯಾದ ಪ್ರಶ್ನೆಗಳು ಮತ್ತು ಅದಕ್ಕೆ ಉತ್ತರಗಳು ಕಗ್ಗದಲ್ಲಿ ಅಡಗಿದೆ. ಜೀವನದಲ್ಲಿ ತಿಳಿದು ಪಾಲಿಸಬೇಕಾದ ಕೆಲವು ವಿಚಾರಗಳನ್ನು ಮನಮುಟ್ಟುವಂತೆ ಹೇಳುತ್ತದೆ ಮಂಕುತಿಮ್ಮನ ಕಗ್ಗ. ಇಂತಹ ಮೇರುಕೃತಿಯನ್ನು ಜಗತ್ತಿಗೆ ಕೊಟ್ಟು ಪರಲೋಕ ಸೇರಿ ಅವರ ಕೃತಿಗಳ ಮೂಲಕ ಜನರ ಮನಸ್ಸಿನಲ್ಲಿ ನಿಂತಿರುವ ಡಿ.ವಿ.ಜಿ ಅವರಿಗೆ 'HATS OFF!!!'&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/34886019-3732438688120390671?l=manasinaputagalanaduve.blogspot.com' alt='' /&gt;&lt;/div&gt;</content><link rel='replies' type='application/atom+xml' href='http://manasinaputagalanaduve.blogspot.com/feeds/3732438688120390671/comments/default' title='Post Comments'/><link rel='replies' type='text/html' href='http://www.blogger.com/comment.g?blogID=34886019&amp;postID=3732438688120390671' title='0 Comments'/><link rel='edit' type='application/atom+xml' href='http://www.blogger.com/feeds/34886019/posts/default/3732438688120390671'/><link rel='self' type='application/atom+xml' href='http://www.blogger.com/feeds/34886019/posts/default/3732438688120390671'/><link rel='alternate' type='text/html' href='http://manasinaputagalanaduve.blogspot.com/2008/03/blog-post_17.html' title='ಮನಸ್ಸಿನ ಪುಟದಲ್ಲಿಂದು...'/><author><name>Srikanth - ಶ್ರೀಕಾಂತ</name><uri>http://www.blogger.com/profile/03073254956119635284</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://srikanth000.googlepages.com/Me.JPG'/></author><thr:total>0</thr:total></entry><entry><id>tag:blogger.com,1999:blog-34886019.post-7670520878886501045</id><published>2008-03-13T22:32:00.009+05:30</published><updated>2008-03-14T00:07:12.040+05:30</updated><title type='text'>ಪುಷ್ಪಗಿರಿಗೆ ಚಾರಣ</title><content type='html'>&lt;p&gt;ಅರುಣ್ ಕರೆ ಮಾಡಿ ಕೇಳಿದ "ಈ ವೀಕೆಂಡ್ ಕೆ.ಪಿ. ಗೆ ಬರ್ತೀಯಾ? ಸೋಮ್ವಾರಪೇಟೆಯಿಂದ ಹೋಗೋದು..." ಎಂದು. ಕ್ಷಣಾರ್ಧವೂ ಕಾಯದೇ ಉತ್ತರಿಸಿದ್ದೆ "ಓ..." ಎಂದು.&lt;/p&gt;&lt;p&gt;ಆರು ಜನರು - ಅರುಣ್, ಡೀನ್, ವಿಜಯಾ, ರೇಖಾ, ಶ್ರೀನಿವಾಸ ಮತ್ತು ನಾನು ಈ ಚಾರಣಕ್ಕೆ ತೆರಳಿದ ನಮ್ಮ ಚಾರಣ ಗುಂಪಿನ ಸದಸ್ಯರು. ಕುಮಾರಪರ್ವತಕ್ಕೆ ಎಂದಿನಂತೆ ಗಿರಿಗದ್ದೆಯ ಮೂಲಕ ಹೋಗುವುದರ ಬದಲು ಈ ಬಾರಿ ಹೆಗ್ಗಡೆಮನೆ-ದೇವಸ್ಥಾನದ ದಾರಿಯಲ್ಲಿ 'ಪುಷ್ಪಗಿರಿ'ಯನ್ನೇರಬೇಕು ಎಂದು ಯೋಚಿಸಿದ್ದೆವು. ಕೊಡಗಿನ ಅನಾಮಧೇಯವಾದ ಬಯಲುಪ್ರದೇಶವೊಂದರಲ್ಲಿ ಕಾರಿನಿಂದ ಇಳಿದೆವು. ನಂತರ ಅರುಣ್ "ಸಂಪ್ರದಾಯ ಮುರಿಯಬಾರದು" ಎಂದು ಎಲ್ಲರನ್ನೂ ವೃತ್ತಾಕಾರದಲ್ಲಿ ನಿಲ್ಲಲು ಹೇಳಿ ಎಲ್ಲರಿಗೂ "ಟಿ.ಕೆ.ಡಿ" ಹಂಚಿದ. ನಂತರ ಚಾರಣ ಪ್ರಾರಂಭಿಸಿದೆವು.&lt;/p&gt;&lt;p align="center"&gt;&lt;img src="http://lh3.google.co.in/srikanth000/R9gddfYNpsI/AAAAAAAAB5Y/o6az9s35ZLw/s400/P4230166.JPG" /&gt;&lt;/p&gt;&lt;p&gt;ಮಾರ್ಚ್ ತಿಂಗಳಾದರೂ ದಾರಿಯುದ್ದಕ್ಕೂ ಹಸಿರಿಗೇನೂ ಕಡಿಮೆಯಿರಲಿಲ್ಲ. ಯಾವ ದಿಕ್ಕಿನಲ್ಲಿ ನೋಡಿದರೂ ಹಸಿರು ಕಾಣುತ್ತಿತ್ತು. ಎಲ್ಲೋ ಅಲ್ಲೊಂದಷ್ಟು ಇಲ್ಲೊಂದಿಷ್ಟು ಎಂಬಂತೆ ಒಣ ಹುಲ್ಲನ್ನು ಮತ್ತು ಬಂಡೆಗಳನ್ನು ನೋಡುತ್ತಿದ್ದೆವಷ್ಟೇ. ಬೆಳಿಗ್ಗೆ ಶ್ರೀನಿವಾಸನನ್ನೂ, ನನ್ನನ್ನೂ ಕೊಡಗಿಗೆ ಭವ್ಯವಾಗಿ ಸ್ವಾಗತಿಸಿದ ಕೊರೆವ ಚಳಿ ಸೂರ್ಯನಿಗೆ ಹೆದರಿ ಮಾಯವಾಗಿತ್ತು. ಮೈಗೆಲ್ಲಾ ಬೆವರಿನ ಸ್ನಾನವಾಗುತ್ತಿತ್ತು. ಅಷ್ಟು ಹಸಿರಿನ ಮಧ್ಯೆ ಇರುವುದರಲ್ಲಿ ಸ್ವಲ್ಪ ಕಡಿಮೆ ಹಸುರಾಗಿದ್ದು, ಹೆಚ್ಚು ಕಲ್ಲುಬಂಡೆಯಂತೆಯೇ ಕಾಣುತ್ತಿದ್ದ ಗುಡ್ಡವೊಂದನ್ನು ಡೀನ್ ತೋರಿಸಿ "ಇದೇ ಪುಷ್ಪಗಿರಿ" ಎಂದಾಗ "ಇದು ಜಾಲಮಂಗಲದ ಥರ ಕಾಣ್ತಿದೆ ನಂಗೆ" ಎಂದು ಘೋಷಿಸಿಬಿಟ್ಟೆ. ಜಾಲಮಂಗಲದಂತೆಯೇ ಒಂದೆರಡು ಘಂಟೆಗಳಲ್ಲಿ ಬೆಟ್ಟ ಹತ್ತಿಬಿಡುತ್ತೇವೆ ಎಂದೂ ಹೆಚ್ಚು-ಕಮ್ಮಿ ನಿರ್ಧರಿಸಿಬಿಟ್ಟಿದ್ದೆ. ಚಾರಣದ ಮೊದಲ ಹಂತದಲ್ಲಿ ದಾರಿ ಕ್ರಮೇಣವಾಗಿ ಏರುತ್ತಲೇ ಹೋಗಿದ್ದರಿಂದ ಜಾಲಮಂಗಲದಂತೆ ಕಂಡ ಪುಷ್ಪಗಿರಿಯೂ ಹತ್ತಿರವಾಗುವಂತೆ ತೋರಿತು. ಚಾರಣ ಪ್ರಾರಂಭಿಸಿದಾಗ ಶ್ರೀನಿವಾಸ ಮತ್ತು ನಾನು ಹರಟೆ ಹೊಡೆದುಕೊಂಡು ಎಲ್ಲರಿಗಿಂತ ಮುಂದೆ ನಡೆದುಹೋಗುತ್ತಿದ್ದೆವು. ನಮ್ಮ ಹಿಂದೆ ವಿಜಯಾ ಮತ್ತು ರೇಖಾ ಬರುತ್ತಿದ್ದರು. ಹಿಂದೆಲ್ಲೋ ವಿಪರೀತ ನಿಧಾನವಾಗಿ ಡೀನ್ ಮತ್ತು ಅರುಣ್ ಏನೋ ಮಾತಾಡಿಕೊಂಡು ಬರುತ್ತಿದ್ದರು. ಅಷ್ಟರಲ್ಲಿ ಯಾವುದೋ ಒಂದು ಕುತೂಹಲಕಾರಿಯಾದ ವಿಚಾರದ ಬಗ್ಗೆ ಮಾತು ಶುರುವಾಯಿತೆನ್ನಿಸುತ್ತದೆ; ಶ್ರೀನಿವಾಸ ಮತ್ತು ನಾನು ಆಮೆಗತಿಯಲ್ಲಿ ನಡೆಯಲು ಪ್ರಾರಂಭಿಸಿದೆವು. ವಿಜಯಾ ಮತು ರೇಖಾ ಇಬ್ಬರೂ ನಮಗಿಂತ ಮುಂದೆ ಹೋದರು. ನಾವು ಮಾತ್ರ ನಮ್ಮ ಗತಿಯನ್ನು ಬದಲಿಸಲಿಲ್ಲ. ಕೊನೆಗೆ ನಮ್ಮ ಹಿಂದಿದ್ದ ಡೀನ್ ಮತ್ತು ಅರುಣ್ ನಮ್ಮನ್ನು "ಅವರಿಬ್ರನ್ನೇ ಮುಂದೆ ಬಿಟ್ಟಿದೀರಲ್ಲ! ನೀವು ಮುಂದೆ ಹೋಗಿ ಮೊದ್ಲು" ಎಂದು ಹೇಳಿದಾಗಲೇ ನಾವಿಬ್ಬರೂ ಸ್ವಲ್ಪ ಬೇಗ ನಡೆದು ಮುಂದೆ ಹೋಗಿದ್ದು. ಮುಂದೆ ಹೋಗುವಾಗ ವಿಜಯಾ ಮತ್ತು ರೇಖಾ - ಇಬ್ಬರ ಶೂಸಿನ ಗುರುತುಗಳನ್ನೂ ಮಣ್ಣಿನ ಮೇಲೆ ನೋಡುತ್ತಾ ಅದರ ವಿಷಯವಾಗಿ ಮತ್ತೊಂದು ಸುತ್ತಿನ ಹರಟೆಯನ್ನು ಪ್ರಾರಂಭಿಸಿಬಿಟ್ಟೆವು! ಯಾಕೋ ಗೊತ್ತಿಲ್ಲ; ಚಾರಣಕ್ಕೆ ಹೋದಾಗ ಹಸಿರಿನಿಂದ ಹೆಜ್ಜೆಗುರುತಿನ ತನಕ ಎಲ್ಲವೂ ಕುತೂಹಲಕಾರಿಯಾಗಿಯೂ ಸುಂದರವಾಗಿಯೂ ಕಾಣುತ್ತದೆ. ಆಕಾಶ, ಮಣ್ಣು, ಕಲ್ಲು, ನೀರು, ಶಬ್ದ, ಬೆಳಕು, ಕತ್ತಲು... ಹೀಗೆ ಎಲ್ಲದರಲ್ಲಿಯೂ ಸೌಂದರ್ಯ ಕಾಣಲು ನಾವೇನು ಅದೃಷ್ಟ ಮಾಡಿದ್ದೇವೋ ಆ ದೇವನೇ ಬಲ್ಲ!&lt;/p&gt;&lt;p&gt;ನಮ್ಮ ಈ ಮೊದಲಿಲ್ಲದ, ಕೊನೆಯಿಲ್ಲದ ಹರಟೆ ತಾತ್ಕಾಲಿಕವಾಗಿ ನಿಂತಿದ್ದು ದಾರಿಯಲ್ಲಿ ದೇವಸ್ಥಾನವೊಂದು ಸಿಕ್ಕಿದಾಗ. ಯಾರನ್ನೂ ಹೇಳದೇ, ಕೇಳದೇ ಅಲ್ಲಿದ್ದ ಒಂದು ಮರದ ನೆರಳಲ್ಲಿ ಎಲ್ಲರೂ ವಿಶ್ರಮಿಸಿಕೊಳ್ಳಲು ಮುಂದಾದರು. ಎಲ್ಲರ ನೀರಿನ ಬಾಟಲಿಗಳೂ ಖಾಲಿಯಾಗಿದ್ದವು. ಸ್ವಲ್ಪ ತಡವಾಗಿ ಕುಳಿತುಕೊಳ್ಳಲು ಹೊರಟ ಡೀನ್ ಮತ್ತು ನನ್ನ ಹೆಗಲ ಮೇಲೆ ಆಗಲೇ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದವರು ನೀರು ತರುವ ಜವಾಬ್ದಾರಿ ಹೊರಿಸಿದರು. ಆ ದೇವಸ್ಥಾನದ ಆವರಣದೊಳಗೆ ಹೋಗುವುದಕ್ಕೇ ಚಪ್ಪಲಿ, ಶೂಸು ಬಿಚ್ಚಬೇಕು ಬೇರೆ! ಶೂಸ್ ಬಿಚ್ಚಿ ಡೀನ್ ಮತ್ತು ನಾನು ನೀರು ತರಲು ಹೋಗುವಾಗ ದೇವಸ್ಥಾನದ ಹಿಂಭಾಗದಲ್ಲಿ ಗಿರಿಶ್ರೇಣಿಗಳ ಸುಂದರವಾದ ದೃಶ್ಯ ಕಂಡಿತು. "ಬನ್ರೀ, ವ್ಯೂ ಪಾಯಿಂಟ್ ಇದೆ... ನೋಡ್ಕೊಂಡು ಬರಣ" ಎಂದರು ಡೀನ್. ನಾನು "ಅವ್ರೆಲ್ಲಾ ಕಾಯ್ತಿರ್ತಾರೆ" ಎಂದೆ. "ಕಾಯ್ಲಿ ಬಿಡ್ರೀ! ಇಷ್ಟು ದೂರ ನೀರು ತರಕ್ಕೆ ನಮ್ಮನ್ನ ಕಳ್ಸಿ ಅವ್ರು ಮಾತ್ರ ರೆಸ್ಟ್ ತೊಗೋತಿಲ್ವಾ? ಕಾಯ್ಲಿ!" ಎಂದರು ಡೀನ್. "ಹೌದು ಹೌದು, ನೀವ್ ಹೇಳೋದ್ ನಿಜ. ಇಷ್ಟು ದೂರ ಬಂದ್ಮೇಲೆ ನಾವ್ಯಾಕೆ ವ್ಯೂ ಪಾಯಿಂಟ್ ತನಕ ಹೋಗದೇ ಇರ್ಬೇಕು?" ಎಂದು ಅವರ ಮಾತಿಗೆ ಸಮ್ಮತಿ ಸೂಚಿಸಿದೆ. "ಆದರೆ, ನೀರು ತುಂಬ್ಸ್ಕೊಂಡ್ಬಿಡಣ. ಆಮೇಲೆ ವ್ಯೂ ಪಾಯಿಂಟ್ ಗೆ ಹೋದ್ರೆ ಆಯ್ತು" ಎಂದೆ. "ಸರಿ" ಎಂದು ನನ್ನ ಜೊತೆ ನೀರು ತರಲು ಡೀನ್ ಬಂದರು. ನೀರು ತುಂಬಿಸಿಕೊಂಡು ಹಿಂದಿರುಗುವಾಗ ವ್ಯೂ ಪಾಯಿಂಟ್ ಗೆ ಹೋಗುವ ಪ್ರಸ್ತಾಪ ಮಾಡಿದೆ. "ಈ ಬಿಸಿಲಲ್ಲಿ ಯಾರ್ರೀ ಅಲ್ಲಿವರ್ಗು ಹೋಗ್ತಾರೆ? ಅವ್ರೆಲ್ಲಾ ಕಾಯ್ತಿರ್ತಾರೆ; ನಡೀರಿ. ಇಲ್ಲೇ ಕಾಣತ್ತಲ್ಲ ಅಲ್ಲಿ ಕಾಣೋದೆಲ್ಲಾ, ಸ್ವಲ್ಪ ದೂರದಲ್ಲಿ ನೋಡ್ತಿದೀವಷ್ಟೇ" ಎಂದು ಪಕ್ಷ ಬದಲಿಸಿಬಿಟ್ಟರು! "ಹೋಗಣ ಬನ್ರೀ, ಏನ್ ಮಹಾ ದೂರ ಇದೆ?" ಇತ್ಯಾದಿ ಏನೆಲ್ಲಾ ಹೇಳಿದರೂ ಡೀನ್ ಒಪ್ಪಲಿಲ್ಲ. ಕೊನೆಗೆ ವ್ಯೂ ಪಾಯಿಂಟ್ ಗೆ ಹೋಗದೇ ವಾಪಸ್ ಹೋದೆವು.&lt;/p&gt;&lt;p&gt;ನೀರು ಸಿಕ್ಕಿದ ಎರಡು ನಿಮಿಷದಲ್ಲಿಯೇ ನಮ್ಮವರೆಲ್ಲಾ ಹೊರಡಲು ಸಿದ್ಧರಾಗಿಬಿಟ್ಟರು. ನನಗೂ ಆ ಮರದ ಕೆಳಗೆ ಸ್ವಲ್ಪ ಹೊತ್ತು ಮಲಗಬೇಕು ಎಂದು ಆಸೆಯಿತ್ತು. ಆದರೆ ಕೇಳುವವರ್ಯಾರು? ಅಲ್ಲಿಂದ ಹೊರಟ ಎರಡೇ ನಿಮಿಷದಲ್ಲಿ ನಾನು, ಶ್ರೀನಿವಾಸ ಯಥಾ ಪ್ರಕಾರ ಎಲ್ಲರಿಗಿಂತ ಮುಂದೆ. ಅಲ್ಲಿಂದ ಮುಂದೆ ಆಶ್ಚರ್ಯಕರವಾಗಿ ಇಳಿಜಾರಿನ ದಾರಿಯಿತ್ತು. ನಾವಿರುವ ಜಾಗಕ್ಕೂ, ಪುಷ್ಪಗಿರಿಗೂ ಮಧ್ಯೆ ವಿಸ್ತಾರವಾದ ತಗ್ಗು ಪ್ರದೇಶ ಕಾಣುತ್ತಿತ್ತು. 'ಓಹೋ! ಇದು ಜಾಲಮಂಗಲದಷ್ಟು ಸುಲಭ ಅಲ್ಲ! ಈ ತಗ್ಗು ಪ್ರದೇಶದಲ್ಲಿ ಇಳಿದಮೇಲೆ ಪುಷ್ಪಗಿರಿ ಅದರ ನಿಜ ರೂಪ ತೋರಿಸುತ್ತದೆ" ಎಂದು ಲೆಕ್ಕ ಹಾಕಿದೆ. ಒಂದಷ್ಟು ದೂರ ಕ್ರಮಿಸುವುದರಲ್ಲಿಯೇ ಅರಣ್ಯ ಇಲಾಖೆಯ ಕಛೇರಿ ಸಿಕ್ಕಿತು. ಅಲ್ಲಿ ಶ್ರೀನಿವಾಸ ಮತ್ತು ನಾನು ಇತರರು ಬರುವ ತನಕ ನಿಶ್ಚಿಂತೆಯಿಂದ ಕುಳಿತುಬಿಟ್ಟೆವು. ಅರುಣ್ ಬಂದು ಪರವಾನಗಿ ಪಡೆಯಲು ಕಛೇರಿಯೊಳಗೆ ಹೋದ. ಮಿಕ್ಕವರೆಲ್ಲಾ ಕಛೇರಿಯ ಹೊರಗೆ ಕುಳಿತಿದ್ದೆವು. ಡೀನ್ ಅವರ ಮೊಬೈಲಿನಲ್ಲಿ ಯಾವುದೋ ಹಾಡನ್ನು ಹಾಕಿದರು. "ಯಾವ್ದೋ ಡಬ್ಬ ಹಾಡು ಹಾಕಿದೀರ... ನಿಲ್ಸ್ರೀ" ಎಂದೆ. ಅವರು ನನ್ನ ಮಾತನ್ನು ಕೇಳಲಿಲ್ಲ. "ನೀವ್ ಯಾವ್ದೋ ಹಾಡು ಹಾಕಿ, ನಾನು ಅಶ್ವಥ್ ಹಾಡಿರೋದು ಸೂಪರ್ ಡೂಪರ್ ಹಾಡೊಂದು ಹಾಕ್ತೀನಿ" ಎಂದು ಅಶ್ವಥ್ ಹಾಡೊಂದನ್ನು ಹಾಕಿದೆ. ವಿಜಯಾ ಇಬ್ಬರಿಗೂ ಹಾಡು ಹಾಕಬೇಡಿ ಎಂದು ಹೇಳಿದರು. ನಾವು ಕೇಳಲಿಲ್ಲ. ಕೇಳಿದರೆ ಪಾಪದ ಕೊಡ ತುಂಬುವುದಿಲ್ಲ ನೋಡಿ... ಅದಕ್ಕೆ!&lt;/p&gt;&lt;p&gt;ಪರವಾನಗಿ ಪಡೆದುಕೊಂಡು ಅರುಣ್ ಹೊರಗೆ ಬಂದ. ಎಲ್ಲರೂ ಬೆನ್ನುಚೀಲಗಳನ್ನೆತ್ತಿಕೊಂಡು ಮುಂದೆ ಹೊರಟೆವು. ಅರಣ್ಯ ಇಲಾಖೆಯ ಕಛೇರಿ ದಾಟಿದೊಡನೆಯೇ ಹೊಳೆಯ ಮೇಲಿನ ತೂಗು ಸೇತುವೆಯೊಂದು ಸಿಕ್ಕಿತು. ಆದರೆ ಸೇತುವೆಯನ್ನು ಮುಚ್ಚಿಬಿಟ್ಟಿದ್ದರು. ನಿರಾಯಾಸವಾಗಿ ನೀರನ್ನು ತಾಗಿಸಿಕೊಳ್ಳದೇ ಸೇತುವೆ ದಾಟುವಷ್ಟು ಕಡಿಮೆ ನೀರಿತ್ತು ಆ ಹೊಳೆಯಲ್ಲಿ. ಅಲ್ಲಿ ಮತ್ತೊಮ್ಮೆ ನೀರಿನ ಬಾಟಲಿಗಳನ್ನು ತುಂಬಿಸಿಕೊಂಡೆವು. ತೃಪ್ತಿಯಾಗುವಷ್ಟು ನೀರನ್ನು ಕುಡಿದೆ. ಆ ಹೊಳೆಯನ್ನು ದಾಟಿದ ಕೂಡಲೇ ದಟ್ಟವಾದ ಕಾಡು. ಮತ್ತೊಮ್ಮೆ ನೀರು ಸಿಕ್ಕಿದಲ್ಲಿ ಊಟ ಮುಗಿಸಬೇಕು ಎಂದು ಯೋಚಿಸಿ ಮುಂದೆ ಹೊರಟೆವು. ಈಗ ಎಲ್ಲರೂ ಒಟ್ಟಿಗೆಯೇ ಇದ್ದೆವು. ಮೊದಲಷ್ಟು ದೂರ ಕಾಡಿನಲ್ಲಿ ನಡೆಯಲು ಚೆನ್ನಾಗಿತ್ತು. ಹಾಗೇ ಒಂದು ಕಿಲೋಮೀಟರ್ ಕ್ರಮಿಸುವುದರಲ್ಲಿಯೇ ಹೊಟ್ಟೆ ತಾಳ ಹಾಕಲಾರಂಭಿಸಿತು. ಡೀನ್ ಮತ್ತು ವಿಜಯಾ ಊಟ ಮಾಡಿಬಿಡೋಣ ಎಂದು ಹೇಳಿದರು. ಅರುಣ್ ಮತ್ತು ನಾನು ಮುಂದೆ ನೀರು ಸಿಗುವ ಜಾಗದ ವರೆಗೂ ಹೋಗಿ ಅಲ್ಲಿ ಊಟ ಮಾಡೋಣ ಎಂದೆವು. ಹೊಟ್ಟೆಯ ತಾತ್ಕಾಲಿಕ ತೃಪ್ತಿಗಾಗಿ ನಾವು ಕೊಂಡೊಯ್ದ ಕಿತ್ತಳೇ ಹಣ್ಣನ್ನು ತಿಂದು ಚಾರಣ ಮುಂದುವರೆಸಿದೆವು. ನಾನು ಮತ್ತು ಶ್ರೀನಿವಾಸ ಮತ್ತೆ ಸ್ವಲ್ಪ ಮುಂದೆ ಬಂದುಬಿಟ್ಟಿದ್ದೆವು. ಯೋಗಾಸನಗಳು ನಮ್ಮ ಚರ್ಚೆಯ ವಿಷಯವಾಗಿತ್ತು. ನೆಗಡಿ ಮತ್ತು ತಲೆನೋವಿನಿಂದ ಕಷ್ಟಪಡುತ್ತಿದ್ದ ಅವನಿಗೆ ಪ್ರಾಣಾಯಾಮ ಮಾಡು ಎಂದು ಹೇಳುತ್ತಿದ್ದೆ. ಸ್ವಲ್ಪ ಬೆನ್ನು ನೋವಿನಿಂದ ಕಷ್ಟ ಪಡುತ್ತಿದ್ದ ನನಗೆ ಭುಜಂಗಾಸನ ಮಾಡು ಎಂದು ಹೇಳುತ್ತಿದ್ದ. ಒಂದೆರಡು ಚಿಕ್ಕ ಆಸನ 'ಶಾಸ್ತ್ರ'ಗಳನ್ನು ಇತರರು ನಮ್ಮನ್ನು ಕೂಡಿಕೊಳ್ಳುವುದರೊಳಗೆ ಮಾಡಿ ಮುಗಿಸಿದ್ದೆವು. &lt;/p&gt;&lt;p&gt;ಇನ್ನರ್ಧ ಕಿಲೋಮೀಟರ್ ಹೋಗುವಷ್ಟರಲ್ಲಿಯೇ ಹೊಟ್ಟೆಯ ಕೂಗು ಜೋರಾಯಿತು. ಸುತ್ತಮುತ್ತಲಿನಲ್ಲೆಲ್ಲೂ ನೀರು ಸಿಗುವ ಸೂಚನೆಯಿರಲಿಲ್ಲ. ಈ ಬಾರಿ "ಊಟ" ಎನ್ನುವ ಪ್ರಸ್ತಾಪ ಬರುತ್ತಲೇ ಎಲ್ಲರೂ ಊಟಕ್ಕೆ ಸಜ್ಜಾಗಿಬಿಟ್ಟೆವು. ನಮ್ಮ ಊಟ ಪೂರಿ, ಸಾಗು, ಚಟ್ನಿ - 'ಹೊಟೇಲ್' ಎಂಬ ಮಾವನ ಮನೆಯಿಂದ ಕಟ್ಟಿಸಿಕೊಂಡು ಬಂದದ್ದು! ಹರಟೆ ಹೊಡೆಯುತ್ತಾ ಊಟ ಮುಗಿಸಿದೆವು. ಯಥಾ ಪ್ರಕಾರ ನಾನು ನಿಧಾನವಾಗಿ, ಆಮೆ ಗತ
